Pages

Subscribe:

Ads 468x60px

Saturday, July 17, 2010

CAVA TO GET ITS OWN CAMPUS IN GERMAN PRESS PREMISES



At last, after a decades-long struggle, the Chamarajendra Academy of Visual Arts (CAVA) is getting its own campus on the eve of its 30th anniversary. The State Government has granted 4.4 acres of land in the premises of German Press (Govt. of India Text Book Press), Siddharthanagar for CAVA's own campus.
CAVA was earlier granted nearly 5 acres of land in the proposed Music University campus in Varakodu, which did not materialise due to various legal and technical problems in obtaining the land. The Academy was also shifted to Aloka campus in Yelwal many times. Tired of the uncertainty of shifting to Aloka and back again and also not wanting to get embroiled in controversies surrounding the Music Varsity campus, CAVA Dean V.A. Deshpande had been trying to get the vacant land in German Press premises.
When SOM spoke to Deshpande, he said the project of building a campus for CAVA may take upto 3 years as he has just sent his plans and requirements to the Chief Architect, Govt. of Karnataka. After the Architect draws up plans according to his specifications and as per the needs of the Academy, they can make an estimate of the funds needed which will then be released by the government.
Deshpande said they will visit other schools of arts like Shanthiniketan, Delhi School of Arts etc., to get an idea of the architecture and requirements for the school. Each of CAVA's departments — Sculpture, Painting, Graphics, Applied Art, Photojour-nalism etc. — has its own infrastructural requirements like studios, workshops, LCD projection room, foundry, a spacious library and even open space for artists which will be planned accordingly in the new campus.
In addition to a good collection of art — paintings, sculptures etc.— CAVA exhibits art work done by its own students and other students from around the country who attend workshops conducted on the campus. The present CAVA building has space constraints for both temporary and permanent art expos.
When asked if the Academy plans to have a permanent art gallery in the new campus, Deshpande said, "Our art should be witnessed by others. If people do not see and appreciate our art, we will not grow, and consequently, our art will not grow. Hence it is imperative that we have a spacious art gallery."
As per the present estimation, around Rs. 5 to 6 crore may be needed for the new campus. The State Government had granted Rs. 1 crore for CAVA last year. Deshpande believes that since the Kannada and Culture Department is under Chief Minister B.S. Yeddyurappa himself, funds will be released without any hitch and the Department Secretary B.R. Jayaramaraje Urs too would support the project. CAVA is also likely to get UGC funding as it comes under University of Mysore.
Replying to a query, Desh-pande said there are 15 teachers and 35 staff at present and five posts are vacant. They will be soon filled up, he added.

The Academy has been facing various problems due to lack of basic facilities like classrooms, technical staff, library and is forced to remain in the Chamarajendra Technical Institute building which has developed cracks in the walls and is crumbling. Along with building a new campus for CAVA, it is also essential to preserve the CTI building which was built in 1906 by Krishnaraja Wadiyar IV.

Friday, July 9, 2010

ಇಷ್ಟೆಲ್ಲ ಓದಿಕೊಂಡರೂ ಮಾನವೀಯತೆ ಹುಟ್ಟಲಿಲ್ಲವೇಕೆ?

ಒಂದು ವರ್ಷದ ಹಿಂದೆ ಹತ್ತಿರದ ಕುಂಬಾರಗೇರಿಗೆ ಯಾರನ್ನೋ ಭೇಟಿಮಾಡಲು ಹೋದಾಗ ಆ ಮನೆಯಲ್ಲಿದ್ದ ಬಾಣಂತಿಯೊಬ್ಬರು ಮಾತಿಗೆ ಸಿಕ್ಕಿದರು. ಮಾತು ಹೆರಿಗೆ, ಆಸ್ಪತ್ರೆಯತ್ತ ಹೊರಳಿದಾಗ ಅವರು ಹೇಳಿದ ವಿಷಯಗಳು ದಿಗಿಲು ಹುಟ್ಟಿಸುವಂತಿತ್ತು. ಅಲ್ಲಿವರೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಬಡವರಿಂದ ದುಡ್ಡು ಕೀಳುತ್ತಾರೆ, ನಿರ್ಲಕ್ಷ್ಯ ತೋರುತ್ತಾರೆ ಎಂದೆಲ್ಲ ಕೇಳಿದ್ದೆ. ಆದರೆ ತುಂಬಿದ ಬಸುರಿಯರನ್ನು ಗಂಟೆಗಟ್ಟಲೆ ಕೂರಲು ಜಾಗವೂ ಇಲ್ಲದೆ ನಿಲ್ಲಿಸಿ ಕಾಯಿಸುತ್ತಾರೆ, ರಾತ್ರಿ ಹೊತ್ತಿನಲ್ಲಿ ಒಬ್ಬರನ್ನೆ lab testing ಅಂತ ಕಳಿಸುತ್ತಾರೆ ಎಂದು ಗೊತ್ತಿರಲಿಲ್ಲ. ಆಮೇಲೆ ಆಸ್ಪತ್ರೆಗೆ ಹೋಗಿ ನೋಡಿದಾಗ ಅಲ್ಲಿ ಹಸಿ ಬಾಣಂತಿಯರನ್ನು, ಆಗ ತಾನೆ ಹುಟ್ಟಿದ ಹಸುಮಕ್ಕಳನ್ನು ನೆಲದ ಮೇಲೆ ಹಾಸಿಗೆಯೂ ಇಲ್ಲದೆ ಮಲಗಿಸಿದ್ದರು. ಕೆಲವು ರೋಗಿಗಳು ಅಲ್ಲೆ ಪಕ್ಕದ ಜಗಲಿಯ ಬದಿಯಲ್ಲಿ ವಾಕರಿಸುತ್ತಿದ್ದರು. ಎಲ್ಲಕ್ಕಿಂತ ದಿಗ್ಬ್ರಮೆ, ಆತಂಕ ಹುಟ್ಟಿಸಿದ್ದು ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ಹೆಣ್ಣುಮಕ್ಕಳನ್ನು labour wardನ ಟೇಬಲ್‌ ಮೇಲೆ ಕುಕ್ಕುತ್ತಾರೆ, ಅವರಿಗೆ ಹೆರಿಗೆ ಮಾಡಿಸುವ ಬದಲು ಅಲ್ಲಿ ಯಾವ ಡಾಕ್ಟರ್, ಆಯಾ, ನರ್ಸ್ ಇಲ್ಲದಂತೆ ಹೊರಹೋಗುತ್ತಾರೆ, ನೋವಿನಿಂದ ಅಳುವ ಹೆಣ್ಣುಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ಮಗು ತೋರಿಸಬೇಕಾದರೆ ದುಡ್ಡು ಕೇಳುತ್ತಾರೆ ಎನ್ನುವ ವಿಷಯ ಕೇಳಿ. ಆಗ ಇವರು ಮನುಷ್ಯರಾ ಅನ್ನಿಸಿತ್ತು.
ಇದು ’ಉಚಿತ’ ಸರಕಾರಿ ಆಸ್ಪತ್ರೆಗಳ ಕಥೆ ಮಾತ್ರ ಅಲ್ಲ. ಖಾಸಗಿ ಆಸ್ಪತ್ರೆಗಳೂ ನಾನಾ ಕಾರಣ ಹೇಳಿ ಸತ್ತವರನ್ನು ಇನ್ನೂ ಬದುಕಿದ್ದಾರೆಂದು ಯಾರಿಗೂ ತೋರಿಸದೆ ಲಕ್ಷಾಂತರ ರೂಪಾಯಿ ವಸೂಲಿ ಮಾಡುವುದೂ ಸಾಮಾನ್ಯ.
ಇಷ್ಟಲ್ಲಾ ಅನಾಗರಿಕವಾಗಿ ನಡೆದುಕೊಳ್ಳುವವರು ಅನಕ್ಷರಸ್ತರಲ್ಲ, ಅಮಾಯಕರೂ ಅಲ್ಲ. ರೋಗಿಗಳ ಸೇವೆ ಮಾಡುತ್ತೇವೆಂದು ಐದೂವರೆ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಡಿಕಲ್, ನರ್ಸಿಂಗ್ ಓದಿ ಬಂದಿರುವ ಡಾಕ್ಟರ್‌ಗಳು, ನರ್ಸ್‌ಗಳು. ತಮ್ಮ ಮಕ್ಕಳು ಮೆಡಿಕಲ್ ಓದುತ್ತಾರೆಂದರೆ ಅಪ್ಪ-ಅಮ್ಮಂದಿರಿಗೆ ಹೆಮ್ಮೆ, ಮಕ್ಕಳು ಬೇರೆಯವರ ಜೀವ ಉಳಿಸುವ ಪುಣ್ಯದ ಕೆಲಸ ಮಾಡುತ್ತಾರೆ ಎಂದು. ಅವರಿಗೂ ಅಷ್ಟೆ ಮೊದಲು ಇರುವ ಆದರ್ಶಗಳು ಓದಿ ಮುಗಿದು ಡಾಕ್ಟರ್ ಆದಾಗ ಎಲ್ಲಿ ಹೋಗುತ್ತವೆ? ಮೊನ್ನೆ ಯಾರೋ ಕೇಳಿದರು ರಾಜಕಾರಣಿಗಳು ಮನುಷ್ಯರಲ್ಲವೆ? ಅವರಿಗೂ ಕರುಣೆ ಇಲ್ಲವೆ ಎಂದು? ಅವರೂ ನಮ್ಮ ನಿಮ್ಮ ಹಾಗೆ ಮನುಷ್ಯರೇ. ಅವರಿಗೂ ಸಂಬಂಧಗಳು, ಮಾನವೀಯತೆ ಎಲ್ಲಾ ಇರುತ್ತವೆ. ಆದರೆ ಪ್ರತಿ ದಿನ ನೂರಾರು ಜನಗಳ ಜೊತೆ ವ್ಯವಹರಿಸುವಾಗ ಕರುಣೆ, ಮನುಷ್ಯತ್ವ ಮಾಯವಾಗಿ, ಜನ ಬರೀ statistics ಆಗುತ್ತಾರೆ, individual ಆಗಿರುವುದಿಲ್ಲ. ಬಹುಶ ವೈದ್ಯರ ವಿಚಾರದಲ್ಲೂ ಹೀಗೇ ಆಗುತ್ತದೇನೋ. ವರ್ಷಗಟ್ಟಲೆ ರೋಗಿಗಳನ್ನು ನೋಡಿದಾಗ ಅಲ್ಲಿ ಅನುಕಂಪ ಮರೆಯಾಗಿ ರೋಗಿಗಳು ಮನುಷ್ಯರಾಗಿರದೆ ಬರೀ ಮನೆಗೆ ಹೋಗುವ ಮುನ್ನ ಮುಗಿಸಬೇಕಾದ ಕರ್ತವ್ಯವಾಗುತ್ತಾರೆ.
ಸಿಟಿಗಳಲ್ಲಿ ಬೀದಿಗೊಬ್ಬರು ಇಂತಹ money-oriented ವೈದ್ಯರಿದ್ದರೆ, ಹಳ್ಳಿಗಳ ಕಥೆಯೇ ಬೇರೆ. ಅಲ್ಲಿ ದುಡ್ಡು ಕೊಟ್ಟು ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೂ ಡಾಕ್ಟರ್‌ಗಳೇ ಇಲ್ಲ. ನಮ್ಮ ರಾಜ್ಯದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ. 90ರಷ್ಟರಲ್ಲಿ ವೈದ್ಯರಿಲ್ಲ, ಇದ್ದರೂ ಹೆಸರಿಗೆ ಮಾತ್ರ, ಅವರೆಲ್ಲ ಆಸ್ಪತ್ರೆಗಳಿಗೆ ಬರುವುದೇ ಕಡಿಮೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಟ್ರೈನಿಂಗ್‌ಗೆಂದು ಬಂದಿದ್ದ ಆಗ ತಾನೆ ಡಿಗ್ರಿ ಮುಗಿಸಿದ ಡಾಕ್ಟರ್‌ಗಳನ್ನು ಹಳ್ಳಿಗಳಲ್ಲಿ ಬಂದು ಇರಿ ಅಂದರೆ "ನಾವ್ಯಾಕೆ ಇಂತಹ ಕೊಂಪೆಯಲ್ಲಿ, ಕಾಡಲ್ಲಿ ಇರಬೇಕು? ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆಯವರು ನಮ್ಮನ್ನು ಓದಿಸಿದ್ದು ಇಲ್ಲಿ ಬಂದು ನಮ್ಮ ಅವಕಾಶಗಳನ್ನು ಹಾಳು ಮಾಡಿಕೊಳ್ಳುವುದಕ್ಕಲ್ಲ. ನಮಗೆ ಸಿಟಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡಬೇಕು," ಅಂದರು. ಹಾಗಾದರೆ ಬಡವರಿಗೆ ರೋಗಕ್ಕೆ ಚಿಕಿತ್ಸೆ ಪಡೆಯುವ, ಬದುಕುವ ಹಕ್ಕಿಲ್ಲವೇ?  ಹಳ್ಳಿಗಳಲ್ಲಿ ಇರುವುದಕ್ಕೆ ಸರಿಯಾದ ಸೌಲಭ್ಯಗಳಿಲ್ಲ, ವೈದ್ಯಕೀಯ ಉಪಕರಣಗಳು, ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯಿಲ್ಲ, ಮಕ್ಕಳಿಗೆ ಶಾಲೆಯಿಲ್ಲ... ಹೀಗೆ ಹತ್ತು ಹಲವು ಕಾರಣಗಳನ್ನು ಹೇಳುತ್ತಾರೆ. ಅದು ನಿಜವೇ ಆದರೂ ಡಾಕ್ಟರ್‌ಗಳು ಹಳ್ಳಿಗಳಿಗೆ ಹೋಗಲು ಮನಸು ಮಾಡಿದರೆ, ಮುಂದೆ ಬಂದರೆ ಸೌಲಭ್ಯಗಳನ್ನು ಸೃಷ್ಟಿ ಮಾಡುವುದು ಅಷ್ಟು ಕಷ್ಟವಲ್ಲ. ಆದರೆ ಅವರ ಹಿಂಜರಿಕೆಗೆ ಅದೊಂದೆ ಕಾರಣವಲ್ಲ. ಎಲ್ಲರ ತರ ಅವರಿಗೂ ಪೇಟೆಯ ನಾಜೂಕು ಬದುಕು ಬೇಕು. ಇನ್ನು ಹಳ್ಳಿಗಳಲ್ಲಿ ಸೇವೆ ಮಾಡುವುದನ್ನು ಕಡ್ಡಾಯ ಮಾಡಿದರೆ ಅದರಿಂದ ಏನೂ ಉಪಯೋಗವಿಲ್ಲ. ಯಾಕೆಂದರೆ ದುಡ್ಡು, ಪ್ರಭಾವ ಇರುವವರು ಅಲ್ಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಾರೆ, ಸಿಕ್ಕಿಹಾಕಿಕೊಳ್ಳುವುದು ಯಥಾಪ್ರಕಾರ ಬಡ ವೈದ್ಯರು. ಚತ್ತೀಸ್‌ಘರ್‌ ರಾಜ್ಯದ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ, ಯಾರೂ ಹೋಗಲು ಒಪ್ಪದ ಕಗ್ಗಾಡಿನಲ್ಲಿ ಸೇವೆ ಮಾಡಲು ಕೆಲ ವೈದ್ಯರು ದಿಲ್ಲಿಯ ತಮ್ಮ ಲಾಭದಾಯಕ ವೃತ್ತಿಯನ್ನು, ಐಷಾರಾಮಿ ಜೀವನವನ್ನು ಬಿಟ್ಟು ಜನ್ ಸ್ವಾಸ್ತ್ಯ ಸಂಸ್ಥಾನ್ ಎನ್ನುವ ಸಂಸ್ಥೆ ಕಟ್ಟಿಕೊಂಡು, ಕಾಡಿನಲ್ಲಿ ಮೈಲಿಗಟ್ಟಲೆ ನಡೆದು, ಸರಿಯಾದ ನೆಲೆ ಇಲ್ಲದಿದ್ದರೂ ರೋಗಿಗಳಿಂದ ಬರೀ ಎರಡರಿಂದ ಐದು ರೂಪಾಯಿ ತೆಗೆದುಕೊಂಡು ಸೇವೆ ಮಾಡುತ್ತಿರುವಾಗ ನಮ್ಮ ಕರ್ನಾಟಕದ ವೈದ್ಯರಿಗೆ ಯಾಕೆ ಸಾಧ್ಯವಿಲ್ಲ?
ಇನ್ನು ಹಳ್ಳಿಗಳಲ್ಲಿ ಸೇವೆ ಮಾಡುವುದಕ್ಕೆ ಮಾತ್ರವಲ್ಲದೆ ಇಡೀ ದೇಶದಲ್ಲಿ ಡಾಕ್ಟರ್‌ಗಳ ಕೊರತೆ ಇದೆ. 1,722 ಜನರಿಗೆ ಕೇವಲ ಒಬ್ಬ ಅಲೋಪತಿ ವೈದ್ಯರಿದ್ದಾರೆ. ವರ್ಷಕ್ಕೆ ಕೇವಲ 31,000 ಎಂಬಿಬಿಎಸ್ ಪಧವೀಧರರು ಹೊರಬರುತ್ತಾರೆ. ಇವರಲ್ಲಿ ಶೇ. 1ಷ್ಟೂ ಹಳ್ಳಿಗಳಿಗೆ ಹೋಗುವುದಿಲ್ಲ. ಮೊದಲೆಲ್ಲ ಹಳ್ಳಿಗಳಲ್ಲಿ ಡಾಕ್ಟರ್‌ಗಳಿಲ್ಲದಿದ್ದರೆ ನಾಟಿ ವೈದ್ಯರಿದ್ದರು, ಆಯುರ್ವೇದ ಪಂಡಿತರಿದ್ದರು ಜೊತೆಗೆ ನಂತರ ಹೆರಿಗೆಯಂತಹ ಕೆಲಸಕ್ಕೆ ದಾದಿಯರಿದ್ದರು. ಇವರೆಲ್ಲ ಕಾಲೇಜುಗಳಿಗೆ ಹೋಗಿ ಕಲಿತವರಲ್ಲ. ಈಗಲೂ ಅಷ್ಟೆ ಹಳ್ಳಿ ಜನಗಳಿಗೆ ಡಾಕ್ಟರ‍್ಗಳ ಅಗತ್ಯವಿದ್ದರೂ ಸಣ್ಣ ಸಣ್ಣ ಖಾಯಿಲೆಗಳಿಗೆ ಚೀನಾದ ’ಬರಿಗಾಲ ವೈದ್ಯರ’ ತರ ನಮ್ಮ ಹಳ್ಳಿಗಳ ಪ್ರಾಥಮಿಕ ಶಿಕ್ಷಣವನ್ನಾದರೂ ಕಲಿತಿರುವ ಜನರಿಗೆ ಟ್ರೈನಿಂಗ್ ಕೊಡಬಹುದು. ಜೊತೆಗೆ ಹಳ್ಳಿಗಳಲ್ಲಿ ಸೇವೆ ಮಾಡಲು ಮೂಲ ಸೌಲಭ್ಯಗಳನ್ನಾದರೂ ಕಲ್ಪಿಸಿದರೆ ಆಸಕ್ತಿಯಿರುವ ವೈದ್ಯರು ಮುಂದೆ ಬಂದಾರು. ಖಾಸಗೀ ಆಸ್ಪತ್ರೆಗಳು ಒಳ್ಳೆಯದೇ, ಆದರೆ ಅದು ಶ್ರೀಮಂತರಿಗೆ, ಪಟ್ಟಣಗಳಲ್ಲಿರುವವರಿಗೆ. ಹಳ್ಳಿಯಲ್ಲಿ ಇರುವವರಿಗೆ, ಬುಡಕಟ್ಟು ಜನಾಂಗಗಳಿಗೆ, ನೂರಾರು ಮೈಲಿ ಕಾಡಿನಲ್ಲಿ ಇರುವವರಿಗೆ ಸರಕಾರದ ಸವಲತ್ತುಗಳೇ ಗತಿ. ಅಲ್ಲಿಗೆ ಯಾವ ಖಾಸಗಿ ಆಸ್ಪತ್ರೆಯೂ ಕಾಲಿಡುವುದಿಲ್ಲ.
ದಾವಣಗೆರೆಯಲ್ಲಿ ಡಾ. ಕೇಶವಾಚಾರ್ಯ ಎನ್ನುವ ಪಶು ವೈದ್ಯರಿದ್ದಾರೆ. ತುಂಬಾ ವರ್ಷಗಳ ಹಿಂದೆ ಸರ್ಕಸ್‌ನ ಒಂದು ಆನೆಗೆ ಅವರು ಚಿಕಿತ್ಸೆ ನೀಡಿದ್ದರು ಮತ್ತು ಅದನ್ನು ಮರೆತಿದ್ದರು. ಹಲವು ವರ್ಷಗಳಾದ ಮೇಲೆ ಒಂದು ದಿನ ಅವರ ಆಸ್ಪತ್ರೆಯ ಎದುರು ಒಂದು ಆನೆ ಬಂದು ನಿಂತಿತ್ತು. ಜನರೆಲ್ಲ ಭಯದಿಂದ ಅದನ್ನು ನೋಡಿ ಓಡುತ್ತಿದ್ದರು. ಆದರೆ ಅದು ಬಂದಿದ್ದು ತನಗೆ ಚಿಕಿತ್ಸೆ ನೀಡಿದ ವೈದ್ಯರನ್ನು ನೋಡಲು. ಎಷ್ಟೋ ವರ್ಷಗಳಾದ ಮೇಲೆ ಆ ಊರಿಗೆ ಅದೇ ಸರ್ಕಸ್ ಬಂದಿತ್ತು ಮತ್ತು ಆ ಆನೆ ತನಗೆ ಜೀವ ನೀಡಿದ ವೈದ್ಯರನ್ನು ಹುಡುಕಿಕೊಂಡು ಬಂದಿತ್ತು. ಇದು ವೈದ್ಯರ-ರೋಗಿಯ ಮಧ್ಯೆ ಇರಬೇಕಾದ ಬಾಂಧವ್ಯ. ಆದರೆ ಈಗ ವೈದ್ಯರಲ್ಲಿ ಆ ಕರ್ತವ್ಯ ನಿಷ್ಟೆಯಿಲ್ಲ, ರೋಗಿಗಳಲ್ಲಿ ಆ ಕೃತಜ್ನತೆಯಿಲ್ಲ.
ಮೊನ್ನೆ ಜುಲೈ 1 'National Doctors Day'. ಪ್ರತಿ ಸಲದಂತೆ ಈ ಸಲವೂ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ರಕ್ತದಾನ ಶಿಬಿರಗಳು ನಡೆದವು. ಇಷ್ಟೇನಾ ನಮ್ಮನ್ನು ಕಾಯುವ ವೈದ್ಯರ ಕರ್ತವ್ಯ?