Pages

Subscribe:

Ads 468x60px

Featured Posts

Thursday, April 15, 2021

ಕರಾವಳಿಗೆ ತಟ್ಟದಿರಲಿ ಅತಿ ಪ್ರವಾಸೋದ್ಯಮದ ಪಿಡುಗು

ಕೊನೆಯೇ ಇಲ್ಲದ, ಯಾವುದೋ ಹಟಕ್ಕೆ ಬಿದ್ದವರ ತರ ಅಪ್ಪಳಿಸುವ ಅಲೆಗಳು, ಎಷ್ಟು ನೋಡಿದರೂ ಸಾಕಾಗದ ಮುಳುಗುವ ಸೂರ್ಯನ ಬದಲಾಗುವ ಬಣ್ಣಗಳು, ಆ ಕಡಲತೀರಗಳಲ್ಲಿ ಆಧುನಿಕತೆಯ ಯಾವ ಸೆಳೆತಗಳು ಇಲ್ಲದಿದ್ದರೂ ಜನ ಮತ್ತೆ ಮತ್ತೆ ಬರುತ್ತಾರೆ. ಅವರ ಓಡುತ್ತಿರುವ ಮನಸ್ಸನ್ನು ಒಮ್ಮೆ ಹಿಡಿದು ನಿಲ್ಲಿಸುವ, ಸುಮ್ಮನೆ ಕೂರಿಸುವ ಆಯಸ್ಕಾಂತ ಆ ನೀರಿಗೆ, ಮರಳಿಗೆ, ಸೂರ್ಯನಿಗೆ ಇದೆ. 

ಅದೇ ಕಡಲತೀರಗಳಲ್ಲಿ ನಿಮ್ಮ ಕಾಲಿಗೆ ಕಪ್ಪು ಜಿಡ್ಡು ಮೆತ್ತಿಕೊಂಡರೆ? ಮರಳಿನ ಮೇಲೆ ಕೂರಲು ಹೋದಾಗ ಕಸದ ರಾಶಿ ಕಂಡರೆ? ನೀರಿಗಿಳಿದಾಗ ಪ್ಲಾಸ್ಟಿಕ್‌ ಬಾಟಲಿಗಳು ತೇಲಿ ಬಂದು ನಿಮಗೆ ಬಡಿದರೆ? ಒಮ್ಮೆ ನೀಳವಾದ ಉಸಿರು ತೆಗೆದುಕೊಂಡಾಗ ಕಸದ ಕೆಟ್ಟ ವಾಸನೆ ಒಳಗೆ ಹೋದರೆ? ಇದು ಬರೀ ನಮ್ಮ ದೇಶದ ಬೀಚ್‌ಗಳ ಕಥೆ ಎಂದು ಎಣಿಸಬೇಡಿ. ನಾವು ಮನುಷ್ಯರು ಕಾಲಿಟ್ಟಲ್ಲೆಲ್ಲ ಹೀಗೇ.

’ಜಗತ್ತಿನ ಅತ್ಯುತ್ತಮ ಬೀಚ್‌’ ಎಂದು ಒಂದು ಕಾಲದಲ್ಲಿ ಹೆಗ್ಗಳಿಕೆ ಪಡೆದ ಫಿಲಿಪೈನ್ಸ್‌ನ ಬೋರಾಕೆಯನ್ನು ಕೊನೆಗೊಂದು ದಿನ ಆ ರಾಷ್ಟ್ರದ ಅಧ್ಯಕ್ಷರೇ ’ಕೊಚ್ಚೆಗುಂಡಿ’ ಎಂದು ಕರೆದು ತಾತ್ಕಾಲಿಕವಾಗಿ ಮುಚ್ಚಲು ಆದೇಶ ನೀಡಿದರು. ನೇರವಾಗಿ ಸಮುದ್ರ ಸೇರುತ್ತಿದ್ದ ಕೊಳಚೆ, ಪ್ರವಾಸಿಗರು ಎಸೆದುಹೋದ ಪ್ಲಾಸ್ಟಿಕ್‍ ರಾಶಿ, ಜಗಮಗಿಸುವ ಲೈಟ್‌ಗಳು, ಎಲ್ಲೆಲ್ಲೂ ತುಂಬಿಕೊಂಡಿದ್ದ ಕಸೀನೋಗಳು, ಸೇದಿ ಎಸೆದ ಸಿಗರೇಟ್‍, ಕುಡಿದ ಬಾಟಲಿಗಳು ಎಲ್ಲವನ್ನು ಅಲ್ಲಿನ ಆಡಳಿತ ಕೊನೆಗೊಂದು ದಿನ ನಿಲ್ಲಿಸಿತು. ಸುಮಾರು ಹತ್ತು ಸಾವಿರ ಕೆಜಿ ಪ್ಲಾಸ್ಟಿಕ್‌ ಕಸವನ್ನು ಸ್ವಚ್ಚಮಾಡಿ, ಕುಡಿತ, ಮೋಜು, ಪ್ರಾಣಿಗಳಿಗೆ ತೊಂದರೆಯಾಗುವ ಅನಗತ್ಯ ಲೈಟ್‌ಗಳನ್ನೆಲ್ಲ ನಿಷೇಧಿಸಿದರು.

ಎಲ್ಲಿ ನೋಡಿದರೂ ಕಸದಿಂದ ತುಂಬಿ ತುಳುಕುತ್ತಿದ್ದ ಥಾಯ್‌‍ಲ್ಯಾಂಡ್‌ನ ಪ್ರಸಿದ್ಧ ಮಾಯಾ ಬೀಚ್‌ನ ಅದ್ಭುತ ಪರಿಸರ ಹಾಳಾಗಿದ್ದೇ ಅತಿ ಪ್ರವಾಸೋದ್ಯಮದಿಂದ. ಸಾವಿರಾರು ವರ್ಷಗಳಿಂದ ಸ್ವಲ್ಪ ಸ್ವಲ್ಪವೇ ಹರಡಿ ರೂಪುಗೊಂಡ ಅಲ್ಲಿನ ಸುಮಾರು ೮೦ ಪ್ರತಿಶತ ಹವಳದ ದಂಡೆಗಳು ನಾಶವಾದವು. ಈಗ ಆ ಬೀಚನ್ನು ಅನಿರ್ದಿಷ್ಟ ಕಾಲದವರೆಗೆ, ಅಲ್ಲಿನ ಪರಿಸರ ಸರಿಯಾಗುವವರೆಗೆ ಮುಚ್ಚಲಾಗಿದೆ. ಆ ಕಡಲತೀರವನ್ನು ಮುಚ್ಚಿ ಮೂರು ವರ್ಷಗಳಾದ ಮೇಲೆ ಈಗ ಅಲ್ಲಿನ ಸಮುದ್ರಕ್ಕೆ ತಿಮಿಂಗಿಲಗಳು, ಡುಗಾಂಗ್‌ ಎನ್ನುವ ಅಪರೂಪದ ಕಡಲ ಸಸ್ತನಿಗಳು, ಆಮೆಗಳು ವಾಪಾಸ್‍ ಬಂದಿವೆ. ಈ ವರ್ಷದಿಂದ ಅಲ್ಲಿನ ಸರ್ಕಾರ, ಪ್ರಾಣಿ-ಪರಿಸರ ಚೇತರಿಸಿಕೊಳ್ಳಲು ಪ್ರತಿ ವರ್ಷ ಮೂರು ತಿಂಗಳು ಅಭಯಾರಣ್ಯಗಳನ್ನು ಮುಚ್ಚಲು ಆದೇಶ ನೀಡಿದೆ.

ಯಾವಾಗ, ಎಲ್ಲಿ ನೋಡಿದರೂ ಜನಜಂಗುಳಿ, ಕಸದ ರಾಶಿ, ಸ್ಥಳೀಯ ಸಂಸ್ಕೃತಿಯ ಬಗ್ಗೆ ಪ್ರವಾಸಿಗರು ತೋರಿಸುವ ಅಗೌರವ ಇದೆಲ್ಲದರಿಂದ ಬೇಸತ್ತ ಹವಾಯಿ, ಐಸ್‌ಲ್ಯಾಂಡ್‌, ಬಾಲಿಗಳಂತಹ ಪ್ರಸಿದ್ಧ ತಾಣಗಳ ಸ್ಥಳೀಯರು, ಕೊರೋನಾ ಹಾವಳಿ ಕಮ್ಮಿಯಾದ ಮೇಲೆ ಪುನಃ ಪ್ರವಾಸಿಗರು ಬರುವುದರ ವಿರುದ್ಧ ದನಿಯೆತ್ತಿದ್ದಾರೆ. ಬಾಲಿಯ ಬಹುಪಾಲು ಆದಾಯ ಬರುವುದೇ ಅಲ್ಲಿಗೆ ಪ್ರತಿ ವರ್ಷ ಬರುವ ಸುಮಾರು ಐವತ್ತು ಲಕ್ಷ ಪ್ರವಾಸಿಗರಿಂದ. ಆದರೆ ಅಲ್ಲಿನವರು ತಮ್ಮ ಜೀವನೋಪಾಯವನ್ನೇ ತಿರಸ್ಕರಿಸುವ ಮಟ್ಟಕ್ಕೆ ಬಂದಿದ್ದಾರೆಂದರೆ ಅವರಿಗೆ ಅತಿ ಪ್ರವಾಸೋದ್ಯಮದಿಂದ, ಪ್ರವಾಸಿಗರ ಬೇಜವಾಬ್ದಾರಿತನದಿಂದ ಆಗುವ ಕಿರಿಕಿರಿಗಳು ಎಷ್ಟಿರಬಹುದು?

ದೂರದೂರದವರೆಗೆ ಯಾವ ನಾಡೂ ಕಾಣದ ಅಟ್ಲಾಂಟಿಕ್‌ ಸಮುದ್ರದ ಮಧ್ಯೆ ಇರುವ ಸೇಂಟ್‌ ಹೆಲೆನಾ ದ್ವೀಪದ ಮರಳಿನಲ್ಲಿ ಸಾವಿರಾರು ಮೈಲಿ ದೂರದ ಏಷ್ಯಾದಿಂದ ತೇಲಿ ಬಂದ ಪ್ಲಾಸ್ಟಿಕ್‌ ಬಾಟಲಿಗಳು ಸಿಕ್ಕವು. ಇನ್ನು ಇಲ್ಲೇ ನಮ್ಮ ಹತ್ತಿರದ ಕಾರವಾರದ ಅಲಿಗದ್ದಾ ಬೀಚ್‌ನಲ್ಲಿ ಸುಮಾರು ನಾಲ್ಕು ಟನ್‌ ಕಸವನ್ನು ೨೦೧೮ರಲ್ಲಿ ಸ್ಥಳೀಯರು ಸ್ವಚ್ಚಗೊಳಿಸಿದರೆ, ಮುಂಬೈನ ವರ್ಸೋವಾ ಬೀಚ್‌ನಲ್ಲಿ ಸುಮಾರು ಎರಡೂವರೆ ವರ್ಷ ಪ್ರತಿ ಭಾನುವಾರ ಸ್ವಸಹಾಯಕರು ಒಟ್ಟುಗೂಡಿ ೧೨,೦೦೦ ಟನ್‌ ಕಸವನ್ನು ತೆಗೆದರು. ಸುಮಾರು ಹತ್ತು ಸಾವಿರ ಸ್ವಯಂಸೇವಕರು ೨೦೧೯ರಲ್ಲಿ ಒಟ್ಟಾಗಿ ಪುರಿ ಕಡಲತೀರವನ್ನು ಸ್ವಚ್ಚಗೊಳಿಸಿದ್ದು ಇಲ್ಲಿವರೆಗೆ ಜಗತ್ತಿನ ಅತಿ ದೊಡ್ಡ ಬೀಚ್‌ ಸ್ವಚ್ಚತಾ ಆಂದೋಲನ ಅನ್ನಿಸಿಕೊಂಡಿತು ಮೊನ್ನೆ ಮೊನ್ನೆ ಕೊರೋನಾ ಬಂದ ಮೇಲೆ ಮುಂಬೈನ ಜುಹು ಬೀಚ್‌ ಮತ್ತು ಆಂಧ್ರದ ರಿಶಿಕೊಂಡ ಬೀಚ್‌ಗಳಲ್ಲಿ ರಾಶಿ ರಾಶಿ ಮೆಡಿಕಲ್‌ ತ್ಯಾಜ್ಯಗಳಾದ ಮಾಸ್ಕ್‌ಗಳು, ಪಿಪಿಇ ಕಿಟ್‌ಗಳು, ಗ್ಲೌಸ್‌ಗಳು ಸಿಕ್ಕವು. ಕೊಡುತ್ತಾ ಹೋದರೆ ಎಷ್ಟು ಉದಾಹರಣೆಗಳನ್ನೂ ಕೊಡಬಹುದು, ಅಸಂಖ್ಯ ಪ್ರವಾಸಿಗರ ಹೊಣೆಗೇಡಿತನಕ್ಕೆ, ಕೆಲವೇ ಕೆಲವರ ಸಾಮಾಜಿಕ ಕಳಕಳಿಗೆ.

ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗುತ್ತಾ ಹೋದ ಹಾಗೆ ರಸ್ತೆ ಅಪಘಾತಗಳು, ದುರ್ನಡತೆ, ಎಲ್ಲೆಂದರಲ್ಲಿ ಕಸ ಹಾಕುವುದು ಮತ್ತು ಅತಿ ಜನಜಂಗುಳಿಯಿಂದ ಬೇಸತ್ತ ನ್ಯೂಜಿಲ್ಯಾಂಡ್‌ನ ಕೆಲವು ಸಂಸ್ಥೆಗಳು ಬರುವ ಪ್ರವಾಸಿಗರಿಗಾಗಿ ’ಟಿಯಾಕಿ ಪ್ರಾಮಿಸ್‌’ ಎನ್ನುವ ಪ್ರತಿಜ್ಞೆಯನ್ನು ಸೃಷ್ಟಿಸಿದರು. ಸ್ಥಳೀಯ ಭಾಷೆಯಲ್ಲಿ ’ಟಿಯಾಕಿ’ ಅಂದರೆ ಜನ ಮತ್ತು ಪರಿಸರದ ಕಡೆ ನಮ್ಮ ಕಾಳಜಿ. ಅಲ್ಲಿ ತಿರುಗಾಡುವ ಪ್ರತಿಯೊಬ್ಬರೂ ತಮ್ಮ ಯಾವುದೇ ಕುರುಹು ಬಿಟ್ಟುಹೋಗದೆ ಅಲ್ಲಿನ ನೆಲ, ಸಮುದ್ರ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವ, ಸುರಕ್ಷಿತ ಪ್ರಯಾಣ ಮಾಡುವ, ಎಲ್ಲರ ಬಗ್ಗೆ ಕಾಳಜಿ ತೋರಿಸುವ, ಅಲ್ಲಿನ ಸಂಸ್ಕೃತಿಯನ್ನು ಗೌರವಿಸುವ ವಚನ ಕೊಡಬಹುದು.    

ಇನ್ನು ಪೆಸಿಫ಼ಿಕ್‌ ಸಮುದ್ರದಲ್ಲಿರುವ ’ಪಲಾವ್’ ಎನ್ನುವ ಪುಟ್ಟ ದ್ವೀಪಸಮೂಹಗಳ ರಾಷ್ಟ್ರ ತನ್ನ ಪರಿಸರದ ರಕ್ಷಣೆಗಾಗಿ ತನ್ನ ದೇಶದ ವಲಸೆ ಕಾನೂನನ್ನೇ ಬದಲಿಸಿದ ಮೊದಲ ದೇಶ. ಅದೂ ಅದರ ಪ್ರತಿಜ್ಞೆಯನ್ನು ಬರೆದವರು ಅಲ್ಲಿನ ಪುಟ್ಟ ಮಕ್ಕಳು. ’ನಿಮ್ಮ ದೇಶಕ್ಕೆ ಅತಿಥಿಯಾಗಿ ಬಂದು ಇಲ್ಲಿನ ಚೆಂದದ ದ್ವೀಪಗಳನ್ನು ಮತ್ತು ಸೂಕ್ಷ್ಮ ಪರಿಸರವನ್ನು ಕಾಪಾಡುವ, ಸ್ವಚ್ಚವಾಗಿರಿಸುವ, ನನಗೆ ಸೇರದಿದ್ದನ್ನು ತೊಗೊಳ್ಳದಿರುವ, ತೊಂದರೆ ಕೊಡದಿರುವ, ಯಾವ ರೀತಿಯ ಹೆಜ್ಜೆಗುರುತುಗಳನ್ನೂ ಬಿಡದೆ ಕರುಣೆಯಿಂದ ನಡೆದುಕೊಳ್ಳುತ್ತೇನೆ’ ಎಂದು ಪ್ರವಾಸಿಗರು ವಚನ ಕೊಡಬೇಕು. ಆ ಪುಟ್ಟ ಮಕ್ಕಳಿಗಿರುವ ಕಾಳಜಿ ದೊಡ್ಡವರಾದ ನಮ್ಮಲ್ಲಿ ಕಾಣಲು ಸಾಧ್ಯವೇ ಇಲ್ಲವೇನೋ ಅನ್ನಿಸುತ್ತಿದೆ. 

ಮೊನ್ನೆ ಕುಂದಾಪುರದ ಕೋಡಿ ಬೀಚ್‌ನಲ್ಲಿ, ಅದನ್ನು ಪ್ರತಿ ಭಾನುವಾರ ತಪಸ್ಸಿನಂತೆ ಸ್ವಚ್ಚಗೊಳಿಸುತ್ತಿರುವ ಸ್ವಯಂಸೇವಕರಿಂದಾಗಿ, ಕಡಲಾಮೆಯ ಮೊಟ್ಟೆಗಳು ಸಿಗುತ್ತಿರುವ, ಮರಿಗಳು ಪುನಃ ಕಡಲಿಗೆ ಮರಳುತ್ತಿರುವ ಸುದ್ದಿ ಓದಿ ಮನಸ್ಸಿಗೆ ಹಿತವಾಯಿತು. ಇತ್ತೀಚೆಗೆ ಅಪರೂಪಕ್ಕೆ ಮಾತ್ರ ಕಾಣಸಿಗುತ್ತಿರುವ ಡಾಲ್ಫಿನ್‌ಗಳು ಪುನಃ ಮೊದಲಿನಂತೆ ಕಾಣಬಹುದೇನೋ ಅನ್ನುವ ಆಸೆಯಾಯಿತು. ಥಾಯ್ಲ್ಯಾಂಡ್‌ನ ಬೀಚ್‌ಗಳಲ್ಲಿ ಅಪರೂಪದ ಲೆದರ್‌ಬ್ಯಾಕ್‌ ಆಮೆಗಳು ಪುನಃ ಮೊಟ್ಟೆಯಿಡುತ್ತಿವೆ. ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಎಲ್ಲರ ವಾಟ್ಸಾಪ್‌ನಲ್ಲೂ ರೋಡಿಗಿಳಿದ ನವಿಲುಗಳು, ಚಿರತೆ, ಜಿಂಕೆ, ಪುನುಗು ಬೆಕ್ಕಿನ ತರದ ಅಪರೂಪದ ಪ್ರಾಣಿಗಳ ಫೋಟೋಗಳು ಹರಿದಾಡಿದವು. ಮನುಷ್ಯರಿಗೆ ಮಾತ್ರ ಅಲ್ಲ, ಪರಿಸರಕ್ಕೂ ಆದ ಗಾಯ ಮಾಗಲು ಸಮಯ ಬೇಕು ಅನ್ನುವುದನ್ನು ಲಾಕ್‌ಡೌನ್‌ ತೋರಿಸಿತು.

ನಮ್ಮ ಕರಾವಳಿಯಲ್ಲಿ ಸೂಕ್ಷ್ಮ ಪರಿಸರದ ಕುಂದಾಪುರ ಮತ್ತು ಕಾರವಾರ ಆಗಲೀ, ಮಲ್ಪೆ, ಪಡುಬಿದ್ರಿ, ಮಂಗಳೂರು ಬೀಚ್‌ಗಳಾಗಲೀ ಈಗಾಗಲೇ ಹತ್ತಿಪ್ಪತ್ತು ವರ್ಷಗಳ ಹಿಂದಿನ ತಮ್ಮ ಸೊಬಗು, ಶಾಂತಿ ಕಳೆದುಕೊಂಡಿವೆ. ಇನ್ನು ಪ್ಲಾಸ್ಟಿಕ್ ಮತ್ತಿತರ ಕಸದ ಹಾವಳಿ ಅತಿಯಾದರೆ ಇಲ್ಲಿನ ಸೂಕ್ಷ್ಮಜೀವಿಗಳಿರುವ ಕರಾವಳಿ, ಕಡಲತೀರವನ್ನು ರಕ್ಷಿಸುತ್ತಿರುವ ಕಾಂಡ್ಲಾವನಗಳು, ಅಲ್ಲಿಗೆ ಬರುವ ಅಪರೂಪದ ಪಕ್ಷಿಗಳು ಮೊದಲು ಹೇರಳವಾಗಿ ಕಾಣಸಿಗುತ್ತಿದ್ದ ಗುಬ್ಬಚ್ಚಿ, ಕಾಗೆಗಳಂತೆ ಮಾಯವಾಗುವ ಸಂಭವವಿದೆ. ಪ್ಲಾಸ್ಟಿಕ್‌ ತುಂಡಾಗಿ ಕೊನೆಗೆ ಅತಿಸಣ್ಣ ಕಣಗಳಾದಾಗ ಅದರಷ್ಟು ಅಪಾಯಕಾರಿ ಸಮುದ್ರದ ಜೀವಿಗಳಿಗೆ ಇನ್ನೊಂದಿಲ್ಲ. ಇಂಡೋನೇಷಿಯಾದಲ್ಲಿ ಕಡಲತೀರಕ್ಕೆ ತೇಲಿ ಬಂದ ಸತ್ತ ತಿಮಿಂಗಿಲದ ಹೊಟ್ಟೆಯಲ್ಲಿ ಸುಮಾರು ಆರು ಕೆಜಿ ಪ್ಲಾಸ್ಟಿಕ್‌, ಬಾಟಲಿಗಳು, ಪಾದರಕ್ಷೆಗಳು, ಪ್ಲಾಸ್ಟಿಕ್‌ ಕಪ್‌ಗಳು ಸಿಕ್ಕವು. ಈಗಾಗಲೇ ನಾವು ಆರೋಗ್ಯಕ್ಕೆ ಒಳ್ಳೆಯದೆಂದು ಉಸಿರಾಡುವ ಸಮುದ್ರದ ಗಾಳಿಯಲ್ಲೇ ಪ್ಲಾಸ್ಟಿಕ್‌ನ ಕಣಗಳು ನಮ್ಮ ದೇಹ ಸೇರುತ್ತಿವೆ. ಇದೇ ಸಣ್ಣಕಣಗಳು ಮರಳಿನಲ್ಲಿ ಸೇರಿ ಅಲ್ಲಿನ ಉಷ್ಣತೆಯನ್ನು ಏರುಪೇರು ಮಾಡಿ ಕಡಲಾಮೆಗಳ ಮೊಟ್ಟೆಗಳಿಂದ ಹೊರಬರುವ ಮರಿಗಳ ಲಿಂಗವನ್ನೇ ಬದಲಿಸುತ್ತಿವೆ.

ಕಳೆದ ವರ್ಷ ನಮ್ಮ ದೇಶದ ಎಂಟು ಬೀಚ್‌ಗಳಿಗೆ ಸ್ವಚ್ಚ ಪರಿಸರ, ಸುರಕ್ಷತೆ, ಸರಿಯಾದ ಅನುಕೂಲತೆಗಳಿಗಾಗಿ ಅಂತರಾಷ್ಟ್ರೀಯ ಸಂಸ್ಥೆಯೊಂದು ಕೊಡುವ ’ಬ್ಲೂ ಫ್ಲಾಗ್’ ಮಾನ್ಯತೆ ಸಿಕ್ಕಿತು. ಅಷ್ಟು ಬೀಚ್‌ಗಳಿಗೆ ಒಂದೇ ಪ್ರಯತ್ನದಲ್ಲಿ ಆ ಮಾನ್ಯತೆ ಸಿಕ್ಕಿದ್ದು ಭಾರತಕ್ಕೆ ಮಾತ್ರ. ಅದೇ ಹುರುಪಿನಲ್ಲಿ ಮತ್ತಷ್ಟು ಕಡಲತೀರಗಳನ್ನು ’ಬ್ಲೂ ಫ್ಲಾಗ್‌’ಗೆ ಅಣಿಗೊಳಿಸುವ ಸಿದ್ಧತೆ ನಡೆಯುತ್ತಿದೆ. ನಮ್ಮ ಕರಾವಳಿಯ ಕಡೆ ಪ್ರವಾಸಿಗರನ್ನು ಮತ್ತಷ್ಟು ಸೆಳೆಯಬೇಕು, ಅದರಿಂದ ಸ್ಥಳೀಯ ಆರ್ಥಿಕತೆ ಖಂಡಿತ ಅಭಿವೃದ್ಧಿಯಾಗುತ್ತದೆ. ಅದಕ್ಕೋಸ್ಕರ ಕೇವಲ ಕಡಲತೀರದ ಸ್ವಚ್ಚತೆಯನ್ನು ಕಾಪಾಡಿ, ಪ್ರವಾಸಿಗರ ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಟ್ಟರೆ ಸಾಕು. ಯಾಕೆಂದರೆ ಕಡಲತೀರಕ್ಕೆ ಜನ ಬರುವುದೇ ಅಲ್ಲಿನ ಪ್ರಶಾಂತತೆಗೆ, ಎಲ್ಲೂ ಸಿಗದ ಅಗಾಧತೆಯ ಅನುಭೂತಿಗೆ, ಅದರಲ್ಲಿ ನಮ್ಮನ್ನೇ ನಾವು ಕಳೆದುಕೊಳ್ಳುವ ಆ ಕ್ಷಣಗಳಿಗೆ. ಆಂಧ್ರದ ಬೀಚ್‌ ಒಂದರಲ್ಲಿ ಮಾಡಿದ ಹಾಗೆ ಸಂಗೀತ ಕಾರಂಜಿ, ಗಾಜಿನ ಸೇತುವೆ, ಕಲಾ ಗ್ಯಾಲರಿ, ಲೇಸರ್‌ ಶೋಗಳಂತಹ ಮಾನವ ನಿರ್ಮಿತ ಆಕರ್ಷಣೆಗಳು ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳಲ್ಲಿ ಸಲ್ಲಬಹುದು, ಬೀಚ್‌ಗಳಲ್ಲಿ ಅಲ್ಲ. 

ಅಭಿವೃದ್ಧಿಯನ್ನು ಬರೀ ಆರ್ಥಿಕತೆಯ ಮಾನದಂಡದಲ್ಲಿ ಅಳೆಯುವುದರಿಂದಾಗಿ ಪ್ರತಿಯೊಂದು ಪ್ರವಾಸಿ ತಾಣವೂ ತನ್ನ ವಿಶಿಷ್ಠತೆ ಕಳೆದುಕೊಂಡು ಬರೀ ತಮ್ಮ ಯಾಂತ್ರಿಕ ಜೀವನದಿಂದ ಬೋರಾದ ಜನ ಕಾಲಹರಣ ಮಾಡಲು ಬರುವ ಜಾಗಗಳಾಗಿ ಉಳಿದಿವೆ. ಹಾಗೆ ನಿಜವಾದ ಆಸಕ್ತಿಯಿಲ್ಲದೆ ಬಂದ ಜನರೇ ಆ ಜಾಗದ ಮಹತ್ವ ತಿಳಿಯದೆ ಅಸಡ್ಡೆಯಿಂದ ವರ್ತಿಸುವುದು. ಇದು ಬೀಚ್‌ಗಳಲ್ಲಿ ಮಾತ್ರವಲ್ಲ, ಎಲ್ಲಾ ಪ್ರವಾಸಿ ತಾಣಗಳಲ್ಲೂ ಅವರು ನಡೆದುಕೊಳ್ಳುವ ರೀತಿ. ಆಶ್ಚರ್ಯದ ಸಂಗತಿಯೆಂದರೆ, ಬೇರೆ ದೇಶಗಳಿಗೆ ಹೋದರೆ ಅಲ್ಲಿ ಕಸ ಹಾಕಲು ಹಿಂಜರಿಯುವ ನಮ್ಮವರು, ಇಲ್ಲಿ ಕಷ್ಟಪಟ್ಟು ಯಾರೋ ಸ್ವಚ್ಚಪಡಿಸಿದ ಜಾಗದಲ್ಲಿ ಕೈಯಲ್ಲಿನ ಕಸ ಎಸೆದು ತಿರುಗಿ ನೋಡದೇ ಹೋಗುತ್ತಾರೆ.

ಕರ್ನಾಟಕ ಸರ್ಕಾರ ಕರಾವಳಿ ಪ್ರವಾಸೋದ್ಯಮ ಬೆಳವಣಿಗೆಗೆ ’ವಿಷನ್‌ ಗ್ರೂಪ್‌’ ಸೃಷ್ಟಿಸುತ್ತಿರುವುದು ಒಳ್ಳೆಯದೇ. ಅದರಲ್ಲಿ ಪ್ರವಾಸಿಗರಿಗೆ ಬೇಕಾದ ಹೊಸ ಆಕರ್ಷಣೆಗಳು, ಆರ್ಥಿಕ ಮತ್ತು ಔದ್ಯಮಿಕ ಬೆಳವಣಿಗೆಗಳ ಜತೆಗೆ ಬರುವ ಪ್ರವಾಸಿಗರಿಂದ ಸ್ಥಳೀಯ ಜನರಿಗೆ, ಪರಿಸರಕ್ಕೆ ಯಾವುದೇ ತೊಂದರೆ ಆಗದಂತೆ ನಿಯಮಗಳನ್ನು ರೂಪಿಸುವುದೂ ಅತಿ ಅವಶ್ಯಕ. ಬೇರೆ ದೇಶಗಳಲ್ಲಿ ಇಲ್ಲಿವರೆಗೆ ಅತಿ ಪ್ರವಾಸೋದ್ಯಮದಿಂದ ಆಗಿರುವ ಅನಾಹುತಗಳನ್ನು ನೋಡಿಯಾದರೂ ಇಲ್ಲಿನ ಪ್ರವಾಸಿ ತಾಣಗಳನ್ನು ಬರೀ ’ಅಭಿವೃದ್ಧಿ’ಗೊಳಿಸದೆ, ಅವುಗಳ ನೈಸರ್ಗಿಕತೆಯನ್ನು, ಸ್ವಚ್ಚತೆಯನ್ನು ಕಾಪಾಡುವಂತಹ ಶಿಸ್ತುಬದ್ಧ ಯೋಜನೆ ತಯಾರಿಸುವುದು ಅತಿ ಅಗತ್ಯ. ನಾವು ಹೋದಲ್ಲೆಲ್ಲ ಪರಿಸರಕ್ಕೆ, ಅಲ್ಲಿನ ಜೀವಿಗಳಿಗೆ ತೊಂದರೆ ಮಾಡಿದರೆ, ಸ್ಥಳೀಯ ಸಂಸ್ಕೃತಿಯನ್ನು ಅಗೌರವಿಸಿದರೆ ನಮ್ಮ ಆತಿಥ್ಯಕ್ಕೆ ಮುಂದೆ ಯಾವ ಬಾಗಿಲೂ ತೆರೆಯಲಾರದು.

Sunday, August 9, 2020

ಅಸ್ಮಿತೆಯೆಡೆಗೆ ಮಕ್ಕಳ ಮೊದಲ ಹೆಜ್ಜೆ ಐತಿಹಾಸಿಕ ಸತ್ಯಗಳಿಂದ ಆರಂಭವಾಗಲಿ

 ಗೆದ್ದವರು ಇತಿಹಾಸ ಬರೆಯುತ್ತಾರೆ ನಿಜ. ಆದರೆ ಸೋತವರು ಆ ಇತಿಹಾಸವನ್ನು ಮನಪೂರ್ತಿಯಾಗಿ ಒಪ್ಪಿಕೊಂಡರೆ? ದಾಸ್ಯದಿಂದ ಬಿಡುಗಡೆಗೊಂಡ ಮೇಲೂ ಅದನ್ನೇ ತಮ್ಮ ಮುಂದಿನ ಪೀಳಿಗೆಗೆ ಕಲಿಸಿಕೊಟ್ಟರೆ? ಜಗತ್ತಿನ ಅನೇಕ ಪ್ರಾಚೀನ ನಾಗರಿಕತೆಗಳು ಈಗ ಬರೀ ಇತಿಹಾಸವಾಗಿ ಉಳಿದಿರುವುದು ಆಕ್ರಮಣಕೋರರಿಂದಲ್ಲ; ಅವರ ಕ್ರೂರತೆಯನ್ನು ಅಡಗಿಸಿ ಅವರು ಕಟ್ಟಿದ ಕಥೆಗಳಿಗೆ ಒಪ್ಪಿಗೆಯ ಮುದ್ರೆಯೊತ್ತಿ ಅದನ್ನೇ ತಮ್ಮ ಇತಿಹಾಸವನ್ನಾಗಿ ಒಪ್ಪಿಕೊಂಡ, ಬರೆದಿಟ್ಟ, ಹಾಡಿ ಹೊಗಳಿದ ಆ ನಾಗರಿಕತೆಗಳ ವಾರಸುದಾರರಿಂದ. 

ಅಮೇರಿಕಾಗೆ ಯೂರೋಪಿಯನ್ನರಿಂದ ಸ್ವಾತಂತ್ರ್ಯ ಸಿಕ್ಕ ಮೇಲೆ ’ರೆಡ್‌ ಇಂಡಿಯನ್‌’ ಎಂದು ಕರೆಸಿಕೊಳ್ಳುವ ಅಲ್ಲಿನ ಸ್ಥಳೀಯ ಜನಾಂಗಗಳು ತಮ್ಮ ಜಾಗದ ಸ್ವಾಯತ್ತತೆಯನ್ನು, ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಅಮೇರಿಕಾ ದೇಶಕ್ಕೆ ಸೇರಲು ಒಪ್ಪಲಿಲ್ಲ. ಅವರನ್ನು ಶಕ್ತಿಯಿಂದ ಮಣಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಆಗ ಅಮೇರಿಕಾ ಅಧ್ಯಕ್ಷರಾಗಿದ್ದ ಜಾರ್ಜ್‌ ವಾಷಿಂಗ್ಟನ್‌ಗೆ ಹೊಳೆದದ್ದು ಮೂಲನಿವಾಸಿಗಳ ಜೊತೆ ಹೊಡೆದಾಡುವುದಕ್ಕಿಂತ ಅಗ್ಗವಾದ ಉಪಾಯ, ’ಶಿಕ್ಷಣ.’ ಅಮೇರಿಕಾ ಸರ್ಕಾರ ರೆಡ್‌ ಇಂಡಿಯನ್‌ ಮಕ್ಕಳನ್ನು ಎಳೆದು ತಂದು ಅವರಿಗಾಗಿಯೇ ಶುರು ಮಾಡಿದ ವಿಶೇಷ ಶಾಲೆಗಳಿಗೆ ಸೇರಿಸಿತು. ಒಪ್ಪದಿದ್ದ ಅಪ್ಪಂದಿರನ್ನು ಬಂಧಿಸಿ, ಮಕ್ಕಳನ್ನು ಪೊಲೀಸ್‌ ಸಹಾಯದಿಂದ ಕರೆದೊಯ್ಯಲಾಯಿತು. ಅಲ್ಲಿನ ಪ್ರತಿಯೊಂದು ಜನಾಂಗದ ಮಕ್ಕಳ ವಿಶಿಷ್ಟ ವೇಷಭೂಷಣಗಳನ್ನು ತೆಗೆಸಿ, ಅವರ ಕೂದಲು ಕತ್ತರಿಸಿ ಯೂರೋಪಿಯನ್‌ ವಸ್ತ್ರಗಳನ್ನು ಹಾಕಲಾಯಿತು, ಅವರವರ ಮಾತೃಭಾಷೆಗಳನ್ನು ಮಾತನಾಡುವುದನ್ನು ನಿಷೇಧಿಸಲಾಯಿತು. ಆಂಗ್ಲ ಭಾಷೆಯನ್ನು ಮಾತ್ರ ಕಡ್ಡಾಯ ಮಾಡಲಾಯಿತು. ಅವರ ಸಂಸ್ಕೃತಿ ಹೇಗೆ ಬಿಳಿಯರ ಸಂಸ್ಕೃತಿಗಿಂತ ಕೀಳು ಎನ್ನುವುದನ್ನು ಆ ಮಕ್ಕಳ ತಲೆಗೆ ತುಂಬಲಾಯಿತು. ಅವರ ದೇಸೀ ಹೆಸರುಗಳನ್ನು ಬದಲಾಯಿಸಿ ಅವರಿಗೆ ಇಂಗ್ಲೀಷ್ ಹೆಸರು ಇಡಲಾಯಿತು. ೧೫ನೇ ಶತಮಾನದ ಕೊನೆಗೆ ಸುಮಾರು ೩೦೦ ಭಾಷೆಗಳಿದ್ದ, ಒಂದೊಂದು ಜನಾಂಗಕ್ಕೂ ವಿಭಿನ್ನವಾಗಿದ್ದ ಮೂಲನಿವಾಸಿಗಳ ಸಂಸ್ಕೃತಿ ಈಗ ಆಂಗ್ಲಮಯವಾಗಿದೆ. ಬ್ರಿಟಿಷರು ಅದೇ ಉಪಾಯವನ್ನು ಭಾರತದಲ್ಲಿಯೂ ಪ್ರಯೋಗಿಸಿದರು ಮತ್ತು ಯಶಸ್ವಿಯೂ ಆದರು. ಅವರಿಗೆ ಗೊತ್ತಿತ್ತು ಒಂದು ನಾಗರಿಕತೆಯನ್ನು ನಾಶಮಾಡಲು ಅವರ ಇತಿಹಾಸಪ್ರಜ್ಞೆಯನ್ನು ಅಳಿಸಿಹಾಕಿದರೆ ಸರಿ ಎಂದು. 

ಇತಿಹಾಸಜ್ಞ ಧರಮ್‌ಪಾಲ್ ತಮ್ಮ ’ದಿ ಬ್ಯೂಟಿಫುಲ್‌ ಟ್ರೀ’ ಪುಸ್ತಕದಲ್ಲಿ ಸನಾತನ ಭಾರತೀಯ ಶಿಕ್ಷಣ ಪದ್ಧತಿಯ ಬಗ್ಗೆ ಬರೆಯುತ್ತಾರೆ. ಬ್ರಿಟಿಷರು ಭಾರತಕ್ಕೆ ಬರುವ ಮುನ್ನ ಇಲ್ಲಿನ ಪ್ರತಿ ಹಳ್ಳಿಯಲ್ಲೂ ಶಾಲೆಗಳಿದ್ದವು, ಮತ್ತು ಅದರಲ್ಲಿ ಜಾತಿ ಆಧಾರಿತವಲ್ಲದ, ಎಲ್ಲಾ ಜಾತಿಯ ಮಕ್ಕಳಿಗೂ, ಹೆಣ್ಣುಮಕ್ಕಳಿಗೂ ಉಚಿತ ಅಥವಾ ಅತಿ ಕಡಿಮೆ ವೆಚ್ಚದ ಶಿಕ್ಷಣ ದೊರೆಯುತ್ತಿತ್ತು. ಆದರೆ ಆ ಕಾಲದ ಇಂಗ್ಲೆಂಡ್‌ನಲ್ಲಿ ಕೇವಲ ಮೇಲ್ವರ್ಗದವರಿಗೆ ಮಾತ್ರ ಶಿಕ್ಷಣದ ಅವಕಾಶವಿತ್ತು. ಬಳ್ಳಾರಿಯ ಬ್ರಿಟಿಷ್ ಕಲೆಕ್ಟರ್‌ ಆಗಿದ್ದ ಎ.ಡಿ. ಕ್ಯಾಂಪ್‌ಬೆಲ್‌ನ ೧೮೨೩ಯ ವರದಿ ಪ್ರಕಾರ ಇಲ್ಲಿನ ಸನಾತನ ಶಿಕ್ಷಣ ಪದ್ಧತಿಯನ್ನೇ ಬ್ರಿಟಿಷರು ಇಂಗ್ಲೆಂಡ್‌ನಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡರೇ ವಿನಹ ಅಲ್ಲಿಂದ ಬಂದ ಬಿಳಿಯರು ಇಲ್ಲಿ ಹೊಸದಾಗಿ ಶಿಕ್ಷಣ ಕ್ರಾಂತಿ ಮಾಡಲಿಲ್ಲ. ಇಲ್ಲಿನ ಹಿಂದೂ ರಾಜರು ಕೊಡುತ್ತಿದ್ದ ಅನುದಾನದಿಂದ ನಡೆಯುತ್ತಿದ್ದ ಶಾಲೆಗಳು ಬ್ರಿಟಿಷರ ಆಗಮನದ ನಂತರ ನಿಂತುಹೋದವು ಎಂದು ಆತ ಬರೆಯುತ್ತಾನೆ.

ಸ್ಟಾಕ್‌ಹೋಮ್‌ ಸಿಂಡ್ರೋಮ್‌ ಬಗ್ಗೆ ಹೆಚ್ಚಿನವರು ಕೇಳಿರಬಹುದು. ಶೋಷಿತರೇ ತಮ್ಮನ್ನು ಬಂಧಿಸಿಟ್ಟ, ಹಿಂಸಿಸಿದ ಕ್ರೂರಿಗಳನ್ನು ಆರಾಧಿಸುವ, ಅವರ ಪರವಾಗಿ ನಿಲ್ಲುವ ವಿಚಿತ್ರ ಮನೋರೋಗ ಇದು. ನಮ್ಮಲ್ಲಿನ್ನೂ ಉಳಿದಿರುವ ಇಂಗ್ಲೀಷರ ಜೀವನಶೈಲಿಯ ಕುರುಡು ಆರಾಧನೆ ಅದಕ್ಕೆ ಸಾಕ್ಷಿ. ಇದರ ಮೊದಲ ಬಲಿ ನಮ್ಮ ಮಕ್ಕಳಿಗೆ ಕಲಿಸುತ್ತಿರುವ ಇತಿಹಾಸ. ನಾವು ಹೇಳಿಕೊಡುತ್ತಿರುವ ಇತಿಹಾಸ ನಮ್ಮವರೇ ಸ್ವತಂತ್ರವಾಗಿ ಬರೆದಿಟ್ಟದ್ದಲ್ಲ, ಬದಲಾಗಿ ಇಲ್ಲಿಗೆ ಹೊರಗಿನಿಂದ ಬಂದವರು ಬರೆದಿಟ್ಟ ಕಥೆಗಳು. ಅವುಗಳ ಸತ್ಯತೆಯ ಪೂರ್ಣ ಪರಿಶೀಲನೆ ಅಂತೂ ಈಗ ಸಾಧ್ಯವಿಲ್ಲ. ನಮ್ಮ ವಿಸೃತ ’ಇತಿಹಾಸ’ ಶುರುವಾಗುವುದೇ ಯೂರೋಪಿಯನ್ನರ ಆಗಮನದಿಂದ. ಹಾಗಾದರೆ ಅದಕ್ಕೂ ಮೊದಲೇ ಏಷ್ಯಾದ ವಿವಿಧ ಭಾಗಗಳನ್ನು ಆಳುತ್ತಿದ್ದ ಭಾರತೀಯ ರಾಜರ ಕಥೆ ಹೇಳುವವರ್ಯಾರು? ಇತಿಹಾಸ ಬರೀ ರಾಜರ ಕಥೆಯೂ ಅಲ್ಲ. ನಮ್ಮ ಹಿಂದಿನ ಜೀವನಶೈಲಿ, ಅಲಂಕಾರ, ಸಂಪ್ರದಾಯ, ಗಣಿತ, ಖಗೋಳ ವಿಜ್ಞಾನ, ನೌಕಾ ಸಾಧನೆಗಳು, ಯೋಗ, ಆಯುರ್ವೇದ ಎಲ್ಲವೂ. 

ವಾಸ್ಕೋ ಡ ಗಾಮನ ನೌಕಾ ಪರ್ಯಟನೆಯ ಸಾಹಸದ ಬಗ್ಗೆ ಓದಿ ಓದಿ ಅಚ್ಚರಿಪಡುವ ನಾವು ಚೋಳರ ಮಲೇಷಿಯಾ, ಇಂಡೋನೇಷಿಯಾವರೆಗಿನ ನೌಕಾ ವಿಜಯಗಳ ಬಗ್ಗೆ, ಅವರಿಗೆ ಥೈಲಾಂಡ್‌ ಮತ್ತು ಕಾಂಬೋಡಿಯಾ ದೇಶಗಳ ರಾಜರು ಕೊಡುತ್ತಿದ್ದ ಕಪ್ಪಕಾಣಿಕೆಯ ಬಗ್ಗೆ ಎಲ್ಲಿ ಓದಿದ್ದೇವೆ? ನಮ್ಮ ಜನರ ಮತ್ತು ಅವರನ್ನು ಆಳಿದವರ ವಿದ್ವತ್ತಿನ ಬಗ್ಗೆ, ಅವರು ಕೈಗೊಂಡ ಸಾಮಾಜಿಕ ಸುಧಾರಣೆಗಳ ಬಗ್ಗೆ ಎಲ್ಲಿ ಕೇಳಿದ್ದೇವೆ? ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸಯನ್ಸ್‌ ಕಟ್ಟಲು ಸಾಧ್ಯವಾದದ್ದು ಮೈಸೂರಿನ ಮಹಾರಾಣಿ ವಾಣಿವಿಲಾಸ ಸನ್ನಿಧಾನರವರ ಅನುದಾನದಿಂದ. ಚಿತ್ರದುರ್ಗದ ಮಾರಿಕಣಿವೆ ಅಣೆಕಟ್ಟು, ಮಹಾರಾಣಿ ಕಾಲೇಜು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಹೀಗೆ ಅವರ ನೂರಾರು ಕೆಲಸಗಳ ಬಗ್ಗೆ ಮಕ್ಕಳಿಗೆ ಹೇಳುವವರ್ಯಾರು? ಬಲಿಷ್ಠ ಪೋರ್ಚುಗೀಸರನ್ನು ಸೋಲಿಸಿ ಪರ್ಷಿಯಾ, ಯೂರೋಪಿನಲ್ಲೆಲ್ಲ ತನ್ನ ಶೌರ್ಯಕ್ಕೆ ಪ್ರಸಿದ್ಧಿಯಾದ ಉಳ್ಳಾಲದ ರಾಣಿ ಅಬ್ಬಕ್ಕಳಂತವರ ಕಥೆ ನಮ್ಮ ಪಠ್ಯಗಳಲ್ಲಿ ಯಾವಾಗ ಓದಬಹುದು?

ಈಗ ನಮ್ಮ ಪಠ್ಯಪುಸ್ತಕಗಳಲ್ಲಿ ಇರುವುದು ಕೇವಲ ಭಾರತದ ಮೇಲೆ ಅತಿಕ್ರಮಣ ಮಾಡಿದವರ ಕೃತ್ಯಗಳನ್ನು ಮರೆಮಾಚುವ ಯತ್ನ. ಬ್ರಿಟಿಷರ ಶಿಕ್ಷಣ ಪದ್ಧತಿಯ ಪ್ರತಿಫಲವಾಗಿ ಭಾರತೀಯರು ಆಧುನಿಕತೆ, ಜಾತ್ಯಾತೀತತೆ, ತರ್ಕಬದ್ಧ ವೈಚಾರಿಕತೆ ಬೆಳೆಸಿಕೊಳ್ಳಲು ಸಾಧ್ಯವಾಯಿತು ಅನ್ನುತ್ತದೆ ಹತ್ತನೆ ತರಗತಿಯ ಸಮಾಜ ವಿಜ್ಞಾನ ಪುಸ್ತಕ. ಲಾರ್ಡ್ ಡಾಲ್‌ಹೌಸಿ ಬಂದು ಕಲ್ಕತ್ತಾ, ಬಾಂಬೆ ಮತ್ತು ಮೆಡ್ರಾಸ್‌ನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದ ಮೇಲೆ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಬಂತು ಎನ್ನುತ್ತದೆ ಆ ಪಾಠ. ಹಾಗಾದರೆ ಆಂಗ್ಲರ ಆಗಮನದ ಮುಂಚೆ ಪ್ರತಿ ಹಳ್ಳಿಯಲ್ಲೂ ಇದ್ದ ಶಾಲೆಗಳು ಸಾರ್ವತ್ರಿಕ ಶಿಕ್ಷಣದ ಉದಾಹರಣೆಗಳಲ್ಲವೇ? ಒಡಿಶಾದ ಪುಷ್ಪಗಿರಿ, ಈಗ ಪಾಕಿಸ್ತಾನದಲ್ಲಿರುವ ತಕ್ಷಶಿಲಾ, ಬಿಹಾರದ ನಾಲಂದಾ ಮತ್ತು ವಿಕ್ರಮಶಿಲಾ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠಗಳಂತಹ ಹತ್ತಾರು ವಿಶ್ವವಿದ್ಯಾಲಯಗಳ ವಿನಾಶದ ಮುಂಚಿನ ವೈಭವದ ಬಗ್ಗೆ ನಮ್ಮ ಮಕ್ಕಳಿಗೆ ಯಾಕೆ ಹೇಳಿಕೊಡಲಾಗುತ್ತಿಲ್ಲ? ಈಗ ಹೇಳಿಕೊಡುತ್ತಿರುವುದು, ಬ್ರಿಟಿಷರು ಬಂದು ನಮ್ಮ ದೇಶದಲ್ಲಿ ಕೈಗಾರಿಕಾ, ಶೈಕ್ಷಣಿಕ, ವ್ಯಾವಹಾರಿಕ, ನ್ಯಾಯಾಂಗ ಕ್ರಾಂತಿಗಳನ್ನು ತಂದರು, ಮಲಿಕ್ ಕಾಫರ್ ’ಯಶಸ್ವಿಯಾಗಿ ದಕ್ಷಿಣ ಭಾರತದ ಮೇಲೆ ದಂಡೆತ್ತಿದ ಗೌರವ ಪಡೆದುಕೊಂಡ,’ ಅಲ್ಲಾವುದ್ದಿನ್ ಖಿಲ್ಜಿ, ತುಘಲಕ್ ಮತ್ತಿತರ ದಾಳಿಕೋರ ರಾಜರ ವಿದ್ವತ್ತು, ಅವರು ಕಲಿತುಕೊಂಡ ಭಾಷೆಗಳು, ಅವರ ವಿದ್ವತ್ತಿನಿಂದಾಗಿ ಅವರು ಬರೆದ (ಬರೆಯಿಸಿದ?) ಮಹಾನ್‍ ಗ್ರಂಥಗಳು, ಅವರ ರಾಜಕೀಯ ಪರಿಣತಿ ಮತ್ತು ಜ್ಞಾನ, ಆಡಳಿತಾತ್ಮಕ ಮತ್ತು ಸಾಮಾಜಿಕ ಸುಧಾರಣೆಗಳು, ಅವರು ಕಟ್ಟಿದ ’ಅದ್ಭುತ ವಾಸ್ತುಶಿಲ್ಪದ ಕಟ್ಟಡಗಳು,’ ಧರ್ಮಸಹಿಷ್ಣುತೆ ಇತ್ಯಾದಿ ಇತ್ಯಾದಿ. ಅವರಲ್ಲಿ ಹೇರಳವಾಗಿದ್ದ ದಾಸ್ಯ ಪದ್ಧತಿ, ಅವರು ನಡೆಸಿದ ಲಕ್ಷಾಂತರ ಭಾರತೀಯರ ಕ್ರೂರ ಮಾರಣಹೋಮ, ನಮ್ಮ ಇಡೀ ಜೀವನಪದ್ಧತಿಯ ಮತ್ತು ನಮ್ಮ ಸಂಸ್ಕೃತಿಯ ನಾಶಗಳ ಬಗ್ಗೆ ನಮ್ಮ ಪಠ್ಯಗಳಲ್ಲಿ ಓದಲು ಸಾಧ್ಯವೇ ಇಲ್ಲವೇನೋ.

ಅಮೇರಿಕಾದಲ್ಲಿರುವ ಭಾರತೀಯರು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವುದರಲ್ಲಿ ನಮಗಿಂತ ಒಂದು ಕೈ ಮೇಲು. ಕ್ಯಾಲಿಫೋರ್ನಿಯಾದ ಪಠ್ಯಪುಸ್ತಕಗಳಲ್ಲಿ ಭಾರತದ ಬಗ್ಗೆ, ಹಿಂದೂಗಳ ಬಗ್ಗೆ ಇದ್ದ ದೋಷಪೂರಿತ ಪಾಠಗಳನ್ನು ಓದಿದ ಅಲ್ಲಿನ ಮಕ್ಕಳು ತಮ್ಮ ಭಾರತೀಯ ಸಹಪಾಠಿಗಳನ್ನು ಛೇಡಿಸುತ್ತಿದ್ದರು. ಅದರಲ್ಲಿ ಹಿಂದೂ ಎಂದರೆ ಬರಿ ಜಾತಿ ಪದ್ಧತಿ, ಹಸುಗಳ ಪೂಜೆ, ವರದಕ್ಷಿಣೆ ಮತ್ತು ಮಹಿಳೆಯರ ದಯನೀಯ ಸ್ಥಿತಿ, ಜೊತೆಗೆ ಸತಿ ಪದ್ಧತಿ, ಅಸ್ಪೃಶ್ಯತೆಗಳಂತಹ ಕಂದಾಚಾರಗಳಿಂದ ತುಂಬಿತುಳುಕುವ ಒಂದು ಕೆಟ್ಟ ಧರ್ಮ ಎಂದು ಬಿಂಬಿಸಲಾಗಿತ್ತು. ಜಗತ್ತಿನ ಅತಿ ಪ್ರಾಚೀನವಾದ ಜೀವಂತ ನಾಗರಿಕತೆಯ, ಸಾವಿರಾರು ವರ್ಷಗಳ ಅಗಾಧ ತತ್ವಜ್ಞಾನದ, ಜೀವನದೃಷ್ಟಿಯ ಕಿರು ಪರಿಚಯವೂ ಕೊಡದ ಆ ಪಾಠಗಳನ್ನು ಓದಿದ ಮಕ್ಕಳು ಮನೆಗೆ ಬಂದು ತಮಗೆ ಇನ್ನು ಮೇಲೆ ಹಿಂದೂ ಆಗಿರಲು ಇಷ್ಟ ಇಲ್ಲ ಎನ್ನಲು ಆರಂಭಿಸಿದರು. ಇದರ ಬದಲಾವಣೆಯನ್ನು ಹೋರಾಟ ರೂಪದಲ್ಲಿ ಕೈಗೆತ್ತಿಕೊಂಡ ಅಲ್ಲಿನ ಹಿಂದೂ ಸಂಘಟನೆಗಳು ಹತ್ತಾರು ವರ್ಷಗಳು ಒದ್ದಾಡಿ ಆ ಪಾಠಗಳಲ್ಲಿ ತಿದ್ದುಪಡಿ ತರುವುದರಲ್ಲಿ ಬಹುಪಾಲು ಯಶಸ್ವಿಯೂ ಆದರು.

ನಮ್ಮ ಮಕ್ಕಳಿಗೆ ನಮ್ಮ ಐತಿಹಾಸಿಕ ವೀರರ ಬಗ್ಗೆಯಾಗಲೀ, ವಿಜ್ಞಾನ, ಗಣಿತ, ಕಲೆ, ವಾಸ್ತುಶಿಲ್ಪ, ಖಗೋಳದಂತಹ ವಿಷಯಗಳಲ್ಲಿ ನಮ್ಮ ಸಾಧನೆಗಳಾಗಲೀ, ತತ್ವ ಮತ್ತು ತರ್ಕ, ವೇದಗಳಾಗಲೀ ಯಾವುದನ್ನೂ ನಾವು ಭಾರತೀಯರು ಅಸಾಮಾನ್ಯರು ಅನ್ನುವ ತರ ಅತಿಶಯವಾಗಿ ಹೇಳಿಕೊಡಬೇಕೆಂದಿಲ್ಲ. ನಾವು ಕಲಿಸಬೇಕಾದದ್ದು ಐತಿಹಾಸಿಕ ಸತ್ಯಗಳನ್ನು; ಒಳ್ಳೆಯ ಮಾತ್ರವಲ್ಲ ಕೆಟ್ಟ ಸತ್ಯಗಳನ್ನೂ. ನಾವು ಮಾಡಿದ ನೂರಾರು ವರ್ಷಗಳ ಸಾಧನೆಗಳು ಮಾತ್ರವಲ್ಲ, ನಮ್ಮ ಕೆಲ ತಪ್ಪುಗಳನ್ನೂ. ಅವುಗಳ ಬಗೆಗಿನ ಅಂತಿಮ ಅಭಿಪ್ರಾಯಕ್ಕೆ ಅವರೇ ಬರುತ್ತಾರೆ. 

ಐತಿಹಾಸಿಕ ಸತ್ಯಕ್ಕೆ ಇರುವುದು ಒಂದೇ ಮುಖ. ಆದರೆ ಅದನ್ನು ಪೊಲಿಟಿಕಲ್‌ ಕರೆಕ್ಟ್‌ನೆಸ್‌ನಿಂದ ಮರೆಮಾಚುತ್ತಾ ಹೋದಂತೆ ನಿಜವಾದ ಇತಿಹಾಸದ ರೂಪ ಬದಲಾಗಿ ಹೋಗುತ್ತದೆ. ಈಗ ಕೇಂದ್ರ ಸರ್ಕಾರ ಪಠ್ಯಪುಸ್ತಕಗಳಲ್ಲಿ ಕೆಲವು ಬದಲಾವಣೆ ಮಾಡಲು ಹೊರಟಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಪ್ರಕಾರ ಪಂಡಿತ ಮದನಮೋಹನ ಮಾಳವೀಯರ ಆಶಯದಂತೆ ಪ್ರಾಚೀನ ಭಾರತೀಯ ಜ್ಞಾನ ಮತ್ತು ಆಧುನಿಕ ವಿಜ್ಞಾನ ಎರಡನ್ನೂ ಸೇರಿಸಿ ಹೊಸ ಪಠ್ಯಪುಸ್ತಕಗಳನ್ನು ಬರೆಯಲಾಗುತ್ತದೆ. ಅದೂ ಕಳೆದ ಸರ್ಕಾರಗಳ ತರ ಸತ್ಯಕ್ಕೆ ತೇಪೆ ಹಾಕಿ ಅರೆಬರೆ ಕಾಣುವಂತೆ ಮಾತ್ರ ಇರುತ್ತದೆಯೊ ಎಂದು ಕಾದು ನೋಡಬೇಕಷ್ಟೆ. ಇನ್ನು ಪ್ರತಿ ರಾಜ್ಯದ ಪಠ್ಯಪುಸ್ತಕಗಳ ಬದಲಾವಣೆಯ ಆಟಗಳು ಅಲ್ಲಿನ ಸರ್ಕಾರಗಳು ಬದಲಾದ ಹಾಗೆ ನಡೆಯುತ್ತಿರುತ್ತವೆ. ಮಕ್ಕಳು ಶಾಲೆಗಳಲ್ಲಿ ಓದುವ ಇತಿಹಾಸ ಸರ್ಕಾರಗಳ ಮರ್ಜಿಗೆ ತಕ್ಕಂತೆ ಇರುವುದಾದರೆ, ನಿಜವಾದ ಶಿಕ್ಷಣ ಮನೆಗಳಲ್ಲೇ ದೊರೆಯಬೇಕು. ನಮ್ಮ ಮಕ್ಕಳಿಗೆ ನಾವೀಗ ಕಲಿಸಬೇಕಾದದ್ದು ಪಠ್ಯಗಳಲ್ಲಿ ಇರುವುದರ ಪರ್ಯಾಯ ಇತಿಹಾಸ. ಅವರು ತಮ್ಮ ಪರಂಪರೆಯ ಬಗ್ಗೆ ಅಭಿಮಾನ ಪಡುವ ಇತಿಹಾಸ. ನಮ್ಮ ರಸ್ತೆಗಳಿಗೆ, ಊರುಗಳಿಗೆ ಆಕ್ರಮಣಕಾರರ ಹೆಸರು ಇಟ್ಟಿದ್ದೇವೆ, ಅವರು ಕಟ್ಟಿದ ಕಟ್ಟಡಗಳನ್ನು ನೂರಾರು ವರ್ಷಗಳ ನಂತರವೂ ಮುಚ್ಚಟೆಯಿಂದ ಕಾಪಾಡಿಕೊಂಡಿದ್ದೇವೆ. ಇರಲಿ. ಆದರೆ ನಮ್ಮ ಮುಂದಿನ ಪೀಳಿಗೆಗೆ ಇನ್ನಾದರೂ ನಾವು ಆ ಕ್ರೂರ ಸತ್ಯಗಳ ಪರಿಚಯ ಮಾಡಿಕೊಡದಿದ್ದರೆ ಅವರ ಜೀವನವೂ ಕೂಡ ನಮ್ಮ ಹಾಗೆ ಅಸ್ಮಿತೆಯಿಲ್ಲದ, ಅನುಕರಣೆಯ ಅಸ್ತಿತ್ವವಾಗಿ ಉಳಿಯುತ್ತದಷ್ಟೆ.


(Published in Udayavani dated 04/08/2020)

Tuesday, May 26, 2020

ಪಾಶ್ಚಾತ್ಯರ ಕಾಮಾಲೆ ಕಣ್ಣಿಗೆ ಭಾರತವೇಕೆ ಹಳದಿಯಾಗಿ ಕಾಣುತ್ತದೆ?

"ಥ್ಯಾಂಕ್‌ ಗಾಡ್‌. ಕೊರೋನಾ ವೈರಸ್‌ ಭಾರತದಲ್ಲಿ ಶುರುವಾಗಲಿಲ್ಲ, ಏಕೆಂದರೆ ಆಗ ಭಾರತದ ಆಡಳಿತ ವ್ಯವಸ್ಥೆ ಅದಕ್ಕೆ ಚೀನೀಯರಷ್ಟು ಸಮರ್ಥವಾಗಿ ಸ್ಪಂದಿಸುತ್ತಿರಲಿಲ್ಲ. ಬೇರೆಯವರಿಗೆ ಹೋಲಿಸಿದರೆ ಚೀನಾ ಯಾವ ಆಪತ್ತಿಗೂ ತಕ್ಷಣ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ." ಈ ಮಾತುಗಳು ಇಡೀ ಜಗತ್ತು ಸ್ತಬ್ಧವಾಗಿ ನಿಂತಿರುವ ಈ ಘಳಿಗೆಯಲ್ಲಿ, ಅದಕ್ಕೆ ಚೀನಾ ಕಾರಣ ಎಂದು ತಿಳಿದಿರುವ ಯಾರಿಗಾದರೂ ಅಚ್ಚರಿ ಉಂಟುಮಾಡುತ್ತದೆ. ಬ್ರಿಟನ್‌ನ ಖ್ಯಾತ ಅರ್ಥಶಾಸ್ತ್ರಜ್ಞ ಜಿಮ್‍ ಓ’ನೀಲ್‌ ನಮ್ಮ ದೇಶದ ಬಗ್ಗೆ ಇಂಥ ಮಾತಾಡುವುದು ಮೊದಲೇನೂ ಅಲ್ಲ. ಅಸಾಂದರ್ಭಿಕವಾಗಿ, ಆಗುವ ಅನಾಹುತಗಳಿಗೆಲ್ಲ ಭಾರತವನ್ನು ದೂಷಿಸುವ ಪಾಶ್ಚಾತ್ಯರಲ್ಲಿ ಅವರು ಮೊದಲನೆಯವರೂ ಅಲ್ಲ. 
ಪ್ರೊಫ಼ೆಸರ್‌ ಸ್ಟೀವ್‌ ಹಾಂಕಿ ಎನ್ನುವ ಅಮೇರಿಕಾದ ಜಾನ್ಸ್‌ ಹಾಪ್ಕಿನ್ಸ್‌ ಯೂನಿವರ್ಸಿಟಿಯ ಅರ್ಥಶಾಸ್ತ್ರಜ್ಞ, ಭಾರತೀಯರು ಪ್ರತಿಭಟಿಸುವವರೆಗೂ ತಮ್ಮ ಟ್ವೀಟ್‌ಗಳನ್ನು ಕೊರೋನಾ ವೈರಸ್‌ ವಿರುದ್ಧದ ಭಾರತ ಸರ್ಕಾರದ ಕ್ರಮಗಳನ್ನು ದೂಷಿಸುವುದಕ್ಕೇ ಮೀಸಲಿಟ್ಟರು. ಮಾರ್ಚ್ ೧೬ರ ವಾರ ಅಮೇರಿಕಾ ೩೦೦ಕ್ಕೂ ಹೆಚ್ಚು ಸಾವುಗಳನ್ನು ಕಂಡರೆ, ಭಾರತದಲ್ಲಿ ಆದದ್ದು ಎರಡು ಸಾವು. ಆದರೆ ಈ ಅರ್ಥಶಾಸ್ತ್ರಜ್ಞರಿಗೆ ನಮ್ಮ ದೇಶದ ಎರಡು ಸಾವು ನಮ್ಮ ಆರೋಗ್ಯ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯ ಭಯಾನಕ ಉದಾಹರಣೆಯಾಗಿ ಕಂಡಿತು. ಕೇಂದ್ರ ಸರ್ಕಾರದ ’ಆರೋಗ್ಯ ಸೇತು’ ಅಪ್ಲಿಕೇಷನ್‌ ಮೋದಿ ಜನರ ಮೇಲೆ ಬೇಹುಗಾರಿಕೆಗೆ ಇಟ್ಟ ಮೊದಲ ಹೆಜ್ಜೆಯ ತರ ಕಂಡಿತು. ಸುಮಾರು ೧೩೫ ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಇಷ್ಟು ಕಡಿಮೆ ಸೋಂಕಿತರು ಇರುವುದು ಅವರಿಗೆ ನಂಬಲು ಅಸಾಧ್ಯ. ಮಾತ್ರವಲ್ಲ, ಮೋದಿಯ ಕರೆಗೆ ಓಗೊಟ್ಟು ಜನ ಹೊಡೆದ ಚಪ್ಪಾಳೆ, ಹೊತ್ತಿಸಿದ ದೀಪ, ಊದಿದ ಶಂಖನಾದ ಹಾಸ್ಯಾಸ್ಪದವಾಗಿ ಕಂಡಿತು. ಆದರೆ ಅದೇ ಚಪ್ಪಾಳೆ ಯೂರೋಪಿಯನ್ ರಾಷ್ಟ್ರಗಳಿಂದ ಕೇಳಿದಾಗ ಅವರನ್ನು ಹೊಗಳಲು ಇವರ್ಯಾರೂ ಮರೆಯಲಿಲ್ಲ. 
ನಮ್ಮ ದೇಶ ಪಾಶ್ಚಾತ್ಯರ ಕಾಮಾಲೆ ಕಣ್ಣಿಗೆ ಹಳದಿಯಾಗಿ ಕಾಣುವುದು ಹೊಸತೇನೂ ಅಲ್ಲ. ಈಸ್ಟ್‌ ಇಂಡಿಯಾ ಕಂಪೆನಿ ಭಾರತದಲ್ಲಿ ತನ್ನ ಆಡಳಿತವನ್ನು ಸಮರ್ಥನೆ ಮಾಡಿಕೊಳ್ಳಲು ಮಾಡಿದ ಉಪಾಯಗಳಲ್ಲಿ ಬಿಳಿಯರ ಕೈಯಲ್ಲಿ ಪೂರ್ವಾಗ್ರಹಿತ ಪುಸ್ತಕಗಳನ್ನು ಬರೆಸುವುದೂ ಒಂದು. ತಾವು ಬಂದು ಅನಾಗರಿಕ ಭಾರತೀಯರನ್ನು ಹೇಗೆ ಉದ್ದಾರ ಮಾಡಿದೆವು ಅನ್ನುವುದನ್ನು ಐರೋಪ್ಯ ದೇಶಗಳಲ್ಲಿ ಸಾರುವುದಕ್ಕೋಸ್ಕರ ಬ್ರಿಟಿಷರು ಬರೆಸಿದ ಪುಸ್ತಕಗಳಲ್ಲಿ ಕ್ಯಾಥರೀನ್‌ ಮೇಯೋಳ ’ಮದರ್‌ ಇಂಡಿಯಾ’ ಮತ್ತು ಜೇಮ್ಸ್‌ ಮಿಲ್‌ನ ’ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ’ ಪ್ರಸಿದ್ಧವಾದವು.
ಅಮೇರಿಕಾದ ಪತ್ರಕರ್ತೆ ಹಾಗೂ ಬ್ರಿಟನ್‍ ಆರಾಧಕಿಯೆಂದೇ ಖ್ಯಾತಳಾದ ಕ್ಯಾಥರೀನ್‌ ಮೇಯೋ ೧೯೨೦ರ ದಶಕದಲ್ಲಿ ’ಮದರ್‌ ಇಂಡಿಯಾ’ ಬರೆದದ್ದು ಬ್ರಿಟಿಷ್ ಸರ್ಕಾರದ ಆಧಾರವಿಲ್ಲದ ದಾಖಲೆಗಳನ್ನು ಮುಂದಿಟ್ಟುಕೊಂಡು. ಗಾಂಧೀಜಿ ಹೇಳಿದ ಹಾಗೆ ಅದೊಂದು ’ಚರಂಡಿಗಳನ್ನು ತೆಗೆದು ಅದರ ವಾಸನೆಯ ಬಗ್ಗೆ ರಂಗುರಂಗಾಗಿ ವರ್ಣಿಸಿ ಬರೆದ ವರದಿ’ ಮಾತ್ರವಲ್ಲ, ಅವಳ ಪ್ರಕಾರ ’ಭಾರತವೇ ಒಂದು ಚರಂಡಿ.’ ತನ್ನ ಜೀವನದ ಅರ್ಧಭಾಗ ಭಾರತದಲ್ಲಿ ಕಳೆದ ಆನ್ನಿ ಬೆಸೆಂಟ್, ಮೇಯೋ ವರ್ಣಿಸಿದ ಯಾವ ಭಯಾನಕ ದೃಶ್ಯಗಳನ್ನೂ ತಾನು ನೋಡಲಿಲ್ಲ ಎಂದು ಸಾರಾಸಗಟಾಗಿ ಅವಳ ಪುಸ್ತಕವನ್ನು ತಿರಸ್ಕರಿಸಿದರು. 
ಅಷ್ಟಕ್ಕೂ ಮೇಯೋ ಬರೆದದ್ದೇನು? ಇಡೀ ಪುಸ್ತಕದ ತುಂಬ ಓದಲಸಾಧ್ಯವಾದ ಅಸಹ್ಯಕರ ಸುಳ್ಳುಗಳು. ಭಾರತದ ಹಿಂದೂ ಜನ ಎಷ್ಟು ಕೊಳಕು ಎಂದರೆ, ಭಾರತ ಮಾನವ ನಾಗರಿಕತೆಯ ದೇಹದಲ್ಲಿ ಒಂದು ಕ್ಯಾನ್ಸರ್‌ನ ಗಡ್ಡೆ ಎನ್ನುವ ಅವಳ ಕಲ್ಪನೆಗಳಿಗೆ ತಕ್ಕ ಹಾಗೆ ವಿವಿಧ ಉದಾಹರಣೆಗಳು. ಭಾರತಕ್ಕೆ ೧೮೯೬ರಲ್ಲಿ ಪ್ಲೇಗ್‌ ದಾಳಿಯಿಟ್ಟ ಬಗ್ಗೆ ಬರೆಯುತ್ತಾ ಆಕೆ ನಮ್ಮ ದೇಶವೇ ಜಗತ್ತಿನ ಎಲ್ಲಾ ಸಾಂಕ್ರಾಮಿಕ ರೋಗಗಳ ಆಗರ ಎನ್ನುತ್ತಾಳೆ. ಇಡೀ ವಿಶ್ವಕ್ಕೆ ಅಪಾಯಕಾರಿಯಾದ ಹಿಂದೂಗಳನ್ನು ಬ್ರಿಟಿಷರು ಕಾಪಾಡದಿದ್ದಿದ್ದರೆ, ಉತ್ತರದ ವೀರ ಜನಾಂಗಗಳು ಅವರನ್ನು ಯಾವಾಗಲೋ ನಾಶಮಾಡಿರುತ್ತಿದ್ದವು ಎನ್ನುತ್ತಾಳೆ. 
ಇನ್ನು ಜೇಮ್ಸ್‌ ಮಿಲ್‌ ಎನ್ನುವ ಇನ್ನೊಬ್ಬ ಮಹಾನುಭಾವ ಬ್ರಿಟಿಷ್‌ ಆಳ್ವಿಕೆಯಲ್ಲಿದ್ದ ಭಾರತದ ಇತಿಹಾಸದ ಬಗ್ಗೆ ಹನ್ನೆರಡು ವರ್ಷಗಳ ಸುದೀರ್ಘ ಸಮಯ ತೆಗೆದುಕೊಂಡು ಮೂರು ಸಂಪುಟಗಳ ಬೃಹತ್‌ ಗ್ರಂಥ ಬರೆಯುತ್ತಾನೆ. ಭಾರತದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವ ಆಗಿನ ಐರೋಪ್ಯ ದೇಶದವರಿಗೆ ಅದೊಂದು ದಾರಿದೀಪವಾಗುತ್ತದೆ. ಜೇಮ್ಸ್‌ ಮಿಲ್‌ ಭಾರತದ, ಇಲ್ಲಿನ ಜನರ ಜೀವನದ, ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ವಿಷಯಗಳ ಬಗ್ಗೆ ಆತ ಅತ್ಯಂತ ನಿಕೃಷ್ಟವಾಗಿ ಬರೆದ. ವಿಪರ್ಯಾಸವೆಂದರೆ, ಅವನು ಆ ಗ್ರಂಥವನ್ನು ಬರೆದದ್ದು ಸಾವಿರಾರು ಮೈಲಿ ದೂರ ಕೂತು, ತನ್ನ ಜೀವನದಲ್ಲಿ ಒಮ್ಮೆಯೂ ಭಾರತಕ್ಕೆ ಕಾಲಿಡದೆ, ಇಲ್ಲಿನ ಸಮಾಜದ ನಾಡಿಮಿಡಿತದ ಅರಿವಿಲ್ಲದೆ, ಇಲ್ಲಿನ ಜನರನ್ನು ಮುಖತ: ಭೇಟಿಯಾಗದೆ. ಇವರಿಬ್ಬರ ಪ್ರಕಾರ ಹಿಂದೂ ನಾಗರಿಕತೆ ಯೂರೋಪಿಯನ್‌ ನಾಗರಿಕತೆಗಿಂತ ಕೆಳಸ್ತರದ್ದು, ಆದ್ದರಿಂದ ಭಾರತೀಯರು ಸ್ವರಾಜ್ಯಕ್ಕೆ ಅರ್ಹರಲ್ಲ. 
ಅವತ್ತಿನಿಂದ ಇವತ್ತಿನವರೆಗೂ ಪಾಶ್ಚಾತ್ಯರು ನಮ್ಮ ಬಗ್ಗೆ ಕೀಳಾಗಿ ಬರೆಯುವುದಕ್ಕೆ, ತಿರಸ್ಕಾರದಿಂದ ಮಾತನಾಡುವುದಕ್ಕೆ ಇರುವುದು ಒಂದೇ ಕಾರಣ. ತಮ್ಮ ಜನಾಂಗದ ಶ್ರೇಷ್ಠತೆಯ ಬಗ್ಗೆ ಅವರಿಗಿರುವ ದೃಢ ನಂಬಿಕೆ. ಒಂದು ರೀತಿಯಲ್ಲಿ ಇವರೆಲ್ಲ ನಮ್ಮ ದೇಶವನ್ನು ಪೂರ್ವಾಗ್ರಹದ ದೃಷ್ಟಿಯಿಂದ ನೋಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇಲ್ಲಿಗೆ ಬಂದ ಪಾಶ್ಚಾತ್ಯರಲ್ಲಿ ಭಾರತವನ್ನು ಇಷ್ಟಪಟ್ಟವರು, ಆರಾಧಿಸಿದವರು, ಇಲ್ಲಿನ ಸೆಳೆತಕ್ಕೆ ಒಳಗಾಗಿ ಇಲ್ಲೇ ನೆಲೆ ನಿಂತವರು ಬೇಕಾದಷ್ಟು ಜನರಿದ್ದಾರೆ. ಆದರೆ ಅವರ ಅನುಭವಗಳಿಗಿಂತ ಕೆಲವರ ನಕಾರಾತ್ಮಕ ನೋಟ, ಅಭಿಪ್ರಾಯಗಳಿಗೆ ಎಲ್ಲಾ ಕಡೆ ಮನ್ನಣೆ ದೊರೆಯುತ್ತವೆ. ಅದಕ್ಕೆ ಒಂದು ಕಾರಣ, ಇಲ್ಲಿನವರೇ ವಿದೇಶಗಳ ಅನುದಾನಗಳಿಗೆ, ಪ್ರಶಸ್ತಿಗಳಿಗೆ ಬೇಕಾದಂತೆ ಅಂಗಲಾಚುವ ಕೈಗಳ ಮತ್ತು ಖಾಲಿ ನೋಟಗಳ ಬಡಮಕ್ಕಳ, ದೈನ್ಯತೆಯ ಜೀವನದ ಫೋಟೋಗಳನ್ನು ತೆಗೆದು, ಚಲನಚಿತ್ರಗಳನ್ನು ತಯಾರಿಸಿ ಪಾಶ್ಚಾತ್ಯ ಡ್ರಾಯಿಂಗ್‌ ರೂಮ್‌ಗಳಲ್ಲಿ ತೋರಿಸಿ ಭಾರತ ಬಡದೇಶ, ಕೊಳಕು ದೇಶ, ಅಲ್ಲಿನವರಿಗೆ ಬದುಕಲು ನಿಮ್ಮ ಸಹಾಯವಿಲ್ಲದೆ ಸಾಧ್ಯವೇ ಇಲ್ಲ ಎನ್ನುವ ಭಾವ ಹುಟ್ಟಿಸಿರುವುದು. ಅಲ್ಲಿಯೂ ಸ್ಲಂಗಳಿದ್ದಾವೆ, ಬಡತನವಿದೆ, ಹಸಿವಿದೆ. ಆದರೆ ಅವರ ವೈಭವೀಕರಣ ’ಮೂರನೇ ಜಗತ್ತಿನ’ ದೇಶಗಳಿಗೆ ಮಾತ್ರ ಸೀಮಿತ.  
ಕೊರೋನಾ ವೈರಸ್‌ಗೆ ಇಲ್ಲಿಯವರೆಗೆ ಬ್ರಿಟನ್‌ನಲ್ಲಿ ೩೦,೦೦೦ಕ್ಕೂ ಹೆಚ್ಚು ಜನ ಬಲಿಯಾದರೆ, ಭಾರತದ ಸಂಖ್ಯೆ ೨,೦೦೦ದ ಆಸುಪಾಸು. ಆದರೆ ಅಲ್ಲಿನ ಪತ್ರಿಕೆಗಳಿಗೂ, ಬಿಬಿಸಿಯಂತಹ ಚಾನಲ್‌ಗಳಿಗೂ ನಮ್ಮ ದೇಶದ ಬಗ್ಗೆ ಚಿಂತೆ. ಭಾರತದಲ್ಲಿ ಕೊರೋನಾದಿಂದ ಆಗಬಹುದಾದ ಕಲ್ಪಿತ ಅನಾಹುತಗಳ ಬಗ್ಗೆ ಪದೇ ಪದೇ ಅವರ ಮಾಧ್ಯಮಗಳಲ್ಲಿ ಬರಹಗಳು, ಚರ್ಚೆಗಳು ಬರುತ್ತಿವೆ. ಇಲ್ಲಿಯವರೆಗೂ ಜಗತ್ತಿಗೆ ಒಂದೇ ಒಂದು ಸಾಂಕ್ರಾಮಿಕ ರೋಗ ಹರಡದ, ಎರಡು ಕೋಟಿಗೂ ಹೆಚ್ಚು ಜನ ಒಂದೆಡೆ ಒಮ್ಮೆಲೆ ಸೇರುವ ಮಹಾ ಕುಂಭಮೇಳದ ಮಾತ್ರವಲ್ಲದೆ ವರ್ಷವಿಡೀ ದೇಶದ ಮೂಲೆಮೂಲೆಯಲ್ಲಿ ನಾನಾ ದೇವರುಗಳ ಜಾತ್ರೆಗಳಲ್ಲಿ ಲಕ್ಷಾಂತರ ಜನ ಸೇರುವ ಅಸಾಧಾರಣ ಇತಿಹಾಸ ನಮ್ಮದು ಮಾತ್ರ. ಆದರೆ ಅವರಿಗೆ ಕಾಣುವುದು ಬರೀ ಅದರಲ್ಲಿನ ಜಟೆ ಕಟ್ಟಿದ, ವಿಭೂತಿ ಮೈಗೆ ಬಳಿದುಕೊಂಡ ಸಾಧುಗಳು, ಒಂದೇ ನೀರಿನಲ್ಲಿ ಲಕ್ಷಾಂತರ ಜನ ಒಟ್ಟಿಗೆ ಮುಳುಗಿ ಏಳುವ, ಅದರಿಂದ ರೋಗಗಳು ಹರಡಬಹುದಾದ ’ಗಂಡಾಂತರ’ಗಳು. 
ನಮ್ಮ ದೇಶದಲ್ಲಿ ಜನ ರಸ್ತೆಯಲ್ಲಿ ಉಗುಳುತ್ತಾರೆ ನಿಜ, ಕಸದ ರಾಶಿಯ ಪಕ್ಕದಲ್ಲೇ ನಾವು, ನಾಯಿಗಳು, ದನಗಳು ಸಹಜೀವನ ನಡೆಸುತ್ತೇವೆ ನಿಜ. ಪಾಶ್ಚಾತ್ಯರಿಂದ ಇಷ್ಟು ಅವಮಾನಿಸಿಕೊಂಡ ಮೇಲೂ ಸ್ವಚ್ಚತೆಯ ಅರಿವು ನಮಗೆ ಬಂದಿಲ್ಲ ಎನ್ನುವುದು ನಿಜ. ಆದರೆ ಇಲ್ಲಿಯವರೆಗೆ ’ನಾಗರಿಕ’ ದೇಶಗಳ ಹಾಗೆ ನಮ್ಮ ದೇಶದಿಂದ ಯಾವ ಸಾಂಕ್ರಾಮಿಕ ರೋಗಗಳೂ ಜಗತ್ತಿಗೆ ಹರಡಿಲ್ಲ ಅನ್ನುವುದೂ ನಿಜ. ಸ್ಪಾನಿಷ್‌ ಫ಼್ಲೂ ೧೯೧೮ರಲ್ಲಿ ಶುರುವಾದದ್ದು ಕಾನ್ಸಾಸ್, ಅಮೇರಿಕಾದಿಂದ. ಭಾರತಕ್ಕೆ ತಲುಪಿದ ಫ್ಲೂ ದೇಶದೆಲ್ಲೆಡೆ ಹಬ್ಬಿದರೂ ಬ್ರಿಟಿಷ್‍ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಸಾಮಾನ್ಯ ಜನರೇ ರಾಮಕೃಷ್ಣ ಮಿಶನ್‌ ಮತ್ತಿತರ ಸೇವಾಸಂಸ್ಥೆಗಳ ಜೊತೆ ಸೇರಿ ತಮ್ಮ ಸುತ್ತಮುತ್ತ ರೋಗಕ್ಕೆ ತುತ್ತಾದವರ ಆರೈಕೆ ಮಾಡಿದರು. ಬ್ರಿಟಿಷರು ಫ್ಲೂ ಬಂದದ್ದೇ ಇಲ್ಲಿನವರ ಅಸ್ವಚ್ಚತೆಯಿಂದ ಎಂದು ದೂರುತ್ತಾ ಕಾಲಕಳೆದರು, ಮಾತ್ರವಲ್ಲ ಅವರ ವೈದ್ಯಕೀಯ ಸವಲತ್ತುಗಳು ಕೇವಲ ಇಲ್ಲಿದ್ದ ಆಂಗ್ಲರಿಗೆ, ಅವರ ಮನೆಯವರಿಗೆ ಸೀಮಿತವಾಗಿತ್ತು. ಇನ್ನು ಪಾಶ್ಚಾತ್ಯರು ಕಾಲರಾ ಭಾರತದಿಂದ ಶುರುವಾಯಿತು ಎನ್ನುತ್ತಾರೆ. ಆದರೆ ’ಸುಶ್ರುತ ಸಂಹಿತ’ದಿಂದ ಹಿಡಿದು ನಮ್ಮ ಯಾವ ಹಳೆಯ ದಾಖಲೆಗಳಲ್ಲೂ ಕಾಲರಾ ಬಗ್ಗೆ ಪ್ರಸ್ತಾಪವಿಲ್ಲ, ಬದಲಿಗೆ ನಮ್ಮ ದೇಶಕ್ಕೆ ಬಂದ ಪೋರ್ಚುಗೀಸ್‌ ಸೈನಿಕರಿಂದ ಭಾರತಕ್ಕೆ ಕಾಲರಾ ಹರಡಿರುವ ಬಗ್ಗೆ ಅವರ ವೈದ್ಯರೇ ದಾಖಲಿಸಿದ್ದಾರೆ.
ಕ್ರಿಸ್ಟೋಫರ್‌ ಕೊಲಂಬಸ್‌ ಮೊದಲು ಅಮೇರಿಕಾಗೆ ಕಾಲಿಟ್ಟಾಗ ಅವನನ್ನು ಅಲ್ಲಿನ ಸ್ಥಳೀಯ ಕಾಡು ಜನಾಂಗಗಳು ಸ್ನೇಹದಿಂದ ಬರಮಾಡಿಕೊಳ್ಳುತ್ತಾರೆ. ಆದರೆ ಸುಮಾರು ಎಂಟು ಮಿಲಿಯನ್ ಜನಸಂಖ್ಯೆಯಿದ್ದ ಅಲ್ಲಿನ ಜನಾಂಗ ಐವತ್ತು ವರ್ಷಗಳಲ್ಲಿ ೫೦೦ ಜನರಿಗೆ ಇಳಿಯುತ್ತದೆ. ಇದಕ್ಕೆ ಕಾರಣ ಯೂರೋಪಿಯನ್ನರು ತಮ್ಮ ಜೊತೆ ಬಳುವಳಿಯಾಗಿ ತಂದ ಸಿಡುಬು, ಫ್ಲೂ ಮತ್ತಿತರ ಸಾಂಕ್ರಾಮಿಕ ರೋಗಗಳು. ಸ್ಪಾನಿಷರು ಮೆಕ್ಸಿಕೋ ಕಾಡು ಜನಾಂಗಗಳಿಗೆ ತಂದ ಸಿಡುಬಿನಿಂದಾಗಿ ಸುಮಾರು ಮೂರು ಲಕ್ಷ ಜನ ಸಾಯುತ್ತಾರೆ. ಯಾರಿಂದ ಯಾವ ರೋಗ ಶುರುವಾದರೂ ಐರೋಪ್ಯರು ಮೊದಲು ದೂಷಿಸುತ್ತಿದ್ದದ್ದು ಏಷ್ಯಾ, ಆಫ್ರಿಕಾ ದೇಶಗಳನ್ನು. ಏಕೆಂದರೆ ಅಲ್ಲಿನವರ ವೇಷಭೂಷಣಗಳಲ್ಲಿ, ನಡವಳಿಕೆಯಲ್ಲಿ ’ಅನಾಗರಿಕತೆ’ ಎದ್ದು ಕಾಣುತ್ತಿತ್ತು. ಅವರ ಅನಕ್ಷರತೆ ಅವರನ್ನು ಸೂಟು-ಬೂಟು ಹಾಕಿದ ಐರೋಪ್ಯರ ಎದುರಿಗೆ ಕೀಳರಿಮೆಯಿಂದ ನಿಲ್ಲುವ ಹಾಗೆ ಮಾಡಿತು. ಕಾರಣ ಏನೇ ಇರಬಹುದು, ಈ ಕೀಳರಿಮೆಯ, ಬಿಳಿಯರನ್ನು ಮೆಚ್ಚಿಸುವ ಹಪಹಪಿ ಈಗಲೂ ಮುಂದುವರಿದಿದೆ. 
ಸೂರತ್‌ನಲ್ಲಿ ೧೯೯೪ರಲ್ಲಿ ಪ್ಲೇಗ್‌ಗೆ ೫೬ ಜನ ಬಲಿಯಾದಾಗ ನ್ಯೂಯಾರ್ಕ್‌ ಟೈಮ್ಸ್‌ ಸೂರತ್‌ ನಗರವನ್ನು ’ನಾಗರಿಕತೆಯ ರೋಗಗಳ ಕೊಪ್ಪರಿಗೆ’ ಎಂದು ಕರೆಯುತ್ತದೆ. ಅದೇ ಲಂಡನ್‌ನಲ್ಲಿ ೧೪ನೇ ಶತಮಾನದಿಂದ ಇಲ್ಲಿಯವರೆಗೆ ಮೂರು, ನಾಲ್ಕು ಸಲ ಪ್ಲೇಗ್‌ ಬಂದು ಮೂರರಿಂದ ನಾಲ್ಕು ಲಕ್ಷ ಜನ ತೀರಿಕೊಂಡರೂ ಅದೇ ಪೇಪರ್‌ಗೆ ಇನ್ನೂ ಪದೇ ಪದೇ ಲಂಡನ್‌ಗೆ ಪ್ಲೇಗ್‌ ಬಂದ ಕಾರಣ ತಿಳಿದಿಲ್ಲ. ಇಲ್ಲಿನದ್ದೇ ಬಡತನ, ಅಸ್ವಚ್ಚ ರಸ್ತೆಗಳು, ಮನೆಗಳು, ವೈಯಕ್ತಿಕ ಸ್ವಚ್ಚತೆ ಬಗ್ಗೆ ಗಮನ ಕೊಡದ ಜನರು ಆಗಿನ ಲಂಡನ್‌ ನಗರದಲ್ಲೂ ತುಂಬಿದ್ದರು. ಈಗ ಇಲ್ಲಿಂದ ಹೋಗಿ ನಾಲ್ಕು ದಿನವಿದ್ದು ಬಂದು ಅಲ್ಲಿನ ಸ್ವಚ್ಚತೆಯನ್ನು ಹೊಗಳುವ, ಆದರೆ ಇಲ್ಲಿ ಏರ್‌ಪೋರ್ಟ್‌ನಲ್ಲಿ ಇಳಿದ ತಕ್ಷಣ ಬದಿ ಹೋಗಿ ಉಗುಳುವ ನಮ್ಮ ಜನ ಪಾಶ್ಚಾತ್ಯ ದೇಶಗಳ ಈಗಿನ ಸ್ವಚ್ಚತೆ ಇಲ್ಲಿ ಬರಬೇಕಾದರೆ ಅದರಲ್ಲಿ ನಮ್ಮ ಕರ್ತವ್ಯವೂ ಸೇರಿದೆ ಎಂದು ಒಪ್ಪಿಕೊಳ್ಳಬೇಕು. ಮಾತ್ರವಲ್ಲ, ಇವತ್ತಿಗೂ ನಮ್ಮ ಜನಕ್ಕೆ ಪಾಶ್ಚಾತ್ಯರು ಪೂರ್ಣ ಆತ್ಮವಿಶ್ವಾಸದಿಂದ ಏನೇ ಹೇಳಲಿ ಅದರ ಮೇಲೆ ನಂಬಿಕೆ ಜಾಸ್ತಿ. ನಮ್ಮ ಮಾನಸಿಕ ಗುಲಾಮಗಿರಿ ಯಾವಾಗ ನಿಂತು ನಮ್ಮ ಇತಿಹಾಸದ ಮೇಲೆ, ಯಾವ ಕ್ಷೇತ್ರದಲ್ಲೂ ನಮ್ಮವರ ಪರಿಣತಿಯ ಮೇಲೆ ಅದೇ ನಂಬಿಕೆ ಬರುತ್ತದೆಯೋ ಆಗಲೇ ಹೊರಗಿನವರ ಕಣ್ಣಿಗೆ ಅಂಟಿರುವ ಹಳದಿ ಪೊರೆಯನ್ನು ನಾವು ಸ್ವಚ್ಚಮಾಡಲು ಸಾಧ್ಯ.

(Published in Udayavani dated 17-05-2020)

Wednesday, February 5, 2020

ಖಾಲಿ ಪದಗಳ ಪದರದಡಿಯ ವಿಶ್ವಸಂಸ್ಥೆ ಎಂಬ ಪಳೆಯುಳಿಕೆ

ಶ್ವೇತಾ ಹಾಲಂಬಿ

ಬೇಸಿಗೆಯ ಸುಡುಬಿಸಿಲು ಸುಡಲಿಲ್ಲ, ಮಳೆಗಾಲದ ಪ್ರವಾಹ ಮುಳುಗಿಸಲಿಲ್ಲ. ಆದರೆ ಸಾವಿರಾರು ಮೈಲಿ ದೂರದಲ್ಲಿ ಕೂತ ಒಬ್ಬ ರಾಜಕಾರಣಿ ಸ್ವಾತಂತ್ರಪೂರ್ವ ಅವಿಭಜಿತ ಬಂಗಾಳದ ಮತ್ತು ಸುತ್ತಮುತ್ತಲಿನ ರಾಜ್ಯಗಳ ಬರೋಬ್ಬರಿ ಮೂವತ್ತು ಲಕ್ಷ ಜನರ ಸಾವಿಗೆ ಕಾರಣನಾದ.
ಅದು 1943ರ ಪೂರ್ವಾರ್ಧ. ಮಿತ್ರದೇಶಗಳು ಬಲಿಷ್ಟ ಜರ್ಮನಿ ಮತ್ತದರ ಸಹದೇಶಗಳನ್ನು ಮಣಿಸಲು ಒದ್ದಾಡುತ್ತಿದ್ದ ಎರಡನೇ ವಿಶ್ವಯುದ್ಧದ ಕಾಲ. ಒಂದು ಕಡೆ ಬಂಗಾಳದಲ್ಲಿ ಭೀಕರ ಬರಗಾಲ, ಇನ್ನೊಂದು ಕಡೆ ಭಾರತೀಯರನ್ನು ತೀವ್ರವಾಗಿ ದ್ವೇಷಿಸುತ್ತಿದ್ದ ಬ್ರಿಟಿಷ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್. ಭಾರತದ ಪರವಾಗಿ ಬೇಡಿಕೊಂಡ ಯಾವ ಬ್ರಿಟಿಷ್ ಅಧಿಕಾರಿಯ ಮಾತನ್ನೂ ಕೇಳದೆ, ೭೦,೦೦೦ ಟನ್ ಅಕ್ಕಿಯನ್ನು ಬ್ರಿಟನ್‌ ಸೈನಿಕರ ಮತ್ತು ನಾಜ಼ಿಗಳ ವಿರುದ್ಧ ಹೋರಾಡುತ್ತಿರುವ ಮಿತ್ರದೇಶದವರಿಗಾಗಿ ತರಿಸಿಕೊಂಡ. ಮಾತ್ರವಲ್ಲ, ಬಂಗಾಳದಲ್ಲಿ ಯಾರೂ ತಾವು ಬೆಳೆದ ಅಕ್ಕಿಯನ್ನು ದಾಸ್ತಾನು ಮಾಡುವಂತಿಲ್ಲ ಎಂದು ಆಜ್ಞೆ ಮಾಡಿ, ಇದ್ದ ದಾಸ್ತಾನನ್ನೆಲ್ಲ ಮುಟ್ಟುಗೋಲು ಹಾಕಿಕೊಂಡ. ಸೈಕ್ಲೋನ್‌ನಲ್ಲಿ ಕೊಚ್ಚಿಕೊಂಡು ಹೋದ ಭತ್ತದ ಫಸಲು, ಅಳಿದುಳಿದ ಅಕ್ಕಿಯೂ ಬ್ರಿಟಿಷರ ಪಾಲಿಗೆ.
ಪತ್ರಕರ್ತೆ ಮಧುಶ್ರೀ ಮುಖರ್ಜಿ ತನ್ನ 'Churchill's secret war' ಪುಸ್ತಕದಲ್ಲಿ ಹೇಗೆ ಹಸಿವಿನಿಂದ ಕಂಗೆಟ್ಟ ಸಾವಿರಾರು ಜನ ಹಳ್ಳಿಗಳಿಂದ ಅನ್ನ ಹುಡುಕಿಕೊಂಡು ಪ್ರತಿದಿನ ಕಲ್ಕತ್ತಾಗೆ ಬರುತ್ತಿದ್ದರು, ರಸ್ತೆಗಳಲ್ಲೆ ಮಲಗಿ ಸಾಯುತ್ತಿದ್ದರು ಅನ್ನುವುದನ್ನು ಬರೆಯುತ್ತಾರೆ. ಅಪ್ಪ-ಅಮ್ಮಂದಿರು ಹಸಿದು ಅಳುತ್ತಿರುವ ತಮ್ಮ ಮಕ್ಕಳನ್ನು ಕೆರೆ ಬಾವಿಗೆಸೆಯುತ್ತಾರೆ, ಹೋದಲ್ಲೆಲ್ಲ ಅನ್ನ ಬೇಯಿಸಿದ ತಿಳಿ ಗಂಜಿಯನ್ನಾದರೂ ಕೊಡಿ ಎಂದು ಬೇಡಿಕೊಳ್ಳುತ್ತಾರೆ. ಅಂತ್ಯಸಂಸ್ಕಾರ ಮಾಡಲು ಸಂಬಂಧಿಕರಿಲ್ಲ, ಅಳಲು ಕಣ್ಣಲ್ಲಿ ನೀರಿಲ್ಲ. ಆದರೆ ಆಗ ಬ್ರಿಟನ್‌ನಲ್ಲಿ ಕೊಳೆಯುತ್ತಾ ಬಿದ್ದದ್ದು ಸುಮಾರು ೧೮.೫ ಮಿಲಿಯನ್ ಟನ್‌ನಷ್ಟು ಆಹಾರ ಪದಾರ್ಥಗಳು.
ಆಗ ಅಮೇರಿಕಾ ಅಧ್ಯಕ್ಷನಾಗಿದ್ದುದು ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್. ಇದೇ ಚರ್ಚಿಲ್ ಮತ್ತು ರೂಸ್ವೆಲ್ಟ್ ಕನಸಿನ ಕೂಸು ಈಗ ಜಗತ್ತಿನ ಅತಿ ದೊಡ್ದ ಎನ್‌ಜಿಓ ಆಗಿ ಉಳಿದಿರುವ ವಿಶ್ವಸಂಸ್ಥೆ. ಅದು ಹುಟ್ಟಿದ್ದೇ ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿ ಮತ್ತದರ ಸ್ನೇಹಿತ ದೇಶಗಳ ಭೀಕರ ದಾಳಿಯ ವಿರುದ್ಧ ದಿಕ್ಕುತಪ್ಪಿ ಕಕ್ಕಾಬಿಕ್ಕಿಯಾಗುತ್ತಿದ್ದ ಮಿತ್ರರಾಷ್ಟ್ರಗಳನ್ನು ಒಗ್ಗೂಡಿಸಿ ಹೋರಾಡಲು. ಈಗ ಮಾತ್ರ ಅದರ ಉದ್ದೇಶ ’ಶಾಂತಿ ಕಾಪಾಡಿಕೊಳ್ಳುವಿಕೆ.’
ವಿಶ್ವಸಂಸ್ಥೆಗೆ ೧೯೪೩ ನವೆಂಬರ್ ೯ರಂದು ಒಂದು ಹೊಸ ಅಂಗ ಸೇರಿಕೊಳ್ಳುತ್ತದೆ - ಪರಿಹಾರ ಮತ್ತು ಪುನರ್ವಸತಿ ಆಯೋಗ. ಅದರ ಧ್ಯೇಯವೇ ಜನ ಹಸಿವಿನಿಂದ ಸಾಯುವುದನ್ನು ತಡೆಯುವುದು. ಅದು ಹುಟ್ಟಿದ ದಿನವೇ ಅಮೇರಿಕಾ ಅಧ್ಯಕ್ಷರಿಗೆ ಮತ್ತು ಅವರ ಪತ್ನಿಗೆ ಒಂದು ಪತ್ರ ಬರುತ್ತದೆ. ಅಮೇರಿಕಾದಲ್ಲಿದ್ದ ಭಾರತೀಯ ಸಂಘಟನೆಯೊಂದರ ಅಧ್ಯಕ್ಷ ಜೆ.ಜೆ.ಸಿಂಗ್ ಬಂಗಾಳದ ಬರಗಾಲದಲ್ಲಿ ಒದ್ದಾಡುತ್ತಿದ್ದ ಜನರಿಗಾಗಿ ರೂಸ್ವೆಲ್ಟ್ ಹತ್ತಿರ ಸಹಾಯ ಕೇಳುತ್ತಾರೆ. ಆ ಪತ್ರ ಓದಿ ಎಲೀನರ್ ರೂಸ್ವೆಲ್ಟ್ ಮರುಗಿ ತನ್ನ ಗಂಡನ ಹತ್ತಿರ ಸಹಾಯ ಮಾಡಲು ಕೇಳಿಕೊಂಡರೆ, ರೂಸ್ವೆಲ್ಟ್ ತನ್ನ ಪತ್ನಿಗೆ ಬಾಯಿಮಾತಿನ ಭರವಸೆ ಕೊಡುತ್ತಾನೆ ವಿನಹ ಕೊನೆಗೂ ಚರ್ಚಿಲ್ ವಿರುದ್ಧ ಹೋಗುವುದಿಲ್ಲ. ಲಕ್ಷಾಂತರ ಜನರ ಪ್ರಾಣಕ್ಕಿಂತ ಚರ್ಚಿಲ್‌ಗೆ ಭಾರತೀಯರ ಮೇಲಿನ ದ್ವೇಷ ಮುಖ್ಯವಾದರೆ, ರೂಸ್ವೆಲ್ಟ್ ಗೆ ಚರ್ಚಿಲ್‌ನ್ನು ಮೆಚ್ಚಿಸುವುದೇ ಮುಖ್ಯವಾಗುತ್ತದೆ.
ಇತಿಹಾಸದ ಪುಟಗಳನ್ನು ಸುಮ್ಮನೆ ತಿರುವಿದರೆ ಅಲ್ಲಿ ಸಿಗುವುದು ಕುತೂಹಲಕಾರಿ ಸತ್ಯಗಳು. ಹಿಟ್ಲರ್ ಮಾತ್ರ ಯಹೂದಿಗಳ ನರಮೇಧ ನಡೆಸಲಿಲ್ಲ. ಅವನ ಮಿತ್ರರಾಷ್ಟ್ರಗಳಾದ ರೊಮೇನಿಯಾ, ಬಲ್ಗೇರಿಯಾ, ಸ್ಲೊವಾಕಿಯಾ, ಇಟೆಲಿ ಮತ್ತು ಹಂಗೇರಿ ಕೂಡ ಸುಮಾರು ೨ ಲಕ್ಷ ಯಹೂದಿಗಳನ್ನು ಸಾವಿರಾರು ಮನೆಗಳಲ್ಲಿ ಬಂಧಿಸಿಟ್ಟವು. ಹಂಗೇರಿಯಲ್ಲಿ ಆ ಮನೆಗಳ ಎದುರು ಒಂದು ಹಳದಿ ನಕ್ಷತ್ರವನ್ನು ಅಂಟಿಸಲಾಗುತ್ತಿತ್ತು. ಆ ಹಳದಿ ನಕ್ಷತ್ರದ ಮನೆಗಳ ಒಳಗೆ ಕೊಟ್ಟಿಗೆಯಲ್ಲಿ ದನಗಳನ್ನು ತುಂಬಿದಂತೆ ಯಹೂದಿಗಳನ್ನು ತುಂಬಲಾಗುತ್ತಿತ್ತು. ಅಲ್ಲಿಂದ ಅವರ ಪಯಣ ಜರ್ಮನಿಯ ಶಿಬಿರಗಳಿಗೆ, ಸಾವಿನೆಡೆಗೆ.
ಇತ್ತೀಚೆಗೆ ಬಿಡುಗಡೆಯಾದ ’ಹಿಟ್ಲರ್ ನಂತರ ಮಾನವ ಹಕ್ಕುಗಳು’ ಪುಸ್ತಕದಲ್ಲಿ ಡಾ. ಡ್ಯಾನ್ ಪ್ಲೆಶ್, ಹಿಟ್ಲರ್ ನಡೆಸುತ್ತಿದ್ದ ಮರಣ ಶಿಬಿರಗಳ ಬಗ್ಗೆ, ಅದರಲ್ಲಿ ಲಕ್ಷಗಟ್ಟಲೆ ಜನ ವಿಷಾನಿಲ ಸೇವಿಸಿ, ರೋಗಗಳಿಂದ ಮತ್ತು ಚಿತ್ರಹಿಂಸೆಯಿಂದ ಸಾಯುತ್ತಿರುವುದರ ಬಗ್ಗೆ ಬ್ರಿಟನ್‌ಗೆ ಮೊದಲೇ ಮಾಹಿತಿ ಇತ್ತು ಎನ್ನುತ್ತಾರೆ. ಬಲಿಷ್ಠ ರಾಷ್ಟ್ರಗಳ ಮೂಗಿನಡಿಯೇ ಹಿಟ್ಲರ್ ಸುಮಾರು ಒಂದು ಕೋಟಿ ಹತ್ತು ಲಕ್ಷ ಯಹೂದಿಗಳ, ಸ್ಲಾವ್‌ಗಳ, ಸಲಿಂಗಕಾಮಿಗಳ, ರೋಮಾ ಜಿಪ್ಸಿಗಳ ನರಮೇಧ ನಡೆಸಿಯೇಬಿಟ್ಟ. ವಿಶ್ವಸಂಸ್ಥೆಯ ಯುದ್ಧಾಪರಾಧ ಆಯೋಗ ಹಿಟ್ಲರ್‌ನ ನರಮೇಧದ ಬಗ್ಗೆ ರಹಸ್ಯವಾಗಿ ತನಿಖೆಯೇನೋ ನಡೆಸಿತು, ಆದರೆ ಅದು ನಾಜ಼ಿಗಳ ಬಾಂಬುಗಳ ಸದ್ದು ಲಂಡನ್ ತಲುಪಿದ ಮೇಲೇ. ಅದು ತನ್ನ ಮೊದಲ ಶಿಕ್ಷೆಯನ್ನು ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ವಿಧಿಸಿದ್ದರೆ, ಅದರ ಹೆಸರಿಗೆ, ರಚನೆಗೆ ಒಂದು ಅರ್ಥ ಬರುತ್ತಿತ್ತು. ಆದರೆ ಇಲ್ಲಿವರೆಗೂ ಯಹೂದಿಗಳ ನರಮೇಧದ ಬಗ್ಗೆ ವಿಶ್ವಸಂಸ್ಥೆಯಿಂದ ಹೊರಬಿದ್ದದ್ದು ಬರೀ ಬಾಯಿಮಾತಿನ ’ಖಂಡನೆ.’
ಬಾಮಿಯಾನ್ ಬುದ್ಧ ನೆನಪಿರಬಹುದು. ಜಗತ್ತಿನಲ್ಲೇ ಅತಿ ಎತ್ತರದ, ಹಿಂದುಕುಶ್ ಬೆಟ್ಟಗಳಲ್ಲಿ ಕೆತ್ತಿದ ಬುದ್ಧನ ಎರಡು ವಿಗ್ರಹಗಳನ್ನು ತಾಲಿಬಾನ್ ೨೦೦೧ರಲ್ಲಿ ಬಾಂಬುಗಳನ್ನಿಟ್ಟು ನಾಶ ಮಾಡಿತು. ಆಗಿನ ಯುನೆಸ್ಕೊ ಮುಖ್ಯಸ್ಥ ಕೊಯಿಚಿರೋ ಮತ್ಸುರ ನೇತೃತ್ವದಲ್ಲಿ ಮುಸ್ಲಿಮ್ ದೇಶಗಳಾದ ಈಜಿಪ್ಟ್, ಪಾಕಿಸ್ತಾನ, ಅರಬ್ ದೇಶಗಳು ಕೂಡ ಅಫಘಾನಿಸ್ತಾನದ ಸಾಂಸ್ಕೃತಿಕ ಪರಂಪರೆಯನ್ನು ಕೆಡವದಿರಲು ತಾಲಿಬಾನ್‌ನ್ನು ಬೇಡಿಕೊಂಡವು. ಆದರೆ ತಾಲಿಬಾನ್ ಕ್ಯಾರೆ ಅನ್ನಲಿಲ್ಲ. ಬರೀ ’ಬೇಡಿಕೊಳ್ಳುವುದರ’ ಹೊರತಾಗಿ ಯುನೆಸ್ಕೋಗೆ ಇವತ್ತಿನವರೆಗೂ ಯುದ್ಧ-ಪೀಡಿತ ಸಿರಿಯಾ, ಇರಾಕ್, ಅಫಘಾನಿಸ್ತಾನಗಳಲ್ಲಿ ನಾಶವಾದ ಪಾರಂಪರಿಕ ತಾಣಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. 
ಮನವಿಗಳು, ಖಂಡನೆಗಳು, ಆರ್ಥಿಕ ನಿರ್ಬಂಧಗಳು, ರಾಜತಾಂತ್ರಿಕತೆ ಮತ್ತು ಮುಗಿಯದ ಚರ್ಚೆಗಳು ಇವುಗಳಲ್ಲೇ ವಿಶ್ವಸಂಸ್ಥೆಯ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ. ಇನ್ನು ರಿಪೋರ್ಟುಗಳದ್ದು ಮತ್ತೊಂದು ಕಥೆ. ಕೋಟ್ಯಂತರ ಡಾಲರುಗಳು ವ್ಯಯವಾಗುತ್ತಿರೋದೇ ವಿಶ್ವಸಂಸ್ಥೆಯ ಬೇರೆ ಬೇರೆ ಅಂಗಗಳಿಂದ ಬರುವ, ಯಾರೂ ಓದದ, ಕಾರ್ಯರೂಪಕ್ಕೆ ಬರದ ವರದಿಗಳಿಂದ.
ಕಾಶ್ಮೀರದಲ್ಲಿ ಭಾರತದ ಮಿಲಿಟರಿ ಕಾರ್ಯಾಚರಣೆ ಖಂಡಿಸಿ ಮಾನವ ಹಕ್ಕುಗಳ ಆಯೋಗ ೨೦೧೮ರಲ್ಲಿ ಒಂದು ರಿಪೋರ್ಟನ್ನು ತಯಾರಿಸಿತು. ಆಯೋಗ ಜಮ್ಮು-ಕಾಶ್ಮೀರಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿ ಕಣ್ಣಾರೆ ನೋಡಲಿಲ್ಲ. ಎಲ್ಲಿಯೋ ಕುಳಿತು, ಯಾವುದೋ ಎನ್‌ಜಿಓ ಹೇಳಿದ್ದನ್ನೆಲ್ಲ ಬರೆದ ಅದರಲ್ಲಿ ಇರುವುದೆಲ್ಲ ಸೈನ್ಯದ ಮತ್ತು ಸರ್ಕಾರದ ಮೇಲೆ ಸುಳ್ಳು ಆರೋಪಗಳೇ. ಅದರ ಬಗ್ಗೆ ಸರಿಯಾದ ವಿಶ್ಲೇಷಣೆ ಬಂದದ್ದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಸಯ್ಯದ್ ಅಕ್ಬರುದ್ಧಿನ್‌ರವರಿಂದ, "ವಿಶ್ವಸಂಸ್ಥೆ, ಯಾರೂ ಕೇಳದ, ಯಾರೂ ಸ್ವಾಗತಿಸದ, ಯಾರೂ ಸಪೋರ್ಟ್ ಮಾಡದ ಮತ್ತು ಯಾರೂ ಕಾರ್ಯರೂಪಕ್ಕೆ ತರದ ರಿಪೋರ್ಟ್ ತಯಾರಿಸಿದೆ" ಎಂದು. ಅಂಥದ್ದೆ ಮತ್ತೊಂದು ರಿಪೋರ್ಟು ಭಾರತದ ನಿರುದ್ಯೋಗದ ಬಗ್ಗೆ ೨೦೧೮ರಲ್ಲಿ ಬಂತು. ಅದರ ಪ್ರಕಾರ ದಕ್ಷಿಣ ಏಷ್ಯಾದಲ್ಲಿನ ತೀವ್ರ ಆಹಾರ ಅಭದ್ರತೆಗೆ ಕಾರಣ ೪೫ ವರ್ಷಗಳಲ್ಲೇ ಭಾರತದ ನಿರುದ್ಯೋಗ ಸಮಸ್ಯೆ ಅತಿ ಹೆಚ್ಚು ಆ ವರ್ಷ ಕಂಡುಬಂದದ್ದು. ಆದರೆ ಒಂದು ವರ್ಷದ ನಂತರ ಅಂದರೆ ೨೦೧೯ರಲ್ಲಿ, ಇದೇ ವಿಶ್ವಸಂಸ್ಥೆಯಡಿ ಗ್ಲೋಬಲ್ ಮಲ್ಟಿಡೈಮೆನ್ಶನಲ್ ಪವರ್ಟಿ ಇಂಡೆಕ್ಸ್ ನಡೆಸಿದ ಸರ್ವೇ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಭಾರತದ ೨೭.೧ ಕೋಟಿ ಬಡವರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಅಂದರೆ ಬಡತನದ ಪ್ರಮಾಣ ಹತ್ತು ವರ್ಷಗಳಲ್ಲಿ ೫೫%ರಿಂದ ೨೮%ಕ್ಕೆ ಇಳಿದಿದೆ. ಅವರದ್ದೇ ರಿಪೋರ್ಟುಗಳು, ಅದರಲ್ಲೇ ವಿರೋಧಾಭಾಸಗಳು.
ಇನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಲ್ಲಂಘನೆಯ ಕಥೆಗಳು ಬೇಕಾದಷ್ಟು. ರವಾಂಡಾದಲ್ಲಿ ೧೯೯೪ರಲ್ಲಿ ೧೦೦ ದಿನಗಳ ಕಾಲ ನಡೆದ ಟುಟ್ಸಿ ಜನಾಂಗದ ೮ ಲಕ್ಷ ಅಮಾಯಕರ ಮಾರಣಹೋಮ ತನ್ನ ಬೇಜವಾಬ್ದಾರಿತನದಿಂದ ಆದದ್ದು ಎಂದು ಭದ್ರತಾ ಮಂಡಳಿ ಒಪ್ಪಿಕೊಂಡಿದೆ. ಅಲ್ಲಿನ ಹುಟು ಜನಾಂಗದ ಸರ್ಕಾರ ಇಂಥದ್ದೊಂದು ನರಮೇಧ ಮಾಡುವ ಸೂಚನೆಯನ್ನು ವಿಶ್ವಸಂಸ್ಥೆಯ ಆ ದೇಶದ ಕಮಾಂಡರ್ ಮೊದಲೇ ಕೊಟ್ಟರು. ಅಂಥ ಸ್ಥಿತಿಯಲ್ಲೂ ಸುಮಾರು ೨,೫೦೦ ಶಾಂತಿದೂತರನ್ನು ವಿಶ್ವಸಂಸ್ಥೆ ಹಿಂಪಡೆಯಿತು. ಅದರ ಪರಿಣಾಮ ಈ ಮಾರಣಹೋಮ. ಹೈಟಿಯಲ್ಲಿ ಭೂಕಂಪಕ್ಕೆ ತುತ್ತಾದ ಜನರಿಗೆ ನೆರವಾಗಲು ಹೋದ ವಿಶ್ವಸಂಸ್ಥೆಯ ನೇಪಾಳದ ಶಾಂತಿಪಾಲಕರಿಂದ ಅಲ್ಲಿ ಭೀಕರವಾದ ಕಾಲರಾ ಹರಡಿತು. ಸರಿಯಾದ ಚರಂಡಿ ವ್ಯವಸ್ಥೆ ಮಾಡದೆ ಶಾಂತಿಪಾಲಕರ ಮಲಮೂತ್ರಗಳು ಅಲ್ಲಿನ ಅತಿ ದೊಡ್ಡ ನದಿ ಸೇರಿ ೭ ಲಕ್ಷ ಜನಕ್ಕೆ ರೋಗ ತಗುಲಿದರೆ, ಎಂಟು ಸಾವಿರ ಜನ ಸಾವನ್ನಪ್ಪಿದರು. ಆದರೆ ವಿಶ್ವಸಂಸ್ಥೆ ಈ ದುರಂತಕ್ಕೆ ತಾನೇ ಕಾರಣ ಎಂದು ಒಪ್ಪಿಕೊಳ್ಳುವ ಸೌಜನ್ಯವೂ ತೋರದೆ, ಕೇಸು ಹಾಕಲು ಬಂದರೆ ತನ್ನನ್ನು ಯಾವ ಕೋರ್ಟುಗಳೂ ಮುಟ್ಟಲಾರವು ಎಂದು ಘೋಷಿಸಿತು.
ಶ್ರೀಲಂಕಾದಲ್ಲಿ ಒಂದು ಲಕ್ಷ ಜನರ ಸಾವಿಗೆ ಕಾರಣವಾದ ೨೬ ವರ್ಷಗಳ ರಕ್ತಸಿಕ್ತ ಆಂತರಿಕ ದಂಗೆಯನ್ನು ತಡೆಯಲು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳು ಆಸಕ್ತಿ ವಹಿಸಲೇ ಇಲ್ಲ ಎನ್ನುತ್ತದೆ ಅವರದೇ ವರದಿ. ಅದರ ಪರಿಣಾಮ ಎಲ್ಲರ ಮುಂದೇ ಇದೆ. ಎಲ್ಲಿಯ ಮಾನವ ಹಕ್ಕುಗಳು? ಅದಕ್ಯಾಕೆ ಒಂದು ಆಯೋಗ? ಸೌದಿ ಅರೇಬಿಯಾ, ಕ್ಯೂಬಾ, ಈಜಿಪ್ಟ್, ಚೀನಾ, ಸೊಮಾಲಿಯಾ, ಸುಡಾನ್, ವೆನೆಜ಼ುವೆಲಾ ಈ ಆಯೋಗದ ಸದಸ್ಯರಾಗಿಯೂ ತಮ್ಮ ದೇಶಗಳಲ್ಲಿ ಹಿಂಸೆಗೆ ಹೆಸರಾದವರು. ಆಫ್ರಿಕಾ, ಬಾಂಗ್ಲಾದೇಶ ಮತ್ತು ಮಯನ್ಮಾರ್ ನಾಗರಿಕರು, ಮಧ್ಯಪ್ರಾಚ್ಯದ ಮಹಿಳೆಯರು, ಚೀನಾದಲ್ಲಿ ಮರುಶಿಕ್ಷಣ ಶಿಬಿರಗಳಿಗೆ ತಳ್ಳಲ್ಪಟ್ಟಿರುವ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು, ಯುದ್ಧಗಳಲ್ಲಿ ಬಂದೂಕು ಹಿಡಿಯುವ ಮತ್ತು ಸೂಸೈಡ್ ಬಾಂಬರ್‌ಗಳಾಗುವ ಮಕ್ಕಳು, ಇವರೆಲ್ಲರ ಜೀವ ಉಳಿಸಲು, ಜೀವನ ಮರಳಿ ಕೊಡಲು ವಿಶ್ವಸಂಸ್ಥೆಗೆ ಸಾಧ್ಯವಾಗಿದೆಯೇ? ಕಾಶ್ಮೀರಿ ಹಿಂದೂಗಳ ನಿರಾಶ್ರಿತ ಪರಿಸ್ಥಿತಿಯ ಬಗ್ಗೆ, ಅವರು ಅನುಭವಿಸಿದ ಸಾವು-ನೋವುಗಳ ಬಗ್ಗೆ ಆಗೀಗ ಮರೆತುಹೋದ ಯಾವುದೋ ವಿಷಯವನ್ನು ಮೆಲುಕು ಹಾಕುವಂತೆ ’ಅತಿ ಪ್ರಬಲವಾದ ಶಬ್ದಗಳಿಂದ ಖಂಡಿಸುವುದನ್ನು’ ವಿಶ್ವಸಂಸ್ಥೆ ಮರೆಯುವುದಿಲ್ಲ.
ಪ್ರಪಂಚವೆಲ್ಲ ಮುಂದೆ ಹೋದರೂ ವಿಶ್ವಸಂಸ್ಥೆ ಇನ್ನೂ ೩೦ ವರ್ಷಗಳ ಹಿಂದಿನ ಕಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ ಎನ್ನುತ್ತಾರೆ ಅಲ್ಲಿನ ಅಮೇರಿಕಾ ರಾಯಭಾರಿಯಾಗಿದ್ದ ಜಾನ್ ಬೋಲ್ಟನ್. ಅಲ್ಲಿನ ರಾಜತಾಂತ್ರಿಕರು ತುಕ್ಕು ಹಿಡಿದ ನಿಯಮಗಳನ್ನೇ ಪಠಿಸುತ್ತ, ಮೀಟಿಂಗ್‌ಗಳ ಮೇಲೆ ಮೀಟಿಂಗ್‌ಗಳನ್ನು ಮಾಡುತ್ತ ಹೊರಗೇನಾಗುತ್ತಿದೆ ಎಂದು ನೋಡುವುದಕ್ಕೂ ಸಂಯಮ, ಸಮಯ ಇಲ್ಲದೆ ಕೂತ ಹಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕಾಯಂ ಸದಸ್ಯತ್ವವನ್ನು ಭಾರತಕ್ಕೆ ಕೊಡಿಸಲು ರಷ್ಯಾ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಚೀನೀಯರಿಗೆ ಯಾವಾಗಲೂ ’ಚೀನಾ ಮೊದಲು.’ ಹಾಗೇ ಕಾಯಂ ಸದಸ್ಯತ್ವವನ್ನು ಚೀನಾಗೆ ದಾನ ಮಾಡಿದ ನೆಹರೂಗೆ ಕೂಡ ಆಗ ’ಚೀನಾ ಮೊದಲು.’ ಅದೇ ಚೀನಾ, ಇಲ್ಲಿವರೆಗೂ ಭಾರತದ ಕಾಯಂ ಸದಸ್ಯತ್ವಕ್ಕೆ ಅಡ್ಡಿ ಮಾಡುತ್ತಲೇ ಬಂದಿದೆ. ಆದರೆ ಈಗ ಭಾರತಕ್ಕೇ ಅದರಲ್ಲಿ ಆಸಕ್ತಿ ಇಲ್ಲ. ಸುಷ್ಮಾ ಸ್ವರಾಜ್ ಹೇಳಿದಂತೆ ಭದ್ರತಾ ಮಂಡಳಿಯ ಪ್ರಾಮುಖ್ಯತೆ, ಪ್ರಭಾವ, ಗೌರವ ಮತ್ತು ಮೌಲ್ಯ ಕಡಿಮೆಯಾಗುತ್ತಾ ಬರುತ್ತಿದೆ.
ಇಲ್ಲಿಯವರೆಗೆ ಯಾವ ಯುದ್ಧವನ್ನೂ ವಿಶ್ವಸಂಸ್ಥೆ ತಡೆದಿಲ್ಲ, ಯಾವ ಸರ್ವಾಧಿಕಾರಿಯನ್ನೂ ಮಣಿಸಲು ಆಗಿಲ್ಲ, ಮಾನವ ಹಕ್ಕುಗಳನ್ನು ಕಾಪಾಡಲೂ ಆಗಿಲ್ಲ. ಇನ್ನೂ ಹೀಗೇ ಮುಂದುವರಿದರೆ, ಮೊದಲ ಮಹಾಯುದ್ಧದ ನಂತರ ಶಾಂತಿ ಕಾಪಾಡಲು ಹುಟ್ಟಿ ಕೊನೆಗೆ ಸೋತು, ಎರಡನೇ ಮಾಹಾಯುದ್ಧದ ಆರಂಭದಲ್ಲಿ ಅಂತ್ಯ ಕಂಡ ಲೀಗ್ ಆಫ್ ನೇಷನ್ಸ್ ಕಥೆ ವಿಶ್ವಸಂಸ್ಥೆಗೂ ಬರಬಹುದು. ಅಷ್ಟು ದೊಡ್ಡ ಸಂಸ್ಥೆಯ ಅಧಿಕಾರಿಗಳ ಅದಕ್ಷತೆಯ ಮುಂದೆ ಸಣ್ಣ ಸಣ್ಣ ಎನ್‌ಜಿಓಗಳೇ ಪರವಾಗಿಲ್ಲ. ತಮ್ಮ ಸೀಮಿತ ವ್ಯಾಪ್ತಿಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿವೆ. ಆದರೆ ವಿಶ್ವಸಂಸ್ಥೆ ಮಾತ್ರ ವಾಸ್ತವತೆಯಿಂದ ದೂರ ಉಳಿದು ಅದೇ ’ಖಂಡಿಸುವ’ ಖಾಲಿ ಪದಗಳ ಪದರದಡಿಯಲ್ಲಿ ಬರೀ ಪಳೆಯುಳಿಕೆಯಾಗಿ ಉಳಿಯುವ ಲಕ್ಷಣಗಳೇ ಕಾಣಿಸುತ್ತಿದೆ. ಅದರ ಅಗತ್ಯ ಈಗಿನ ಜಗತ್ತಿಗೆ ಇದೆಯೇ? ಇಲ್ಲವೆಂದೇ ಅನಿಸುತ್ತಿದೆ.

(Published in Udayavani, 21st Jan. 2020)

Wednesday, August 1, 2018

Voting Rights For Women: A Long Fight For A Better Life

The artist of a 100-year-old postcard printed in Britain took a wild guess at the probable scenario in the Parliament if women were to enter it as representatives of the people. While one woman on the postcard is seen talking about “Man and how to treat it”, another appears busy staring into the mirror; yet another is seen reading a book while a mother holds her baby close.
Photo: BBC
Another postcard declares: “Convicts, Lunatics and Women have no vote for Parliament”.
Photo: Independent
In those times, women were seen as having an inferior intellectual and emotional capability to men and therefore unable to make sound political judgment. So, they were found to be unfit to vote or stand for election.
However, with the First World War raging on and the men of the country engaged in battle, it was the women of the United Kingdom (UK) who supported the country from within by engaging in industrial activities. They worked hard for hours every day in factories and at home, were abused because of their inferior social standing, and laughed at because of their gender when they tried to put their intellect to use.
Women were also paid a lot lesser than men despite the back-breaking work. It was then that they started a long battle demanding the right to vote, hoping that at least with political representation their lives would improve.
The women formed unions, staged peaceful protests, and urged the Parliament for a right to vote. When they were ignored and mocked, some of them formed a new group and started a violent campaign. This section left explosives on trains and in post offices, cut telegram and phone wires, and burnt the homes of members of Parliament.
The government of the time, which arrested thousands of suffragettes – as they were called, also had to face the displeasure of the public when the convicts went on a hunger strike inside the jail and refused to eat. They grew weak and the government, fearing backlash, force-fed them cruelly with the use of mechanical devices like the rubber tube, pushed through the nose till the stomach, and with metal pegs to keep the mouth open.
When this move, too, failed to contain the suffrage movement and created a public outcry against the violence, the UK government passed the Prisoners (Temporary Discharge for Ill Health) Act in 1913, which was commonly called the Cat and Mouse Act. The suffragettes were released when they grew too weak from hunger, as they would no longer be a danger to the government, until they started to eat after they were released and regained health gradually. Then they were arrested again and kept in jail till they grew weak again from hunger. The alternative name to the Act came from the cat’s habit of playing with a mouse before finishing it off.
In 1918, a 100 years ago, after a long and hard struggle, women in the UK got the right to vote under the Representation of the People Act. But not all women. Voting rights were restricted to women who were over 30 years of age, owned a property, were a graduate in a university, or were the wife of a householder. One suffragette, Lilian Lenton, said, "I didn't vote for a very long time because I hadn't either a husband or furniture." Women contesting elections was unheard of and strongly opposed by even some women who believed their place was at home and not in the Parliament.
In December 1918, women in the UK voted for the first time; women also contested for the first time that year, and among the 17 contestants, only one woman won – Constance Markievicz became the first woman to be elected to the Britain House of Commons. However, Lady Nancy Astor became the first woman to enter the Parliament. Winston Churchill, who was appalled at the entry of a woman into the Parliament, reportedly said: "I find a woman's intrusion into the House of Commons as embarrassing as if she burst into my bathroom when I had nothing with which to defend myself, not even a sponge."
It was heartening to learn that women from India, too, joined their counterparts in the suffrage or right-to-vote movement in the UK. Princess Sophia Duleep Singh, daughter of Maharaja Duleep Singh, the last king of Punjab deposed by the British, lived in the UK all her life under royal patronage. Though a favourite god-daughter of Queen Victoria’s, she rebelled against the government and was at the forefront of the women's suffrage movement. As a member of Women's Tax Resistance League, she refused to pay her taxes. She also organised a flag day for Indian troops and worked for the Indian soldiers wounded in the Great War. She was in constant contact with Indian freedom fighters like Gopal Krishna Gokhale, Lala Lajpat Rai, and others. She became a revolutionary for the cause of suffrage, apart from fighting with the police and throwing herself on the Prime Minister's car during the brutal Black Friday march of 1910, in which hundreds of women got injured. She publicly supported the bomb makers and arsonists among the suffragettes.
Princess Sophia Duleep Singh selling subscriptions for the Suffragette newspaper outside Hampton Court in London, April 1913.
Though our colonial rulers, who prided themselves on being a highly civilised society, took until 1918 to give their women the right to franchise, it was to the credit of Indian women that they fought for and won that right even before the country’s independence. While the British argued that universal franchise was a "bad fit for India", women like Sarojini Naidu, Lolita Roy, Herabai Tata, and Mithibai Tata travelled to London to convince the British Parliament for their right to vote. Roy went to London and campaigned for the cause even as early as 1901.
According to Dr Sumita Mukherjee of the University of Bristol, women from India received huge support from women's societies, councils, and other organisations in Britain and Ireland, who then sent letters to the India Office in London. Though Naidu's visit to London was unsuccessful, the British agreed to give freedom to separate Indian provincial councils to decide on voting rights for women. An Independent member of Parliament of Britain, Eleanor Rathbone, set up a separate committee to decide on women's franchise in India.
Mahatma Gandhi, who visited London in 1906 and 1909, was highly impressed with the peaceful protests and hunger strikes held by women for suffrage and praised them in his weekly journal, Indian Opinion. He believed Asia's men could learn some lessons from the women of England and come forward willingly to fight for the cause.
Mahatma Gandhi (1869-1948) at Boulogne station with Sarojini Naidu, on the way to England to attend the Round Table Conference. (Douglas Miller/Getty Images)
In India, the women’s cause was taken up by Edwin Samuel Montague, a British MP who was made the secretary of state for India in 1917. The 38-year-old was liberal in his views and even proposed self-government to India, which was discarded in favour of Lord Curzon's proposal to keep India as an integral part of the British Empire.
Naidu founded Women's India Association along with Annie Besant and met Montague to push for voting rights for women. It was partly due to Montague's efforts that India got universal franchise, though with a few riders. The British government said a woman's name should be removed from the electoral roll if she is divorced, a widow, or if her husband had lost property. In 1921, the then Bombay and Madras councils gave limited votes to women.
Kamaladevi Chattopadhyay became the first woman in India to run for a legislative seat in 1926. In the same year, Muthulakshmi Reddy of Tamil Nadu became the first woman to enter the legislature as a legislative council member.
Now, universal franchise may seem like a non-issue across the world, with almost all countries recognising the need to acknowledge that intellect is not reliant on gender. Saudi Arabia was the last country in the world to grant voting rights to women, in 2015, apart from Vatican City, which only consists of men.
We have celebrated yet another platitudinous International Women's Day this year. At the ground level, the difference between the condition of women a 100 years ago and today is not much. It's time for both drawing room feminists and women in decision-making political offices to make the hard-earned women's vote worthwhile by giving their silent struggles at home and outside a voice. For those women who have fought hard for the franchise, voting was not just a right but the only path towards realising their dream of a better life, a hope for the future, and the freedom to choose.

This article appeared in Swarajya magazine on March 16, 2018.

Thursday, June 28, 2018

Mao's China or Modi's India?

The world may have forgotten the June of 1989, when thousands of unarmed students and activists were butchered by the Chinese state in what came to be known as the Tiananmen Square massacre. Sir Alan Donald, the then British ambassador to China, wrote in a secret diplomatic cable to the UK Foreign Office that at least 10,000 people were killed; wounded students bayoneted as they begged for their lives and a mother shot as she tried to help her three-year-old daughter were just two horrific instances recorded by him.
The students were merely asking for 'democracy'; a word which is amorphous and selective in today's world as is 'human rights'. They sought freedom from corruption and nepotism in Communist Party of China, seeking freedom of speech and press.
When party leader Zhao Ziyang sought a peaceful dialogue with the students, he was arrested. Thousands of activists were reportedly kept under house arrest, some allegedly tortured in custody and many went missing.
Unfortunately, the government of India, under its Prime Minister Rajiv Gandhi, suddenly remembered its 'Hindi-Chini Bhai Bhai' slogan and ordered government-controlled TV channels to give minimum coverage to the massacre. He indicated to China that "it will not revel in China's domestic troubles and offer some political empathy instead". While in Russia, Mikhail Gorbachev went one step further and switched off the microphone when human rights activist Andrei Sakharov rose on the podium to demand the recall of Soviet Ambassador to China as a protest.
The ripples of the movement were so powerful that they can still be felt by those who advocate for freedom from fear and state oppression in China. Young lawyer Xu Zhiyong was jailed in 2013 for four years for starting a movement to take the Chinese constitutional rights – rights to vote, speak, criticise the government, enjoy the dignity of the person – seriously. Swedish human rights activist Peter Dahlin was detained for 23 days in an unknown location for working in support of the families of human rights lawyers, journalists and other activists, who were under attack and went missing. However, it was the arrest of Liu Xiaobo, literary critic and human rights activist, which caught the world's attention. The Nobel Peace Prize laureate, who prevented further massacre at Tiananmen Square through his peaceful negotiations, died of cancer as a state prisoner with no permission to travel abroad for treatment.
Each year, hundreds of activists go missing in China for speaking against the government. A few of them who are eventually released and deported narrate frightening stories of alleged torture through beating, deprivation of food, water and sleep, forced confessions on state-controlled media. Nearly 2,761 such cases have been reported from 2012 to 2015. Hundreds of missing cases go unreported in the media as even the families of the activists are under house arrest and barred from speaking out.
Michael Caster, who worked with Peter Dahlin, has written a book titled People's Republic of the Disappeared based on the 'black jails' or 'Residential Surveillance at a Designated Location' which simply is an ambiguous term for undisclosed places where people who dare speak against the party or the government are kept following state-sponsored abduction. It has been legalised now.
Being paranoid about its own citizens, China has managed to strangle even the religious practices of its Muslim and Christian citizens. Uighur Muslims and Roman Catholics are under constant surveillance. Around 10 million Muslims in the country are not allowed any of their customs including long beards, hijab, keeping Islamic names or even fasting during Ramzan.
Uighur Muslims are being sent to unacknowledged 're-education camps' to unlearn Islam and discard religious practices. They are made to learn Communist Party of China principles, sing party songs and thank President Xi Jinping every morning at breakfast. Around 120,000 Muslims are said to be living in the camps, as also Christians.
Only churches set up by the government are allowed in China and they have no relation with the Vatican. Church leaders, who are recognised by the Vatican and not by the government, are detained as was the case of Bishop Peter Shao Zhumin, who went missing last year. He reappeared after seven months of detention. In January this year, the government blew up Golden Lampstead Church in Shanxi province amid protests from its 50,000-strong congregation.
TV stations have been banned from airing programmes with 'excessive entertainment and vulgar tendencies' with two hours a day reserved for party news. Social media is closely monitored for anti-party activities.
In a democratic country like ours, the Golden Quadrilateral project of 5,846 kms linking Mumbai, Chennai, Kolkata and Delhi took 11 years to complete beginning from 2001 to 2012. But China completed 34,000 kms expressway in six years beginning from 1998. When land acquisition for road building starts in India, so does a slew of protests and court cases dragging the project for years. But China often takes the easy and not-so-democratic way out. In October 2011, the residents of a new enclave were given an ultimatum of three weeks to accept the government compensation and move out so their houses could be bulldozed to make way for roads.
And the world turns not only a blind eye but also deaf ears to the plight of the 1.4 billion citizens of one of the super powers which has effectively turned the country into a virtual prison through facial recognition, access to each person's smartphone, robot police and worst internet freedom in the world. Not to mention bull-dozing its way into neighbouring Tibet and India.
The United Nations which often hides behind silence when it comes to China's human rights violations, has suddenly found its voice to warn India about the army's "unlawful killings" in Jammu and Kashmir. Our human rights activists and liberals who have been hollering about the 'environment of fear' that has supposedly engulfed India under Prime Minister Narendra Modi, must remember that they have all the freedom to write, shout on television channels, hold candles and take out marches, express their anger on the social media and bad-mouth India on western platforms; in Mao’s China which they look up to, they would just go missing for actions lesser than these while in India, which is a true albeit a flawed democracy, they will always have their freedom of speech and expression.
The Arundhati Roys of India must remember that while they "love India not as a nation but so much of the music, poetry, river valleys," they must also remember that if India does not remain as a nation with its state machinery, policies, military, there will be no more music, no more poetry and no more river valleys for them to save. No country can turn into their impossible utopia.
Though in the last four years we have seen a hitherto unprecedented attack on the actions and words of the country’s Prime Minister by the liberals, it is to Modi’s credit that he has continued on the path of development as an answer to all the attacks; be it connecting North-East to the rest of the country or improving the lives of tribals as an answer to extremism. It must only be because of the compassion he has for his fellow countrymen. Human rights and true freedom are not separable from India’s idea of non-violent justice.
Whenever I read about how China is slowly turning into a police state, I am reminded of Ayn Rand's novella 'Anthem'. A dystopian world divided in 'Cities', governed by councils, babies separated from mothers and raised by the state, their education, profession decided by a group of people. A collectivistic society where individuals live as mere ghosts of men and women, who have no idea of the existence of their freedom to think, to choose and to love. It is my hope that one day my country too will not turn into that dystopian society where freedom exists only for select individuals.
After all, as Albert Camus wrote in Resistance, Rebellion and Death, "If justice has a meaning in this world,… it cannot, by its very essence, divorce itself from compassion". It’s now time for liberals to choose between Mao’s China or Modi’s India.

https://swarajyamag.com/politics/if-modi-indeed-was-dictator-india-would-like-communist-china

Wednesday, September 6, 2017

ಮಾನವ ಹಕ್ಕು ?

ನಮ್ಮ ಆಂಗ್ಲ ಪತ್ರಿಕೆಯೊಂದು ಮೊನ್ನೆ ಮೊನ್ನೆ ಕಾಶ್ಮೀರದಲ್ಲಿ ಸೈನ್ಯದ ಜೀಪಿಗೆ ನಾಗರಿಕನೊಬ್ಬನನ್ನು ಕಟ್ಟಿಕೊಂಡು ಹೋದ ಘಟನೆಯನ್ನು ಹೇಗೆ ಹೇಗೋ ತಿರುಚಿ ಮುರುಚಿ ಜಲಿಯನ್‍ವಾಲಾ ಬಾಗ್‍ ಹತ್ಯಾಕಾಂಡಕ್ಕೆ ಹೋಲಿಸಿತು. ಆ ಭಾರತೀಯ ಸೇನಾಧಿಕಾರಿಯನ್ನು ಜನರಲ್ ಡೈಯರ್‌ಗೆ ಹೋಲಿಸಿ ಸಮಾಧಾನಪಟ್ಟುಕೊಂಡಿತು.
ಕಾಶ್ಮೀರದಲ್ಲಿ ನಡೆದದ್ದು ಹಿಂಸೆಯನ್ನು ತಡೆಯುವ ಪ್ರಯತ್ನ; ಬ್ರಿಟಿಷರದ್ದು ಕುತಂತ್ರದ ಕಗ್ಗೊಲೆ. ನಿಜವಾಗಿಯೂ ಜಲಿಯನ್‍ವಾಲಾ ಬಾಗ್‍ನ್ನು ಹೋಲಿಸಬೇಕಾದ್ದು ಇಂದಿರಾ ತಂದ ತುರ್ತುಪರಿಸ್ಥಿತಿಗೆ. ಇರಲಿ. ಸುಮಾರು 98 ವರ್ಷಗಳ ಹಿಂದೆ ನಡೆದ ಜಲಿಯನ್‍ವಾಲಾ ಬಾಗ್‍ ಹತ್ಯಾಕಾಂಡದ ಬಗ್ಗೆ ಓದಿದಾಗೆಲ್ಲ ನನಗೆ ನೆನಪಾಗೋದು 1989ರ ಚೀನಾದ ಟಿಯಾನನ್ಮೆನ್‍ ಸ್ಕ್ವೇರ್‌ ಮಾರಣಹೋಮ. ಸರಕಾರವೇ ತಾನು ರಕ್ಷಿಸಬೇಕಾದ ಜನಗಳ ಮೇಲೆ ಮಾಡಿದ ಹಿಂಸಾಚಾರ. ನಾವು ಭಾರತೀಯರೆಲ್ಲ ತುಂಬ ಹಗುರವಾಗಿ ತೆಗೆದುಕೊಂಡಿರುವ ಪ್ರಜಾಪ್ರಭುತ್ವ ಬೇಕೆಂದು ಆಶಿಸಿ ಶಾಂತಿಯಿಂದ ಪ್ರತಿಭಟಿಸಲು ಹೋದ ನೂರಾರು ವಿದ್ಯಾರ್ಥಿಗಳು, ಬುದ್ಧಿಜೀವಿಗಳು ಮಾತ್ರವಲ್ಲದೆ ಸಾಮಾನ್ಯ ಜನರೂ ಪ್ರಾಣ ಕಳೆದುಕೊಂಡ, ಇನ್ನೂ ಜೈಲಿನಲ್ಲೇ ಕೊಳೆಯುತ್ತಿರುವ, ನಾಪತ್ತೆಯಾಗಿರುವ ಘಟನೆ.
ಆ ಟಿಯಾನನ್ಮೆನ್ ಸ್ಕ್ವೇರ್‍ ಪ್ರತಿಭಟನೆಯಲ್ಲಿ ಕಮ್ಯುನಿಸ್ಟ್ ಸರ್ಕಾರ ಮತ್ತು ವಿದ್ಯಾರ್ಥಿಗಳ ಮಧ್ಯೆ ಸೇತುವೆಯಾಗಿದ್ದ, ನೂರಾರು ಪ್ರತಿಭಟನಾಕಾರರನ್ನು ಹಿಂಸೆಯಿಂದ ರಕ್ಷಿಸಿದ ಶಿಕ್ಷಕ ನೊಬೆಲ್ ಶಾಂತಿ ಪುರಸ್ಕೃತ ಲಿಯು ಕ್ಸಿಯಾಬೋನನ್ನು ಇಷ್ಟು ವರ್ಷ ಪದೇ ಪದೇ ಜೈಲಿಗಟ್ಟಿದ ಚೀನಾ ಸರ್ಕಾರ ಮೊನ್ನೆ ಕ್ಯಾನ್ಸರ್‌ ಚಿಕಿತ್ಸೆಗಾಗಿ ಪರೋಲ್ ಮೇಲೆ ಜೈಲಿನಿಂದ ಕಳಿಸಿತು. ಆದರೆ ಕೊನೆ ಹಂತದಲ್ಲಿರುವ ಅವನ ಕ್ಯಾನ್ಸರ‍್‍ಗೆ ಸರ್ಕಾರ ಹೇಳಿದ ಆಸ್ಪತ್ರೆಯಲ್ಲೇ ನಾಮಕಾವಾಸ್ತೆ ಚಿಕಿತ್ಸೆ ಕೊಡಲಾಗುತ್ತಿದೆ.
ಮಾನವ ಹಕ್ಕು ಅನ್ನೋ ಪದವನ್ನು ತಮ್ಮ ಶಬ್ದಕೋಶದಲ್ಲೇ ಇರಗೊಡದ ಚೀನಾ ಸರ್ಕಾರ ತನ್ನ ವಿರುದ್ಧ ಬರೆದ, ಮಾತನಾಡಿದ ಯಾರನ್ನೂ ಬಿಟ್ಟಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಪರವಾಗಿ ಮಾತನಾಡಿದ ಸಾವಿರಾರು ವಕೀಲರು, ಪತ್ರಕರ್ತರು, ಕಲಾವಿದರು, ಚಳುವಳಿಗಾರರು ಇವತ್ತಿಗೂ ಏನಾದರೆಂದು ಅವರ ಮನೆಯವರಿಗೂ ಗೊತ್ತಿಲ್ಲ. ಕೆಲವರು ಜೈಲಿನಲ್ಲಿ ಜೀವಂತ ಶವವಾಗಿ ವರ್ಷಗಟ್ಟಲೆ ಉಳಿದರೆ, ಹಲವರು ದೇಶ ಬಿಟ್ಟು ಹೋಗಿದ್ದಾರೆ. ಇನ್ನುಳಿದವರು ಮತ್ತೆಂದೂ ಬರದಂತೆ ಕಾಣೆಯಾಗಿದ್ದಾರೆ.
ವ್ಯಾಟಿಕನ್ ಕಳುಹಿಸುವ ಕ್ರಿಶ್ಚಿಯನ್‍ ಪಾದ್ರಿಗಳೂ ಕಾಣೆಯಾಗುತ್ತಾರೆ; ಯಾಕೆಂದರೆ ಚೀನಾ ವ್ಯಾಟಿಕನ್‍ ಚರ್ಚನ್ನು ತಿರಸ್ಕರಿಸಿ ತನ್ನದೇ ಚರ್ಚ್ ಸ್ಥಾಪನೆ ಮಾಡಿಕೊಂಡಿದೆ. ಇನ್ನು ಅಲ್ಲಿ ಇರುವ ಮುಸ್ಲಿಮರು ತಮ್ಮ ಧರ್ಮದ ಚಿಹ್ನೆ ದಾಡಿ ಇಟ್ಟುಕೊಳ್ಳುವಂತಿಲ್ಲ. ಹೆಂಗಸರು ಬುರ್ಖಾ ಹಾಕುವಂತಿಲ್ಲ. ಮುಸ್ಲಿಮ್ ಹೆಸರನ್ನು ಮಕ್ಕಳಿಗೆ ಇಡುವಂತಿಲ್ಲ. ರಂಜಾನ್‍ ಹಬ್ಬಕ್ಕೆ ಉಪವಾಸ ಮಾಡುವಂತಿಲ್ಲ.
’ಬರಿಗಾಲ ವಕೀಲ’ ಎಂದೇ ಚೀನಾದಲ್ಲಿ ಖ್ಯಾತನಾಗಿರುವ ಚೆನ್ ಗ್ವಾಂಗ್‍ಚೆಂಗ್‍ ಸರ್ಕಾರದ ವಿರುದ್ಧದ ಹೋರಾಟಕ್ಕಾಗಿ ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಬಾಲ್ಯದಿಂದಲೇ ಕುರುಡನಾದ ಚೆನ್‍ ಅಂಗವಿಕಲ ಹಕ್ಕುಗಳಿಗಾಗಿ, ಚೀನಾದ ’ಒಂದೇ ಮಗು’ ಶಾಸನದ ಮತ್ತು ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದ. ಅವನ ಜನಪ್ರಿಯತೆಗೆ ಹೆದರಿದ ಸರ್ಕಾರ ಅವನನ್ನು ಅಪಹರಿಸಿ, ಚಿತ್ರಹಿಂಸೆ ಕೊಟ್ಟು ಗೃಹಬಂಧನದಲ್ಲಿಟ್ಟಿತು. ಆದರೂ ತನ್ನ ಹೋರಾಟ ಬಿಡದ ಚೆನ್‍ ಏಳು ವರ್ಷದ ನಂತರ ಒಂದು ದಿನ ತನ್ನ ಮನೆಯಿಂದ ಕಾವಲುಗಾರರ ಕಣ್ಣುತಪ್ಪಿಸಿ ನೆಲದ ಮೇಲೆ ತೆವಳಿಕೊಂಡು ತನ್ನ ಊರು ದಾಟಿ, ಅಮೇರಿಕಾದ ಎಂಬೆಸಿ ಸೇರಿ ಅಲ್ಲಿಂದ ಅಮೇರಿಕಾಗೆ ತೆರಳಿದ. ಅಲ್ಲಿಂದ ತನ್ನ ಹೋರಾಟವನ್ನು ಮುಂದುವರೆಸಿದ. ಟೈಮ್‍ ಮ್ಯಾಗಜೀನ್‍ನ ’ತಮ್ಮ ಶಕ್ತಿ, ಬುದ್ಧಿವಂತಿಕೆ ಮತ್ತು ನೈತಿಕ ಉದಾಹರಣೆಗಳಿಂದ ಜಗತ್ತನ್ನು ಬದಲಾಯಿಸಿದ ನೂರು ಮಂದಿ’ಯಲ್ಲಿ ಚೆನ್ ಕೂಡ ಒಬ್ಬ.
ಇಂತಹ ಉದಾಹರಣೆಗಳು ಚೀನಾದಲ್ಲಿ ಸಾವಿರಾರು. ಹೊಡೆತ, ಉಪವಾಸ, ನಿದ್ರೆ-ನೀರು-ಔಷಧಿ ಕೊಡದೆ ಚಿತ್ರಹಿಂಸೆಗಳು, ಒತ್ತಾಯದ ತಪ್ಪೊಪ್ಪಿಗೆ ಇವೆಲ್ಲದರಿಂದ ನರಳಿ ಕೊನೆಗೂ ಬಿಡುಗಡೆಯಾದ ಸ್ವೀಡನ್‍ನ ಎನ್‍ಜಿಒ ಒಂದರ ಮಾನವ ಹಕ್ಕು ಕಾರ್ಯಕರ್ತ ಪೀಟರ‍್ ಡಾಹ್ಲಿನ್‍ನಂತಹ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು 2012-2015ರ ಅವಧಿಯಲ್ಲಿ ಚೀನಾ ಬಂಧಿಸಿದೆ.
ಅಲ್ಲಿನ ಟೀವಿ ಚಾನಲ್‍ಗಳು ’ಅತಿ ಮನೋರಂಜಿತ’ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ ಮತ್ತು ದಿನಾ ಎರಡು ಗಂಟೆ ಕಮ್ಯುನಿಸ್ಟ್ ಪಾರ್ಟಿಗೆ ಸಂಬಂಧಪಟ್ಟ ನ್ಯೂಸ್‍ ಹಾಕಲೇಬೇಕು. ಚಿತ್ರಮಂದಿರಗಳಲ್ಲಿ ಜುಲೈ ೧ರಿಂದ ಕಮ್ಯುನಿಸ್ಟ್ ಪಾರ್ಟಿಗೆ ಮತ್ತು ಸಮಾಜವಾದಕ್ಕೆ ಸಂಬಂಧಪಟ್ಟ ವೀಡಿಯೋಗಳನ್ನು ಕಡ್ಡಾಯವಾಗಿ ನೋಡಲೇಬೇಕು. ನಮ್ಮಲ್ಲಿ ಮೋದಿ ಸರ್ಕಾರ ತನ್ನ ಪಾರ್ಟಿ ಸಿದ್ಧಾಂತಗಳನ್ನು ಸಿನೆಮಾ ಹಾಲ್‍ಗಳಲ್ಲಿ ತೋರಿಸಲು ಪ್ರಾರಂಭಿಸಿದರೆ ಆಗುವ ಪ್ರತಿಭಟನೆಗಳನ್ನು ಊಹಿಸಿಕೊಳ್ಳಿ.
ಅಲ್ಲಿ ಫೇಸ್‍ಬುಕ್‍, ಟ್ವಿಟ್ಟರ‍್ ಇಲ್ಲ, ಸರ್ಕಾರಿ ಪ್ರಾಯೋಜಿತ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ಮಾತನಾಡುವಂತಿಲ್ಲ. ಕಡ್ಡಿಯನ್ನು ಗುಡ್ಡ ಮಾಡಿ, ನೋಡಿ ಈ ಗುಡ್ಡ ನಿಮ್ಮನ್ನೇ ಹೂತುಹಾಕುತ್ತದೆ ಎಂದು ಹೆದರಿಸುವ, ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಸಿಕ್ಕಾಪಟ್ಟೆ ಮಾತಾಡುವ ನಮ್ಮ ಕುಬುದ್ಧಿಜೀವಿಗಳು ಒಮ್ಮೆ ಚೀನಾಕ್ಕೆ ಹೋಗಿ ಇರಬೇಕು. ಅಲ್ಲಿನ ರಸ್ತೆ, ಸಬ್‍ವೇ, ವಿಮಾನ ನಿಲ್ದಾಣ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರವಲ್ಲ ನೀವು ಮೂತ್ರ ವಿಸರ್ಜನೆಗೆ ಹೋದರೆ ಅಲ್ಲೂ ನಿಮ್ಮನ್ನು ಸರ್ಕಾರ ಹದ್ದಿನ ಕಣ್ಣಿಂದ ನೋಡ್ತಾ ಇರುತ್ತದೆ. ಎಲ್ಲಿಯೂ ನಿಮ್ಮದೇ ಎನ್ನುವ ಏಕಾಂತ ಇಲ್ಲ.
ಮೋದಿ ಪ್ರಧಾನಿಯಾದ ಮೇಲೆ ನಮ್ಮ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಅಂತ ಬೊಬ್ಬೆ ಹೊಡೆಯೋ, ಎಸಿ ನ್ಯೂಸ್‍ ರೂಮ್‍ಗಳಿಂದ ಹೊರಗೇ ಹೋಗದಿರೋ armchair journalistಗಳು ಹುಡುಕಿ ತೆಗೆಯಬೇಕಾದದ್ದು, ಭಾರತದಲ್ಲಿ ಎಷ್ಟು ಜನ ಸರ್ಕಾರದ ವಿರುದ್ಧ ಮಾತಾಡಿದ್ದಕ್ಕಾಗಿ, ಪ್ರತಿಭಟಿಸಿದ್ದಕಾಗಿ ಜೈಲಿನಲ್ಲಿದ್ದಾರೆ? ಮಾಸ್ಕೋದ ರೆಡ್‍ ಸ್ಕ್ವೇರ್‍ ಮಧ್ಯೆ ನಿಂತು ಅಲ್ಲಿನ ಕ್ರಾಂತಿಯನ್ನು ನೆನೆಸಿಕೊಂಡು ರೋಮಾಂಚನಗೊಳ್ಳುವ ಅರುಂಧತಿ ರಾಯ್‍ ಆಗಲೀ, ’ಭಾರತ್‍ ಕೀ ಬರ್ಬಾದೀ’ ಎಂದು ಅರಚಿಕೊಳ್ಳುವ ’ವಿದ್ಯಾರ್ಥಿ’ಗಳಾಗಲೀ ಮತ್ತು ಅವರಿಗೆ ಬೆನ್ನಾಗಿ ನಿಂತು ಬೆಂಕಿಯಿಲ್ಲದ ಒಲೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವ ನಮ್ಮ ಪತ್ರಕರ್ತರಾಗಲೀ ನೆನಪಿಡಬೇಕಾದದ್ದು, ನಮ್ಮ ದೇಶದಲ್ಲಿ ಅಸಹಿಷ್ಣುತೆ ಇದ್ದಿದ್ದರೆ, ಬಿಜೆಪಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಪ್ರಯತ್ನಿಸುತ್ತಿದ್ದರೆ, ಅವರೆಲ್ಲ ಇಷ್ಟು ಹೊತ್ತಿಗೆ ಚೀನಾದ ಹೋರಾಟಗಾರರ ತರ ’ಶಾಶ್ವತವಾಗಿ ಕಾಣೆಯಾದವರ’ ಪಟ್ಟಿಯಲ್ಲಿ ಒಂದು ಫೋಟೋ ಆಗಿರುತ್ತಿದ್ದರು. ಅರುಂಧತಿ ರಾಯ್‍ ಮೋದಿಯನ್ನು ಪರೋಕ್ಷವಾಗಿ ಬೈದು ತನ್ನ ಹೊಸ ಪುಸ್ತಕ ಬರೆಯುತ್ತಿರಲಿಲ್ಲ. ಕನ್ಹಯ್ಯ ಕುಮಾರ್ ನಿರಾಳವಾಗಿ ಪಿಎಚ್‍ಡಿ ಮುಗಿಸಲು ಓದುತ್ತಿರಲಿಲ್ಲ.
ಇವರೆಲ್ಲ ಬೆಂಬಲಿಸುತ್ತಿರೋ ಸಿದ್ಧಾಂತದ ಹರಿಕಾರ ಮಾವೋ ಚೀನಾವನ್ನು ತನ್ನ ತತ್ವಗಳ ಚೌಕಟ್ಟಿನೊಳಗೆ ಬಂಧಿಸುವ ಪ್ರಯತ್ನದಲ್ಲಿ ಬಲಿಯಾದವರು ಬರೋಬ್ಬರಿ ಮೂರು ಕೋಟಿ ಅರವತ್ತು ಸಾವಿರ ಜನ. ಅದೇ ಚೀನಾದ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ನಮ್ಮ ಬುದ್ಧಿಜೀವಿಗಳ್ಯಾರೂ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮಾತಾಡುವುದಿಲ್ಲ. ಎಷ್ಟೇ ಆದರೂ ಅಮೇರಿಕಾದ ಸಿಐಎ ಹೊರಹಾಕಿದ ದಾಖಲೆಗಳ ಪ್ರಕಾರ 1962ರ ಭಾರತ-ಚೀನಾ ಯುದ್ಧದಲ್ಲಿ ಚೀನಾಕ್ಕೆ ಬೆಂಬಲ ಸೂಚಿಸಿದ, ದೇಶಕ್ಕಿಂತ ಸಿದ್ಧಾಂತವೇ ಮುಖ್ಯ ಎನ್ನುವ, ಆದರೆ ತಮ್ಮ ಸಿದ್ಧಾಂತದ ಎದುರು ಬಂದ ಜನಸಾಮಾನ್ಯರನ್ನು ಹೊಸಕಿ ಹಾಕಲು ’ಮಾನವ ಹಕ್ಕು’ ಅಡ್ದ ಬರದೆ ಇರುವ ಅತಿಬುದ್ಧಿಜೀವಿಗಳಲ್ಲವೇ ನಮ್ಮವರು? ಫ್ರೆಂಚ್‍ ತತ್ವಜ್ಞಾನಿ ವಾಲ್ಟೇರ‍್ ಹೇಳಿದಂತೆ, "ಮೂರ್ಖರನ್ನು ಅವರೇ ಪೂಜಿಸುವ ಸರಪಳಿಗಳಿಂದ ಬಿಡುಗಡೆಗೊಳಿಸುವುದು ಅಸಾಧ್ಯ."
ಈಗ ಚೀನಾ ಮತ್ತೆ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಟಿಬೆಟ್‍ ಅವರದಾಯಿತು, ಪಾಕ್‍ ಆಕ್ರಮಿತ ಕಾಶ್ಮೀರದಲ್ಲಿ ಬಂದು ಕೂತಾಯಿತು. ಈಗ ಭೂತಾನ್‍ ಮತ್ತು ಸಿಕ್ಕಿಂ ಮೇಲೆ ಕಣ್ಣು ಹಾಕಿದೆ. ನಮ್ಮೊಳಗೇ ಟೊಳ್ಳಿರುವಾಗ ಹೊರಗಿನವರು ಕೊಟ್ಟ ಪೆಟ್ಟು ಬೇಗ ತಾಗುತ್ತದೆ. ದೇಶಪ್ರೇಮವೂ ಅಪಹಾಸ್ಯಕ್ಕೊಳಗಾದ ಈ ಸಮಯದಲ್ಲಿ ನನಗೆ ಚೀನಾದ ಎದುರು 1962ರಲ್ಲಿ ಕಾಲಿಗೆ ಬೂಟುಗಳಿಲ್ಲದೆ, ಚಳಿಗೆ ಉಣ್ಣೆಯ ಬಟ್ಟೆಯಿಲ್ಲದೆ, ಯುದ್ಧ ಶುರುವಾದರೆ ಕಿಸೆಯಲ್ಲಿ ಕೇವಲ ಅರ್ಧ ಗಂಟೆ ಮಾತ್ರ ಹೋರಾಡುವಷ್ಟು ಬುಲೆಟ್‍ಗಳನ್ನಿಟ್ಟುಕೊಂಡು ಸೋತ ಆ ಭಾರತೀಯ ಸೈನಿಕ ಮತ್ತೆ ಮತ್ತೆ ನೆನಪಾಗುತ್ತಾನೆ.

Wednesday, June 7, 2017

ಶಾಂತಿಮಂತ್ರ ಬರೀ ನಮಗೇಕೆ?

ಅದು ಆಗಸ್ಟ್ 1914. ಒಂದು ಕೊಲೆಯ ಕಿಡಿ ಹೊತ್ತಿ ಉರಿದು ಇಡೀ ವಿಶ್ವವನ್ನೇ ಸುಡುವ ಮೊದಲನೇ ವಿಶ್ವಯುದ್ಧಕ್ಕೆ ನಾಂದಿ ಹಾಡಿದ ಸಮಯ. ಆಗ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹೊರಟಿದ್ದ ಗಾಂಧೀಜಿ ಸುದ್ದಿ ತಿಳಿದ ತಕ್ಷಣವೇ ಈ ಯುದ್ಧದಲ್ಲಿ ಬ್ರಿಟೀಷರ ಬೆಂಬಲಕ್ಕೆ ನಿಲ್ಲುವ ನಿರ್ಧಾರಕ್ಕೆ ಬರುತ್ತಾರೆ. ಇಂಗ್ಲೆಂಡ್ ತಲುಪಿದ ಕೂಡಲೆ ಗಾಯಗೊಂಡ ಸೈನಿಕರಿಗೆ ವೈದ್ಯಕೀಯ ನೆರವು ನೀಡಲು ಮುಂದಾಗುತ್ತಾರೆ.
ಅಲ್ಲಿಂದ ಆರೋಗ್ಯ ಕೆಟ್ಟು ಭಾರತಕ್ಕೆ ಮರಳಿದರೂ ಸುಮ್ಮನಿರದೆ ಗಾಂಧೀಜಿ, ಬ್ರಿಟೀಷರ ಕಷ್ಟಕಾಲದಲ್ಲಿ ಅವರಿಗೆ ಸಹಾಯ ಮಾಡಬೇಕೆಂದು ನೂರಾರು ಹಳ್ಳಿ, ಪಟ್ಟಣಗಳನ್ನು ತಿರುಗಿ ಭಾರತೀಯ ಸೇನೆಗೆ ಸೇರಲು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಹುರಿದುಂಬಿಸುತ್ತಾರೆ. "ನಿಮ್ಮ ಗಂಡ ಬ್ರಿಟಿಷ್‍ ಸಾಮ್ರಾಜ್ಯದ ಪರವಾಗಿ ಯುದ್ಧದಲ್ಲಿ ಬಲಿಯಾದರೆ ಅವರೇ ನಿಮಗೆ ಮುಂದಿನ ಜನ್ಮದಲ್ಲಿ ಪತಿಯಾಗಿ ಸಿಗುತ್ತಾರೆ" ಎಂದು ತನ್ನ ಭಾಷಣ ಕೇಳಲು ಬಂದ ಹೆಣ್ಣುಮಕ್ಕಳಲ್ಲಿ ಬೇಡಿಕೊಳ್ಳುತ್ತಾರೆ. ಇದರ ಪರಿಣಾಮ...
ಅಪರಿಚಿತ ನೆಲ, ಕಂಡರಿಯದ ಜನ, ಅರ್ಥವಾಗದ ಭಾಷೆ, ಮರಗಟ್ಟುವ ಚಳಿ, ತೊಡಲು ಹತ್ತಿಯ ತೆಳ್ಳಗಿನ ಬಟ್ಟೆ. ಅಲ್ಲಿಯವರೆಗೂ ಗನ್‍ ಹಿಡಿದು ಗೊತ್ತಿಲ್ಲದ, ಯುದ್ಧದ ಬಗ್ಗೆ ಅರಿವೇ ಇಲ್ಲದ ಅಮಾಯಕ ಭಾರತೀಯರು ಗಾಂಧೀಜಿಯ ಕರೆಗೆ ಓಗೊಟ್ಟು ವಿಶ್ವಯುದ್ಧದ ಮುಂಚೂಣಿಯಲ್ಲಿ ಗುಂಡಿಗೆ ಎದೆ ಕೊಟ್ಟು ನಿಲ್ಲುತ್ತಾರೆ.  ಫ್ರಾನ್ಸ್, ಬೆಲ್ಜಿಯಂ, ಆಫ್ರಿಕಾ, ಮೆಸೊಪೊಟೇಮಿಯಾ, ಈಜಿಪ್ಟ್ ದೇಶಗಳಲ್ಲಿ ಬ್ರಿಟಿಷ್‍ ಸೈನಿಕ ತಲುಪುವ ಮೊದಲೇ ಶತ್ರುಗಳನ್ನು ತಡೆದು ನಿಲ್ಲಿಸುತ್ತಾರೆ. ನಮ್ಮೆದುರು ನಿಲ್ಲಲು ಈ ಕಂದು ಬಣ್ಣದ ಸೈನಿಕರಲ್ಲೆಲ್ಲಿ ಧೈರ್ಯವಿದೆ ಎಂದು ಹಂಗಿಸಿ ಮಾತಾಡಿದ ಜರ್ಮನ್ ಸೈನಿಕರೂ ಕೊನೆಗೆ ಅವರ ಸಾಹಸಗಳ ಎದುರು ಸೋಲೊಪ್ಪಿಕೊಳ್ಳುತ್ತಾರೆ.
ಈ ಯುದ್ಧದಲ್ಲಿ ಹೋರಾಡಿದ ಬರೋಬ್ಬರಿ 15 ಲಕ್ಷ ಭಾರತೀಯ ಸೈನಿಕರಲ್ಲಿ ಸುಮಾರು 75,000 ಸೈನಿಕರು ಯುದ್ಧಕಂದಕಗಳಲ್ಲಿ, ಚಳಿ-ಮಲೇರಿಯಾಗಳಿಂದ, ಕೈ-ಕಾಲು ಮುರಿದುಕೊಂಡು ಸರಿಯಾದ ಚಿಕಿತ್ಸೆ ಇಲ್ಲದೆ, ಗಾಯಗಳು ಕೊಳೆತು ಪ್ರಾಣ ಬಿಡುತ್ತಾರೆ.
ಯುದ್ಧಕಂದಕಗಳಲ್ಲಿ ತನ್ನ ಜೊತೆಯವರನ್ನು ಕಣ್ಣೆದುರೇ ಕಳೆದುಕೊಂಡ ಸೈನಿಕನೊಬ್ಬ ಪತ್ರದಲ್ಲಿ, "ಶವಗಳು ಕತ್ತರಿಸಿ ಹಾಕಿದ ಜೋಳದ ತೆನೆಗಳ ತರ ನೆಲದ ತುಂಬಾ ಹರಡಿವೆ" ಎಂದು ಹತಾಶನಾಗಿ ಬರೆಯುತ್ತಾನೆ. ನೊಂದ ಸೈನಿಕನೊಬ್ಬ ಬ್ರಿಟನ್‍ ರಾಜ ಐದನೇ ಜಾರ್ಜ್‍ಗೆ ಪತ್ರ ಬರೆದು, "...ಕೇವಲ 11 ರೂಪಾಯಿಗೆ ನಾವು ಪ್ರಾಣ ಬಿಡುತ್ತಿದ್ದೇವೆ. ಗಾಯಗೊಂಡ ಸೈನಿಕರನ್ನೂ ಪದೇ ಪದೇ ಯುದ್ಧಕ್ಕೆ ಕಳುಹಿಸುತ್ತಾರೆ," ಎಂದು ದೂರುತ್ತಾನೆ.
ನಮ್ಮ ಸೈನಿಕ ತನ್ನ ದೇಶಕ್ಕಾಗಿ ಮಡಿಯಲಿಲ್ಲ. ಯಾರದ್ದೋ ರಾಜಕೀಯ ಲೆಕ್ಕಾಚಾರಗಳಲ್ಲಿ ಕೇವಲ ಅಂಕಿ-ಸಂಖ್ಯೆಯ ಭಾಗವಾಗಿ ಹೋದ. ಬದುಕಿದವರು ಭಾರತಕ್ಕೆ ಮರಳುವಷ್ಟರಲ್ಲಿ ಇಲ್ಲಿನ ರಾಜಕೀಯ ವಾತಾವರಣವೇ ಬೇರೆಯಾಗಿತ್ತು. ಅವರಿಗೆ ಹೀರೋಗಳ ಸ್ವಾಗತ ಬಿಡಿ, ಬ್ರಿಟೀಷರಿಗೆ ಸಹಕರಿಸಲು ಹೋದವರೆಂದು ಜನ ತುಚ್ಚವಾಗಿ ಕಂಡರು, ಹಂಗಿಸಿದರು. ಅಷ್ಟೊತ್ತಿಗೆ ಗಾಂಧೀಜಿಗೂ ಗೊತ್ತಾಗಿತ್ತು ತಾವು ಸಹಾಯ ಮಾಡಲು ಹೊರಟ ತಮ್ಮ ಚಕ್ರವರ್ತಿಯ ನಿಜರೂಪ. ಭಾರತೀಯ ಸೈನ್ಯ ಇಲ್ಲದಿದ್ದರೆ ಬ್ರಿಟನ್‍ ಆ ಯುದ್ಧ ಗೆಲ್ಲಲು ಸಾಧ್ಯವಿರಲಿಲ್ಲ. ಆದರೂ ಸಹಾಯ ಮಾಡಿದ್ದಕ್ಕೆ ಸ್ವಾಯತ್ತತೆ ಬಿಡಿ, ನಮಗೆ ಸಿಕ್ಕಿದ್ದು ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ, ತುರ್ತುಪರಿಸ್ಥಿತಿ, ಪತ್ರಿಕೆಗಳ ಮೇಲೆ ನಿರ್ಬಂಧ, ಕೋರ್ಟ್‍ ವಿಚಾರಣೆಯೇ ಇಲ್ಲದೆ ಶಿಕ್ಷೆ. ಒಂದು ಕಡೆ ಬರಗಾಲ. ದೇಶದ ಹಣವನ್ನು ಯುದ್ಧಕ್ಕೆ ಸುರಿದಿದ್ದರಿಂದ ಆದ ಹಣದುಬ್ಬರ, ಅದರ ಪರಿಣಾಮ ಬಾಂಬೆ, ಮದ್ರಾಸ್‍, ಬಂಗಾಳದಲ್ಲಿ ಆಹಾರಕ್ಕಾಗಿ ದಂಗೆ.
ಇಷ್ಟಕ್ಕೇ ನಿಲ್ಲಲಿಲ್ಲ ನಮ್ಮ ದಾಸ್ಯದ ಕಥೆ. ಮತ್ತೆ ಸಣ್ಣ ಪುಟ್ಟ ಯುದ್ಧಗಳಲ್ಲಿ ಮಾತ್ರವಲ್ಲದೆ, ನಮ್ಮ ಸೈನಿಕರು ಎರಡನೇ ಮಹಾಯುದ್ಧದಲ್ಲೂ ಬ್ರಿಟಿಷರ ಅಡಿಯಲ್ಲಿ ಇಟೆಲಿ, ಜಪಾನ್‍ ಮತ್ತು ಜರ್ಮನ್‍ ಸೈನ್ಯಗಳ ವಿರುದ್ಧ ಹೋರಾಡಿ ಗೆಲ್ಲುತ್ತಾರೆ. ಇಂಫಾಲ್‍ ಮತ್ತು ಕೊಹಿಮಾ ಮೇಲೆ ಆಕ್ರಮಣ ಮಾಡಿದ ಜಪಾನೀಯರು ಸೋತು ಹಿಮ್ಮೆಟ್ಟುತ್ತಾರೆ. ಪಾಲ್ಗೊಂಡ 2.5 ಲಕ್ಷ ಭಾರತೀಯ ಸೈನಿಕರಲ್ಲಿ ಸುಮಾರು 24,000 ಸೈನಿಕರು ಸಾಯುತ್ತಾರೆ.
ಇದೆಲ್ಲ ಸ್ವಾತಂತ್ರ್ಯ ಸಿಗುವ ಮೊದಲಿನ ಮಾತಾಯಿತು, ಈಗ್ಯಾಕೆ ಅದರ ಪ್ರಸ್ತಾಪ ಅನ್ನಿಸಬಹುದು. ಆಗ ಬ್ರಿಟಿಷರು ಕಟ್ಟಿದ ದಾಸ್ಯ ಸಂಕೋಲೆಯಲ್ಲಿ ನಾವಿದ್ದರೆ, ಈಗ ’ಶಾಂತಿಮಂತ್ರ’ ಎನ್ನುವ ನಾವೇ ಬಿಗಿದುಕೊಂಡ ಸಂಕೋಲೆಯಲ್ಲಿ ಸಿಕ್ಕಿಕೊಂಡಿದ್ದೇವೆ. ಭಾಷಣ ಮಾಡುವವರೆಲ್ಲ ’ಭಾರತ ಶಾಂತಿಯುತ ದೇಶ, ಶಾಂತಿ ಇಷ್ಟಪಡುವ ದೇಶ’ ಎಂದು ಉರುಹೊಡೆಯುವುದನ್ನು ಕೇಳಿರಬಹುದು. ಅದಕ್ಕೇ ಇರಬೇಕು ನಮ್ಮ ದೇಶದಿಂದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಕಳುಹಿಸಿರುವ ಪಡೆಗಳ ಸಂಖ್ಯೆಯೇ 1,80,000.
ಆಗ ಕೃತಘ್ನ ಬ್ರಿಟೀಷರಿಗೋಸ್ಕರ ನಮ್ಮ ಸೈನಿಕರು ಜೀವ ಕಳೆದುಕೊಂಡರೆ, ಈಗ ಜಗತ್ತಿನ ದೊಡ್ಡಣ್ಣರೆಲ್ಲ ನಮ್ಮ ಮೇಲೆ ಸವಾರಿ ಮಾಡಲು ನಾವೇ ಅನುವು ಮಾಡಿಕೊಡುತ್ತಿದ್ದೇವೆ. ಯಾವುದೋ ದೇಶಗಳು, ಅವರ ರಾಜಕೀಯ ಆಟಗಳು... ಅವರಿಗೇ ಬೇಡದ ಶಾಂತಿಯನ್ನು ಕಾಪಾಡಲು ನಾವು, so-called ಮೂರನೇ ಜಗತ್ತಿನ ಸೈನಿಕರು, ಪೋಲೀಸರು ಜೀವದ ಮೇಲಿನ ಆಸೆ ಬಿಟ್ಟು ವರ್ಷಗಟ್ಟಲೆ ಅಲ್ಲಿನ ನಾಗರಿಕ ಸಮಾಜವನ್ನು ಹಗಲೂ-ರಾತ್ರಿ ಕಾಯಬೇಕು.
ಜಗತ್ತಿನಲ್ಲೇ ಅತಿ ಹೆಚ್ಚು, ಅಂದರೆ ಸುಮಾರು 158 ಭಾರತೀಯ ಶಾಂತಿಪಾಲಕರು (Peacekeepers), 49 ಬೇರೆ ಬೇರೆ ಕಾರ್ಯಾಚರಣೆಗಳಲ್ಲಿ ಯಾವುದೋ ದೇಶಗಳಲ್ಲಿ ಪ್ರಾಣ ತೆತ್ತಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮೌಮೂನ್‍ ಅಬ್ದುಲ್‍ ಗಯೂಮ್‍ರನ್ನು ಉಚ್ಚಾಟಿಸಲು ಮಾಡಿದ ಪ್ರಯತ್ನ ವಿಫಲಗೊಳಿಸಿದ್ದು ನಮ್ಮ ಶಾಂತಿಪಾಲಕರ ’ಆಪರೇಶನ್‍ ಕ್ಯಾಕ್ಟಸ್‍.’ ಶ್ರೀಲಂಕಾದಲ್ಲಿ LTTE ವಿರುದ್ಧ ಹೋರಾಟದಲ್ಲಿ ಸತ್ತಿದ್ದು ಸಾವಿರಕ್ಕೂ ಹೆಚ್ಚು ಶಾಂತಿಪಾಲಕರು. ಕಾಂಗೋ, ಸುಡಾನ್‍, ಐವರಿ ಕೋಸ್ಟ್, ಸೊಮಾಲಿಯಾ, ಇರಾಕ್‍, ಲಿಬೀರಿಯಾ, ಹೀಗೆ ಎಲ್ಲೆಲ್ಲಿ ಅವರ ಅಗತ್ಯ ಇದೆಯೋ ಅಲ್ಲೆಲ್ಲ ನಮ್ಮವರು ಅಲ್ಲಿನ ಸಾಮಾನ್ಯ ನಾಗರಿಕರಿಗೆ ಹಗಲು-ರಾತ್ರಿ ರಕ್ಷಣೆ ಕೊಟ್ಟಿದ್ದಾರೆ.
ಜಗತ್ತಿನ ಮೊದಲ ಮಹಿಳಾ ಶಾಂತಿಪಾಲನಾ ಪಡೆ ಭಾರತೀಯರದ್ದು. ವಿಶ್ವಸಂಸ್ಥೆಯಿಂದ ಮೆಚ್ಚುಗೆ ಪಡೆದು ಮೊನ್ನೆ ಫೆಬ್ರವರಿಗೆ ಹಿಂತಿರುಗಿದ ಈ ಪಡೆ ಒಂಬತ್ತು ವರ್ಷಗಳ ಕಾಲ ಲಿಬೀರಿಯಾದಲ್ಲಿ ನಾಗರಿಕ ರಕ್ಷಣೆ ಮಾತ್ರವಲ್ಲದೆ, ರಾತ್ರಿ ಗಸ್ತು ತಿರುಗುವುದು, ಅಲ್ಲಿನ ಪೋಲೀಸರಿಗೆ ತರಬೇತಿ ಕೊಡುತ್ತಿದ್ದುದು ಮಾತ್ರವಲ್ಲ, ಮನೆ ಬಿಟ್ಟು ಹೊರ ಬರಲು ಅಂಜುತ್ತಿದ್ದ ಅಲ್ಲಿನ ಮಹಿಳೆಯರಿಗೆ ಪೋಲೀಸ್‍ ಪಡೆ ಸೇರಲು ಸ್ಪೂರ್ತಿಯಾದರು.
ನಮ್ಮ ಶಾಂತಿಪಾಲನಾ ಪಡೆಗಳ ಸಂಬಳ, ಯೂನಿಫಾರ್ಮ್, ಶಸ್ತ್ರಾಸ್ತ್ರಗಳು, ತರಬೇತಿಯ ಖರ್ಚನ್ನೆಲ್ಲ ನಮ್ಮ ದೇಶವೇ ಕೊಟ್ಟು, ಜೊತೆಗೆ ವಿಶ್ವಸಂಸ್ಥೆಯ ಶಾಂತಿಪಾಲನೆ ಬಜೆಟ್‍ಗೆ ದೇಣಿಗೆ (2015-16ನೇ ಸಾಲಿನಲ್ಲಿ ಭಾರತ ವಿಶ್ವಸಂಸ್ಥೆಗೆ ರೂ. 256 ಕೋಟಿ ಕಡ್ಡಾಯ ದೇಣಿಗೆ ನೀಡಿದೆ) ಕೊಟ್ಟು ನಾವು ಅಮಾಯಕರ ಜೀವ ಉಳಿಸುವ ಪುಣ್ಯದ ಕೆಲಸವನ್ನೇನೋ ಮಾಡುತ್ತಿದ್ದೇವೆ. ಆದರೆ ವಿಶ್ವಸಂಸ್ಥೆಯಲ್ಲಿ ನಮಗೆ ನಮ್ಮ ಪಡೆಗಳ ನಿಯೋಜನೆಯ ಯಾವ ಸ್ವಾತಂತ್ರ್ಯವೂ ಇಲ್ಲ.
ಸುಮಾರು 7,713 ಸೈನಿಕರನ್ನು ನಿಯೋಜಿಸುವ ಮೂಲಕ ಇಥಿಯೋಪಿಯಾ ನಂತರ ಎರಡನೇ ಸ್ಥಾನದಲ್ಲಿರುವ ಭಾರತದ ಎದುರು ಜರ್ಮನಿ (434), ಯುನೈಟೆಡ್‍ ಕಿಂಗ್‍ಡಮ್‍ (336), ಕೆನಡಾ (103), ರಷ್ಯಾ (98) ಮತ್ತು ಯುಎಸ್‍ (40) ತರದ ’ದೊಡ್ಡಣ್ಣ’ಗಳ ಬಣ್ಣ ಶಾಂತಿಯ ತಿಳಿನೀರಿನಲ್ಲಿ ಯಾವಾಗಲೋ ತೊಳೆದುಕೊಂಡು ಹೋಗಿದೆ. ಅವರ ಸೈನಿಕರ ಜೀವ ಮಾತ್ರ ಅಮೂಲ್ಯ ಎಂದು ತಿಳಿದುಕೊಂಡಿರುವ ಆ ದೇಶಗಳು ಹಲ್ಲೇ ಇಲ್ಲದಿರುವ ಹಾವಾದ ವಿಶ್ವಸಂಸ್ಥೆಗೆ ಕೋಟಿಗಟ್ಟಲೆ ಹಣ ಸುರಿದು ಬಡರಾಷ್ಟ್ರಗಳಿಗೆ ಶಾಂತಿಯ ಮಂತ್ರ ಹೇಳಿಕೊಡುತ್ತಿವೆ.
ಅತ್ಯಂತ ಕಡಿಮೆ ಮತ್ತು ಹಾಸ್ಯಾಸ್ಪದ ಸಂಖ್ಯೆಯಲ್ಲಿ ಸೈನಿಕರನ್ನು ಶಾಂತಿಪಾಲನಾ ಪಡೆಗೆ ಕಳಿಸುತ್ತಿರುವ ಅಮೇರಿಕಾ, ಈ ವರ್ಷ ತಾನು ಕೊಡುವ ಹಣವನ್ನೂ ಕಡಿತಗೊಳಿಸುವ ಚಿಂತನೆ ನಡೆಸುತ್ತಿದೆ. ಆದರೂ ಹೊಸದಾಗಿ ನೇಮಕಗೊಂಡ ವಿಶ್ವಸಂಸ್ಥೆಯ ಅಮೇರಿಕ ರಾಯಭಾರಿ ಭಾರತೀಯ ಸಂಜಾತೆ ನಿಕ್ಕಿ ಹೇಲಿ ಪ್ರಕಾರ ’ಅಮೇರಿಕಾ ಜಗತ್ತಿನ ನೈತಿಕ ಆತ್ಮಸಾಕ್ಷಿ.’
ದೇಶ-ದೇಶಗಳ ನಡುವಿನ ಯುದ್ಧ, ಜಾತಿ-ಜನಾಂಗಗಳ ಸಂಘರ್ಷ, ಸಿದ್ಧಾಂತಗಳ ತಿಕ್ಕಾಟ,... ಏನೇ ಇರಲಿ,  ಅಲ್ಲೆಲ್ಲ ಸಾವು-ನೋವು, ಕ್ರೂರತನಕ್ಕೆ ಬಲಿಯಾಗುವವರು ಅಮಾಯಕರೇ. ಯಾವ ರಾಷ್ಟ್ರವೇ ಆಗಲಿ, ಅಲ್ಲಿನ ನಾಗರಿಕರನ್ನು ರಕ್ಷಿಸುವುದು ಯಾವುದೇ ದೇಶದ ಸಾಮಾನ್ಯ ಸೈನಿಕ ಹೆಮ್ಮೆಯಿಂದ ಮಾಡುವ ಕೆಲಸ. ಆದರೆ ಅದರಲ್ಲಿ ದೊಡ್ಡ-ಸಣ್ಣ ರಾಷ್ಟ್ರಗಳ ಸಮಪಾಲು ಇರಬೇಕು. ನಾಗರಿಕರ ಜೀವದ ತರ, ಸೈನಿಕನ ಜೀವವೂ ಅತ್ಯಮೂಲ್ಯವೇ. ಒಂದು ಕಡೆ ಬೆನ್ನ ಹಿಂದಿಂದ ಯುದ್ಧಕ್ಕೆ ಕುಮ್ಮಕ್ಕು ಕೊಡುತ್ತಾ, ಇನ್ನೊಂದು ಕಡೆ ಯುದ್ಧದಲ್ಲಿ ಸಿಲುಕುವ ಅಮಾಯಕರನ್ನು ಕಾಪಾಡುವ ನಾಟಕವಾಡುವ ’ಹಿರಿಯಣ್ಣ’ರೆಲ್ಲ ಸೇರಿ, ಕಣ್ಣೆದುರೇ ಅನಾಚಾರಗಳು ನಡೆಯುತ್ತಿದ್ದರೂ ಅದನ್ನು ತಡೆಯುವ ಯಾವ ಅಧಿಕಾರವೂ ಕೊಡದೆ, ಶಾಂತಿಪಾಲನಾ ಪಡೆಯನ್ನು ಹೆಸರಿಗೆ ಮಾತ್ರ ನೇಮಿಸಿ ತಮ್ಮ ನೈತಿಕ ಹೊಣೆಯಿಂದ ಕಳಚಿಕೊಳ್ಳುವ ಬದಲು ಅವರಿಗೆ ಆ ಕ್ಷಣದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಕೊಟ್ಟರೆ ಆ ಪಡೆಯ ನೇಮಕ ಅರ್ಥಪೂರ್ಣವಾದೀತು. ಶಾಂತಿಯ ಹರವು ಹಿಂಸೆಯಿಂದ ನಲುಗಿದ ದೇಶಗಳಲ್ಲಿ ಹರಡೀತು.

Thursday, December 25, 2014

A whiff of jasmine...

She walked briskly, not knowing where and not caring. Her muddled mind cleared slowly, as walking often did for her. Drawn out of the vale of her reverie by the singing of a koel in search of its soul mate, she glanced around her. Finding herself in the thick of the woods and recognising the wild mango tree which towered over the long-forgotten path, she recalled her childhood days when she would accompany her mother and aunt to rescue the tiny, juicy mangoes from the hungry ants under the dry leaves on the forest bed.
Darting her glance at the dark woods, which seemed to be closing around her menacingly, Samhita quickened her pace. She walked further down the narrow path now strewn with half-eaten, rotten cashew apples thrown by monkeys. In front of her lay the broken foundation of an old house, eaten up by wild vines and the passivity of its residents.
Stepping gingerly across the foundation stones, she turned to look at the path that lay silently behind her, thinking of lives spent seeking love and then letting it go in order to live. "Don't look back, or else the wood fairies who follow you and protect you from danger, will vanish," she recalled the warning by a village woman who worked in their fields and with whom she often went to gather firewood. Her childhood fear, strengthened by the stories narrated by elders to keep naughty kids in check, or to allay their own fears, towered over her now. Breathing deeply, as if to erase her fear by inhaling it and burning it within herself, she walked past the ruins and stepped out onto the rocky cliff that loomed over the emerald fields.
She sat down, dangling her feet over the cliff and thought about the people who lived in that ruined house once upon a time - their joys, untold sorrows... Samhita shook herself as she realised that she was brooding again. She checked her cellphone for the umpteenth time, knowing full well that no message or call could come in a place with no signal, chiding herself for hoping that he would call atleast once.
Inhaling the cool forest air, she questioned herself - what will happen if you never see, hear from or live with the person you love?
"Nothing," was the answer Samhita heard from within and without. Startled, she turned to see a woman wizened with age yet graceful in her green cotton saree, walk slowly towards her. "Don't be afraid, my dear. I live in a house yonder," the woman said, pointing towards a thatched hut standing proudly amidst the fields. "I heard your question, which you must have unknowingly spoken out aloud."
Gathering her scared wits around her, Samhita sat down silently. "Life is very simple, my dear," continued the old woman, sitting beside her and smiling. In a voice that seemed to flow effortlessly from deep within her and with a faraway look, the woman added, "We just pull the simple thread of life in our amateur fingers and end up entangling it, confusing ourselves and others in the process."
Seeing the puzzled look on Samhita's face, the woman questioned, "Tell me my dear, of her five husbands, whom did Draupadi really love? It's a question for which only Draupadi knows the answer. I was once a bubbly girl like you; full of life and unbridled optimism. Do you want to hear my story?"
Samhita nodded silently, yet unsure of how to respond to the stranger. The woman, with unseeing eyes, continued: "It was my job to gather firewood everyday and I spent a lot of my time in the woods, immensely enjoying the solitude, rustle of leaves as they rose in the sudden breeze and scampering of little animals. One summer day, tired after gathering firewood, I sat down on this rock beneath that wild jasmine bush. In the stillness that enveloped me and gentle breeze kissing me, I soon fell asleep. After a while, as the sun shifted and his hot rays fell on my face, I woke up and found a man sitting across me. He was staring at me, lost in contemplation. Startled, I got up. He came out of his reverie and a smile appeared on his solemn face.
"Don't be afraid," said he. "I was just searching for a place untouched by humans... to sit and meditate. You seemed to be the perfect muse for me."
"We met on this rock daily, went for long walks in the woods and sat here for hours, not uttering a word and yet strangely comfortable with each other. He taught me to read, brought in me a passion towards life. He was my dream to fall back on when reality failed me. In two years that we spent together, I knew the workings of his mind but nothing about him.
"One day when I came here, the rock seemed lifeless; he was not there. I had fallen in love. From that day onwards, I came here every day; desperate to see him, see his animated eyes as he spoke of the things he loved, his passion towards his countrymen. After a year of my futile visits to this rock, I got married to a farmer from this village itself. For the next 15 years, I sat on this rock every single day, hoping that he would suddenly appear at the bend in the path and sit beside me.
"One rainy day, as I took shelter beneath a tree trying to shield myself from the angry rain which whipped me from all sides, I saw someone walking gingerly through the puddles, holding an umbrella. My heart skipped to see my grey-haired love walking towards me as nonchalantly as if he'd never missed a meeting. He stood beside me, held his umbrella over me till the rains stopped. And then he left, taking a long look back at me. Our silence spoke. I knew then that it was the last time we would be seeing each other.
"I continued to come here, not anymore to see him but to be with him in my thoughts and many moods. There is no such thing as an unrequited love my dear. He can be anywhere and I can still be with him," the old woman said and after a minute of silence, got up to leave. She disappeared behind the wild jasmine bushes before Samhita could collect her stupefied self and call out to her. A whiff of jasmine lingered long after the woman had left.

Disturbed by the woman’s story and unable to find peace anymore, Samhita returned home. She asked her uncle about the house in the midst of the fields. He said that nobody lived there now. "The house was built by a farmer's family who were good people and well-liked by the villagers. The children grew up and left for the city while their old parents lived there for a while. Then one day, the old woman, who had gone to visit her children in the city, boarded a train to return home. She died in the tragic train accident in which her coach derailed. When fire fighters started retrieving the bodies, they found that the woman was holding the hand of an old man, who too had died in the accident. He was later identified as a celebrated freedom fighter who had fought against the British. He had formed his own radical group and strategically attacked the British, causing them to retreat from this land. A fire fighter later told the media that he was surprised that the scorched coach was filled with the fragrance of jasmine."
--A story by me.

Tuesday, September 30, 2014

Mother

This is my feeble attempt at story-telling.

She was a mother. Sitting beneath a mango tree which had begun flowering at the fag end of Spring, she thought about her grown-up children who had gone fishing in the roiling sea.
Looking up from the task of making brooms from the green coconut fronds spread around her, she saw that grey clouds shrouded the sky, threatening to pour pails of water from their cottony wombs.
Calling out to her husband who was resting inside their hut after two days of fishing in the sea, she voiced her concern about their two sons and the imminent storm.
When she could hear no answer from the hut, she went inside, only to find her husband shivering with fever and uttering incoherent words in his incognizance.
Worried about both her husband and sons, she was torn between rushing out to seek the help of her neighbours and the urge to run to the beach to look out for her sons’ return before the storm began. Finally she made a choice. Standing before the angry waves whipping the sands for being naughty and shifty, she prayed to the Sea Mother to protect her sons and all other sons of the sea who were out fishing and thus were vulnerable to the vagaries of nature. Then she ran to her neighbour’s house where she found that her friend’s husband, also a fisherman, was not at home. Sensing that she would not find help anywhere else in the storm, she desolately walked back.
When the mother returned home, she could see that a full storm had begun and the high tide had reached the coconut trees which were swaying dangerously low and close to her hut. As she stood horrified, the fronds lashed out and hit the roof of the hut, which flew off in its entirety and landed at the top of a group of cacti plants.
Standing before the now roofless hut and watching as rain took possession of their meager belongings as if collecting its long due debt, she cried thinking of the fate of her children and cursing herself for letting them go fishing that day.
Running inside, she called out to her husband. When he did not stir, she went to him and dragged his inanimate body to a corner of the hut. She tried desperately to cover him with the two silk sarees -one red with peacock dancing in the pallu, the other blue with gold stripes- which were kept safely in a trunk and were her only prized possessions since marriage. Before long, the sarees were soaked and clung to her now-unconscious husband.
Night fell, with no sign of her children. Her gaze rooted to the broken door with no roof, she sat silently beside her husband, tears dissolving in the rain which now flowed as a stream near her feet.
Soon she heard someone approaching the ruined hut. Glancing up, she saw that her neighbor couple had come to their aid. The fellow fisherman picked up her husband and carried him to their home while she followed with her friend, looking back at what was once their home, hoping against hope that her sons would miraculously materialize there at that instant.
The next morning, she found out that along with the hut and all their possessions, the storm had also snatched away her husband’s life from her. Realising that nothing else was left to be lost, a calmness pervaded her aged soul. She walked slowly to the beach and stood in the rain, facing her Sea Mother. Grey sheets of rain continued to fall on the raging sea, angering it further and causing the waves to lash out with increasing frequency.
Turning to the sea, she saw with shock that a boat was being gently carried to the shore atop an enormous wave which neither had a crest, nor diminished as it approached her. Transfixed at the sight of her two sons clinging to the sides of the boat, she thanked the Sea Mother for returning her sons unharmed. Love misting her eyes, she saw only her sons and not the wave, which swept her up as it gently lowered the boat. Her sons watched from their boat as their mother was taken away by the Sea Mother into her womb, in exchange for their lives. Climbing down from their boat and running towards the receding wave, they heard their mother’s voice: “Get away from the storm, my children. You’ll catch a cold.”