"ನಾನು ಕಾಲೇಜಿನಿಂದ ಮನೆಗೆ ನಡೆದುಕೊಂಡು ಬರುತ್ತಿರುವಾಗ ಅವನು ನನ್ನ ಹಿಂದೇನೇ ಸೈಕಲ್ನಲ್ಲಿ ಬಂದ. ನಾನು ಮನೆ ಒಳಗೆ ಹೋದಾಗ ಹೊರಗೆ ನಿಂತು ಕಾಯ್ತಾ ಇದ್ದ. ಸ್ವಲ್ಪ ಹೊತ್ತಾದ ಮೇಲೆ ಬಂದು ಬಾಗಿಲು ತಟ್ಟಿದ. ಒಬ್ಬಂಟಿಯಾಗಿದ್ದ ನಾನು ಕಿಟಕಿಯಿಂದಲೇ ಏನೆಂದು ಕೇಳಿದಾಗ ಮನೆ ಓನರ್ ವಿಳಾಸ ಕೇಳಿದ, ವಿಳಾಸ ಕೊಟ್ಟ ಮೇಲೆ ನೀರು ಬೇಕು ಎಂದ. ಕೊಡಲು ಒಳಗೆ ಹೋದಾಗ ಹಿಂದಿನಿಂದ ಮನೆ ಒಳಗೆ ಬಂದು ಮೈಮುಟಿದ, ಅಸಭ್ಯವಾಗಿ ವರ್ತಿಸಲು ಆರಂಭಿಸಿದ. ಕೂಗಿಕೊಂಡಾಗ ಪಕ್ಕದ ಮನೆಯವರೆಲ್ಲ ಬಂದು ಅವನಿಗೆ ಹೊಡೆದು ಪೋಲೀಸರಿಗೆ ಒಪ್ಪಿಸಿದರು. ಅವರೆಲ್ಲ ಬರದಿದ್ದರೆ..." ಆಕೆ ನಡುಗುತ್ತಾ ಅಳುತ್ತಾ ಹೇಳುತ್ತಿದ್ದಳು. ಆಕೆಗೆ ಹೇಗೆ ಸಮಾಧಾನ ಹೇಳುವುದು ಎಂದು ತಿಳಿಯದೆ ಸುಮ್ಮನೆ ಕುಳಿತಿದ್ದೆ. ಬರೆಯಲೆಂದು ಇಟ್ಟುಕೊಂಡಿದ್ದ ಪೇಪರ್ ಖಾಲಿಯಾಗಿಯೇ ಇತ್ತು. ಪೆನ್ನು ಹಾಗೇ ಕೈಯಲ್ಲಿ ಮರೆತುಹೋಗಿತ್ತು. ಪಕ್ಕದಲ್ಲಿದ್ದ ಅವಳ ಗಂಡ ಅವಳನ್ನು ಸಮಾಧಾನ ಮಾಡಲು ಯತ್ನಿಸುತ್ತಾ ನಡೆದದ್ದನ್ನು ಮತ್ತೆ ಹೇಳತೊಡಗಿದರು. "ಪೋಲೀಸರು ಅವನನ್ನು ಅರೆಸ್ಟ್ ಮಾಡಿದರೆಂದು ನಾವು ಸಮಾಧಾನದಿಂದಿದ್ದೆವು. ಆದರೆ ಈಗ ಅವನನ್ನು ಜಾಮೀನಿನ ಮೇಲೆ ಬಿಟ್ಟಿದ್ದಾರೆ. ಮತ್ತೆ ಅವನು ನಮಗೆ ಏನು ಮಾಡುತ್ತಾನೆಂದು ಹೆದರಿಕೆಯಾಗುತ್ತಿದೆ. ಇವಳು ಹೆದರಿಕೆಯಿಂದ ಬೆಚ್ಚಿಬೀಳುತ್ತಿರುತ್ತಾಳೆ. ನಾಳೆ ನಮ್ಮ ದೇಶಕ್ಕೆ ವಾಪಾಸು ಹೋಗುತ್ತಿದ್ದೇವೆ. ಆಮೇಲೆ ನೋಡೊಣ," ಎನ್ನುತ್ತಿದ್ದ ಆ ಫ್ರೆಂಚ್ ದಂಪತಿಯ ಮುಖದ ಮೇಲೆ ಹೆದರಿಕೆ ಸ್ಪಷ್ಟವಾಗಿತ್ತು.
"ನಮಗೆ ಭಾರತ ಅಂದರೆ ತುಂಬಾ ಇಷ್ಟ. ಇಲ್ಲೇ ಇರಬೇಕೆಂದು ಬಂದವರು. ಅದಕ್ಕೇ ಇಲ್ಲೇ ಕಾಲೇಜಿಗೆ ಲೆಕ್ಚರರ್ ಆಗಿ ಸೇರಿಕೊಂಡೆ. ಇಲ್ಲಿನ ಜನ ತುಂಬಾ ಒಳ್ಳೆಯವರು. ನಾವು ಮತ್ತೆ ಇಲ್ಲಿಗೆ ಬರುತ್ತೇವೆ, ಇಲ್ಲೇ ಇರುತ್ತೇವೆ. ಆದರೆ ಈಗ ಇಲ್ಲಿರಲು ಭಯ ಕಾಡುತ್ತಿದೆ. ಯಾವಾಗಲೂ ಅಕ್ಕಪಕ್ಕದವರು ಸಹಾಯಕ್ಕೆ ಬರಲು ಸಾಧ್ಯವಾಗದೇ ಇರಬಹುದು. ಇವಳೊಬ್ಬಳೇ ಇರುವಾಗ ಅವನು ಮತ್ತೆ ಬರಬಹುದು..." ಹೀಗೆ ಹೇಳುತ್ತಾ ಹೋದ ಆ ದಂಪತಿ ಫ್ರಾನ್ಸ್ನಿಂದ ಮೈಸೂರಿಗೆ ಇಲ್ಲೇ ನೆಲೆಸುವ ಉದ್ದೇಶದಿಂದ ಬಂದವರು. ಹೆಂಡತಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾದರೆ, ಗಂಡ ಕಾಲೇಜೊಂದರಲ್ಲಿ ಲೆಕ್ಚರರ್. ತಮ್ಮಷ್ಟಕ್ಕೆ ಭಾರತವನ್ನು ಪ್ರೀತಿಸುತ್ತಾ, ಇಲ್ಲಿನ ಸಂಸ್ಕೃತಿಯನ್ನು ಇಷ್ಟಪಡುತ್ತಾ, ಈ ದೇಶ ನಮ್ಮದು ಎಂದುಕೊಂಡು ನೆಮ್ಮದಿಯಾಗಿ ಬದುಕುತ್ತಿದ್ದವರನ್ನು ಅದೊಂದು ದಿನ ಇಲ್ಲಿನ ಪ್ರಖ್ಯಾತ ಸಾಫ್ಟ್ವೇರ್ ಕಂಪೆನಿಯ ಉದ್ಯೋಗಿಯೊಬ್ಬ ಇಲ್ಲಿನ ಜನರ ಮೇಲೆ ಅಸಹ್ಯ ಹುಟ್ಟಿಸುವ, ಇಲ್ಲಿನ ಸಂಸ್ಕೃತಿಯನ್ನೇ ಪ್ರಶ್ನಿಸುವ ಮನಸ್ಥಿತಿಗೆ ತಂದಿಟ್ಟ, ಆ ವಿದೇಶಿ ಮಹಿಳೆಯ ಮನೆಗೇ ನುಗ್ಗಿ, ಅವಳ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿ.
ಭಾರತೀಯ ಗಂಡಸರೆಲ್ಲ ಕೆಟ್ಟವರೆಂದು ನಾನು ಹೇಳುತ್ತಿಲ್ಲ. ನಮ್ಮ ದೇಶ ಮಾತ್ರವಲ್ಲ, ಯಾವ ದೇಶವೂ ಬರಿ ಸಭ್ಯ, ಸೌಮ್ಯ ಜನರಿಂದ ಕೂಡಿಲ್ಲ. ಆದರೆ ಇಲ್ಲಿಯವರಿಗೆ ವಿದೇಶೀಯರೆಂದರೆ ಏನೋ ಆಕರ್ಷಣೆ. ತಮ್ಮಷ್ಟಕ್ಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಬಿಳಿ ಚರ್ಮದ ಹುಡುಗಿಯರಿಗೆ ತಮ್ಮ ಭಾಷೆಯಲ್ಲಿ ಛೇಡಿಸುತ್ತಾ, ಅವಕಾಶ ಸಿಕ್ಕಿದಾಗ ಮೈಮುಟ್ಟಿಕೊಂಡು ಹೋಗುವವರಿಗೇನು ಕಮ್ಮಿಯಿಲ್ಲ. ವಿದೇಶೀಯರೆಂದರೆ ಎಲ್ಲರೂ ನಾಚಿಕೆ ಬಿಟ್ಟವರು ಅನ್ನುತ್ತಾ, ಅವರು ಹಾಕಿಕೊಳ್ಳುವ ಬಟ್ಟೆಯ ಮೇಲೆ ಅವರ ಗುಣ ಅಳೆಯುವ ನಮ್ಮ ಜನ ಸಾಮಾನ್ಯವಾಗಿ ಅಂದುಕೊಳ್ಳುವ ಮಾತೊಂದೆ- they are easy.
"ಕೀನ್ಯಾ, ತಾಂಜಾನಿಯಾದ ಹತ್ತು ವಿದ್ಯಾರ್ಥಿಗಳನ್ನು ಹೋದ ವರ್ಷ ಮೈಸೂರಿನಲ್ಲಿ ಬಂಧಿಸಲಾಯಿತು. ಈ ಘಟನೆ ಎಲ್ಲ ಆಫ್ರಿಕಾದ ವಿದ್ಯಾರ್ಥಿಗಳಲ್ಲಿ ಆತಂಕ ಹುಟ್ಟಿಸಿದೆ. ಮಾಧ್ಯಮಗಳಲ್ಲಿ ಬರುವುದೆಲ್ಲ ಸತ್ಯವಲ್ಲ... ಏನೇನು ಘಟನೆಗಳು ನಡೆದರೂ ನಾವೇ ಕಾರಣ ಎಂದು ಸುತ್ತಮುತ್ತಲಿನ ಜನ ನಂಬುತ್ತಾರೆ. ಒಬ್ಬ ಆಫ್ರಿಕನ್ ಮತ್ತು ಭಾರತೀಯನ ಮಧ್ಯೆ ಜಗಳ ನಡೆದರೆ ಯಾವುದೇ ತನಿಖೆಯಿಲ್ಲದೆ ಅದರಲ್ಲಿ ಆಫ್ರಿಕನ್ ವಿದ್ಯಾರ್ಥಿಯೇ ತಪ್ಪಿತಸ್ಥನೆಂದು ಅರ್ಥೈಸಲಾಗುತ್ತದೆ. ಒಬ್ಬ ಭಾರತೀಯ ವ್ಯಕ್ತಿ ಮತ್ತು ಆಫ್ರಿಕನ್ ವಿದ್ಯಾರ್ಥಿಯ ಮಧ್ಯೆಯ ರಸ್ತೆ ಅಪಘಾತದಲ್ಲಿ ಭಾರತೀಯ ಸತ್ತಾಗ, ಇಲ್ಲಿನ ಪತ್ರಿಕೆಗಳೆಲ್ಲ 'ವಿದೇಶೀಯನಿಂದ ಭಾರತೀಯನ ಕೊಲೆ' ಎಂದು ಬರೆದವು. ಅಪಘಾತಗಳು ಕರಿಯ, ಬಿಳಿಯ ಎನ್ನುವ ಬೇಧ ತೋರುವುದಿಲ್ಲ ಎಂದು ಜನ ಮರೆತರು.
ಇಲ್ಲಿ ನಾವಿರುವವರೆಗೆ ನಮ್ಮ ಸಂಸ್ಕೃತಿಯನ್ನು ಮರೆತು ಇಲ್ಲಿನ ಸಂಸ್ಕೃತಿಯನ್ನು ಅನುಸರಿಸಬೇಕೆಂದು ಇಲ್ಲಿಯ ಜನ ಬಯಸುತ್ತಾರೆ. ಇಪ್ಪತ್ತೊಂದನೇ ಶತಮಾನದಲ್ಲಿ, ಪ್ರಪಂಚವೆಲ್ಲ ಒಂದು ದೊಡ್ಡ ಹಳ್ಳಿಯಾಗುತ್ತಿರುವಾಗ, ದೇಶ ಭಾಷೆಯ ಗಡಿಯಿಲ್ಲದೆ ಜನರು ಒಟ್ಟಿಗೆ ಬದುಕುತ್ತಿರುವಾಗ, ಇಂತಹ ಸಾಂಸ್ಕೃತಿಕ ಸಂಘರ್ಷಗಳು ಸಾಮಾನ್ಯ. ನಾವು ಕೇಳುತ್ತಿರುವುದು ಕೇವಲ ಘನತೆಯಿಂದ ಬದುಕಲು ಒಂದು ಅವಕಾಶ. ಇಷ್ಟು ವರ್ಷಗಳಾದರೂ, ಪ್ರಪಂಚದೆಲ್ಲೆಡೆ ಆ ಪದ ನಿಷೇಧಿಸಲ್ಪಟ್ಟರೂ ಭಾರತೀಯರು ನಮ್ಮನ್ನು ಇನ್ನೂ ನೀಗ್ರೋಗಳೆಂದು ಕರೆಯುತ್ತಾರೆ. ನೀವು ಬೇರೆ ದೇಶಗಳಲ್ಲಿ ನಿಮ್ಮ ಮೇಲಾಗುವ ಜನಾಂಗೀಯ ನಿಂದನೆಗಳನ್ನು ತೀವ್ರವಾಗಿ ಪ್ರತಿಭಟಿಸುತ್ತೀರಿ. ಆದರೆ ಅದನ್ನು ಹುಡುಕಲು ಬೇರೆಲ್ಲೂ ಹೋಗಬೇಕಾಗಿಲ್ಲ, ಜಾತೀಯತೆಯನ್ನು ಅತಿಯಾಗಿ ಪಾಲಿಸುವ ನಿಮ್ಮ ದೇಶದಲ್ಲೇ ಜನಾಂಗೀಯ ಘರ್ಷಣೆಗಳನ್ನು ಕಾಣಬಹುದು.
ಇಲ್ಲಿನ ಲೈಬ್ರರಿಯೊಂದರಲ್ಲಿ ಸದಸ್ಯನಾಗಲು ಕಾರ್ಡ್ ಕೊಡಲು ಕೇಳಿದಾಗ ಅವರು, 'ನಿಮ್ಮಂತವರಿಗೆ ಕಾರ್ಡ್ ಕೊಡುವುದಿಲ್ಲ' ಅಂದರು. ನಮ್ಮಂತವರು ಅಂದರೆ ವಿದೇಶೀಯರಿಗಾ ಅಂತ ಕೇಳಿದ್ದಕ್ಕೆ, 'ಇಲ್ಲ ಆಫ್ರಿಕನ್ನರಿಗೆ' ಅಂದರು. ನೀವು ನಮ್ಮ ಜೊತೆ ಈ ರೀತಿ ವರ್ತಿಸಲು ಕಾರಣ ಅವರಿಗೆ ಗೊತ್ತು ನಮ್ಮ ಸಹಾಯಕ್ಕೆ ಇಲ್ಯಾರೂ ಇಲ್ಲ ಅಂತ. ನಾವಿಲ್ಲಿ ಅನಾಥರು, ಅಪ್ಪ-ಅಮ್ಮಂದಿರನ್ನು ಸಾವಿರಾರು ಮೈಲಿ ಆಚೆ ಬಿಟ್ಟು ಬಂದಿದ್ದೇವೆ. ನನ್ನ ಗೆಳೆಯ ಒಂದು ಸಾರಿ ಹೇಳಿದ್ದ, ನಾವು ಮಾಡಿರುವ ಅಪರಾಧ, ಕರಿಯರಾಗಿ ಹುಟ್ಟಿದ್ದು ಅಂತ." ಇದು ತಾಂಜಾನಿಯಾದಿಂದ ಇಲ್ಲಿಗೆ ಓದಲು ಬಂದ ವಿಂಗಾ ಮುಂಗ್ವೆ ಅನ್ನುವ ಒಬ್ಬ ವಿದ್ಯಾರ್ಥಿ ಬರೆದಿರುವ ಒಂದು ಸುದೀರ್ಘ ಪತ್ರದ ತುಣುಕು.
ಭಾರತದಲ್ಲಿ ಮಾತ್ರ ವಿದೇಶೀಯರ ಮೇಲೆ ಅಪರಾಧಗಳು ನಡೆಯುತ್ತಿಲ್ಲ. ಆದರೆ ಇಷ್ಟು ದೊಡ್ಡ ದೇಶದಲ್ಲಿ ಎಲ್ಲೇ ಅಪರೂಪಕ್ಕೊಮ್ಮೆ ಅಂತಹ ಘಟನೆಗಳು ಸಂಭವಿಸಿದರೂ ವಿದೇಶೀ ಮಾಧ್ಯಮಗಳು ಬೊಟ್ಟು ಮಾಡಿ ತೋರಿಸುವುದು ಇಡೀ ದೇಶದ ಕಡೆಗೆ; ಭಾರತದಂಥ 'third world' ದೇಶದಲ್ಲಿ ವಿದೇಶೀಯರಿಗೆ ರಕ್ಷಣೆಯಿಲ್ಲ, ಗೋವಾ ಅತ್ಯಾಚಾರಿಗಳ, ಗೂಂಡಾಗಳ ತಾಣ. ಹಂಪೆ ಡ್ರಗ್ ಅಡಿಕ್ಟ್ಗಳ ನೆಲೆ. ಭಾರತದಲ್ಲಿ ಬೇರೆ ದೇಶದ ಪ್ರವಾಸಿಗಳು ತುಂಬ ಎಚ್ಚರದಿಂದಿರಬೇಕು ಎಂದೆಲ್ಲಾ ವಿದೇಶೀ ಮಾಧ್ಯಮಗಳು ಬೊಬ್ಬಿಡುತ್ತವೆ. ಅದಕ್ಕೆ ಸರಿಯಾಗಿ ಗೋವಾದಲ್ಲಿ ರಷ್ಯನ್ ಹೆಂಗಸಿನ ಮೇಲೆ ಅತ್ಯಾಚಾರವಾದಾಗ ಅಲ್ಲಿನ ಲೋಕಸಭಾ ಸದಸ್ಯ ಶಾಂತಾರಾಮ್ ನಾಯಕ್ "ಅಪರಿಚಿತರ ಜೊತೆ ದಿನಗಟ್ಟಲೆ ರಾತ್ರಿಯಲ್ಲೂ ತಿರುಗುವ ಮಹಿಳೆಯ ಅತ್ಯಾಚಾರವನ್ನು ಬೇರೆಯೇ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ" ಅನ್ನುವ ಅವಿವೇಕದ ಹೇಳಿಕೆ ಕೊಟ್ಟರು. ಇಂತಹ ಹೇಳಿಕೆಗಳು ನಮ್ಮ ಜನರ ಬಗ್ಗೆ ಹೊರಗಿನವರಲ್ಲಿ ಇನ್ನೂ ಅಪನಂಬಿಕೆ ಹುಟ್ಟಿಸುತ್ತವೆ.
ವಿದೇಶೀಯರು ಎಲ್ಲೇ ಬರಲಿ ನಾವು ಅವರಿಗೆ ಯಾವ್ಯಾವ ರೀತಿಯಲ್ಲಿ ಮೋಸ ಮಾಡಲು ಸಾಧ್ಯ ಎಂದು ಎಣಿಸಲು ಪ್ರಾರಂಭಿಸುತ್ತೇವೆ. ಅವರ ಹತ್ತಿರ ದುಡ್ದು ಕೊಳೆಯುತ್ತಾ ಬಿದ್ದಿರುತ್ತದೆ ಎಂದೇ ಅಂದುಕೊಳ್ಳುತ್ತೇವೆ. ಅವರೂ ನಮ್ಮ ಹಾಗೆ ಬಡವರಿರಬಹುದು, ಹೇಗೋ ಸಾಲ ಮಾಡಿ ನಮ್ಮ ದೇಶ ನೋಡಲು, ಇಲ್ಲಿ ಓದಲು ಬಂದಿರಬಹುದು ಅನ್ನುವ ಸಾಮಾನ್ಯ ತಿಳುವಳಿಕೆ ಇಲ್ಲದವರಂತೆ ವರ್ತಿಸುತ್ತೇವೆ. ಅವರೆಲ್ಲಾ ಸರಿ ಇಲ್ಲ, ಎಷ್ಟು ಬೇಕಾದರೂ ಮದುವೆ ಆಗುತ್ತಾರಂತೆ, ಮದುವೆ ಆಗದೆಯೂ ಒಟ್ಟಿಗೆ ಇರುತ್ತಾರಂತೆ... ಹೀಗೆ ಹತ್ತು ಹಲವು ಅಂತೆ-ಕಂತೆಗಳನ್ನು ಕಟ್ಟಿಕೊಂಡು ಅವರನ್ನೆಲ್ಲ ಅಪರಾಧಿಗಳನ್ನಾಗಿ ಮಾಡುವ ಬದಲು, ನಾವ್ಯಾಕೆ ಅವರ ಬದುಕಿನ ರೀತಿಯೇ ಹಾಗೆ ಅಂತ ಸುಮ್ಮನಿರಬಾರದು, ಅವರನ್ನು ಒಪ್ಪಿಕೊಳ್ಳಬಾರದು?
ಹಾಗಂತ ಇಲ್ಲಿ ಬರುವ ವಿದೇಶೀಯರೆಲ್ಲ ಇಲ್ಲಿನ ಜನರ ಜೊತೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆಂದಲ್ಲ. ಉದಾಹರಣೆಗೆ ಮೈಸೂರು, ಬೆಂಗಳೂರಿನಲ್ಲಿ ಬೇರೆ ದೇಶದವರು ಜಾಸ್ತಿ ಇರುವ ಕಡೆ ಅವರು ಕಲಿಯಲು ಬರುವ ಯೋಗ ಶಾಲೆಗಳಲ್ಲಿ, ಗೆಸ್ಟ್ ಹೌಸ್ಗಳಲ್ಲಿ, ಕೆಲವು ಕೆಫೆಗಳಲ್ಲಿ "ಭಾರತೀಯರಿಗೆ ಪ್ರವೇಶವಿಲ್ಲ." ತಮ್ಮ ಜೀವನದ ಕಟ್ಟಕಡೆಯ ಹಂತದಲ್ಲಿ ಭಾರತಕ್ಕೆ ಬರುವ ರೋಗಿಗಳು ದುಡ್ಡಿಗಾಗಿ ಡ್ರಗ್ ಕಳ್ಳಸಾಗಾಣಿಕೆ ಮಾಡಲು ಸಹಾಯ ಮಾಡುತ್ತಿರುವುದು ದೆಹಲಿ ಹೈಕೋರ್ಟ್ ಬೆಳಕಿಗೆ ತಂದಿದೆ. ಆದರೆ ಹೊರದೇಶಗಳಿಂದ, ಬೇರೆ ಸಂಸ್ಕೃತಿಯಿಂದ ಬಂದ ಎಲ್ಲರೂ ಕೆಟ್ಟವರಲ್ಲ. ಅವರ ಆಚಾರಗಳು, ನಡವಳಿಕೆಗಳು ನಮಗೆ ಸರಿಹೊಂದದಿದ್ದರೆ ಅವರನ್ನು ಹೀಗಳೆಯುವ ಹಕ್ಕು ನಮಗಿಲ್ಲ ಅಲ್ಲವೇ? ನಮ್ಮ ದೇಶವನ್ನು, ನಮ್ಮ ಸಂಸ್ಕೃತಿಯನ್ನು ಇಷ್ಟಪಟ್ಟುಕೊಂಡು, ಅವರ ಹುಟ್ಟಿದ ನೆಲ, ಜನ, ಭಾಷೆ, ಸಂಸ್ಕೃತಿ, ಮನೆ, ಸಂಬಂಧಗಳು ಎಲ್ಲವನ್ನು ತೊರೆದು ಇಲ್ಲಿನ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುವ, cultural shocks ತಡೆದುಕೊಳ್ಳುವ ವಿದೇಶೀಯರು ನಮ್ಮ ಅತಿಥಿಗಳಲ್ಲವೇ?
Tuesday, November 23, 2010
Friday, November 19, 2010
Thanks
I was going through all the comments that I got for the articles. I honestly acknowledge and believe that my readers have greater thoughtfulness and intelligence than I do. And the responses! Thanks for so many good responses, both chiding and complimentary in nature. Your compliments make me want to be a better writer and your scoldings make me want to be more well-read and increase my knowledge. Because if there is one thing I am jealous of in this world, that is people with more knowledge than me. I don't care for wealth or beauty, but only for knowledge. So I am happy to have such readers. Thank you.
Tuesday, October 12, 2010
ಮಿಗ್ ವಿಮಾನಗಳು ’ಹಾರಾಡುವ ಶವಪೆಟ್ಟಿಗೆ’ಗಳಾಗೇ ಉಳಿಯಬೇಕೆ?
ಸೆಪ್ಟೆಂಬರ್ 23 ಬಂದು ಹೋಯಿತು. ನಲವತ್ತೈದು ವರ್ಷಗಳ ಹಿಂದೆ (1965) ಭಾರತ-ಪಾಕಿಸ್ತಾನ ಯುದ್ಧ ಮುಗಿದ ಆ ಘಳಿಗೆ ಯಾರಿಗೂ ನೆನಪಾಗಲಿಲ್ಲ. ಮೈಕ್ ಕೈಗೆ ಸಿಕ್ಕಿದ ಕೂಡಲೆ ದೇಶಪ್ರೇಮದ ಭಾಷಣ ಬಿಗಿಯುವ ರಾಜಕಾರಣಿಗಳಿಗೂ, ಸುದ್ದಿಯೇ ಅಲ್ಲದಿದ್ದನ್ನೂ ಗಂಟೆಗಟ್ಟಲೆ ತೋರಿಸುವ ಟಿವಿ ಚಾನಲ್ಗಳಿಗೂ, ಪತ್ರಿಕೆಯವರಿಗೂ ಆ ಯುದ್ಧ ಮರೆತುಹೋಗಿತ್ತು. ಅಂದು 1,800sq.km ನೆಲವನ್ನು ಆಕ್ರಮಿಸಿಕೊಂಡಿದ್ದರೂ ಭಾರತ 550sq.km ಆಕ್ರಮಿಸಿಕೊಂಡಿದ್ದ ಪಾಕ್ಗಿಂತ ತಂತ್ರಜ್ಞಾನದಲ್ಲಿ ಹಿಂದಿತ್ತು. ಆದರೂ ನಾವು ಗೆದ್ದಿದ್ದು ಮೆಷಿನ್ಗಳ ಸಹಾಯದಿಂದಲ್ಲ, ಅವಡುಗಚ್ಚಿ ಕಾದಾಡಿದ ಯೋಧರಿಂದ. 1962ರಲ್ಲಿ ಭಾರತದ ಸೈನಿಕರು ಚೀನಾ ವಿರುದ್ಧ ಹೋರಾಡುತ್ತಿದಾಗ ಅವರ ಕೈಯಲ್ಲಿದ್ದುದು ಕೇವಲ ಶತಮಾನದಷ್ಟು ಹಳೆಯ .303 ಲೀ ಎನ್ಫೀಲ್ಡ್ ರೈಫಲ್ಗಳು. ಆದರೆ ಚೀನಿಯರ ಕೈಯಲ್ಲಿ ಸೆಮಿ-ಆಟೊಮ್ಯಾಟಿಕ್ಗಳಿದ್ದವು. ನಮ್ಮ ಗನ್ ತಯಾರಿಸುವ ಫ್ಯಾಕ್ಟರಿಗಳು ಕಾಫಿ ಮೇಕರ್ಗಳನ್ನು ತಯಾರಿಸುವುದರಲ್ಲಿ ಮಗ್ನರಾಗಿದ್ದವು. ನಮ್ಮ ಸೈನಿಕರಿಗೆ ಆಗ ಇದ್ದ ಆಧುನಿಕ ಆಯುಧಗಳ, ಉತ್ತಮ ಗುಣಮಟ್ಟದ ವಾಹನಗಳ, ವಿಮಾನಗಳ ಕೊರತೆ ಈಗಲೂ ಕಮ್ಮಿಯಾಗಿಲ್ಲ. ಒಂದೇ ವ್ಯತ್ಯಾಸವೆಂದರೆ ಆಗ ನಮ್ಮ ವಾಯು ಸೇನೆಯ ಸೈನಿಕರು ಯುದ್ಧದಲ್ಲಿ ಸಾಯುತ್ತಿದ್ದರು, ಈಗ ಶಾಂತಿಯ ಸಮಯದಲ್ಲಿ ತಮ್ಮ ವಿಮಾನದಲ್ಲಿನ ತಾಂತ್ರಿಕ ದೋಷಗಳಿಂದಾಗಿ ಸಾಯುತ್ತಿದ್ದಾರೆ.
ಇದೆಲ್ಲ ನೆನಪಾಗಿದ್ದು ಮೊನ್ನೆ ಅದೇ ಸೆಪ್ಟೆಂಬರ್ 23ರಂದು ಒಂದೇ ದಿನದಲ್ಲಿ ನಾಲ್ಕು ಮಿಗ್ ವಿಮಾನಗಳು (ಮೂರು ಮಿಗ್-21, ಒಂದು ಮಿಗ್-29 ) ಮೂರು ದೇಶಗಳಲ್ಲಿ ಪತನವಾದಾಗ. ಮಿಗ್-27 ವಿಮಾನ ಪಶ್ಚಿಮ ಬಂಗಾಳದ ಕಾಲೈಕುಂಡ ವಾಯು ನೆಲೆಯ ಹತ್ತಿರ ಅವಘಡಕ್ಕೀಡಾಯಿತು. ಸಮಾಧಾನದ ಸಂಗತಿಯೆಂದರೆ ಅದರಲ್ಲಿದ್ದ ಪೈಲಟ್ ಸ್ಕ್ವಾಡ್ರನ್ ಲೀಡರ್ ಮಹಾಪಾತ್ರ ಪ್ಯಾರಾಚೂಟ್ ಮೂಲಕ ಕೆಳಗೆ ಹಾರಿ ಜೀವ ಉಳಿಸಿಕೊಂಡರು. ಇದು ನಮ್ಮ ದೇಶದಲ್ಲಿ ಈ ವರ್ಷದ ಮೂರನೇ ಮಿಗ್-27 ಅಪಘಾತ. ಫೆಬ್ರವರಿಯಲ್ಲಿ ನಡೆದ ಮತ್ತೊಂದು ಮಿಗ್-27 ಪತನದಲ್ಲಿ ಅದರ ಪೈಲಟ್ ಸಾವನ್ನಪ್ಪಿದರು, ಜುಲೈನ ಅಪಘಾತದಲ್ಲಿ ಒಬ್ಬರು ಸತ್ತು, ಪೈಲಟ್ ಸಾಕೇತ್ ವರ್ಮ ಸೇರಿದಂತೆ ಹತ್ತು ಜನ ಗಾಯಗೊಂಡರು. ಮಿಗ್ ಅಪಘಾತ ಸರಣಿಯಲ್ಲಿ ಇದು ಮೊದಲೂ ಅಲ್ಲ, ಬಹುಶ ಕೊನೆಯೂ ಅಲ್ಲ. ಇಂತಹ ಹೆಚ್ಚಿನ ಅವಘಡಗಳಿಗೆ ವರ್ಷಗಳಿಂದ ಸರಕಾರ ಕೊಡುತ್ತಿರುವ ಕಾರಣ ತಾಂತ್ರಿಕ ವೈಫಲ್ಯ ಅಥವಾ pilot error. ಒಂದು ಉದಾಹರಣೆ ಏಪ್ರಿಲ್ 4, 1996ರಂದು ಆದ ಮಿಗ್ ಪತನ. ವಿಂಗ್ ಕಮಾಂಡರ್ ಎನ್. ಕೆ. ರಾವ್ ನಡೆಸುತ್ತಿದ್ದ ಮಿಗ್-21FL ವಿಮಾನ ಇಂಜಿನ್ ತೊಂದರೆಯಿಂದಾಗಿ ಕೆಳಗುರುಳಿತು. ಕೆಳಗೆ ಬೀಳುವ ಮುನ್ನ ತನ್ನ ಸೀಟ್ನಿಂದ ಹೊರಗೆ ಬರಲು ರಾವ್ ಯತ್ನಿಸಿದಾಗ ತಾಂತ್ರಿಕ ತೊಂದರೆಯಿಂದಾಗಿ ಅಲ್ಲೇ ಸಿಕ್ಕಿ ಹಾಕಿಕೊಂಡು ವಿಮಾನದ ಜೊತೆಗೆ ಸುಟ್ಟುಹೋದರು. ದುರಂತದ ಇನ್ನಿತರ ತಾಂತ್ರಿಕ ಕಾರಣಗಳಲ್ಲಿ ಒಂದು, ಪೈಲಟ್ ಸೀಟು ಯಾವುದೋ ಹಳೇ ದುರಂತಕ್ಕೀಡಾದ ವಿಮಾನದಿಂದ ತೆಗೆದು ಅಳವಡಿಸಲಾಗಿತ್ತು ಮತ್ತು ಅಪಘಾತದ ಸಮಯದಲ್ಲಿ ಮೊದಲೇ ಹಳತಾಗಿದ್ದ ಸೀಟು ಅರ್ಧ ಮುರಿದುಹೋಗಿ ಪೈಲಟ್ ಅಲ್ಲೇ ಸಿಕ್ಕಿಹಾಕಿಕೊಳ್ಳುವುದಕ್ಕೆ ಕಾರಣವಾಯ್ತು.
ಮಾರ್ಚ್ 1, 2007ರಂದು ಸ್ಕ್ವಾಡ್ರನ್ ಲೀಡರ್ ಸ್ವಪ್ನಿಲ್ ಸಾಕಾರ್ ಪಾಂಡೆ, ತಾನು ಅಭ್ಯಾಸಕ್ಕೆಂದು ನಡೆಸುತ್ತಿದ್ದ ಮಿಗ್-21 ವಿಮಾನದಲ್ಲಿ ಕಂಡ ತಾಂತ್ರಿಕ ದೋಷದಿಂದ ಜನನಿಬಿಡ ಪ್ರದೇಶದಲ್ಲಿ ವಿಮಾನ ಬೀಳುವುದನ್ನು ತಪ್ಪಿಸಲು ಹೋಗಿ ಕಾಡಿನಲ್ಲಿ ಅಪ್ಪಳಿಸಿ ತಾನೂ ಸಾವಿಗೀಡಾದರು. ಇಂತಹ ತಾಂತ್ರಿಕ ಕಾರಣಗಳು, ಮಿಗ್ ವಿಮಾನಗಳಿಗೆ ಅಳವಡಿಸುವ ಕಡಿಮೆ ಗುಣಮಟ್ಟದ ಹಳೆ ಬಿಡಿ ಭಾಗಗಳು ಕೇವಲ ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿಲ್ಲ, ನೂರಾರು ಜನರ, ಜೊತೆಗೆ ನಮ್ಮ ವಾಯು ಸೇನೆಯ ನುರಿತ ಸೈನಿಕರೂ, ಆಗ ತಾನೆ ಹೊಸ ಕನಸುಗಳನ್ನು ಇಟ್ಟುಕೊಂಡು ವಾಯು ಸೇನೆ ಸೇರುವ ಯುವ ಪೈಲಟ್ಗಳೂ ಕಾರಣವಿಲ್ಲದೆ ಬಲಿಯಾಗುತ್ತಿದ್ದಾರೆ.
ಇಂತಹ ಮಿಗ್ ಅಪಘಾತಗಳಲ್ಲಿ ಅನ್ಯಾಯವಾಗಿ ಸಾವಿಗೀಡಾದ ಪೈಲಟ್ಗಳ ನೆನಪಿಗಾಗಿ ಹುಟ್ಟಿದ್ದು ಅಭಿಜಿತ್ ಏರ್ ಸೇಫ್ಟಿ ಫೌಂಡೇಷನ್. 2001ರಲ್ಲಿ ಮಿಗ್ ಪತನವಾಗಿ ಸಾವಿಗೀಡಾದ ಫ್ಲೈಟ್ ಲೆಫ್ಟಿನೆಂಟ್ ಅಭಿಜಿತ್ ಅನಿಲ್ ಗಾಡ್ಗಿಲ್ ತಾಯಿ ಕವಿತಾ ಗಾಡ್ಗಿಲ್ ಅದರ ಸಂಸ್ಥಾಪಕಿ. ತನ್ನ ಮಗನ ತಪ್ಪಿನಿಂದಾಗಿಯೇ ಅವರ ವಿಮಾನ ಕೆಳಗುರುಳಿತು ಎಂದು ವಾಯು ಸೇನೆ ರಿಪೋರ್ಟ್ ಕೊಟ್ಟಾಗ ಅದನ್ನು ಒಪ್ಪದ ಕವಿತಾ ತನ್ನ ಮಗನಂತೆಯೇ ಅನಾವಶ್ಯಕವಾಗಿ ವಿಮಾನ ಅವಘಡಗಳಲ್ಲಿ ಸಾವನ್ನಪ್ಪಿದವರ ಪರ ಹೋರಾಡಲು ಸ್ಥಾಪಿಸಿದ ಸಂಸ್ಥೆ ಇದು. ಈ ಸಂಸ್ಥೆಯ ಹೋರಾಟ ಮಿಗ್ ವಿಮಾನಗಳ ಬಳಕೆಯ ವಿರುದ್ಧ ಒಂಬತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಮಿಗ್ ವಿಮಾನಗಳು ಎರಡನೇ ಮಹಾಯುದ್ಧದ ಕಾಲದಿಂದ ತುಂಬಾ ಒಳ್ಳೆಯ fighter jetಗಳೆಂದು ಖ್ಯಾತಿ ಗಳಿಸಿದ್ದವು. ಅವುಗಳ credibility ಕಡಿಮೆಯಾಗುತ್ತಾ ಹೋದದ್ದು 1991ರ ಅಮೇರಿಕಾ-ರಷ್ಯಾ ಶೀತಲ ಯುದ್ಧ ಮುಗಿದ ನಂತರ. ರಷ್ಯನ್ ವಾಯು ಸೇನೆಯ ಬಳಿಯಿರುವ ಇನ್ನೂರು ಮಿಗ್-29 ವಿಮಾನಗಳಲ್ಲಿ ತೊಂಬತ್ತು ವಿಮಾನಗಳಲ್ಲಿ ಲೋಹ ಸವೆಯುವಿಕೆ (metal corrosion) ಕಂಡು ಮಿಗ್ ವಿಮಾನಗಳ ಹಾರಾಟವನ್ನು ನಿಲಿಸಿದೆ. ಭಾರತದಲ್ಲಿ ಇದ್ದ ನೂರರಷ್ಟು ಮಿಗ್-27 ವಿಮಾನಗಳ ರಷ್ಯನ್-ವಿನ್ಯಾಸದ ಇಂಜಿನ್ಗಳಲ್ಲಿ ತಾಂತ್ರಿಕ ದೋಷಗಳು ಕಂಡಾಗ ಅವುಗಳ ಹಾರಾಟವನ್ನು ಎರಡು ವರ್ಷಗಳ ಕಾಲ ನಿಲ್ಲಿಸಲಾಯಿತು. ಹೀಗಿರುವಾಗ ಇಲ್ಲಿಯವರೆಗೆ ನಮ್ಮ ದೇಶದಲ್ಲಿ ನಾನೂರಕ್ಕೂ ಹೆಚ್ಚು ಅವಗಢಗಳಿಗೆ ತುತ್ತಾಗಿರುವ, ನೂರಾರು ಪೈಲಟ್ಗಳ ಸಾವಿಗೆ ಕಾರಣವಾಗಿರುವ ಮತ್ತು ಹಾರಾಡುವ ಶವಪೆಟ್ಟಿಗೆ (flying coffin) ಎಂದೇ ಕರೆಸಿಕೊಳ್ಳುತ್ತಿರುವ ರಷ್ಯನ್ ಮಿಗ್-21 ಆಗಲೀ ಅಥವಾ ಅದರ ಬೇರೆ ಅವತರಣಿಕೆಗಳಾದ ಮಿಗ್-23, 27 ಇತ್ಯಾದಿ ವಿಮಾನಗಳ ಆಮದನ್ನು ಇನ್ನೂ ಯಾಕೆ ನಮ್ಮ ವಾಯು ಸೇನೆ ನಿಲ್ಲಿಸಿಲ್ಲ?
ಮಿಗ್ ವಿಮಾನ ದುರಂತಗಳನ್ನು ತನಿಖೆ ಮಾಡಲೆಂದೇ ಸರಕಾರ ಆರು ಸಮಿತಿಗಳನ್ನು ರಚಿಸಿ ಇಪ್ಪತ್ತು ವರ್ಷಗಳಾದವು. ಆದರೂ ಯಾವುದೇ ನಿರ್ದಿಷ್ಟವಾದ ಕ್ರಮಗಳನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ. 1982ರಲ್ಲಿ ಲಾ ಫಾಂಟೇನ್ ಸಮಿತಿ ವರದಿ ಪ್ರಕಾರ ಮಿಗ್ ಅಪಘಾತಗಳಿಗೆ ಮುಖ್ಯ ಕಾರಣ ಪೈಲಟ್ ತರಬೇತಿಯಲ್ಲಿರುವ ಕೊರತೆ. ವಾಯು ಸೇನೆಯ ಹತ್ತಿರ ಮಿಗ್ನಂತಹ ಆಧುನಿಕ ಅತಿ ವೇಗದ ಜೆಟ್ಗಳನ್ನು ನಡೆಸಲು ಹೊಸ ಪೈಲಟ್ಗಳಿಗೆ ತರಬೇತಿ ಕೊಡಲು ಸರಿಯಾದ ವಿಮಾನಗಳಿಲ್ಲ. ಈಗ ನಮ್ಮ ಸೇನೆಯ ಮುಂದೆ ಮಿಗ್ ವಿಮಾನಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಆಯ್ಕೆಗಳು ಅಮೇರಿಕಾದ F-16, F/A-18 Hornets. ಅಮೇರಿಕಾದ ಜೆಟ್ಗಳು ತುಂಬಾ ದುಬಾರಿ ಮಾತ್ರವಲ್ಲದೆ ಅವುಗಳ ಬಿಡಿ ಭಾಗಗಳಿಗೆ ಅಮೇರಿಕಾವನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ, ಅದರ ಅಂಕೆಗೊಳಗಾಗಬೇಕಾಗುತ್ತದೆ. ಅದಕ್ಕಾಗಿಯೇ ಭಾರತೀಯ ವಾಯು ಸೇನೆ ಮಿಗ್-35 ಮತ್ತು Mirage 2000-9 ವಿಮಾನಗಳನ್ನೇ ನಂಬಿಕೊಂಡಿದೆ. ಆದರೆ ಇಲ್ಲಿವರೆಗೆ ಮಿಗ್ ಅಪಘಾತಗಳಿಂದಾಗಿಯೇ ವಾಯು ಸೇನೆ ಹತ್ತರಿಂದ ಇಪ್ಪತ್ತು ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈಗ ಸೇನೆ Search and Rescue System (SRS) ಎನ್ನುವ ಅಪಘಾತಕ್ಕೀಡಾದ ವಿಮಾನಗಳ ಅವಶೇಷಗಳು ಮತ್ತು ಪೈಲಟ್ಗಳನ್ನು ಪತ್ತೆ ಹಚ್ಚುವ ಸಾಧನವನ್ನು ಖರೀದಿಸುತ್ತಿದೆ. ಇದರಿಂದಾದರೂ ತಕ್ಷಣ ಸಹಾಯ ದೊರಕದೆ ಸಾಯುವ ಪೈಲಟ್ಗಳ ಸಂಖ್ಯೆ ಕಡಿಮೆಯಾಗಬಹುದೇನೋ.
"ಭಾರತ ಬಾಂಬ್ ತಯಾರಿಸಿದರೆ, ಹುಲ್ಲು, ಸೊಪ್ಪು ತಿಂದಾದರೂ, ಉಪವಾಸ ಬಿದ್ದಾದರೂ ಸರಿ ನಾವೂ ಬಾಂಬನ್ನು ತಯಾರಿಸುತ್ತೇವೆ." ಇದನ್ನು ಹೇಳಿದ್ದು ಪಾಕ್ ಪ್ರಧಾನಿಯಾಗಿದ್ದ ಜುಲ್ಫಿಕರ್ ಅಲಿ ಭುಟ್ಟೋ. ಭಾರತದ ಶತ್ರುಗಳು ಈ ತರ ನಮ್ಮ ಮೇಲೆ ಮುಗಿಬೀಳಲು, ನಮ್ಮ ಸರಿಸಮ ಬರಲು ಕಾಯುತ್ತಿರುವಾಗ ನಮ್ಮೊಳಗಿನ ತೊಂದರೆಗಳನ್ನು ನಾವೇ ಆದಷ್ಟು ಬೇಗ ಸರಿಪಡಿಸಿಕೊಳ್ಳಬೇಕಲ್ಲವೇ?
ಇದೆಲ್ಲ ನೆನಪಾಗಿದ್ದು ಮೊನ್ನೆ ಅದೇ ಸೆಪ್ಟೆಂಬರ್ 23ರಂದು ಒಂದೇ ದಿನದಲ್ಲಿ ನಾಲ್ಕು ಮಿಗ್ ವಿಮಾನಗಳು (ಮೂರು ಮಿಗ್-21, ಒಂದು ಮಿಗ್-29 ) ಮೂರು ದೇಶಗಳಲ್ಲಿ ಪತನವಾದಾಗ. ಮಿಗ್-27 ವಿಮಾನ ಪಶ್ಚಿಮ ಬಂಗಾಳದ ಕಾಲೈಕುಂಡ ವಾಯು ನೆಲೆಯ ಹತ್ತಿರ ಅವಘಡಕ್ಕೀಡಾಯಿತು. ಸಮಾಧಾನದ ಸಂಗತಿಯೆಂದರೆ ಅದರಲ್ಲಿದ್ದ ಪೈಲಟ್ ಸ್ಕ್ವಾಡ್ರನ್ ಲೀಡರ್ ಮಹಾಪಾತ್ರ ಪ್ಯಾರಾಚೂಟ್ ಮೂಲಕ ಕೆಳಗೆ ಹಾರಿ ಜೀವ ಉಳಿಸಿಕೊಂಡರು. ಇದು ನಮ್ಮ ದೇಶದಲ್ಲಿ ಈ ವರ್ಷದ ಮೂರನೇ ಮಿಗ್-27 ಅಪಘಾತ. ಫೆಬ್ರವರಿಯಲ್ಲಿ ನಡೆದ ಮತ್ತೊಂದು ಮಿಗ್-27 ಪತನದಲ್ಲಿ ಅದರ ಪೈಲಟ್ ಸಾವನ್ನಪ್ಪಿದರು, ಜುಲೈನ ಅಪಘಾತದಲ್ಲಿ ಒಬ್ಬರು ಸತ್ತು, ಪೈಲಟ್ ಸಾಕೇತ್ ವರ್ಮ ಸೇರಿದಂತೆ ಹತ್ತು ಜನ ಗಾಯಗೊಂಡರು. ಮಿಗ್ ಅಪಘಾತ ಸರಣಿಯಲ್ಲಿ ಇದು ಮೊದಲೂ ಅಲ್ಲ, ಬಹುಶ ಕೊನೆಯೂ ಅಲ್ಲ. ಇಂತಹ ಹೆಚ್ಚಿನ ಅವಘಡಗಳಿಗೆ ವರ್ಷಗಳಿಂದ ಸರಕಾರ ಕೊಡುತ್ತಿರುವ ಕಾರಣ ತಾಂತ್ರಿಕ ವೈಫಲ್ಯ ಅಥವಾ pilot error. ಒಂದು ಉದಾಹರಣೆ ಏಪ್ರಿಲ್ 4, 1996ರಂದು ಆದ ಮಿಗ್ ಪತನ. ವಿಂಗ್ ಕಮಾಂಡರ್ ಎನ್. ಕೆ. ರಾವ್ ನಡೆಸುತ್ತಿದ್ದ ಮಿಗ್-21FL ವಿಮಾನ ಇಂಜಿನ್ ತೊಂದರೆಯಿಂದಾಗಿ ಕೆಳಗುರುಳಿತು. ಕೆಳಗೆ ಬೀಳುವ ಮುನ್ನ ತನ್ನ ಸೀಟ್ನಿಂದ ಹೊರಗೆ ಬರಲು ರಾವ್ ಯತ್ನಿಸಿದಾಗ ತಾಂತ್ರಿಕ ತೊಂದರೆಯಿಂದಾಗಿ ಅಲ್ಲೇ ಸಿಕ್ಕಿ ಹಾಕಿಕೊಂಡು ವಿಮಾನದ ಜೊತೆಗೆ ಸುಟ್ಟುಹೋದರು. ದುರಂತದ ಇನ್ನಿತರ ತಾಂತ್ರಿಕ ಕಾರಣಗಳಲ್ಲಿ ಒಂದು, ಪೈಲಟ್ ಸೀಟು ಯಾವುದೋ ಹಳೇ ದುರಂತಕ್ಕೀಡಾದ ವಿಮಾನದಿಂದ ತೆಗೆದು ಅಳವಡಿಸಲಾಗಿತ್ತು ಮತ್ತು ಅಪಘಾತದ ಸಮಯದಲ್ಲಿ ಮೊದಲೇ ಹಳತಾಗಿದ್ದ ಸೀಟು ಅರ್ಧ ಮುರಿದುಹೋಗಿ ಪೈಲಟ್ ಅಲ್ಲೇ ಸಿಕ್ಕಿಹಾಕಿಕೊಳ್ಳುವುದಕ್ಕೆ ಕಾರಣವಾಯ್ತು.
ಮಾರ್ಚ್ 1, 2007ರಂದು ಸ್ಕ್ವಾಡ್ರನ್ ಲೀಡರ್ ಸ್ವಪ್ನಿಲ್ ಸಾಕಾರ್ ಪಾಂಡೆ, ತಾನು ಅಭ್ಯಾಸಕ್ಕೆಂದು ನಡೆಸುತ್ತಿದ್ದ ಮಿಗ್-21 ವಿಮಾನದಲ್ಲಿ ಕಂಡ ತಾಂತ್ರಿಕ ದೋಷದಿಂದ ಜನನಿಬಿಡ ಪ್ರದೇಶದಲ್ಲಿ ವಿಮಾನ ಬೀಳುವುದನ್ನು ತಪ್ಪಿಸಲು ಹೋಗಿ ಕಾಡಿನಲ್ಲಿ ಅಪ್ಪಳಿಸಿ ತಾನೂ ಸಾವಿಗೀಡಾದರು. ಇಂತಹ ತಾಂತ್ರಿಕ ಕಾರಣಗಳು, ಮಿಗ್ ವಿಮಾನಗಳಿಗೆ ಅಳವಡಿಸುವ ಕಡಿಮೆ ಗುಣಮಟ್ಟದ ಹಳೆ ಬಿಡಿ ಭಾಗಗಳು ಕೇವಲ ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿಲ್ಲ, ನೂರಾರು ಜನರ, ಜೊತೆಗೆ ನಮ್ಮ ವಾಯು ಸೇನೆಯ ನುರಿತ ಸೈನಿಕರೂ, ಆಗ ತಾನೆ ಹೊಸ ಕನಸುಗಳನ್ನು ಇಟ್ಟುಕೊಂಡು ವಾಯು ಸೇನೆ ಸೇರುವ ಯುವ ಪೈಲಟ್ಗಳೂ ಕಾರಣವಿಲ್ಲದೆ ಬಲಿಯಾಗುತ್ತಿದ್ದಾರೆ.
ಇಂತಹ ಮಿಗ್ ಅಪಘಾತಗಳಲ್ಲಿ ಅನ್ಯಾಯವಾಗಿ ಸಾವಿಗೀಡಾದ ಪೈಲಟ್ಗಳ ನೆನಪಿಗಾಗಿ ಹುಟ್ಟಿದ್ದು ಅಭಿಜಿತ್ ಏರ್ ಸೇಫ್ಟಿ ಫೌಂಡೇಷನ್. 2001ರಲ್ಲಿ ಮಿಗ್ ಪತನವಾಗಿ ಸಾವಿಗೀಡಾದ ಫ್ಲೈಟ್ ಲೆಫ್ಟಿನೆಂಟ್ ಅಭಿಜಿತ್ ಅನಿಲ್ ಗಾಡ್ಗಿಲ್ ತಾಯಿ ಕವಿತಾ ಗಾಡ್ಗಿಲ್ ಅದರ ಸಂಸ್ಥಾಪಕಿ. ತನ್ನ ಮಗನ ತಪ್ಪಿನಿಂದಾಗಿಯೇ ಅವರ ವಿಮಾನ ಕೆಳಗುರುಳಿತು ಎಂದು ವಾಯು ಸೇನೆ ರಿಪೋರ್ಟ್ ಕೊಟ್ಟಾಗ ಅದನ್ನು ಒಪ್ಪದ ಕವಿತಾ ತನ್ನ ಮಗನಂತೆಯೇ ಅನಾವಶ್ಯಕವಾಗಿ ವಿಮಾನ ಅವಘಡಗಳಲ್ಲಿ ಸಾವನ್ನಪ್ಪಿದವರ ಪರ ಹೋರಾಡಲು ಸ್ಥಾಪಿಸಿದ ಸಂಸ್ಥೆ ಇದು. ಈ ಸಂಸ್ಥೆಯ ಹೋರಾಟ ಮಿಗ್ ವಿಮಾನಗಳ ಬಳಕೆಯ ವಿರುದ್ಧ ಒಂಬತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಮಿಗ್ ವಿಮಾನಗಳು ಎರಡನೇ ಮಹಾಯುದ್ಧದ ಕಾಲದಿಂದ ತುಂಬಾ ಒಳ್ಳೆಯ fighter jetಗಳೆಂದು ಖ್ಯಾತಿ ಗಳಿಸಿದ್ದವು. ಅವುಗಳ credibility ಕಡಿಮೆಯಾಗುತ್ತಾ ಹೋದದ್ದು 1991ರ ಅಮೇರಿಕಾ-ರಷ್ಯಾ ಶೀತಲ ಯುದ್ಧ ಮುಗಿದ ನಂತರ. ರಷ್ಯನ್ ವಾಯು ಸೇನೆಯ ಬಳಿಯಿರುವ ಇನ್ನೂರು ಮಿಗ್-29 ವಿಮಾನಗಳಲ್ಲಿ ತೊಂಬತ್ತು ವಿಮಾನಗಳಲ್ಲಿ ಲೋಹ ಸವೆಯುವಿಕೆ (metal corrosion) ಕಂಡು ಮಿಗ್ ವಿಮಾನಗಳ ಹಾರಾಟವನ್ನು ನಿಲಿಸಿದೆ. ಭಾರತದಲ್ಲಿ ಇದ್ದ ನೂರರಷ್ಟು ಮಿಗ್-27 ವಿಮಾನಗಳ ರಷ್ಯನ್-ವಿನ್ಯಾಸದ ಇಂಜಿನ್ಗಳಲ್ಲಿ ತಾಂತ್ರಿಕ ದೋಷಗಳು ಕಂಡಾಗ ಅವುಗಳ ಹಾರಾಟವನ್ನು ಎರಡು ವರ್ಷಗಳ ಕಾಲ ನಿಲ್ಲಿಸಲಾಯಿತು. ಹೀಗಿರುವಾಗ ಇಲ್ಲಿಯವರೆಗೆ ನಮ್ಮ ದೇಶದಲ್ಲಿ ನಾನೂರಕ್ಕೂ ಹೆಚ್ಚು ಅವಗಢಗಳಿಗೆ ತುತ್ತಾಗಿರುವ, ನೂರಾರು ಪೈಲಟ್ಗಳ ಸಾವಿಗೆ ಕಾರಣವಾಗಿರುವ ಮತ್ತು ಹಾರಾಡುವ ಶವಪೆಟ್ಟಿಗೆ (flying coffin) ಎಂದೇ ಕರೆಸಿಕೊಳ್ಳುತ್ತಿರುವ ರಷ್ಯನ್ ಮಿಗ್-21 ಆಗಲೀ ಅಥವಾ ಅದರ ಬೇರೆ ಅವತರಣಿಕೆಗಳಾದ ಮಿಗ್-23, 27 ಇತ್ಯಾದಿ ವಿಮಾನಗಳ ಆಮದನ್ನು ಇನ್ನೂ ಯಾಕೆ ನಮ್ಮ ವಾಯು ಸೇನೆ ನಿಲ್ಲಿಸಿಲ್ಲ?
ಮಿಗ್ ವಿಮಾನ ದುರಂತಗಳನ್ನು ತನಿಖೆ ಮಾಡಲೆಂದೇ ಸರಕಾರ ಆರು ಸಮಿತಿಗಳನ್ನು ರಚಿಸಿ ಇಪ್ಪತ್ತು ವರ್ಷಗಳಾದವು. ಆದರೂ ಯಾವುದೇ ನಿರ್ದಿಷ್ಟವಾದ ಕ್ರಮಗಳನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ. 1982ರಲ್ಲಿ ಲಾ ಫಾಂಟೇನ್ ಸಮಿತಿ ವರದಿ ಪ್ರಕಾರ ಮಿಗ್ ಅಪಘಾತಗಳಿಗೆ ಮುಖ್ಯ ಕಾರಣ ಪೈಲಟ್ ತರಬೇತಿಯಲ್ಲಿರುವ ಕೊರತೆ. ವಾಯು ಸೇನೆಯ ಹತ್ತಿರ ಮಿಗ್ನಂತಹ ಆಧುನಿಕ ಅತಿ ವೇಗದ ಜೆಟ್ಗಳನ್ನು ನಡೆಸಲು ಹೊಸ ಪೈಲಟ್ಗಳಿಗೆ ತರಬೇತಿ ಕೊಡಲು ಸರಿಯಾದ ವಿಮಾನಗಳಿಲ್ಲ. ಈಗ ನಮ್ಮ ಸೇನೆಯ ಮುಂದೆ ಮಿಗ್ ವಿಮಾನಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಆಯ್ಕೆಗಳು ಅಮೇರಿಕಾದ F-16, F/A-18 Hornets. ಅಮೇರಿಕಾದ ಜೆಟ್ಗಳು ತುಂಬಾ ದುಬಾರಿ ಮಾತ್ರವಲ್ಲದೆ ಅವುಗಳ ಬಿಡಿ ಭಾಗಗಳಿಗೆ ಅಮೇರಿಕಾವನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ, ಅದರ ಅಂಕೆಗೊಳಗಾಗಬೇಕಾಗುತ್ತದೆ. ಅದಕ್ಕಾಗಿಯೇ ಭಾರತೀಯ ವಾಯು ಸೇನೆ ಮಿಗ್-35 ಮತ್ತು Mirage 2000-9 ವಿಮಾನಗಳನ್ನೇ ನಂಬಿಕೊಂಡಿದೆ. ಆದರೆ ಇಲ್ಲಿವರೆಗೆ ಮಿಗ್ ಅಪಘಾತಗಳಿಂದಾಗಿಯೇ ವಾಯು ಸೇನೆ ಹತ್ತರಿಂದ ಇಪ್ಪತ್ತು ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈಗ ಸೇನೆ Search and Rescue System (SRS) ಎನ್ನುವ ಅಪಘಾತಕ್ಕೀಡಾದ ವಿಮಾನಗಳ ಅವಶೇಷಗಳು ಮತ್ತು ಪೈಲಟ್ಗಳನ್ನು ಪತ್ತೆ ಹಚ್ಚುವ ಸಾಧನವನ್ನು ಖರೀದಿಸುತ್ತಿದೆ. ಇದರಿಂದಾದರೂ ತಕ್ಷಣ ಸಹಾಯ ದೊರಕದೆ ಸಾಯುವ ಪೈಲಟ್ಗಳ ಸಂಖ್ಯೆ ಕಡಿಮೆಯಾಗಬಹುದೇನೋ.
"ಭಾರತ ಬಾಂಬ್ ತಯಾರಿಸಿದರೆ, ಹುಲ್ಲು, ಸೊಪ್ಪು ತಿಂದಾದರೂ, ಉಪವಾಸ ಬಿದ್ದಾದರೂ ಸರಿ ನಾವೂ ಬಾಂಬನ್ನು ತಯಾರಿಸುತ್ತೇವೆ." ಇದನ್ನು ಹೇಳಿದ್ದು ಪಾಕ್ ಪ್ರಧಾನಿಯಾಗಿದ್ದ ಜುಲ್ಫಿಕರ್ ಅಲಿ ಭುಟ್ಟೋ. ಭಾರತದ ಶತ್ರುಗಳು ಈ ತರ ನಮ್ಮ ಮೇಲೆ ಮುಗಿಬೀಳಲು, ನಮ್ಮ ಸರಿಸಮ ಬರಲು ಕಾಯುತ್ತಿರುವಾಗ ನಮ್ಮೊಳಗಿನ ತೊಂದರೆಗಳನ್ನು ನಾವೇ ಆದಷ್ಟು ಬೇಗ ಸರಿಪಡಿಸಿಕೊಳ್ಳಬೇಕಲ್ಲವೇ?
Wednesday, August 18, 2010
ನಮ್ಮ ನೆಲವನ್ನು ಕಸದ ತೊಟ್ಟಿ ಮಾಡುವವರಿಂದ ಸ್ವಚ್ಚತೆಯ ಪಾಠ?
ಅಮೇರಿಕಾ, ಲಂಡನ್ ಮುಂತಾದ ಶ್ರೀಮಂತ, ಮುಂದುವರಿದ ರಾಷ್ಟ್ರಗಳಿಗೆ ಹೋಗಿ ಬಂದವರನ್ನು ಹೇಗಿವೆ ಆ ದೇಶಗಳು ಎಂದು ಕೇಳಿ ನೋಡಿ. ನಿಮಗೆ ಸಿಗುವ ಮೊದಲ ಉತ್ತರ, ಅಲ್ಲೆಲ್ಲ ತುಂಬ ಕ್ಲೀನು, ನಮ್ಮ ದೇಶದಷ್ಟು ಕೊಳಕು ಅಲ್ಲೆಲ್ಲೂ ನೋಡಲು ಸಾಧ್ಯವೇ ಇಲ್ಲ. ಅಲ್ಲಿನ ರಸ್ತೆಗಳು, ಪಾರ್ಕುಗಳು, ಮನೆಗಳು ಎಷ್ಟು ಸ್ವಚ್ಚ ಅಂದರೆ... ನೋಡಿದರೆ ಕಣ್ಣು ತಂಪಾಗುತ್ತದೆ. ವಾಪಾಸು ನಮ್ಮ ದೇಶಕ್ಕೆ ಬಂದರೆ ರಸ್ತೆಯಲ್ಲಿ ನಡೆಯಲೂ ಬೇಜಾರಾಗುತ್ತದೆ. ಅಬ್ಬ ಎಷ್ಟು ಕೊಳಕು ನಮ್ಮ ಜನ. ಬಿಟ್ಟರೆ ಅಲ್ಲೂ ಹೋಗಿ ಅಲ್ಲಿನ ಪರಿಸರವನ್ನು ಕೊಳಕು ಮಾಡುತ್ತಾರೆ ಎನ್ನುತ್ತಾರೆ.
ಹಾಗಾದರೆ ಅಲ್ಲಿನ ಜನ ಅಷ್ಟೊಂದು ಕ್ಲೀನಾ? ಆ ದೇಶಗಳಲ್ಲಿ ಎಲ್ಲರ ಮನೆಗಳ, ರಸ್ತೆಗಳ, ಕಾರ್ಖಾನೆಗಳ ಕಸ ಎಲ್ಲಿಗೆ ಹೋಗುತ್ತದೆ? ಅಲ್ಲಿ ಉಪಯೋಗಿಸಿ ಎಸೆದ ಪ್ಲಾಸ್ಟಿಕ್ ವಸ್ತುಗಳು, ಗಾಜಿನ ಬಾಟಲ್ಗಳಿಂದ ಹಿಡಿದು ಕಂಪ್ಯೂಟರ್ ಮತ್ತಿತರ ಇಲೆಕ್ಟ್ರಾನಿಕ್ ತ್ಯಾಜ್ಯ ವಸ್ತುಗಳು ಎಲ್ಲಿ ಹೋಗುತ್ತವೆ? Of course. ಇನ್ನೆಲ್ಲಿಗೆ? ಭಾರತಕ್ಕೆ, ಆಫ್ರಿಕಾ ಮತ್ತು ಇನ್ನಿತರ 'ಬಡ' ರಾಷ್ಟ್ರಗಳ ಮನೆಯಂಗಳಕ್ಕೆ.
ಬ್ರಿಟನ್ನ ಮನೆಗಳಿಂದ ಕಸವನ್ನು ಒಟ್ಟುಗೂಡಿಸಿ ಅದನ್ನು ಪ್ಲಾಸ್ಟಿಕ್, ಗಾಜು, ಲೋಹ, ಕಾಗದ ಹೀಗೆ ಬೇರೆ ಬೇರೆ ಗುಂಪುಗಳನ್ನಾಗಿ ಮಾಡಿ ಟನ್ಗಟ್ಟಲೆ ತಂದು ಸುರಿಯುತಾರೆ, ಎಲ್ಲಿಗೆ ಗೊತ್ತೆ? ತಮಿಳುನಾಡಿಗೆ. ಅವರ ದೇಶದಲ್ಲಿ ಒಂದು ಟನ್ ತ್ಯಾಜ್ಯ ವಸ್ತುಗಳನ್ನು ಸಂಸ್ಕರಣೆ ಮಾಡಲು ಸರಿಸುಮಾರು 150 ಪೌಂಡ್ ಖರ್ಚಾದರೆ, ಈಗಾಗಲೇ ಕೊಳಕು ದೇಶ ಎಂದು ಅವರಂದುಕೊಂಡಿರುವ ಸಾವಿರಾರು ಕಿಲೋಮೀಟರ್ ದೂರದ ನಮ್ಮ ದೇಶಕ್ಕೆ ತಂದು ಹಾಕಲು ಅವರಿಗೆ ತಗಲುವ ಖರ್ಚು ಕೇವಲ 50 ಪೌಂಡ್.
ಬೇರೆ ದೇಶಗಳೇನು ಹಿಂದುಳಿದಿಲ್ಲ. ನ್ಯೂಯಾರ್ಕ್ನಿಂದ ರದ್ದಿ ಕಾಗದದ ಹೆಸರಲ್ಲಿ ಕಾನೂನಿಗೆ ವಿರುದ್ಧವಾಗಿ ಟನ್ಗಟ್ಟಲೆ ನಗರಗಳ ಕೊಳಕನ್ನೆಲ್ಲ ತಂದು ಕೊಚ್ಚಿ, ಮಧುರೈ, ಟ್ಯುಟಿಕೊರಿನ್ನಲ್ಲಿ ಸುರಿಯಲು ಯತ್ನಿಸಲಾಯಿತು. ಟ್ಯುಟಿಕೊರಿನ್ ಬಂದರು ಒಂದರಲ್ಲೆ ಸ್ಪೈನ್, ಮಲೇಶಿಯಾ, ಸೌದಿ ಅರೇಬಿಯಾ, ಇನ್ನಿತರ ದೇಶಗಳಿಂದ ತಿಂಗಳೊಂದಕ್ಕೆ 50ರಿಂದ 1,000 ಮೆಟ್ರಿಕ್ ಟನ್ವರೆಗೆ ಕಸ ಬಂದು ಬೀಳುತ್ತದೆ; ಅದೂ ಅಂತಿಂಥಾ ಕಸವಲ್ಲ -- ಆಸ್ಪತ್ರೆಗಳಲ್ಲಿ ಉಪಯೋಗಿಸುವ ಸರ್ಜಿಕಲ್ ಗ್ಲೋವ್ಸ್, ಕಾಂಡಮ್ಗಳಂತಹ ಅಪಾಯಕಾರಿ, ಸಂಸ್ಕರಿಸಲು ಕಷ್ಟಸಾಧ್ಯವಾದ ವಸ್ತುಗಳಿಂದ ಹಿಡಿದು ಎಣ್ಣೆ, ಅಡಿಗೆಮನೆ ಕಸದವರೆಗೆ ಎಲ್ಲಾ ರೀತಿಯ ಕಸ. ಪುನರ್ಸಂಸ್ಕರಣೆಯ ನೆಪ ಹೂಡಿ ವಾಸನೆ ಬೀರುವ, ಅಲ್ಲಿ ಬದುಕುವವರ ಆರೋಗ್ಯಕ್ಕೆ ಹಾನಿಕಾರಕವಾದ ಇವೆಲ್ಲವನ್ನು ತರಿಸಿ ವರ್ಷಗಟ್ಟಲೆ ಇಲ್ಲಿ ಗುಡ್ಡೆ ಹಾಕುವುದು ಭಾರತದಲ್ಲಿರುವ ವಿದೇಶಿ ಕಂಪೆನಿಗಳು.
ಇನ್ನು ಯಾರ ಕಣ್ಣಿಗೂ ಬೀಳದೆ ಮರೆಯಲ್ಲಿ ಬಂದು ನಮ್ಮ ದೇಶಕ್ಕೆ ಸೇರುತ್ತಿರುವ ಇನ್ನೂ ಅಪಾಯಕಾರಿ ವಸ್ತುಗಳು e-waste; ಕಂಪ್ಯೂಟರ್, ಟಿವಿ, ಕಾರ್ ಬ್ಯಾಟರಿಗಳು ಇನ್ನಿತರ ಇಲೆಕ್ಟ್ರಾನಿಕ್ ತ್ಯಾಜ್ಯಗಳು. ಅಮೇರಿಕಾ ಒಂದರಿಂದಲೇ ಸುಮಾರು 125 ಬಿಲಿಯನ್ ಡಾಲರ್ಗಳಷ್ಟು ಇಲೆಕ್ಟ್ರಾನಿಕ್ ತ್ಯಾಜ್ಯಗಳು ವರ್ಷಕ್ಕೆ ನಮ್ಮಲ್ಲಿಗೆ ಬಂದು ಬೀಳುತ್ತವೆ. ನಮ್ಮ ದೇಶದಲ್ಲೇ ವರ್ಷಕ್ಕೆ ಸುಮಾರು 386,000 ಟನ್ -- 110 ಮಿಲಿಯನ್ ಲ್ಯಾಪ್ಟಾಪ್ಗಳಷ್ಟು-- ಇ-ತ್ಯಾಜ್ಯ ಉತ್ಪತ್ತಿಯಾಗುತ್ತದೆ. ನಮ್ಮ ಬೆಂಗಳೂರು, ದೆಹಲಿ ಮತ್ತಿತರ ನಗರಗಳ ಗಲ್ಲಿಗಳಲ್ಲಿ, ಭೋಪಾಲ್ನ ಕಾರ್ಖಾನೆಗಳಲ್ಲಿ ಒಮ್ಮೆ ಇಣುಕಿ ನೋಡಿ. ಸಾವಿರಾರು ಜನ, ಪುಟ್ಟ ಮಕ್ಕಳನ್ನೂ ಸೇರಿಸಿಕೊಂಡು ಬರಿಕೈಯಲ್ಲಿ ಈ ಇಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಬೇರ್ಪಡಿಸುತ್ತಾರೆ, ಆಸಿಡ್ ತುಂಬಿದ ದೊಡ್ಡ ಪಾತ್ರೆಗಳಲ್ಲಿ ಹಾಕಿ ಕರಗಿಸುತ್ತಾರೆ. ಸಂಸ್ಕರಿಸಲು ಅಸಾಧ್ಯವಾದ ತ್ಯಾಜ್ಯ ಪಕ್ಕದ ಮೋರಿಗೋ, ಕಸದ ರಾಶಿಗೋ ಸೇರುತ್ತದೆ. ಇಷ್ಟೆಲ್ಲ ಪಾದರಸ, ಸೀಸ, ಕ್ಯಾಡ್ಮಿಯಮ್ ತರಹದ ವಿಷಕಾರಿ ರಾಸಾಯನಿಕಗಳನ್ನು ತಮ್ಮ ದೇಹದೊಳಗೆ ಸೇರಿಸಿಕೊಂಡು ಒದ್ದಾಡುವ ಬಡ ಕಾರ್ಮಿಕನಿಗೆ ದಿನದ ಕೊನೆಗೆ ಸಿಗುವುದು ಬರಿ 50ರಿಂದ 100 ರೂಪಾಯಿ ಮಾತ್ರ.
ದಕ್ಷಿಣ ಕನ್ನಡದ ಸಮುದ್ರ ತೀರದಲ್ಲಿ ನಡೆದುಕೊಂಡು ಹೋದರೆ ಕಾಲಿಗೆ ಕಪ್ಪು ಜಿಡ್ಡು ಮೆತ್ತಿಕೊಳ್ಳುತ್ತದೆ. ಇದು ಮೊನ್ನೆ ತಾನೆ ಮುಂಬೈನ ಜವಾಹರ್ಲಾಲ್ ನೆಹರು ಬಂದರಿನಲ್ಲಿ ಎರಡು ಹಡಗುಗಳು ಪರಸ್ಪರ ಡಿಕ್ಕಿ ಹೊಡೆದು ಆದ ತೈಲ ಸೋರಿಕೆಯ ತರಹ ಯಾವುದೋ ಹಡಗಿನಿಂದ ಸೋರಿದ ತೈಲವಲ್ಲ. ಬೇರೆ ದೇಶಗಳಿಂದ ಬಂದು ಇಲ್ಲಿನ ಬಂದರಿನಲ್ಲಿ ನಿಲ್ಲುವ ಹಡಗುಗಳು ಹೊರ ಬಿಡುವ ಇಂಜಿನ್ ಆಯಿಲ್. ಕಾನೂನಿನ ಪ್ರಕಾರ ಹೋದರೆ ಪ್ರತಿ ಹಡಗೂ 30,000 ರೂ. ದುಡ್ಡು ಕಟ್ಟಬೇಕಾಗುತ್ತದೆ. ಅದಕ್ಕೆ ಅವರೇ ಬಂದರು ಅಧಿಕಾರಿಗಳಿಗೆ ತಿಳಿಯದಂತೆ ತಾವೇ ಇಂಜಿನ್ ಆಯಿಲ್ ಹೊರಬಿಡುತ್ತಾರೆ. ಆದರೆ ಅವರ ದುರಾಸೆಯಿಂದಾಗಿ ಉಳ್ಳಾಲ, ಚಿತ್ರಾಪುರ, ಪಣಂಬೂರ್, ತಣ್ಣೀರ್ಬಾವಿ ಕಡಲ ತೀರಗಳಲ್ಲಿ ಮೀನುಗಳು, ಜಲಚರಗಳು ಸಾಯುತ್ತಿವೆ.
ಗುಜರಾತ್ನ ಅಲಂಗ್ ಬಂದರು ಏಷಿಯಾದ ಅತಿ ದೊಡ್ಡ ಹಡಗು-ಮುರಿಯುವ ಕಾರ್ಖಾನೆ. ಇಲ್ಲಿಗೆ ಜಗತ್ತಿನ ಎಲ್ಲಾ ದೇಶಗಳ ಆಯಸ್ಸು ಮುಗಿದ ಹಡಗುಗಳು ಬರುತ್ತವೆ, ಜೊತೆಗೆ ನಮ್ಮ ಸುಪ್ರೀಂ ಕೋರ್ಟ್ ಅಪಾಯಕಾರಿ ಎಂದು ವಾಪಾಸು ಕಳುಹಿಸಿದ ರಾಸಾಯನಿಕ ತ್ಯಾಜ್ಯಗಳು ತುಂಬಿರುವ clemenceau ಎನ್ನುವ ಫ್ರೆಂಚ್ ಹಡಗಿನಂತಹವು ಕೂಡ. ವಿಪರ್ಯಾಸವೆಂದರೆ ಎಲ್ಲಾ ಹಡಗುಗಳೂ clemenceau ತರ ತಿರುಗಿ ಹೋಗುವುದಿಲ್ಲ. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಶ್ರೀಮಂತ ದೇಶಗಳು ಭಾರತಕ್ಕೆ ನೇರವಾಗಿ ಅಪಾಯಕಾರಿ ರಾಸಾಯನಿಕ ತ್ಯಾಜ್ಯವುಳ್ಳ ಹಡಗುಗಳನ್ನು ಕಳುಹಿಸುವಂತಿಲ್ಲ. ಅದಕ್ಕೆ ಬಾಂಗ್ಲಾದೇಶ ತಿರಸ್ಕರಿಸಿದ Blue Lady, ಭಾರತಕ್ಕೆ ತರುವುದಕ್ಕೋಸ್ಕರ ಕೇವಲ 10 ಡಾಲರ್ಗೆ ಯಾವುದೋ ಸಣ್ಣ ದೇಶಕ್ಕೆ ಹೆಸರಿಗೆ ಮಾತ್ರ ಮಾರಾಟವಾದ Al Arabia ತರಹದ ಹಡಗುಗಳು ತಮ್ಮ ಹೆಸರು, ದೇಶದ ಹೆಸರು ಬದಲಾಯಿಸಿಕೊಂಡು ಬರುತ್ತವೆ.
ದೆಹಲಿಯ ಮಯಪುರಿ ಮಾರ್ಕೆಟ್ನಲ್ಲಿ ಇತ್ತೀಚೆಗೆ ಒಬ್ಬ ಕಾರ್ಮಿಕ ವಿದೇಶಿ ತ್ಯಾಜ್ಯದ ಸಂಸ್ಕರಣೆ ಮಾಡುವಾಗ Cobalt-60 ವಿಕಿರಣದಿಂದಾಗಿ ತನ್ನ ಅಂಗಗಳೆಲ್ಲ ನಿಷ್ಕ್ರಿಯವಾಗಿ ಸಾಯುತ್ತಾನೆ, ಏಳು ಜನ ಸುಟ್ಟು ಹೋಗುತ್ತಾರೆ. Basel Convention ಎನ್ನುವ ಅಂತರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತ ತನ್ನ ನೆಲದೊಳಗೆ ವಿಕಿರಣಯುಕ್ತ ತ್ಯಾಜ್ಯಗಳನ್ನು ಆಮದು ಮಾಡಿಕೊಳ್ಳುವಂತಿಲ್ಲ. ಆದರೂ ಸರಕಾರದ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರತಿದಿನ ಅಂತಹ ತ್ಯಾಜ್ಯಗಳು ಬಂದು ನಮ್ಮ ನೆಲದಲ್ಲಿ ಬೀಳುತ್ತಲೇ ಇವೆ.
ಜಾರ್ಜ್ ಆರ್ವೆಲ್, ತಮ್ಮ Animal Farm ಕೃತಿಯಲ್ಲಿ 'All animals are equal but some animals are more equal than others' ಎಂದು ಹೇಳಿದ ಹಾಗೆ ಮುಂದುವರಿದ ರಾಷ್ಟ್ರಗಳ ಪ್ರಜೆಗಳು ಏನೇ ಮಾಡಿದರೂ ಅದನ್ನು ಅನುಭವಿಸುವುದು ನಮ್ಮ ಹಣೆಬರಹ, ಅವರು ನಮಗಿಂತ ಜಾಸ್ತಿ 'ನಾಗರಿಕರು' ಅನ್ನುವ ಮನೋಭಾವ ನಮ್ಮನ್ನು ಇನ್ನೂ ಬಿಟ್ಟಿಲ್ಲವೇ?
ನಮ್ಮ ಮನೆಯ ಹತ್ತಿರ ಪಕ್ಕದ ಮನೆಯವರು ಕಸ ತಂದು ಸುರಿದರೆ ಕೂಗಾಡುವ ನಾವು ಇದನ್ನೆಲ್ಲ ನೋಡಿ ಯಾಕೆ ಸುಮ್ಮನಿದ್ದೇವೆ? ಯಾಕೆ ಎಲ್ಲರ ಮನೆ ಸ್ವಚ್ಚವಾಗಿಡುವುದಕ್ಕಾಗಿ ನಮ್ಮ ಮನೆಯಂಗಳವನ್ನು ಗಬ್ಬೆಬ್ಬಿಸುತ್ತಿದ್ದೇವೆ? ಅಥವಾ ಬುದ್ಧಿವಂತಿಕೆಗಿಂತ ಜಾಸ್ತಿ ಒಳ್ಳೆಯತನದೆಡೆಗೆ ಒಲವು ಇರುವ ಭಾರತದ ಗುಣ ನಿಜವಾದ ನಾಗರಿಕತೆಗೆ ಹತ್ತಿರವಾಗಿದೆ ಎಂದು W.J. Grant ತಮ್ಮ 'Spirit of India' ಕೃತಿಯಲ್ಲಿ ಹೇಳಿದ್ದು ನಿಜವಿರಬೇಕು. ಭಾರತದ ನೆಲ ಮುಂದುವರಿದ ದೇಶಗಳ ಕಸದ ತೊಟ್ಟಿಯಾಗುತ್ತಿದ್ದರೂ ಪರಿಸರವಾದಿಗಳು ತಟಸ್ಥರಾಗಿರುವುದು ಒಳ್ಳೆಯತನವೋ, 'ದೊಡ್ಡ'ವರನ್ನು ಎದುರು ಹಾಕಿಕೊಳ್ಳಲಾಗದ ಹೇಡಿತನವೋ ಅಥವಾ ನಮಗೇನು ಎನ್ನುವ ದಿವ್ಯ ನಿರ್ಲಕ್ಷ್ಯವೋ? ಒಟ್ಟಿನಲ್ಲಿ ನಾವು 'ಮುಂದುವರೆಯುತ್ತಿಲ್ಲ', ಇನ್ನೂ ಹಿಂದೆ ಸರಿಯುತ್ತಿದ್ದೇವೆ, ಎಲ್ಲಾ ರೀತಿಯಲ್ಲೂ.
ಹಾಗಾದರೆ ಅಲ್ಲಿನ ಜನ ಅಷ್ಟೊಂದು ಕ್ಲೀನಾ? ಆ ದೇಶಗಳಲ್ಲಿ ಎಲ್ಲರ ಮನೆಗಳ, ರಸ್ತೆಗಳ, ಕಾರ್ಖಾನೆಗಳ ಕಸ ಎಲ್ಲಿಗೆ ಹೋಗುತ್ತದೆ? ಅಲ್ಲಿ ಉಪಯೋಗಿಸಿ ಎಸೆದ ಪ್ಲಾಸ್ಟಿಕ್ ವಸ್ತುಗಳು, ಗಾಜಿನ ಬಾಟಲ್ಗಳಿಂದ ಹಿಡಿದು ಕಂಪ್ಯೂಟರ್ ಮತ್ತಿತರ ಇಲೆಕ್ಟ್ರಾನಿಕ್ ತ್ಯಾಜ್ಯ ವಸ್ತುಗಳು ಎಲ್ಲಿ ಹೋಗುತ್ತವೆ? Of course. ಇನ್ನೆಲ್ಲಿಗೆ? ಭಾರತಕ್ಕೆ, ಆಫ್ರಿಕಾ ಮತ್ತು ಇನ್ನಿತರ 'ಬಡ' ರಾಷ್ಟ್ರಗಳ ಮನೆಯಂಗಳಕ್ಕೆ.
ಬ್ರಿಟನ್ನ ಮನೆಗಳಿಂದ ಕಸವನ್ನು ಒಟ್ಟುಗೂಡಿಸಿ ಅದನ್ನು ಪ್ಲಾಸ್ಟಿಕ್, ಗಾಜು, ಲೋಹ, ಕಾಗದ ಹೀಗೆ ಬೇರೆ ಬೇರೆ ಗುಂಪುಗಳನ್ನಾಗಿ ಮಾಡಿ ಟನ್ಗಟ್ಟಲೆ ತಂದು ಸುರಿಯುತಾರೆ, ಎಲ್ಲಿಗೆ ಗೊತ್ತೆ? ತಮಿಳುನಾಡಿಗೆ. ಅವರ ದೇಶದಲ್ಲಿ ಒಂದು ಟನ್ ತ್ಯಾಜ್ಯ ವಸ್ತುಗಳನ್ನು ಸಂಸ್ಕರಣೆ ಮಾಡಲು ಸರಿಸುಮಾರು 150 ಪೌಂಡ್ ಖರ್ಚಾದರೆ, ಈಗಾಗಲೇ ಕೊಳಕು ದೇಶ ಎಂದು ಅವರಂದುಕೊಂಡಿರುವ ಸಾವಿರಾರು ಕಿಲೋಮೀಟರ್ ದೂರದ ನಮ್ಮ ದೇಶಕ್ಕೆ ತಂದು ಹಾಕಲು ಅವರಿಗೆ ತಗಲುವ ಖರ್ಚು ಕೇವಲ 50 ಪೌಂಡ್.
ಬೇರೆ ದೇಶಗಳೇನು ಹಿಂದುಳಿದಿಲ್ಲ. ನ್ಯೂಯಾರ್ಕ್ನಿಂದ ರದ್ದಿ ಕಾಗದದ ಹೆಸರಲ್ಲಿ ಕಾನೂನಿಗೆ ವಿರುದ್ಧವಾಗಿ ಟನ್ಗಟ್ಟಲೆ ನಗರಗಳ ಕೊಳಕನ್ನೆಲ್ಲ ತಂದು ಕೊಚ್ಚಿ, ಮಧುರೈ, ಟ್ಯುಟಿಕೊರಿನ್ನಲ್ಲಿ ಸುರಿಯಲು ಯತ್ನಿಸಲಾಯಿತು. ಟ್ಯುಟಿಕೊರಿನ್ ಬಂದರು ಒಂದರಲ್ಲೆ ಸ್ಪೈನ್, ಮಲೇಶಿಯಾ, ಸೌದಿ ಅರೇಬಿಯಾ, ಇನ್ನಿತರ ದೇಶಗಳಿಂದ ತಿಂಗಳೊಂದಕ್ಕೆ 50ರಿಂದ 1,000 ಮೆಟ್ರಿಕ್ ಟನ್ವರೆಗೆ ಕಸ ಬಂದು ಬೀಳುತ್ತದೆ; ಅದೂ ಅಂತಿಂಥಾ ಕಸವಲ್ಲ -- ಆಸ್ಪತ್ರೆಗಳಲ್ಲಿ ಉಪಯೋಗಿಸುವ ಸರ್ಜಿಕಲ್ ಗ್ಲೋವ್ಸ್, ಕಾಂಡಮ್ಗಳಂತಹ ಅಪಾಯಕಾರಿ, ಸಂಸ್ಕರಿಸಲು ಕಷ್ಟಸಾಧ್ಯವಾದ ವಸ್ತುಗಳಿಂದ ಹಿಡಿದು ಎಣ್ಣೆ, ಅಡಿಗೆಮನೆ ಕಸದವರೆಗೆ ಎಲ್ಲಾ ರೀತಿಯ ಕಸ. ಪುನರ್ಸಂಸ್ಕರಣೆಯ ನೆಪ ಹೂಡಿ ವಾಸನೆ ಬೀರುವ, ಅಲ್ಲಿ ಬದುಕುವವರ ಆರೋಗ್ಯಕ್ಕೆ ಹಾನಿಕಾರಕವಾದ ಇವೆಲ್ಲವನ್ನು ತರಿಸಿ ವರ್ಷಗಟ್ಟಲೆ ಇಲ್ಲಿ ಗುಡ್ಡೆ ಹಾಕುವುದು ಭಾರತದಲ್ಲಿರುವ ವಿದೇಶಿ ಕಂಪೆನಿಗಳು.
ಇನ್ನು ಯಾರ ಕಣ್ಣಿಗೂ ಬೀಳದೆ ಮರೆಯಲ್ಲಿ ಬಂದು ನಮ್ಮ ದೇಶಕ್ಕೆ ಸೇರುತ್ತಿರುವ ಇನ್ನೂ ಅಪಾಯಕಾರಿ ವಸ್ತುಗಳು e-waste; ಕಂಪ್ಯೂಟರ್, ಟಿವಿ, ಕಾರ್ ಬ್ಯಾಟರಿಗಳು ಇನ್ನಿತರ ಇಲೆಕ್ಟ್ರಾನಿಕ್ ತ್ಯಾಜ್ಯಗಳು. ಅಮೇರಿಕಾ ಒಂದರಿಂದಲೇ ಸುಮಾರು 125 ಬಿಲಿಯನ್ ಡಾಲರ್ಗಳಷ್ಟು ಇಲೆಕ್ಟ್ರಾನಿಕ್ ತ್ಯಾಜ್ಯಗಳು ವರ್ಷಕ್ಕೆ ನಮ್ಮಲ್ಲಿಗೆ ಬಂದು ಬೀಳುತ್ತವೆ. ನಮ್ಮ ದೇಶದಲ್ಲೇ ವರ್ಷಕ್ಕೆ ಸುಮಾರು 386,000 ಟನ್ -- 110 ಮಿಲಿಯನ್ ಲ್ಯಾಪ್ಟಾಪ್ಗಳಷ್ಟು-- ಇ-ತ್ಯಾಜ್ಯ ಉತ್ಪತ್ತಿಯಾಗುತ್ತದೆ. ನಮ್ಮ ಬೆಂಗಳೂರು, ದೆಹಲಿ ಮತ್ತಿತರ ನಗರಗಳ ಗಲ್ಲಿಗಳಲ್ಲಿ, ಭೋಪಾಲ್ನ ಕಾರ್ಖಾನೆಗಳಲ್ಲಿ ಒಮ್ಮೆ ಇಣುಕಿ ನೋಡಿ. ಸಾವಿರಾರು ಜನ, ಪುಟ್ಟ ಮಕ್ಕಳನ್ನೂ ಸೇರಿಸಿಕೊಂಡು ಬರಿಕೈಯಲ್ಲಿ ಈ ಇಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಬೇರ್ಪಡಿಸುತ್ತಾರೆ, ಆಸಿಡ್ ತುಂಬಿದ ದೊಡ್ಡ ಪಾತ್ರೆಗಳಲ್ಲಿ ಹಾಕಿ ಕರಗಿಸುತ್ತಾರೆ. ಸಂಸ್ಕರಿಸಲು ಅಸಾಧ್ಯವಾದ ತ್ಯಾಜ್ಯ ಪಕ್ಕದ ಮೋರಿಗೋ, ಕಸದ ರಾಶಿಗೋ ಸೇರುತ್ತದೆ. ಇಷ್ಟೆಲ್ಲ ಪಾದರಸ, ಸೀಸ, ಕ್ಯಾಡ್ಮಿಯಮ್ ತರಹದ ವಿಷಕಾರಿ ರಾಸಾಯನಿಕಗಳನ್ನು ತಮ್ಮ ದೇಹದೊಳಗೆ ಸೇರಿಸಿಕೊಂಡು ಒದ್ದಾಡುವ ಬಡ ಕಾರ್ಮಿಕನಿಗೆ ದಿನದ ಕೊನೆಗೆ ಸಿಗುವುದು ಬರಿ 50ರಿಂದ 100 ರೂಪಾಯಿ ಮಾತ್ರ.
ದಕ್ಷಿಣ ಕನ್ನಡದ ಸಮುದ್ರ ತೀರದಲ್ಲಿ ನಡೆದುಕೊಂಡು ಹೋದರೆ ಕಾಲಿಗೆ ಕಪ್ಪು ಜಿಡ್ಡು ಮೆತ್ತಿಕೊಳ್ಳುತ್ತದೆ. ಇದು ಮೊನ್ನೆ ತಾನೆ ಮುಂಬೈನ ಜವಾಹರ್ಲಾಲ್ ನೆಹರು ಬಂದರಿನಲ್ಲಿ ಎರಡು ಹಡಗುಗಳು ಪರಸ್ಪರ ಡಿಕ್ಕಿ ಹೊಡೆದು ಆದ ತೈಲ ಸೋರಿಕೆಯ ತರಹ ಯಾವುದೋ ಹಡಗಿನಿಂದ ಸೋರಿದ ತೈಲವಲ್ಲ. ಬೇರೆ ದೇಶಗಳಿಂದ ಬಂದು ಇಲ್ಲಿನ ಬಂದರಿನಲ್ಲಿ ನಿಲ್ಲುವ ಹಡಗುಗಳು ಹೊರ ಬಿಡುವ ಇಂಜಿನ್ ಆಯಿಲ್. ಕಾನೂನಿನ ಪ್ರಕಾರ ಹೋದರೆ ಪ್ರತಿ ಹಡಗೂ 30,000 ರೂ. ದುಡ್ಡು ಕಟ್ಟಬೇಕಾಗುತ್ತದೆ. ಅದಕ್ಕೆ ಅವರೇ ಬಂದರು ಅಧಿಕಾರಿಗಳಿಗೆ ತಿಳಿಯದಂತೆ ತಾವೇ ಇಂಜಿನ್ ಆಯಿಲ್ ಹೊರಬಿಡುತ್ತಾರೆ. ಆದರೆ ಅವರ ದುರಾಸೆಯಿಂದಾಗಿ ಉಳ್ಳಾಲ, ಚಿತ್ರಾಪುರ, ಪಣಂಬೂರ್, ತಣ್ಣೀರ್ಬಾವಿ ಕಡಲ ತೀರಗಳಲ್ಲಿ ಮೀನುಗಳು, ಜಲಚರಗಳು ಸಾಯುತ್ತಿವೆ.
ಗುಜರಾತ್ನ ಅಲಂಗ್ ಬಂದರು ಏಷಿಯಾದ ಅತಿ ದೊಡ್ಡ ಹಡಗು-ಮುರಿಯುವ ಕಾರ್ಖಾನೆ. ಇಲ್ಲಿಗೆ ಜಗತ್ತಿನ ಎಲ್ಲಾ ದೇಶಗಳ ಆಯಸ್ಸು ಮುಗಿದ ಹಡಗುಗಳು ಬರುತ್ತವೆ, ಜೊತೆಗೆ ನಮ್ಮ ಸುಪ್ರೀಂ ಕೋರ್ಟ್ ಅಪಾಯಕಾರಿ ಎಂದು ವಾಪಾಸು ಕಳುಹಿಸಿದ ರಾಸಾಯನಿಕ ತ್ಯಾಜ್ಯಗಳು ತುಂಬಿರುವ clemenceau ಎನ್ನುವ ಫ್ರೆಂಚ್ ಹಡಗಿನಂತಹವು ಕೂಡ. ವಿಪರ್ಯಾಸವೆಂದರೆ ಎಲ್ಲಾ ಹಡಗುಗಳೂ clemenceau ತರ ತಿರುಗಿ ಹೋಗುವುದಿಲ್ಲ. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಶ್ರೀಮಂತ ದೇಶಗಳು ಭಾರತಕ್ಕೆ ನೇರವಾಗಿ ಅಪಾಯಕಾರಿ ರಾಸಾಯನಿಕ ತ್ಯಾಜ್ಯವುಳ್ಳ ಹಡಗುಗಳನ್ನು ಕಳುಹಿಸುವಂತಿಲ್ಲ. ಅದಕ್ಕೆ ಬಾಂಗ್ಲಾದೇಶ ತಿರಸ್ಕರಿಸಿದ Blue Lady, ಭಾರತಕ್ಕೆ ತರುವುದಕ್ಕೋಸ್ಕರ ಕೇವಲ 10 ಡಾಲರ್ಗೆ ಯಾವುದೋ ಸಣ್ಣ ದೇಶಕ್ಕೆ ಹೆಸರಿಗೆ ಮಾತ್ರ ಮಾರಾಟವಾದ Al Arabia ತರಹದ ಹಡಗುಗಳು ತಮ್ಮ ಹೆಸರು, ದೇಶದ ಹೆಸರು ಬದಲಾಯಿಸಿಕೊಂಡು ಬರುತ್ತವೆ.
ದೆಹಲಿಯ ಮಯಪುರಿ ಮಾರ್ಕೆಟ್ನಲ್ಲಿ ಇತ್ತೀಚೆಗೆ ಒಬ್ಬ ಕಾರ್ಮಿಕ ವಿದೇಶಿ ತ್ಯಾಜ್ಯದ ಸಂಸ್ಕರಣೆ ಮಾಡುವಾಗ Cobalt-60 ವಿಕಿರಣದಿಂದಾಗಿ ತನ್ನ ಅಂಗಗಳೆಲ್ಲ ನಿಷ್ಕ್ರಿಯವಾಗಿ ಸಾಯುತ್ತಾನೆ, ಏಳು ಜನ ಸುಟ್ಟು ಹೋಗುತ್ತಾರೆ. Basel Convention ಎನ್ನುವ ಅಂತರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತ ತನ್ನ ನೆಲದೊಳಗೆ ವಿಕಿರಣಯುಕ್ತ ತ್ಯಾಜ್ಯಗಳನ್ನು ಆಮದು ಮಾಡಿಕೊಳ್ಳುವಂತಿಲ್ಲ. ಆದರೂ ಸರಕಾರದ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರತಿದಿನ ಅಂತಹ ತ್ಯಾಜ್ಯಗಳು ಬಂದು ನಮ್ಮ ನೆಲದಲ್ಲಿ ಬೀಳುತ್ತಲೇ ಇವೆ.
ಜಾರ್ಜ್ ಆರ್ವೆಲ್, ತಮ್ಮ Animal Farm ಕೃತಿಯಲ್ಲಿ 'All animals are equal but some animals are more equal than others' ಎಂದು ಹೇಳಿದ ಹಾಗೆ ಮುಂದುವರಿದ ರಾಷ್ಟ್ರಗಳ ಪ್ರಜೆಗಳು ಏನೇ ಮಾಡಿದರೂ ಅದನ್ನು ಅನುಭವಿಸುವುದು ನಮ್ಮ ಹಣೆಬರಹ, ಅವರು ನಮಗಿಂತ ಜಾಸ್ತಿ 'ನಾಗರಿಕರು' ಅನ್ನುವ ಮನೋಭಾವ ನಮ್ಮನ್ನು ಇನ್ನೂ ಬಿಟ್ಟಿಲ್ಲವೇ?
ನಮ್ಮ ಮನೆಯ ಹತ್ತಿರ ಪಕ್ಕದ ಮನೆಯವರು ಕಸ ತಂದು ಸುರಿದರೆ ಕೂಗಾಡುವ ನಾವು ಇದನ್ನೆಲ್ಲ ನೋಡಿ ಯಾಕೆ ಸುಮ್ಮನಿದ್ದೇವೆ? ಯಾಕೆ ಎಲ್ಲರ ಮನೆ ಸ್ವಚ್ಚವಾಗಿಡುವುದಕ್ಕಾಗಿ ನಮ್ಮ ಮನೆಯಂಗಳವನ್ನು ಗಬ್ಬೆಬ್ಬಿಸುತ್ತಿದ್ದೇವೆ? ಅಥವಾ ಬುದ್ಧಿವಂತಿಕೆಗಿಂತ ಜಾಸ್ತಿ ಒಳ್ಳೆಯತನದೆಡೆಗೆ ಒಲವು ಇರುವ ಭಾರತದ ಗುಣ ನಿಜವಾದ ನಾಗರಿಕತೆಗೆ ಹತ್ತಿರವಾಗಿದೆ ಎಂದು W.J. Grant ತಮ್ಮ 'Spirit of India' ಕೃತಿಯಲ್ಲಿ ಹೇಳಿದ್ದು ನಿಜವಿರಬೇಕು. ಭಾರತದ ನೆಲ ಮುಂದುವರಿದ ದೇಶಗಳ ಕಸದ ತೊಟ್ಟಿಯಾಗುತ್ತಿದ್ದರೂ ಪರಿಸರವಾದಿಗಳು ತಟಸ್ಥರಾಗಿರುವುದು ಒಳ್ಳೆಯತನವೋ, 'ದೊಡ್ಡ'ವರನ್ನು ಎದುರು ಹಾಕಿಕೊಳ್ಳಲಾಗದ ಹೇಡಿತನವೋ ಅಥವಾ ನಮಗೇನು ಎನ್ನುವ ದಿವ್ಯ ನಿರ್ಲಕ್ಷ್ಯವೋ? ಒಟ್ಟಿನಲ್ಲಿ ನಾವು 'ಮುಂದುವರೆಯುತ್ತಿಲ್ಲ', ಇನ್ನೂ ಹಿಂದೆ ಸರಿಯುತ್ತಿದ್ದೇವೆ, ಎಲ್ಲಾ ರೀತಿಯಲ್ಲೂ.
Leafing thru
Here are three books for those book worms who wish to delve into the Indian psyche on I-Day
The Wonder That Was India
The Wonder That Was India
By A.L. Basham
For those with even remnants of interest in the traditional history of India with a sprinkling of its epics and customs, the Harappa and Vedic civilisations in ancient India before the arrival of Muslim kings, this book is a see-through, yet translucent glass from where the quite-dissimilar yet alluring past is visible. By declaring that the most striking feature of the ancient Indian civilisation was its humanity, Basham makes us see through the gloomy veil lowered by the 19th century missionaries often masking the real India where “people enjoyed life, passionately both in the things of the senses and the things of the spirit.” Even if we have been befogged by the traditions found not too long ago, this delight towards life is evident now at least in our scriptures and sculptures.
Basham, whose book saw three editions, dwells quite elaborately on the Theory of Aryan Invasion, backed by the Sanskrit scholars and Indologists. For the budding gene-ration which has been fed up to the neck with the Indian history of British invasion and struggle for Independence, this is an old, rusty door opening to the less-explored past beyond it.
An Argumentative Indian
By Amartya Sen
With an interesting cover page where a man and a woman sit discussing, the collection of essays seem more intriguing because the picture shows the woman speaking as the man listens, which rarely happens in patriarchal India. Amartya Sen, the Nobel laureate in Economics, is a surprisingly refreshing writer whose essays — or papers as he calls them which were originally presented in lectures and conferences — are simple and digestible by readers who find economics a tough bone.
From Heterodoxy to Politics and Reason, the essayist confronts and supports “the pursuit of ideas across the spiritual, practical and scientific domains,” at the same breath regretting the visible impression of half-dressed gurus promising nirvana, inundating religiosity at one side and disquieting ‘seclusionist’ ideas on the other under the cloak of secularism. Amartya Sen concludes by light-heartedly enquiring, “Just consider how terrible the day of your death will be./ Others will go on speaking, and you will not be able to argue back.” And for this, you have to read the book.
By V.S. Naipaul
The last of the trilogies on India by the ‘celebrated’ writer V.S. Naipaul after An Area of Darkness and India: A Wounded Civilization, India: A Million Mutinies Now is a travelogue written during the author’s brief stay in India in 1980s.One can see Naipaul’s attempt to vainly understand his ancestral country in the three books; beginning with anger and hurt in the An Area of Darkness and finally trying to interpret the land with compassion. Typi-cally Naipaulian, the writings are complex yet anecdotal. The ‘real’ India shocks Naipaul as it conflicts with the India of his Trinidadian imagination. He seeks many people he met on his first trip in 1962, observing the changes in lives and attitudes and at the end of the tour, mellows down enough to accept the country as his own, if not fully understand. Thus, he makes peace with his country with a gentleness that comes from years of struggle to comprehend a civilisation that is truly apart — a land of ‘million mutinies’ with its countless leaders.
Saturday, July 17, 2010
CAVA TO GET ITS OWN CAMPUS IN GERMAN PRESS PREMISES
CAVA was earlier granted nearly 5 acres of land in the proposed Music University campus in Varakodu, which did not materialise due to various legal and technical problems in obtaining the land. The Academy was also shifted to Aloka campus in Yelwal many times. Tired of the uncertainty of shifting to Aloka and back again and also not wanting to get embroiled in controversies surrounding the Music Varsity campus, CAVA Dean V.A. Deshpande had been trying to get the vacant land in German Press premises.
When SOM spoke to Deshpande, he said the project of building a campus for CAVA may take upto 3 years as he has just sent his plans and requirements to the Chief Architect, Govt. of Karnataka. After the Architect draws up plans according to his specifications and as per the needs of the Academy, they can make an estimate of the funds needed which will then be released by the government.
Deshpande said they will visit other schools of arts like Shanthiniketan, Delhi School of Arts etc., to get an idea of the architecture and requirements for the school. Each of CAVA's departments — Sculpture, Painting, Graphics, Applied Art, Photojour-nalism etc. — has its own infrastructural requirements like studios, workshops, LCD projection room, foundry, a spacious library and even open space for artists which will be planned accordingly in the new campus.
In addition to a good collection of art — paintings, sculptures etc.— CAVA exhibits art work done by its own students and other students from around the country who attend workshops conducted on the campus. The present CAVA building has space constraints for both temporary and permanent art expos.
When asked if the Academy plans to have a permanent art gallery in the new campus, Deshpande said, "Our art should be witnessed by others. If people do not see and appreciate our art, we will not grow, and consequently, our art will not grow. Hence it is imperative that we have a spacious art gallery."
As per the present estimation, around Rs. 5 to 6 crore may be needed for the new campus. The State Government had granted Rs. 1 crore for CAVA last year. Deshpande believes that since the Kannada and Culture Department is under Chief Minister B.S. Yeddyurappa himself, funds will be released without any hitch and the Department Secretary B.R. Jayaramaraje Urs too would support the project. CAVA is also likely to get UGC funding as it comes under University of Mysore.
Replying to a query, Desh-pande said there are 15 teachers and 35 staff at present and five posts are vacant. They will be soon filled up, he added.
The Academy has been facing various problems due to lack of basic facilities like classrooms, technical staff, library and is forced to remain in the Chamarajendra Technical Institute building which has developed cracks in the walls and is crumbling. Along with building a new campus for CAVA, it is also essential to preserve the CTI building which was built in 1906 by Krishnaraja Wadiyar IV.
Friday, July 9, 2010
ಇಷ್ಟೆಲ್ಲ ಓದಿಕೊಂಡರೂ ಮಾನವೀಯತೆ ಹುಟ್ಟಲಿಲ್ಲವೇಕೆ?
ಒಂದು ವರ್ಷದ ಹಿಂದೆ ಹತ್ತಿರದ ಕುಂಬಾರಗೇರಿಗೆ ಯಾರನ್ನೋ ಭೇಟಿಮಾಡಲು ಹೋದಾಗ ಆ ಮನೆಯಲ್ಲಿದ್ದ ಬಾಣಂತಿಯೊಬ್ಬರು ಮಾತಿಗೆ ಸಿಕ್ಕಿದರು. ಮಾತು ಹೆರಿಗೆ, ಆಸ್ಪತ್ರೆಯತ್ತ ಹೊರಳಿದಾಗ ಅವರು ಹೇಳಿದ ವಿಷಯಗಳು ದಿಗಿಲು ಹುಟ್ಟಿಸುವಂತಿತ್ತು. ಅಲ್ಲಿವರೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಬಡವರಿಂದ ದುಡ್ಡು ಕೀಳುತ್ತಾರೆ, ನಿರ್ಲಕ್ಷ್ಯ ತೋರುತ್ತಾರೆ ಎಂದೆಲ್ಲ ಕೇಳಿದ್ದೆ. ಆದರೆ ತುಂಬಿದ ಬಸುರಿಯರನ್ನು ಗಂಟೆಗಟ್ಟಲೆ ಕೂರಲು ಜಾಗವೂ ಇಲ್ಲದೆ ನಿಲ್ಲಿಸಿ ಕಾಯಿಸುತ್ತಾರೆ, ರಾತ್ರಿ ಹೊತ್ತಿನಲ್ಲಿ ಒಬ್ಬರನ್ನೆ lab testing ಅಂತ ಕಳಿಸುತ್ತಾರೆ ಎಂದು ಗೊತ್ತಿರಲಿಲ್ಲ. ಆಮೇಲೆ ಆಸ್ಪತ್ರೆಗೆ ಹೋಗಿ ನೋಡಿದಾಗ ಅಲ್ಲಿ ಹಸಿ ಬಾಣಂತಿಯರನ್ನು, ಆಗ ತಾನೆ ಹುಟ್ಟಿದ ಹಸುಮಕ್ಕಳನ್ನು ನೆಲದ ಮೇಲೆ ಹಾಸಿಗೆಯೂ ಇಲ್ಲದೆ ಮಲಗಿಸಿದ್ದರು. ಕೆಲವು ರೋಗಿಗಳು ಅಲ್ಲೆ ಪಕ್ಕದ ಜಗಲಿಯ ಬದಿಯಲ್ಲಿ ವಾಕರಿಸುತ್ತಿದ್ದರು. ಎಲ್ಲಕ್ಕಿಂತ ದಿಗ್ಬ್ರಮೆ, ಆತಂಕ ಹುಟ್ಟಿಸಿದ್ದು ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ಹೆಣ್ಣುಮಕ್ಕಳನ್ನು labour wardನ ಟೇಬಲ್ ಮೇಲೆ ಕುಕ್ಕುತ್ತಾರೆ, ಅವರಿಗೆ ಹೆರಿಗೆ ಮಾಡಿಸುವ ಬದಲು ಅಲ್ಲಿ ಯಾವ ಡಾಕ್ಟರ್, ಆಯಾ, ನರ್ಸ್ ಇಲ್ಲದಂತೆ ಹೊರಹೋಗುತ್ತಾರೆ, ನೋವಿನಿಂದ ಅಳುವ ಹೆಣ್ಣುಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ಮಗು ತೋರಿಸಬೇಕಾದರೆ ದುಡ್ಡು ಕೇಳುತ್ತಾರೆ ಎನ್ನುವ ವಿಷಯ ಕೇಳಿ. ಆಗ ಇವರು ಮನುಷ್ಯರಾ ಅನ್ನಿಸಿತ್ತು.
ಇದು ’ಉಚಿತ’ ಸರಕಾರಿ ಆಸ್ಪತ್ರೆಗಳ ಕಥೆ ಮಾತ್ರ ಅಲ್ಲ. ಖಾಸಗಿ ಆಸ್ಪತ್ರೆಗಳೂ ನಾನಾ ಕಾರಣ ಹೇಳಿ ಸತ್ತವರನ್ನು ಇನ್ನೂ ಬದುಕಿದ್ದಾರೆಂದು ಯಾರಿಗೂ ತೋರಿಸದೆ ಲಕ್ಷಾಂತರ ರೂಪಾಯಿ ವಸೂಲಿ ಮಾಡುವುದೂ ಸಾಮಾನ್ಯ.
ಇಷ್ಟಲ್ಲಾ ಅನಾಗರಿಕವಾಗಿ ನಡೆದುಕೊಳ್ಳುವವರು ಅನಕ್ಷರಸ್ತರಲ್ಲ, ಅಮಾಯಕರೂ ಅಲ್ಲ. ರೋಗಿಗಳ ಸೇವೆ ಮಾಡುತ್ತೇವೆಂದು ಐದೂವರೆ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಡಿಕಲ್, ನರ್ಸಿಂಗ್ ಓದಿ ಬಂದಿರುವ ಡಾಕ್ಟರ್ಗಳು, ನರ್ಸ್ಗಳು. ತಮ್ಮ ಮಕ್ಕಳು ಮೆಡಿಕಲ್ ಓದುತ್ತಾರೆಂದರೆ ಅಪ್ಪ-ಅಮ್ಮಂದಿರಿಗೆ ಹೆಮ್ಮೆ, ಮಕ್ಕಳು ಬೇರೆಯವರ ಜೀವ ಉಳಿಸುವ ಪುಣ್ಯದ ಕೆಲಸ ಮಾಡುತ್ತಾರೆ ಎಂದು. ಅವರಿಗೂ ಅಷ್ಟೆ ಮೊದಲು ಇರುವ ಆದರ್ಶಗಳು ಓದಿ ಮುಗಿದು ಡಾಕ್ಟರ್ ಆದಾಗ ಎಲ್ಲಿ ಹೋಗುತ್ತವೆ? ಮೊನ್ನೆ ಯಾರೋ ಕೇಳಿದರು ರಾಜಕಾರಣಿಗಳು ಮನುಷ್ಯರಲ್ಲವೆ? ಅವರಿಗೂ ಕರುಣೆ ಇಲ್ಲವೆ ಎಂದು? ಅವರೂ ನಮ್ಮ ನಿಮ್ಮ ಹಾಗೆ ಮನುಷ್ಯರೇ. ಅವರಿಗೂ ಸಂಬಂಧಗಳು, ಮಾನವೀಯತೆ ಎಲ್ಲಾ ಇರುತ್ತವೆ. ಆದರೆ ಪ್ರತಿ ದಿನ ನೂರಾರು ಜನಗಳ ಜೊತೆ ವ್ಯವಹರಿಸುವಾಗ ಕರುಣೆ, ಮನುಷ್ಯತ್ವ ಮಾಯವಾಗಿ, ಜನ ಬರೀ statistics ಆಗುತ್ತಾರೆ, individual ಆಗಿರುವುದಿಲ್ಲ. ಬಹುಶ ವೈದ್ಯರ ವಿಚಾರದಲ್ಲೂ ಹೀಗೇ ಆಗುತ್ತದೇನೋ. ವರ್ಷಗಟ್ಟಲೆ ರೋಗಿಗಳನ್ನು ನೋಡಿದಾಗ ಅಲ್ಲಿ ಅನುಕಂಪ ಮರೆಯಾಗಿ ರೋಗಿಗಳು ಮನುಷ್ಯರಾಗಿರದೆ ಬರೀ ಮನೆಗೆ ಹೋಗುವ ಮುನ್ನ ಮುಗಿಸಬೇಕಾದ ಕರ್ತವ್ಯವಾಗುತ್ತಾರೆ.
ಸಿಟಿಗಳಲ್ಲಿ ಬೀದಿಗೊಬ್ಬರು ಇಂತಹ money-oriented ವೈದ್ಯರಿದ್ದರೆ, ಹಳ್ಳಿಗಳ ಕಥೆಯೇ ಬೇರೆ. ಅಲ್ಲಿ ದುಡ್ಡು ಕೊಟ್ಟು ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೂ ಡಾಕ್ಟರ್ಗಳೇ ಇಲ್ಲ. ನಮ್ಮ ರಾಜ್ಯದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ. 90ರಷ್ಟರಲ್ಲಿ ವೈದ್ಯರಿಲ್ಲ, ಇದ್ದರೂ ಹೆಸರಿಗೆ ಮಾತ್ರ, ಅವರೆಲ್ಲ ಆಸ್ಪತ್ರೆಗಳಿಗೆ ಬರುವುದೇ ಕಡಿಮೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಟ್ರೈನಿಂಗ್ಗೆಂದು ಬಂದಿದ್ದ ಆಗ ತಾನೆ ಡಿಗ್ರಿ ಮುಗಿಸಿದ ಡಾಕ್ಟರ್ಗಳನ್ನು ಹಳ್ಳಿಗಳಲ್ಲಿ ಬಂದು ಇರಿ ಅಂದರೆ "ನಾವ್ಯಾಕೆ ಇಂತಹ ಕೊಂಪೆಯಲ್ಲಿ, ಕಾಡಲ್ಲಿ ಇರಬೇಕು? ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆಯವರು ನಮ್ಮನ್ನು ಓದಿಸಿದ್ದು ಇಲ್ಲಿ ಬಂದು ನಮ್ಮ ಅವಕಾಶಗಳನ್ನು ಹಾಳು ಮಾಡಿಕೊಳ್ಳುವುದಕ್ಕಲ್ಲ. ನಮಗೆ ಸಿಟಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡಬೇಕು," ಅಂದರು. ಹಾಗಾದರೆ ಬಡವರಿಗೆ ರೋಗಕ್ಕೆ ಚಿಕಿತ್ಸೆ ಪಡೆಯುವ, ಬದುಕುವ ಹಕ್ಕಿಲ್ಲವೇ? ಹಳ್ಳಿಗಳಲ್ಲಿ ಇರುವುದಕ್ಕೆ ಸರಿಯಾದ ಸೌಲಭ್ಯಗಳಿಲ್ಲ, ವೈದ್ಯಕೀಯ ಉಪಕರಣಗಳು, ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯಿಲ್ಲ, ಮಕ್ಕಳಿಗೆ ಶಾಲೆಯಿಲ್ಲ... ಹೀಗೆ ಹತ್ತು ಹಲವು ಕಾರಣಗಳನ್ನು ಹೇಳುತ್ತಾರೆ. ಅದು ನಿಜವೇ ಆದರೂ ಡಾಕ್ಟರ್ಗಳು ಹಳ್ಳಿಗಳಿಗೆ ಹೋಗಲು ಮನಸು ಮಾಡಿದರೆ, ಮುಂದೆ ಬಂದರೆ ಸೌಲಭ್ಯಗಳನ್ನು ಸೃಷ್ಟಿ ಮಾಡುವುದು ಅಷ್ಟು ಕಷ್ಟವಲ್ಲ. ಆದರೆ ಅವರ ಹಿಂಜರಿಕೆಗೆ ಅದೊಂದೆ ಕಾರಣವಲ್ಲ. ಎಲ್ಲರ ತರ ಅವರಿಗೂ ಪೇಟೆಯ ನಾಜೂಕು ಬದುಕು ಬೇಕು. ಇನ್ನು ಹಳ್ಳಿಗಳಲ್ಲಿ ಸೇವೆ ಮಾಡುವುದನ್ನು ಕಡ್ಡಾಯ ಮಾಡಿದರೆ ಅದರಿಂದ ಏನೂ ಉಪಯೋಗವಿಲ್ಲ. ಯಾಕೆಂದರೆ ದುಡ್ಡು, ಪ್ರಭಾವ ಇರುವವರು ಅಲ್ಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಾರೆ, ಸಿಕ್ಕಿಹಾಕಿಕೊಳ್ಳುವುದು ಯಥಾಪ್ರಕಾರ ಬಡ ವೈದ್ಯರು. ಚತ್ತೀಸ್ಘರ್ ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ, ಯಾರೂ ಹೋಗಲು ಒಪ್ಪದ ಕಗ್ಗಾಡಿನಲ್ಲಿ ಸೇವೆ ಮಾಡಲು ಕೆಲ ವೈದ್ಯರು ದಿಲ್ಲಿಯ ತಮ್ಮ ಲಾಭದಾಯಕ ವೃತ್ತಿಯನ್ನು, ಐಷಾರಾಮಿ ಜೀವನವನ್ನು ಬಿಟ್ಟು ಜನ್ ಸ್ವಾಸ್ತ್ಯ ಸಂಸ್ಥಾನ್ ಎನ್ನುವ ಸಂಸ್ಥೆ ಕಟ್ಟಿಕೊಂಡು, ಕಾಡಿನಲ್ಲಿ ಮೈಲಿಗಟ್ಟಲೆ ನಡೆದು, ಸರಿಯಾದ ನೆಲೆ ಇಲ್ಲದಿದ್ದರೂ ರೋಗಿಗಳಿಂದ ಬರೀ ಎರಡರಿಂದ ಐದು ರೂಪಾಯಿ ತೆಗೆದುಕೊಂಡು ಸೇವೆ ಮಾಡುತ್ತಿರುವಾಗ ನಮ್ಮ ಕರ್ನಾಟಕದ ವೈದ್ಯರಿಗೆ ಯಾಕೆ ಸಾಧ್ಯವಿಲ್ಲ?
ಇನ್ನು ಹಳ್ಳಿಗಳಲ್ಲಿ ಸೇವೆ ಮಾಡುವುದಕ್ಕೆ ಮಾತ್ರವಲ್ಲದೆ ಇಡೀ ದೇಶದಲ್ಲಿ ಡಾಕ್ಟರ್ಗಳ ಕೊರತೆ ಇದೆ. 1,722 ಜನರಿಗೆ ಕೇವಲ ಒಬ್ಬ ಅಲೋಪತಿ ವೈದ್ಯರಿದ್ದಾರೆ. ವರ್ಷಕ್ಕೆ ಕೇವಲ 31,000 ಎಂಬಿಬಿಎಸ್ ಪಧವೀಧರರು ಹೊರಬರುತ್ತಾರೆ. ಇವರಲ್ಲಿ ಶೇ. 1ಷ್ಟೂ ಹಳ್ಳಿಗಳಿಗೆ ಹೋಗುವುದಿಲ್ಲ. ಮೊದಲೆಲ್ಲ ಹಳ್ಳಿಗಳಲ್ಲಿ ಡಾಕ್ಟರ್ಗಳಿಲ್ಲದಿದ್ದರೆ ನಾಟಿ ವೈದ್ಯರಿದ್ದರು, ಆಯುರ್ವೇದ ಪಂಡಿತರಿದ್ದರು ಜೊತೆಗೆ ನಂತರ ಹೆರಿಗೆಯಂತಹ ಕೆಲಸಕ್ಕೆ ದಾದಿಯರಿದ್ದರು. ಇವರೆಲ್ಲ ಕಾಲೇಜುಗಳಿಗೆ ಹೋಗಿ ಕಲಿತವರಲ್ಲ. ಈಗಲೂ ಅಷ್ಟೆ ಹಳ್ಳಿ ಜನಗಳಿಗೆ ಡಾಕ್ಟರ್ಗಳ ಅಗತ್ಯವಿದ್ದರೂ ಸಣ್ಣ ಸಣ್ಣ ಖಾಯಿಲೆಗಳಿಗೆ ಚೀನಾದ ’ಬರಿಗಾಲ ವೈದ್ಯರ’ ತರ ನಮ್ಮ ಹಳ್ಳಿಗಳ ಪ್ರಾಥಮಿಕ ಶಿಕ್ಷಣವನ್ನಾದರೂ ಕಲಿತಿರುವ ಜನರಿಗೆ ಟ್ರೈನಿಂಗ್ ಕೊಡಬಹುದು. ಜೊತೆಗೆ ಹಳ್ಳಿಗಳಲ್ಲಿ ಸೇವೆ ಮಾಡಲು ಮೂಲ ಸೌಲಭ್ಯಗಳನ್ನಾದರೂ ಕಲ್ಪಿಸಿದರೆ ಆಸಕ್ತಿಯಿರುವ ವೈದ್ಯರು ಮುಂದೆ ಬಂದಾರು. ಖಾಸಗೀ ಆಸ್ಪತ್ರೆಗಳು ಒಳ್ಳೆಯದೇ, ಆದರೆ ಅದು ಶ್ರೀಮಂತರಿಗೆ, ಪಟ್ಟಣಗಳಲ್ಲಿರುವವರಿಗೆ. ಹಳ್ಳಿಯಲ್ಲಿ ಇರುವವರಿಗೆ, ಬುಡಕಟ್ಟು ಜನಾಂಗಗಳಿಗೆ, ನೂರಾರು ಮೈಲಿ ಕಾಡಿನಲ್ಲಿ ಇರುವವರಿಗೆ ಸರಕಾರದ ಸವಲತ್ತುಗಳೇ ಗತಿ. ಅಲ್ಲಿಗೆ ಯಾವ ಖಾಸಗಿ ಆಸ್ಪತ್ರೆಯೂ ಕಾಲಿಡುವುದಿಲ್ಲ.
ದಾವಣಗೆರೆಯಲ್ಲಿ ಡಾ. ಕೇಶವಾಚಾರ್ಯ ಎನ್ನುವ ಪಶು ವೈದ್ಯರಿದ್ದಾರೆ. ತುಂಬಾ ವರ್ಷಗಳ ಹಿಂದೆ ಸರ್ಕಸ್ನ ಒಂದು ಆನೆಗೆ ಅವರು ಚಿಕಿತ್ಸೆ ನೀಡಿದ್ದರು ಮತ್ತು ಅದನ್ನು ಮರೆತಿದ್ದರು. ಹಲವು ವರ್ಷಗಳಾದ ಮೇಲೆ ಒಂದು ದಿನ ಅವರ ಆಸ್ಪತ್ರೆಯ ಎದುರು ಒಂದು ಆನೆ ಬಂದು ನಿಂತಿತ್ತು. ಜನರೆಲ್ಲ ಭಯದಿಂದ ಅದನ್ನು ನೋಡಿ ಓಡುತ್ತಿದ್ದರು. ಆದರೆ ಅದು ಬಂದಿದ್ದು ತನಗೆ ಚಿಕಿತ್ಸೆ ನೀಡಿದ ವೈದ್ಯರನ್ನು ನೋಡಲು. ಎಷ್ಟೋ ವರ್ಷಗಳಾದ ಮೇಲೆ ಆ ಊರಿಗೆ ಅದೇ ಸರ್ಕಸ್ ಬಂದಿತ್ತು ಮತ್ತು ಆ ಆನೆ ತನಗೆ ಜೀವ ನೀಡಿದ ವೈದ್ಯರನ್ನು ಹುಡುಕಿಕೊಂಡು ಬಂದಿತ್ತು. ಇದು ವೈದ್ಯರ-ರೋಗಿಯ ಮಧ್ಯೆ ಇರಬೇಕಾದ ಬಾಂಧವ್ಯ. ಆದರೆ ಈಗ ವೈದ್ಯರಲ್ಲಿ ಆ ಕರ್ತವ್ಯ ನಿಷ್ಟೆಯಿಲ್ಲ, ರೋಗಿಗಳಲ್ಲಿ ಆ ಕೃತಜ್ನತೆಯಿಲ್ಲ.
ಮೊನ್ನೆ ಜುಲೈ 1 'National Doctors Day'. ಪ್ರತಿ ಸಲದಂತೆ ಈ ಸಲವೂ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ರಕ್ತದಾನ ಶಿಬಿರಗಳು ನಡೆದವು. ಇಷ್ಟೇನಾ ನಮ್ಮನ್ನು ಕಾಯುವ ವೈದ್ಯರ ಕರ್ತವ್ಯ?
ಇದು ’ಉಚಿತ’ ಸರಕಾರಿ ಆಸ್ಪತ್ರೆಗಳ ಕಥೆ ಮಾತ್ರ ಅಲ್ಲ. ಖಾಸಗಿ ಆಸ್ಪತ್ರೆಗಳೂ ನಾನಾ ಕಾರಣ ಹೇಳಿ ಸತ್ತವರನ್ನು ಇನ್ನೂ ಬದುಕಿದ್ದಾರೆಂದು ಯಾರಿಗೂ ತೋರಿಸದೆ ಲಕ್ಷಾಂತರ ರೂಪಾಯಿ ವಸೂಲಿ ಮಾಡುವುದೂ ಸಾಮಾನ್ಯ.
ಇಷ್ಟಲ್ಲಾ ಅನಾಗರಿಕವಾಗಿ ನಡೆದುಕೊಳ್ಳುವವರು ಅನಕ್ಷರಸ್ತರಲ್ಲ, ಅಮಾಯಕರೂ ಅಲ್ಲ. ರೋಗಿಗಳ ಸೇವೆ ಮಾಡುತ್ತೇವೆಂದು ಐದೂವರೆ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಡಿಕಲ್, ನರ್ಸಿಂಗ್ ಓದಿ ಬಂದಿರುವ ಡಾಕ್ಟರ್ಗಳು, ನರ್ಸ್ಗಳು. ತಮ್ಮ ಮಕ್ಕಳು ಮೆಡಿಕಲ್ ಓದುತ್ತಾರೆಂದರೆ ಅಪ್ಪ-ಅಮ್ಮಂದಿರಿಗೆ ಹೆಮ್ಮೆ, ಮಕ್ಕಳು ಬೇರೆಯವರ ಜೀವ ಉಳಿಸುವ ಪುಣ್ಯದ ಕೆಲಸ ಮಾಡುತ್ತಾರೆ ಎಂದು. ಅವರಿಗೂ ಅಷ್ಟೆ ಮೊದಲು ಇರುವ ಆದರ್ಶಗಳು ಓದಿ ಮುಗಿದು ಡಾಕ್ಟರ್ ಆದಾಗ ಎಲ್ಲಿ ಹೋಗುತ್ತವೆ? ಮೊನ್ನೆ ಯಾರೋ ಕೇಳಿದರು ರಾಜಕಾರಣಿಗಳು ಮನುಷ್ಯರಲ್ಲವೆ? ಅವರಿಗೂ ಕರುಣೆ ಇಲ್ಲವೆ ಎಂದು? ಅವರೂ ನಮ್ಮ ನಿಮ್ಮ ಹಾಗೆ ಮನುಷ್ಯರೇ. ಅವರಿಗೂ ಸಂಬಂಧಗಳು, ಮಾನವೀಯತೆ ಎಲ್ಲಾ ಇರುತ್ತವೆ. ಆದರೆ ಪ್ರತಿ ದಿನ ನೂರಾರು ಜನಗಳ ಜೊತೆ ವ್ಯವಹರಿಸುವಾಗ ಕರುಣೆ, ಮನುಷ್ಯತ್ವ ಮಾಯವಾಗಿ, ಜನ ಬರೀ statistics ಆಗುತ್ತಾರೆ, individual ಆಗಿರುವುದಿಲ್ಲ. ಬಹುಶ ವೈದ್ಯರ ವಿಚಾರದಲ್ಲೂ ಹೀಗೇ ಆಗುತ್ತದೇನೋ. ವರ್ಷಗಟ್ಟಲೆ ರೋಗಿಗಳನ್ನು ನೋಡಿದಾಗ ಅಲ್ಲಿ ಅನುಕಂಪ ಮರೆಯಾಗಿ ರೋಗಿಗಳು ಮನುಷ್ಯರಾಗಿರದೆ ಬರೀ ಮನೆಗೆ ಹೋಗುವ ಮುನ್ನ ಮುಗಿಸಬೇಕಾದ ಕರ್ತವ್ಯವಾಗುತ್ತಾರೆ.
ಸಿಟಿಗಳಲ್ಲಿ ಬೀದಿಗೊಬ್ಬರು ಇಂತಹ money-oriented ವೈದ್ಯರಿದ್ದರೆ, ಹಳ್ಳಿಗಳ ಕಥೆಯೇ ಬೇರೆ. ಅಲ್ಲಿ ದುಡ್ಡು ಕೊಟ್ಟು ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೂ ಡಾಕ್ಟರ್ಗಳೇ ಇಲ್ಲ. ನಮ್ಮ ರಾಜ್ಯದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ. 90ರಷ್ಟರಲ್ಲಿ ವೈದ್ಯರಿಲ್ಲ, ಇದ್ದರೂ ಹೆಸರಿಗೆ ಮಾತ್ರ, ಅವರೆಲ್ಲ ಆಸ್ಪತ್ರೆಗಳಿಗೆ ಬರುವುದೇ ಕಡಿಮೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಟ್ರೈನಿಂಗ್ಗೆಂದು ಬಂದಿದ್ದ ಆಗ ತಾನೆ ಡಿಗ್ರಿ ಮುಗಿಸಿದ ಡಾಕ್ಟರ್ಗಳನ್ನು ಹಳ್ಳಿಗಳಲ್ಲಿ ಬಂದು ಇರಿ ಅಂದರೆ "ನಾವ್ಯಾಕೆ ಇಂತಹ ಕೊಂಪೆಯಲ್ಲಿ, ಕಾಡಲ್ಲಿ ಇರಬೇಕು? ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆಯವರು ನಮ್ಮನ್ನು ಓದಿಸಿದ್ದು ಇಲ್ಲಿ ಬಂದು ನಮ್ಮ ಅವಕಾಶಗಳನ್ನು ಹಾಳು ಮಾಡಿಕೊಳ್ಳುವುದಕ್ಕಲ್ಲ. ನಮಗೆ ಸಿಟಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡಬೇಕು," ಅಂದರು. ಹಾಗಾದರೆ ಬಡವರಿಗೆ ರೋಗಕ್ಕೆ ಚಿಕಿತ್ಸೆ ಪಡೆಯುವ, ಬದುಕುವ ಹಕ್ಕಿಲ್ಲವೇ? ಹಳ್ಳಿಗಳಲ್ಲಿ ಇರುವುದಕ್ಕೆ ಸರಿಯಾದ ಸೌಲಭ್ಯಗಳಿಲ್ಲ, ವೈದ್ಯಕೀಯ ಉಪಕರಣಗಳು, ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯಿಲ್ಲ, ಮಕ್ಕಳಿಗೆ ಶಾಲೆಯಿಲ್ಲ... ಹೀಗೆ ಹತ್ತು ಹಲವು ಕಾರಣಗಳನ್ನು ಹೇಳುತ್ತಾರೆ. ಅದು ನಿಜವೇ ಆದರೂ ಡಾಕ್ಟರ್ಗಳು ಹಳ್ಳಿಗಳಿಗೆ ಹೋಗಲು ಮನಸು ಮಾಡಿದರೆ, ಮುಂದೆ ಬಂದರೆ ಸೌಲಭ್ಯಗಳನ್ನು ಸೃಷ್ಟಿ ಮಾಡುವುದು ಅಷ್ಟು ಕಷ್ಟವಲ್ಲ. ಆದರೆ ಅವರ ಹಿಂಜರಿಕೆಗೆ ಅದೊಂದೆ ಕಾರಣವಲ್ಲ. ಎಲ್ಲರ ತರ ಅವರಿಗೂ ಪೇಟೆಯ ನಾಜೂಕು ಬದುಕು ಬೇಕು. ಇನ್ನು ಹಳ್ಳಿಗಳಲ್ಲಿ ಸೇವೆ ಮಾಡುವುದನ್ನು ಕಡ್ಡಾಯ ಮಾಡಿದರೆ ಅದರಿಂದ ಏನೂ ಉಪಯೋಗವಿಲ್ಲ. ಯಾಕೆಂದರೆ ದುಡ್ಡು, ಪ್ರಭಾವ ಇರುವವರು ಅಲ್ಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಾರೆ, ಸಿಕ್ಕಿಹಾಕಿಕೊಳ್ಳುವುದು ಯಥಾಪ್ರಕಾರ ಬಡ ವೈದ್ಯರು. ಚತ್ತೀಸ್ಘರ್ ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ, ಯಾರೂ ಹೋಗಲು ಒಪ್ಪದ ಕಗ್ಗಾಡಿನಲ್ಲಿ ಸೇವೆ ಮಾಡಲು ಕೆಲ ವೈದ್ಯರು ದಿಲ್ಲಿಯ ತಮ್ಮ ಲಾಭದಾಯಕ ವೃತ್ತಿಯನ್ನು, ಐಷಾರಾಮಿ ಜೀವನವನ್ನು ಬಿಟ್ಟು ಜನ್ ಸ್ವಾಸ್ತ್ಯ ಸಂಸ್ಥಾನ್ ಎನ್ನುವ ಸಂಸ್ಥೆ ಕಟ್ಟಿಕೊಂಡು, ಕಾಡಿನಲ್ಲಿ ಮೈಲಿಗಟ್ಟಲೆ ನಡೆದು, ಸರಿಯಾದ ನೆಲೆ ಇಲ್ಲದಿದ್ದರೂ ರೋಗಿಗಳಿಂದ ಬರೀ ಎರಡರಿಂದ ಐದು ರೂಪಾಯಿ ತೆಗೆದುಕೊಂಡು ಸೇವೆ ಮಾಡುತ್ತಿರುವಾಗ ನಮ್ಮ ಕರ್ನಾಟಕದ ವೈದ್ಯರಿಗೆ ಯಾಕೆ ಸಾಧ್ಯವಿಲ್ಲ?
ಇನ್ನು ಹಳ್ಳಿಗಳಲ್ಲಿ ಸೇವೆ ಮಾಡುವುದಕ್ಕೆ ಮಾತ್ರವಲ್ಲದೆ ಇಡೀ ದೇಶದಲ್ಲಿ ಡಾಕ್ಟರ್ಗಳ ಕೊರತೆ ಇದೆ. 1,722 ಜನರಿಗೆ ಕೇವಲ ಒಬ್ಬ ಅಲೋಪತಿ ವೈದ್ಯರಿದ್ದಾರೆ. ವರ್ಷಕ್ಕೆ ಕೇವಲ 31,000 ಎಂಬಿಬಿಎಸ್ ಪಧವೀಧರರು ಹೊರಬರುತ್ತಾರೆ. ಇವರಲ್ಲಿ ಶೇ. 1ಷ್ಟೂ ಹಳ್ಳಿಗಳಿಗೆ ಹೋಗುವುದಿಲ್ಲ. ಮೊದಲೆಲ್ಲ ಹಳ್ಳಿಗಳಲ್ಲಿ ಡಾಕ್ಟರ್ಗಳಿಲ್ಲದಿದ್ದರೆ ನಾಟಿ ವೈದ್ಯರಿದ್ದರು, ಆಯುರ್ವೇದ ಪಂಡಿತರಿದ್ದರು ಜೊತೆಗೆ ನಂತರ ಹೆರಿಗೆಯಂತಹ ಕೆಲಸಕ್ಕೆ ದಾದಿಯರಿದ್ದರು. ಇವರೆಲ್ಲ ಕಾಲೇಜುಗಳಿಗೆ ಹೋಗಿ ಕಲಿತವರಲ್ಲ. ಈಗಲೂ ಅಷ್ಟೆ ಹಳ್ಳಿ ಜನಗಳಿಗೆ ಡಾಕ್ಟರ್ಗಳ ಅಗತ್ಯವಿದ್ದರೂ ಸಣ್ಣ ಸಣ್ಣ ಖಾಯಿಲೆಗಳಿಗೆ ಚೀನಾದ ’ಬರಿಗಾಲ ವೈದ್ಯರ’ ತರ ನಮ್ಮ ಹಳ್ಳಿಗಳ ಪ್ರಾಥಮಿಕ ಶಿಕ್ಷಣವನ್ನಾದರೂ ಕಲಿತಿರುವ ಜನರಿಗೆ ಟ್ರೈನಿಂಗ್ ಕೊಡಬಹುದು. ಜೊತೆಗೆ ಹಳ್ಳಿಗಳಲ್ಲಿ ಸೇವೆ ಮಾಡಲು ಮೂಲ ಸೌಲಭ್ಯಗಳನ್ನಾದರೂ ಕಲ್ಪಿಸಿದರೆ ಆಸಕ್ತಿಯಿರುವ ವೈದ್ಯರು ಮುಂದೆ ಬಂದಾರು. ಖಾಸಗೀ ಆಸ್ಪತ್ರೆಗಳು ಒಳ್ಳೆಯದೇ, ಆದರೆ ಅದು ಶ್ರೀಮಂತರಿಗೆ, ಪಟ್ಟಣಗಳಲ್ಲಿರುವವರಿಗೆ. ಹಳ್ಳಿಯಲ್ಲಿ ಇರುವವರಿಗೆ, ಬುಡಕಟ್ಟು ಜನಾಂಗಗಳಿಗೆ, ನೂರಾರು ಮೈಲಿ ಕಾಡಿನಲ್ಲಿ ಇರುವವರಿಗೆ ಸರಕಾರದ ಸವಲತ್ತುಗಳೇ ಗತಿ. ಅಲ್ಲಿಗೆ ಯಾವ ಖಾಸಗಿ ಆಸ್ಪತ್ರೆಯೂ ಕಾಲಿಡುವುದಿಲ್ಲ.
ದಾವಣಗೆರೆಯಲ್ಲಿ ಡಾ. ಕೇಶವಾಚಾರ್ಯ ಎನ್ನುವ ಪಶು ವೈದ್ಯರಿದ್ದಾರೆ. ತುಂಬಾ ವರ್ಷಗಳ ಹಿಂದೆ ಸರ್ಕಸ್ನ ಒಂದು ಆನೆಗೆ ಅವರು ಚಿಕಿತ್ಸೆ ನೀಡಿದ್ದರು ಮತ್ತು ಅದನ್ನು ಮರೆತಿದ್ದರು. ಹಲವು ವರ್ಷಗಳಾದ ಮೇಲೆ ಒಂದು ದಿನ ಅವರ ಆಸ್ಪತ್ರೆಯ ಎದುರು ಒಂದು ಆನೆ ಬಂದು ನಿಂತಿತ್ತು. ಜನರೆಲ್ಲ ಭಯದಿಂದ ಅದನ್ನು ನೋಡಿ ಓಡುತ್ತಿದ್ದರು. ಆದರೆ ಅದು ಬಂದಿದ್ದು ತನಗೆ ಚಿಕಿತ್ಸೆ ನೀಡಿದ ವೈದ್ಯರನ್ನು ನೋಡಲು. ಎಷ್ಟೋ ವರ್ಷಗಳಾದ ಮೇಲೆ ಆ ಊರಿಗೆ ಅದೇ ಸರ್ಕಸ್ ಬಂದಿತ್ತು ಮತ್ತು ಆ ಆನೆ ತನಗೆ ಜೀವ ನೀಡಿದ ವೈದ್ಯರನ್ನು ಹುಡುಕಿಕೊಂಡು ಬಂದಿತ್ತು. ಇದು ವೈದ್ಯರ-ರೋಗಿಯ ಮಧ್ಯೆ ಇರಬೇಕಾದ ಬಾಂಧವ್ಯ. ಆದರೆ ಈಗ ವೈದ್ಯರಲ್ಲಿ ಆ ಕರ್ತವ್ಯ ನಿಷ್ಟೆಯಿಲ್ಲ, ರೋಗಿಗಳಲ್ಲಿ ಆ ಕೃತಜ್ನತೆಯಿಲ್ಲ.
ಮೊನ್ನೆ ಜುಲೈ 1 'National Doctors Day'. ಪ್ರತಿ ಸಲದಂತೆ ಈ ಸಲವೂ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ರಕ್ತದಾನ ಶಿಬಿರಗಳು ನಡೆದವು. ಇಷ್ಟೇನಾ ನಮ್ಮನ್ನು ಕಾಯುವ ವೈದ್ಯರ ಕರ್ತವ್ಯ?
Sunday, May 23, 2010
ಕಠೋರ ವಾಸ್ತವಗಳ ನಡುವೆ ಕಮರಿ ಹೋದೀತೇ ಶಿಕ್ಷಣದ ಹಕ್ಕು?
ಮೈಸೂರಿನ ಅತ್ಯಂತ ಜನನಿಬಿಡ ಸಯ್ಯಾಜಿರಾವ್ ರಸ್ತೆಯಲ್ಲಿ ನಂಜೆ ಕತ್ತಲಲ್ಲಿ ಹಳೆ ಪುಸ್ತಕ ಮಾರುವವನ ಹತ್ತಿರ ಪುಸ್ತಕ ನೋಡುತ್ತಾ ನಿಂತಿದ್ದೆ. ಯಾರೋ ಕರೆದ ಹಾಗಾಯಿತು, ನೋಡಿದರೆ ನಮ್ಮ ಸುತ್ತ ರಸ್ತೆ ಬದಿಯಲ್ಲಿ, ಟ್ರಾಫಿಕ್ ಸಿಗ್ನಲ್ಗಳಲ್ಲಿ ಕಾಣಸಿಗುವ, ನಾವು ಯಾವತ್ತೂ ತಲೆ ಕೆಡಿಸಿಕೊಳ್ಳಲು ಹೋಗದ ಭಿಕ್ಷುಕ ಹುಡುಗಿ, ಜೊತೆಯಲ್ಲಿ ಆಗ ತಾನೆ ನಡೆಯಲು ಕಲಿತ ಮಗು. ಏನು ಬೇಕು ಅಂತ ಕೇಳಿದೆ. ನನ್ನನ್ನು ವಿಚಿತ್ರವಾಗಿ ನೋಡಿದ ಅವಳು, ದುಡ್ಡು ಅಂದಳು. ಅಪ್ಪ-ಅಮ್ಮ ಎಲ್ಲಿ, ಈ ಕತ್ತಲಲ್ಲಿ ಎಲ್ಲಿ ಇರ್ತೀಯ ಅಂತ ಕೇಳಿದೆ. ಅಮ್ಮ, ಅಪ್ಪ ಇಬ್ರೂ ಹಳ್ಳೀಲಿ ಇದಾರೆ, ಇಲ್ಲೇ ಸ್ವಲ್ಪ ದೂರದಲ್ಲಿ ಅರ್ಧ ಕಟ್ಟಿರೋ ಬಿಲ್ಡಿಂಗ್ನಲ್ಲಿ ನಾನಿರೋದು, ಅಂದಳು. ಶಾಲೆಗೆ ಹೋಗಲ್ವಾ ಅಂತ ಕೇಳಿದ್ದಕ್ಕೆ ಇಲ್ಲ, ಅಮ್ಮಂಗೆ ದುಡ್ಡು ಕಳಿಸಬೇಕು ಅಂದಳು. ನಮ್ಮ ಮಕ್ಕಳು ಸ್ಕೂಲಿಂದ ಮನೆಗೆ ಬರೋದು ಅರ್ಧ ಗಂಟೆ ತಡ ಆದರೆ ಚಡಪಡಿಸುವ ನಾವು ಈ ಪುಟ್ಟ ಮಕ್ಕಳು ಅಪ್ಪ, ಅಮ್ಮಂದಿರನ್ನು ಬಿಟ್ಟು ಬೇರೆ ಯಾವುದೋ ಊರಿಗೆ ಒಂಟಿಯಾಗಿ ಬಂದು ಭಿಕ್ಷೆ ಬೇಡುವಾಗ ಬೈದು ಓಡಿಸ್ತೀವಲ್ಲ ಅಂತ ಬೇಜಾರಾಯಿತು. ಇನ್ನೊಂದು ದಿನ ಸಿಟಿ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡಲು ಬಂದ ಹುಡುಗನನ್ನು ಅಲ್ಲಿನ ಅಧಿಕಾರಿಗಳು ಹೊಡೆದು ಓಡಿಸಿದ್ದು ನೆನಪಾಯಿತು. ಜೊತೆಗೆ ಹೋಟೆಲ್ನಲ್ಲಿ ಮಾಸಿದ ಬಟ್ಟೆ ಹಾಕಿಕೊಂಡು, ಬಳಲಿದ ಮುಖ ಹೊತ್ತುಕೊಂಡು ಮಾಲಿಕನ ಕೈಲಿ ಬೈಸಿಕೊಂಡು ಟೇಬಲ್ ಒರೆಸಲು ಬಂದ ಹುಡುಗ, ಪಾರ್ಕಿನಲ್ಲಿ ಪೋಲೀಸರು ಹಿಡಿಯುತ್ತಾರೆ ಎಂದು ಓಡಿಹೋದ ಭಿಕ್ಷೆ ಬೇಡುತ್ತಿದ್ದ ಹುಡುಗರು.
ಇವರೆಲ್ಲ ಯಾವಾಗ ದಿನಾ ಬೆಳಿಗ್ಗೆ ನಮ್ಮ ಮಕ್ಕಳ ತರ ಯೂನಿಫಾರ್ಮ್ ಹಾಕಿಕೊಂಡು, ಕೈಯಲ್ಲಿ ಸ್ಕೂಲ್ ಬ್ಯಾಗ್ ಹಿಡಿದುಕೊಂಡು, ಇವತ್ತು ಹೋಮ್ವರ್ಕ್ ಮಾಡಿದೀಯಾ ಅಂತ ಗೆಳೆಯರ ಜೊತೆ ಚರ್ಚೆ ಮಾಡಿಕೊಂಡು ಶಾಲೆಗೆ ಹೋಗೋದು? ಬಹುಶ ಸಾಧ್ಯವಿಲ್ಲ ಅನ್ನಿಸುತ್ತಿದೆ. ಮಕ್ಕಳನ್ನು ಪ್ರಾಥಮಿಕ ಶಿಕ್ಷಣದ ಕಡೆಗೆ ಸೆಳೆಯುವ ನಮ್ಮ ಸರಕಾರಗಳ ಬಣ್ಣಬಣ್ಣದ ಯೋಜನೆಗಳಲ್ಲಿ ಹೆಚ್ಚಿನವು ಇಲ್ಲಿವರೆಗೆ ತೀರಾ ಬಡವರ್ಗದವರನ್ನು ಮುಟ್ಟಿಲ್ಲ, ಮುಟ್ಟುವುದೂ ಇಲ್ಲ. ಇದೇ ನಿಟ್ಟಿನಲ್ಲಿ ಇಂತಹ ಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೇಂದ್ರ ಸರಕಾರ ಹೊರತಂದ ಮೂಲಭೂತ ಶಿಕ್ಷಣ ಹಕ್ಕು ಕಾಯಿದೆ (Right to Education Act) ಕೂಡ ಬಹುಶ ಅಂತಹ ಅರೆಬೆಂದ ಯೋಜನೆಗಳ ಮಧ್ಯೆ ಕಳೆದುಹೋಗಬಹುದು. ದೇಶದ ಎಲ್ಲಾ ಮಕ್ಕಳಿಗೂ ಉಚಿತ ಮೂಲಭೂತ ಶಿಕ್ಷಣವನ್ನು ಸುಪ್ರೀಂಕೋರ್ಟ್ ಪ್ರತಿಪಾದಿಸಿದ 17 ವರ್ಷಗಳ ನಂತರ ಬಂದ ಈ ಕಾಯಿದೆ ಅತಿ ಮುಖ್ಯವಾಗಿ ತಲುಪಬೇಕಾಗಿರುವುದು ದನ ಕಾಯುವ, ಹೋಟೆಲ್ಗಳಲ್ಲಿ ಕೆಲಸ ಮಾಡುವ, ಮನೆಗೆಲಸ ಮಾಡುವ ಮತ್ತು ಮುಖ್ಯವಾಗಿ ಬಾಲ್ಯ ವಿವಾಹವಾಗುವ ಇಂತಹ ’ಅಗೋಚರ’ ಮಕ್ಕಳ ಹತ್ತಿರ, ಶಾಲೆಗೆ ಹೋಗಿಯೂ ತಿಂಗಳೊಳಗೆ ತಿರುಗಿ ಕೆಲಸಕ್ಕೆ ಮರಳುವ ಮಕ್ಕಳ ಮತ್ತು ಬಡವರೆಂಬ ಒಂದೇ ಕಾರಣಕ್ಕೆ ಬುದ್ದಿವಂತರಿದ್ದರೂ ಯಾವ ಸೌಕರ್ಯಗಳೂ ಇಲ್ಲದ, ಶಿಕ್ಷಕರಿಲ್ಲದ ಸರಕಾರಿ ಶಾಲೆಗಳಲ್ಲಿ ಪರದಾಡುವ ಮಕ್ಕಳ ಹತ್ತಿರ.
"...ನಮ್ಮ ಸಂವಿಧಾನದ ಪ್ರತಿಪಾದಕರು ಜೋಪಡಿಗಳನ್ನು ಕಟ್ಟಿ, ಮಕ್ಕಳಿಗೆ ಅಲ್ಲಿ ಅನುಭವವಿಲ್ಲದ ಶಿಕ್ಷಕರನ್ನು ಕೊಟ್ಟು, ಕೆಟ್ಟ ಪಠ್ಯಪುಸ್ತಕಗಳನ್ನು ಓದಲು ಕೊಟ್ಟು, ಆಟವಾಡಲು ಮೈದಾನ ಕೊಡದೆ ಪ್ರಾಥಮಿಕ ಶಿಕ್ಷಣ ಬೆಳೆಯುತ್ತಿದೆ ಎಂದು ಹೇಳಿಕೊಳ್ಳಲು ಇಚ್ಚಿಸಲಿಲ್ಲ... ಅವರು ಆರರಿಂದ ಹದಿನಾಲ್ಕು ವರ್ಷದ ಮಕ್ಕಳಿಗೆ ನಿಜವಾದ ಶಿಕ್ಷಣ ಕೊಡಬೇಕೆಂದು ಅಂದುಕೊಂಡರು," ಎಂದು ಹೇಳುತ್ತದೆ RTE Act ಸಮಿತಿಯ ಒಂದು ವರದಿ.
ಆದರೆ ನಿಜವಾದ ಶಿಕ್ಷಣ ಅಂದರೆ ಏನು? ಮೂಲಭೂತ ಶಿಕ್ಷಣ ಕಾಯಿದೆ ಪ್ರಕಾರ ಒಂದು ಮಗುವಿನ ಕಲಿಕೆ ಭಯ ಮುಕ್ತ ವಾತಾವರಣದಲ್ಲಿ, ಅಂದರೆ ಶಿಕ್ಷೆಗಳಿಂದ ಮುಕ್ತ ಪರಿಸರದಲ್ಲಿ ನಡೆಯಬೇಕು, ಮೂರು ವರ್ಷಗಳಲ್ಲಿ ಸರಕಾರ ಪ್ರತಿ ಕಿಲೋಮೀಟರ್ಗೂ ಒಂದು ಶಾಲೆ ತೆರೆಯಬೇಕು, ಆಯಾ ಪ್ರದೇಶದ ಸಾಮಜಿಕ ಹಾಗೂ ಸಾಂಸ್ಕೃತಿಕ ಅಡೆತಡೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯುಂಟು ಮಾಡದ ಹಾಗೆ ಸರಕಾರ ನೋಡಿಕೊಳ್ಳಬೇಕು, ಪ್ರತಿ 30 ಮಕ್ಕಳಿಗೆ ಒಬ್ಬ ಶಿಕ್ಷಕ ಇರಲೇಬೇಕು, ಇದೆಲ್ಲದರ ಜೊತೆಗೆ ತಮ್ಮ ಮಕ್ಕಳು ಉಚಿತ ಕಲಿಕೆಯಿಂದ ವಂಚಿತರಾದರೆ ಹೆತ್ತವರು ಕೇಸ್ ಹಾಕಬಹುದು, ಹೀಗೆ ಹತ್ತು ಹಲವು...
ಆದರೆ ಇವೆಲ್ಲ ಅನುಷ್ಟಾನಕ್ಕೆ ಬರುವುದು ಯಾವಾಗ? ಯಾರಿಂದ? ನಾವೆಷ್ಟೇ ಭಾರತೀಯ ಶಿಕ್ಷಣ ಪದ್ಧತಿ ಶ್ರೇಷ್ಠ ಎಂದು ಬೀಗಿದರೂ ಇಲ್ಲಿರುವಷ್ಟು ಸಾಮಾಜಿಕ, ಶೈಕ್ಷಣಿಕ ಅರಾಜಕತೆ ಇನ್ನೆಲ್ಲೂ ಇಲ್ಲ. ಹಳ್ಳಿಗಳಲ್ಲಿ ಇನ್ನೂ ಮರದ ಕೆಳಗೆ ಪಾಠ ನಡೆಯುತ್ತಿದೆ, ಶಾಲಾ ಕಟ್ಟಡಗಳು ದನ, ಕುರಿ ದೊಡ್ಡಿಗಳಾಗಿವೆ. ಇನ್ನು ನಮ್ಮ ರಾಜ್ಯದ ಶಾಲೆಗಳಿಗೆ 35,೦೦೦ರಿಂದ 50,000 ಶೌಚಾಲಯಗಳ ಅಗತ್ಯವಿದೆ. ಇವತ್ತಿಗೂ ಹೆಣ್ಣುಮಕ್ಕಳಿಗೆ ಅಲ್ಲಿ ಬಯಲು, ಪೊದೆಗಳೇ ಶೌಚಾಲಯಗಳು. ಇದು ಸರಕಾರಿ ಶಾಲೆಗಳ ಗತಿಯಾದರೆ ಖಾಸಗಿ ಶಾಲೆಗಳೇನು ಕಮ್ಮಿಯಿಲ್ಲ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ, ಬಹುಮಹಡಿ ಕಟ್ಟಡದ ಮೇಲಂತಸ್ತಿನಲ್ಲಿ ಶಾಲೆಗಳಿವೆ. ಮಕ್ಕಳಿಗೆ ಬೇಕಾದ basic infrastructure ಅಲ್ಲಿಲ್ಲ, ಕೆಳಗೆ ನೋಡಿದರೆ ರಸ್ತೆ, ವಾಹನಗಳ ಸದ್ದು. ದೊಡ್ಡಿ ತರ ನೂರಾರು ಮಕ್ಕಳನ್ನು ಒಂದೇ ತರಗತಿಗೆ ತುಂಬಿರುತ್ತಾರೆ. ಇನ್ನು ಆಟದ ಮೈದಾನಗಳ ಬಗ್ಗೆ ಕೇಳುವುದೇ ಬೇಡ. Central Finance Commission ಈ ಕಾಯಿದೆ ಜಾರಿಗೆ ತರಲು ಬಿಡುಗಡೆ ಮಾಡಿದ 25,000 ಕೋಟಿ ರೂ. ಮತ್ತು ಕೇಂದ್ರ ಕೊಡುತ್ತಿರುವ 15,000 ಕೋಟಿ ರೂ. ಇಡೀ ದೇಶದ ಸರಕಾರಿ ಶಾಲೆಗಳಿಗೆ ಏನೇನೂ ಸಾಲದು. ಯಾಕೆಂದರೆ ಮೊದಲು ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಬೇಕು, ಆಮೇಲೆ ತಾನೆ ಮಕ್ಕಳನ್ನು ಶಾಲೆಗೆ ಕರೆತರಲು ಸಾಧ್ಯ? ಒಂದು ಸಂತಸದ ವಿಷಯವೆಂದರೆ ಈಗ ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಖಾಸಗಿ ಶಾಲೆಗಳಿಗಿಂತ ಚೆನ್ನಾಗಿದೆ. ಇದಕ್ಕೆ ಉದಾಹರಣೆ ಈ ಸಲದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಶೇಕಡಾ ಸೊನ್ನೆ ತೆಗೆದ 86 ಶಾಲೆಗಳಲ್ಲಿ ಕೇವಲ 2 ಸರಕಾರಿ ಶಾಲೆಗಳು.
ಕರ್ನಾಟಕವೊಂದರಲ್ಲೇ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 50,000 ಶಿಕ್ಷಕರ ಅಗತ್ಯ ಇದೆ. ಮೂಲಭೂತ ಶಿಕ್ಷಣ ಕಾಯಿದೆ ಪ್ರಕಾರ 30 ಮಕ್ಕಳಿಗೆ ಒಬ್ಬ ಶಿಕ್ಷಕ ಇರಬೇಕೆಂದರೆ 1.5 ಲಕ್ಷ ಶಿಕ್ಷಕರ ಮತ್ತು ಸರ್ವ ಶಿಕ್ಷಣ ಅಭಿಯಾನದ ಕೆಳಗೆ ಇನ್ನೂ 2.25 ಲಕ್ಷ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಈ ನೇಮಕಾತಿಯಿಂದ ನಮ್ಮ ಶಾಲೆಗಳ, ಅಲ್ಲಿ ಸಿಗುವ ಶಿಕ್ಷಣದ ಗುಣಮಟ್ಟ ಹೆಚ್ಚಾಗುವುದಿಲ್ಲ. ಆದರೆ ಶಿಕ್ಷಕರಿಲ್ಲದೆ ಪರದಾಡುವ ಮಕ್ಕಳ ಪರಿಪಾಟಲು ಕಡಿಮೆಯಾಗುತ್ತದೆ, ಇರುವ ಕೆಲವೇ ಶಿಕ್ಷಕರ ಮೇಲಿರುವ ಭಾರ ಕಡಿಮೆಯಾಗುತ್ತದೆ. UNESCOದ ಭಾರತೀಯ ಶಿಕ್ಷಣದ ಮೇಲಿನ ಒಂದು ಅಧ್ಯಯನದ ಪ್ರಕಾರ ನಾವು ಶಿಕ್ಷಣದಲ್ಲಿನ ಭ್ರಷ್ಟತೆಯಲ್ಲಿ (Corruption in education) ಇಡೀ ಪ್ರಪಂಚದಲ್ಲಿ ಎರಡನೆ ಸ್ಥಾನದಲ್ಲಿದ್ದೇವೆ, ಉಗಾಂಡದ ನಂತರ; ಅದಕ್ಕೆ ಮುಖ್ಯ ಕಾರಣ ಶಾಲೆಗಳಲ್ಲಿ ಶಿಕ್ಷಕರ ಗೈರುಹಾಜರು. ಇದಕ್ಕೆ ಒತ್ತು ಕೊಟ್ಟಂತೆ ನೇಮಕಾತಿ, ವರ್ಗಾವಣೆಯಲ್ಲಿ ರಾಜಕೀಯ, ಶಿಕ್ಷಕರೇ ನಡೆಸುವ ಖಾಸಗಿ ಟ್ಯೂಷನ್ಗಳು. ಜೊತೆಗೆ ಪರೀಕ್ಷೆಯಲ್ಲಿ ನಡೆಯುವ ಅವ್ಯವಹಾರ; ಒಂದು ಮೆಡಿಕಲ್, ಮ್ಯಾನೇಜ್ಮೆಂಟ್, ಇಂಜಿನಿಯರಿಂಗ್ ಎಂಟ್ರೆನ್ಸ್ ಟೆಸ್ಟ್ನಲ್ಲಿ ಓದದೆ ಪಾಸಾಗಬೇಕಾದರೆ ಈಗ ಐದು ಸಾವಿರದಿಂದ ಲಕ್ಷಗಟ್ಟಲೆ ಹಣ ಬಿಚ್ಚಬೇಕು. ಇದನ್ನೆಲ್ಲ ತಡೆಯಬೇಕೆಂದರೆ ಶಿಕ್ಷಕರ ಬಡ್ತಿಯಲ್ಲಿ ಏಕನೀತಿಯಿರಬೇಕು, ಅವರಿಗೆ ಸಂಬಳ ಸರಿಯಾಗಿ ತಲುಪಬೇಕು, 20-30 ವರ್ಷಗಳಿಂದ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಖಾಯಂ ಮಾಡಬೇಕು. ಎಲ್ಲಕಿಂತ ಮೊದಲು ನಮ್ಮ ಶಿಕ್ಷಕರು ಪಾಠ ಮಾಡುವ ರೀತಿಯಿಂದ ಮಕ್ಕಳನ್ನು ಶಾಲೆಯ ಕಡೆಗೆ ಆಕರ್ಷಿಸಬೇಕು, ಅವರ ಪಾಠ ಮಕ್ಕಳಿಗೆ ಮನೆಯಲ್ಲಿ ಅಜ್ಜಿ ಹೇಳುವ ಕಥೆಯಷ್ಟು ಆಕರ್ಷಕವಾಗಿರಬೇಕು. ಈ ಟೀಚರ್ಗೆ ಮೈ ಹುಷಾರಿಲ್ಲದೆ ಇವತ್ತು ರಜೆ ತೊಗೊಳ್ಳಲಿ ಅಂತ ಯಾವ ಮಕ್ಕಳಿಗೂ ಅನ್ನಿಸಬಾರದು. ಅದು ಸಾಧ್ಯವಾಗುವುದು ಕೇವಲ ಪ್ರೀತಿಯಿಂದ ಆಸಕ್ತಿಯಿಂದ ಕಲಿಸುವ ಶಿಕ್ಷಕರಿಂದ. ನನಗಿನ್ನೂ ನೆನಪಿದೆ, ನಮ್ಮ ಮಿಸ್ ನಾವು ಹೈಸ್ಕೂಲ್ ಮುಗಿಸಿದ ಕೊನೆ ದಿನ ನನ್ನ ಬಿಟ್ಟು ಹೋಗ್ತೀರಾ ಅಂತ ಅತ್ತಿದ್ದರು, ನಾವು ಹೋಗುತ್ತಿದ್ದುದು ಅಲ್ಲೆ ಪಕ್ಕದಲ್ಲಿದ್ದ ಅದೇ ಶಾಲೆಗೆ ಸೇರಿದ ಕಾಲೇಜಿಗಾದರೂ. ಅಲ್ಲಿ ಕೇವಲ ಪಠ್ಯದ ಕಲಿಕೆ ಇರಲಿಲ್ಲ, ನಮ್ಮ ಶಿಕ್ಷಣ ಪದ್ಧತಿಯಲ್ಲಿ ಮರೆಯಾಗಿರುವ critical thinkingಗೆ ಕೂಡ ಸ್ವತಂತ್ರ ಅವಕಾಶವಿತ್ತು, ಜೊತೆಗೆ ಇವರು ನಮ್ಮ ಮಕ್ಕಳು ಅನ್ನುವ ಪ್ರೀತಿಯಿತ್ತು.
ಶಿಕ್ಷಣದ ವೆಚ್ಚ -- ಪುಸ್ತಕಗಳ ಮತ್ತಿತರ ಪರಿಕರಗಳ ವೆಚ್ಚ, ಟ್ಯೂಷನ್ ಇತ್ಯಾದಿ-- ಎಂಟು ವರ್ಷಗಳಲ್ಲಿ ಶೇ. 160 ಜಾಸ್ತಿಯಾಗಿದೆ. ಒಂದು ಮಗುವಿನ ವಾರ್ಷಿಕ ಶಾಲಾ ವೆಚ್ಚ ಮೂರು ಪಟ್ಟು ಹೆಚ್ಚಾದರೆ, ಆ ಕುಟುಂಬದ ವಾರ್ಷಿಕ ಆದಾಯ ಬರೀ ಶೇ. 30ರಷ್ಟು ಜಾಸ್ತಿಯಾಗಿದೆ. ಆದರೂ ಎಷ್ಟೇ ಕಷ್ಟಪಟ್ಟು ಮಕ್ಕಳನ್ನು ಓದಿಸಿದರೂ ಶಿಕ್ಷಣದ ಗುಣಮಟ್ಟ ಎಷ್ಟು ಕುಸಿದಿದೆ ಅಂದರೆ ಐದನೇ ತರಗತಿಯ ಶೇ. 52.8ರಷ್ಟು ಮಕ್ಕಳಿಗೆ ಎರಡನೇ ತರಗತಿಯ ಮಕ್ಕಳಿಗೆ ಇರಬೇಕಾದ ಸಾಮಾನ್ಯ ಜ್ಞಾನವೂ ಇಲ್ಲ. ನಮ್ಮ ಶಾಲೆಗಳಿಂದ, ಕಾಲೇಜುಗಳಿಂದ ಹೊರಬರುವ ಮಕ್ಕಳಲ್ಲಿ ಅರ್ಧದಷ್ಟು unemployable, ಅಂದರೆ ಯಾವ ಉದ್ಯೋಗಕ್ಕೂ ಸೇರುವ ನಿಪುಣತೆ ಇಲ್ಲದವರು. ಇನ್ನು ಪ್ರತಿ ವರ್ಷ ನಮ್ಮ ದೇಶದ 490 ವಿಶ್ವವಿದ್ಯಾಲಯಗಳು, ಸುಮಾರು 20,769 ಕಾಲೇಜುಗಳಿಂದ ಹೊರಬರುವ ಲಕ್ಷಾಂತರ ವಿದ್ಯಾರ್ಥಿಗಳು ಎಲ್ಲಿ ಹೋಗುತ್ತಾರೆ? ತಾವು ಓದಿದ ವಿಷಯಕ್ಕೆ ಸಂಬಂಧವಿಲ್ಲದ, ತಮ್ಮ ಮನಸ್ಸಿಗೆ ಹತ್ತಿರವಿಲ್ಲದ ಯಾವುದೋ ಕೆಲಸ ಮಾಡುತ್ತಾರೆ. ಇದರಿಂದ ಮಾನವ ಸಂಪನ್ಮೂಲ ನಷ್ಟ ಆಗುವುದು ದೇಶಕ್ಕೇ. ಇದಕ್ಕೆ ಒಂದೇ ಪರಿಹಾರ. ಮಕ್ಕಳು ಸರಕಾರಿ ಅಥವಾ ಖಾಸಗಿ ಯಾವ ಶಾಲೆಯಲ್ಲೇ ಓದಲಿ, ಅಲ್ಲಿನ ಶಿಕ್ಷಣದಿಂದ ಮಕ್ಕಳ practical ಜ್ಞಾನ ವೃದ್ಧಿಯಾಗಬೇಕು, ಆ ಜ್ಞಾನದಿಂದ ಎಲ್ಲಾ ಸ್ಥರಗಳಲ್ಲೂ ಸಾಮಾಜಿಕ, ಆರ್ಥಿಕ ಸ್ಥಿರತೆ ಬರಬೇಕು. ಯಾಕೆಂದರೆ ಸರಕಾರ ಎಷ್ಟು ಕಾಯಿದೆಗಳನ್ನು, ಆಕರ್ಷಕ ಯೋಜನೆಗಳನ್ನು ಹೊರತಂದರೂ, ಕೊನೆಗೆ ಮಕ್ಕಳು ಮತ್ತು ಅವರ ಮನೆಯವರು ಮೊದಲು ಯೋಚಿಸುವುದು ಒಂದೇ-- ನಾಳೆ ಬೆಳಗ್ಗಿನ ಊಟದ ಚಿಂತೆ. ಅದು ಬಗೆಹರಿಯದೆ ನಾವೆಷ್ಟೇ incentives ಕೊಟ್ಟರೂ ಅದು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ತಂದು ಕೊಟ್ಟ ಹಾಗೆ. ಅಷ್ಟಕ್ಕೂ ಯಾರೋ ಹೇಳಿದ ಹಾಗೆ ಜ್ಞಾನವನ್ನು ಐಶ್ವರ್ಯವಾಗಿ ಮತ್ತು ಸಾಮಾಜಿಕ ಹಿತಕ್ಕಾಗಿ ಪರಿವರ್ತಿಸುವ ಒಂದು ದೇಶದ ಸಾಮರ್ಥ್ಯ ಅದರ ಭವಿಷ್ಯವನ್ನು ನಿರ್ಣಯಿಸುತ್ತದೆ.
ಇವರೆಲ್ಲ ಯಾವಾಗ ದಿನಾ ಬೆಳಿಗ್ಗೆ ನಮ್ಮ ಮಕ್ಕಳ ತರ ಯೂನಿಫಾರ್ಮ್ ಹಾಕಿಕೊಂಡು, ಕೈಯಲ್ಲಿ ಸ್ಕೂಲ್ ಬ್ಯಾಗ್ ಹಿಡಿದುಕೊಂಡು, ಇವತ್ತು ಹೋಮ್ವರ್ಕ್ ಮಾಡಿದೀಯಾ ಅಂತ ಗೆಳೆಯರ ಜೊತೆ ಚರ್ಚೆ ಮಾಡಿಕೊಂಡು ಶಾಲೆಗೆ ಹೋಗೋದು? ಬಹುಶ ಸಾಧ್ಯವಿಲ್ಲ ಅನ್ನಿಸುತ್ತಿದೆ. ಮಕ್ಕಳನ್ನು ಪ್ರಾಥಮಿಕ ಶಿಕ್ಷಣದ ಕಡೆಗೆ ಸೆಳೆಯುವ ನಮ್ಮ ಸರಕಾರಗಳ ಬಣ್ಣಬಣ್ಣದ ಯೋಜನೆಗಳಲ್ಲಿ ಹೆಚ್ಚಿನವು ಇಲ್ಲಿವರೆಗೆ ತೀರಾ ಬಡವರ್ಗದವರನ್ನು ಮುಟ್ಟಿಲ್ಲ, ಮುಟ್ಟುವುದೂ ಇಲ್ಲ. ಇದೇ ನಿಟ್ಟಿನಲ್ಲಿ ಇಂತಹ ಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೇಂದ್ರ ಸರಕಾರ ಹೊರತಂದ ಮೂಲಭೂತ ಶಿಕ್ಷಣ ಹಕ್ಕು ಕಾಯಿದೆ (Right to Education Act) ಕೂಡ ಬಹುಶ ಅಂತಹ ಅರೆಬೆಂದ ಯೋಜನೆಗಳ ಮಧ್ಯೆ ಕಳೆದುಹೋಗಬಹುದು. ದೇಶದ ಎಲ್ಲಾ ಮಕ್ಕಳಿಗೂ ಉಚಿತ ಮೂಲಭೂತ ಶಿಕ್ಷಣವನ್ನು ಸುಪ್ರೀಂಕೋರ್ಟ್ ಪ್ರತಿಪಾದಿಸಿದ 17 ವರ್ಷಗಳ ನಂತರ ಬಂದ ಈ ಕಾಯಿದೆ ಅತಿ ಮುಖ್ಯವಾಗಿ ತಲುಪಬೇಕಾಗಿರುವುದು ದನ ಕಾಯುವ, ಹೋಟೆಲ್ಗಳಲ್ಲಿ ಕೆಲಸ ಮಾಡುವ, ಮನೆಗೆಲಸ ಮಾಡುವ ಮತ್ತು ಮುಖ್ಯವಾಗಿ ಬಾಲ್ಯ ವಿವಾಹವಾಗುವ ಇಂತಹ ’ಅಗೋಚರ’ ಮಕ್ಕಳ ಹತ್ತಿರ, ಶಾಲೆಗೆ ಹೋಗಿಯೂ ತಿಂಗಳೊಳಗೆ ತಿರುಗಿ ಕೆಲಸಕ್ಕೆ ಮರಳುವ ಮಕ್ಕಳ ಮತ್ತು ಬಡವರೆಂಬ ಒಂದೇ ಕಾರಣಕ್ಕೆ ಬುದ್ದಿವಂತರಿದ್ದರೂ ಯಾವ ಸೌಕರ್ಯಗಳೂ ಇಲ್ಲದ, ಶಿಕ್ಷಕರಿಲ್ಲದ ಸರಕಾರಿ ಶಾಲೆಗಳಲ್ಲಿ ಪರದಾಡುವ ಮಕ್ಕಳ ಹತ್ತಿರ.
"...ನಮ್ಮ ಸಂವಿಧಾನದ ಪ್ರತಿಪಾದಕರು ಜೋಪಡಿಗಳನ್ನು ಕಟ್ಟಿ, ಮಕ್ಕಳಿಗೆ ಅಲ್ಲಿ ಅನುಭವವಿಲ್ಲದ ಶಿಕ್ಷಕರನ್ನು ಕೊಟ್ಟು, ಕೆಟ್ಟ ಪಠ್ಯಪುಸ್ತಕಗಳನ್ನು ಓದಲು ಕೊಟ್ಟು, ಆಟವಾಡಲು ಮೈದಾನ ಕೊಡದೆ ಪ್ರಾಥಮಿಕ ಶಿಕ್ಷಣ ಬೆಳೆಯುತ್ತಿದೆ ಎಂದು ಹೇಳಿಕೊಳ್ಳಲು ಇಚ್ಚಿಸಲಿಲ್ಲ... ಅವರು ಆರರಿಂದ ಹದಿನಾಲ್ಕು ವರ್ಷದ ಮಕ್ಕಳಿಗೆ ನಿಜವಾದ ಶಿಕ್ಷಣ ಕೊಡಬೇಕೆಂದು ಅಂದುಕೊಂಡರು," ಎಂದು ಹೇಳುತ್ತದೆ RTE Act ಸಮಿತಿಯ ಒಂದು ವರದಿ.
ಆದರೆ ನಿಜವಾದ ಶಿಕ್ಷಣ ಅಂದರೆ ಏನು? ಮೂಲಭೂತ ಶಿಕ್ಷಣ ಕಾಯಿದೆ ಪ್ರಕಾರ ಒಂದು ಮಗುವಿನ ಕಲಿಕೆ ಭಯ ಮುಕ್ತ ವಾತಾವರಣದಲ್ಲಿ, ಅಂದರೆ ಶಿಕ್ಷೆಗಳಿಂದ ಮುಕ್ತ ಪರಿಸರದಲ್ಲಿ ನಡೆಯಬೇಕು, ಮೂರು ವರ್ಷಗಳಲ್ಲಿ ಸರಕಾರ ಪ್ರತಿ ಕಿಲೋಮೀಟರ್ಗೂ ಒಂದು ಶಾಲೆ ತೆರೆಯಬೇಕು, ಆಯಾ ಪ್ರದೇಶದ ಸಾಮಜಿಕ ಹಾಗೂ ಸಾಂಸ್ಕೃತಿಕ ಅಡೆತಡೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯುಂಟು ಮಾಡದ ಹಾಗೆ ಸರಕಾರ ನೋಡಿಕೊಳ್ಳಬೇಕು, ಪ್ರತಿ 30 ಮಕ್ಕಳಿಗೆ ಒಬ್ಬ ಶಿಕ್ಷಕ ಇರಲೇಬೇಕು, ಇದೆಲ್ಲದರ ಜೊತೆಗೆ ತಮ್ಮ ಮಕ್ಕಳು ಉಚಿತ ಕಲಿಕೆಯಿಂದ ವಂಚಿತರಾದರೆ ಹೆತ್ತವರು ಕೇಸ್ ಹಾಕಬಹುದು, ಹೀಗೆ ಹತ್ತು ಹಲವು...
ಆದರೆ ಇವೆಲ್ಲ ಅನುಷ್ಟಾನಕ್ಕೆ ಬರುವುದು ಯಾವಾಗ? ಯಾರಿಂದ? ನಾವೆಷ್ಟೇ ಭಾರತೀಯ ಶಿಕ್ಷಣ ಪದ್ಧತಿ ಶ್ರೇಷ್ಠ ಎಂದು ಬೀಗಿದರೂ ಇಲ್ಲಿರುವಷ್ಟು ಸಾಮಾಜಿಕ, ಶೈಕ್ಷಣಿಕ ಅರಾಜಕತೆ ಇನ್ನೆಲ್ಲೂ ಇಲ್ಲ. ಹಳ್ಳಿಗಳಲ್ಲಿ ಇನ್ನೂ ಮರದ ಕೆಳಗೆ ಪಾಠ ನಡೆಯುತ್ತಿದೆ, ಶಾಲಾ ಕಟ್ಟಡಗಳು ದನ, ಕುರಿ ದೊಡ್ಡಿಗಳಾಗಿವೆ. ಇನ್ನು ನಮ್ಮ ರಾಜ್ಯದ ಶಾಲೆಗಳಿಗೆ 35,೦೦೦ರಿಂದ 50,000 ಶೌಚಾಲಯಗಳ ಅಗತ್ಯವಿದೆ. ಇವತ್ತಿಗೂ ಹೆಣ್ಣುಮಕ್ಕಳಿಗೆ ಅಲ್ಲಿ ಬಯಲು, ಪೊದೆಗಳೇ ಶೌಚಾಲಯಗಳು. ಇದು ಸರಕಾರಿ ಶಾಲೆಗಳ ಗತಿಯಾದರೆ ಖಾಸಗಿ ಶಾಲೆಗಳೇನು ಕಮ್ಮಿಯಿಲ್ಲ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ, ಬಹುಮಹಡಿ ಕಟ್ಟಡದ ಮೇಲಂತಸ್ತಿನಲ್ಲಿ ಶಾಲೆಗಳಿವೆ. ಮಕ್ಕಳಿಗೆ ಬೇಕಾದ basic infrastructure ಅಲ್ಲಿಲ್ಲ, ಕೆಳಗೆ ನೋಡಿದರೆ ರಸ್ತೆ, ವಾಹನಗಳ ಸದ್ದು. ದೊಡ್ಡಿ ತರ ನೂರಾರು ಮಕ್ಕಳನ್ನು ಒಂದೇ ತರಗತಿಗೆ ತುಂಬಿರುತ್ತಾರೆ. ಇನ್ನು ಆಟದ ಮೈದಾನಗಳ ಬಗ್ಗೆ ಕೇಳುವುದೇ ಬೇಡ. Central Finance Commission ಈ ಕಾಯಿದೆ ಜಾರಿಗೆ ತರಲು ಬಿಡುಗಡೆ ಮಾಡಿದ 25,000 ಕೋಟಿ ರೂ. ಮತ್ತು ಕೇಂದ್ರ ಕೊಡುತ್ತಿರುವ 15,000 ಕೋಟಿ ರೂ. ಇಡೀ ದೇಶದ ಸರಕಾರಿ ಶಾಲೆಗಳಿಗೆ ಏನೇನೂ ಸಾಲದು. ಯಾಕೆಂದರೆ ಮೊದಲು ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಬೇಕು, ಆಮೇಲೆ ತಾನೆ ಮಕ್ಕಳನ್ನು ಶಾಲೆಗೆ ಕರೆತರಲು ಸಾಧ್ಯ? ಒಂದು ಸಂತಸದ ವಿಷಯವೆಂದರೆ ಈಗ ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಖಾಸಗಿ ಶಾಲೆಗಳಿಗಿಂತ ಚೆನ್ನಾಗಿದೆ. ಇದಕ್ಕೆ ಉದಾಹರಣೆ ಈ ಸಲದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಶೇಕಡಾ ಸೊನ್ನೆ ತೆಗೆದ 86 ಶಾಲೆಗಳಲ್ಲಿ ಕೇವಲ 2 ಸರಕಾರಿ ಶಾಲೆಗಳು.
ಕರ್ನಾಟಕವೊಂದರಲ್ಲೇ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 50,000 ಶಿಕ್ಷಕರ ಅಗತ್ಯ ಇದೆ. ಮೂಲಭೂತ ಶಿಕ್ಷಣ ಕಾಯಿದೆ ಪ್ರಕಾರ 30 ಮಕ್ಕಳಿಗೆ ಒಬ್ಬ ಶಿಕ್ಷಕ ಇರಬೇಕೆಂದರೆ 1.5 ಲಕ್ಷ ಶಿಕ್ಷಕರ ಮತ್ತು ಸರ್ವ ಶಿಕ್ಷಣ ಅಭಿಯಾನದ ಕೆಳಗೆ ಇನ್ನೂ 2.25 ಲಕ್ಷ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಈ ನೇಮಕಾತಿಯಿಂದ ನಮ್ಮ ಶಾಲೆಗಳ, ಅಲ್ಲಿ ಸಿಗುವ ಶಿಕ್ಷಣದ ಗುಣಮಟ್ಟ ಹೆಚ್ಚಾಗುವುದಿಲ್ಲ. ಆದರೆ ಶಿಕ್ಷಕರಿಲ್ಲದೆ ಪರದಾಡುವ ಮಕ್ಕಳ ಪರಿಪಾಟಲು ಕಡಿಮೆಯಾಗುತ್ತದೆ, ಇರುವ ಕೆಲವೇ ಶಿಕ್ಷಕರ ಮೇಲಿರುವ ಭಾರ ಕಡಿಮೆಯಾಗುತ್ತದೆ. UNESCOದ ಭಾರತೀಯ ಶಿಕ್ಷಣದ ಮೇಲಿನ ಒಂದು ಅಧ್ಯಯನದ ಪ್ರಕಾರ ನಾವು ಶಿಕ್ಷಣದಲ್ಲಿನ ಭ್ರಷ್ಟತೆಯಲ್ಲಿ (Corruption in education) ಇಡೀ ಪ್ರಪಂಚದಲ್ಲಿ ಎರಡನೆ ಸ್ಥಾನದಲ್ಲಿದ್ದೇವೆ, ಉಗಾಂಡದ ನಂತರ; ಅದಕ್ಕೆ ಮುಖ್ಯ ಕಾರಣ ಶಾಲೆಗಳಲ್ಲಿ ಶಿಕ್ಷಕರ ಗೈರುಹಾಜರು. ಇದಕ್ಕೆ ಒತ್ತು ಕೊಟ್ಟಂತೆ ನೇಮಕಾತಿ, ವರ್ಗಾವಣೆಯಲ್ಲಿ ರಾಜಕೀಯ, ಶಿಕ್ಷಕರೇ ನಡೆಸುವ ಖಾಸಗಿ ಟ್ಯೂಷನ್ಗಳು. ಜೊತೆಗೆ ಪರೀಕ್ಷೆಯಲ್ಲಿ ನಡೆಯುವ ಅವ್ಯವಹಾರ; ಒಂದು ಮೆಡಿಕಲ್, ಮ್ಯಾನೇಜ್ಮೆಂಟ್, ಇಂಜಿನಿಯರಿಂಗ್ ಎಂಟ್ರೆನ್ಸ್ ಟೆಸ್ಟ್ನಲ್ಲಿ ಓದದೆ ಪಾಸಾಗಬೇಕಾದರೆ ಈಗ ಐದು ಸಾವಿರದಿಂದ ಲಕ್ಷಗಟ್ಟಲೆ ಹಣ ಬಿಚ್ಚಬೇಕು. ಇದನ್ನೆಲ್ಲ ತಡೆಯಬೇಕೆಂದರೆ ಶಿಕ್ಷಕರ ಬಡ್ತಿಯಲ್ಲಿ ಏಕನೀತಿಯಿರಬೇಕು, ಅವರಿಗೆ ಸಂಬಳ ಸರಿಯಾಗಿ ತಲುಪಬೇಕು, 20-30 ವರ್ಷಗಳಿಂದ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಖಾಯಂ ಮಾಡಬೇಕು. ಎಲ್ಲಕಿಂತ ಮೊದಲು ನಮ್ಮ ಶಿಕ್ಷಕರು ಪಾಠ ಮಾಡುವ ರೀತಿಯಿಂದ ಮಕ್ಕಳನ್ನು ಶಾಲೆಯ ಕಡೆಗೆ ಆಕರ್ಷಿಸಬೇಕು, ಅವರ ಪಾಠ ಮಕ್ಕಳಿಗೆ ಮನೆಯಲ್ಲಿ ಅಜ್ಜಿ ಹೇಳುವ ಕಥೆಯಷ್ಟು ಆಕರ್ಷಕವಾಗಿರಬೇಕು. ಈ ಟೀಚರ್ಗೆ ಮೈ ಹುಷಾರಿಲ್ಲದೆ ಇವತ್ತು ರಜೆ ತೊಗೊಳ್ಳಲಿ ಅಂತ ಯಾವ ಮಕ್ಕಳಿಗೂ ಅನ್ನಿಸಬಾರದು. ಅದು ಸಾಧ್ಯವಾಗುವುದು ಕೇವಲ ಪ್ರೀತಿಯಿಂದ ಆಸಕ್ತಿಯಿಂದ ಕಲಿಸುವ ಶಿಕ್ಷಕರಿಂದ. ನನಗಿನ್ನೂ ನೆನಪಿದೆ, ನಮ್ಮ ಮಿಸ್ ನಾವು ಹೈಸ್ಕೂಲ್ ಮುಗಿಸಿದ ಕೊನೆ ದಿನ ನನ್ನ ಬಿಟ್ಟು ಹೋಗ್ತೀರಾ ಅಂತ ಅತ್ತಿದ್ದರು, ನಾವು ಹೋಗುತ್ತಿದ್ದುದು ಅಲ್ಲೆ ಪಕ್ಕದಲ್ಲಿದ್ದ ಅದೇ ಶಾಲೆಗೆ ಸೇರಿದ ಕಾಲೇಜಿಗಾದರೂ. ಅಲ್ಲಿ ಕೇವಲ ಪಠ್ಯದ ಕಲಿಕೆ ಇರಲಿಲ್ಲ, ನಮ್ಮ ಶಿಕ್ಷಣ ಪದ್ಧತಿಯಲ್ಲಿ ಮರೆಯಾಗಿರುವ critical thinkingಗೆ ಕೂಡ ಸ್ವತಂತ್ರ ಅವಕಾಶವಿತ್ತು, ಜೊತೆಗೆ ಇವರು ನಮ್ಮ ಮಕ್ಕಳು ಅನ್ನುವ ಪ್ರೀತಿಯಿತ್ತು.
ಶಿಕ್ಷಣದ ವೆಚ್ಚ -- ಪುಸ್ತಕಗಳ ಮತ್ತಿತರ ಪರಿಕರಗಳ ವೆಚ್ಚ, ಟ್ಯೂಷನ್ ಇತ್ಯಾದಿ-- ಎಂಟು ವರ್ಷಗಳಲ್ಲಿ ಶೇ. 160 ಜಾಸ್ತಿಯಾಗಿದೆ. ಒಂದು ಮಗುವಿನ ವಾರ್ಷಿಕ ಶಾಲಾ ವೆಚ್ಚ ಮೂರು ಪಟ್ಟು ಹೆಚ್ಚಾದರೆ, ಆ ಕುಟುಂಬದ ವಾರ್ಷಿಕ ಆದಾಯ ಬರೀ ಶೇ. 30ರಷ್ಟು ಜಾಸ್ತಿಯಾಗಿದೆ. ಆದರೂ ಎಷ್ಟೇ ಕಷ್ಟಪಟ್ಟು ಮಕ್ಕಳನ್ನು ಓದಿಸಿದರೂ ಶಿಕ್ಷಣದ ಗುಣಮಟ್ಟ ಎಷ್ಟು ಕುಸಿದಿದೆ ಅಂದರೆ ಐದನೇ ತರಗತಿಯ ಶೇ. 52.8ರಷ್ಟು ಮಕ್ಕಳಿಗೆ ಎರಡನೇ ತರಗತಿಯ ಮಕ್ಕಳಿಗೆ ಇರಬೇಕಾದ ಸಾಮಾನ್ಯ ಜ್ಞಾನವೂ ಇಲ್ಲ. ನಮ್ಮ ಶಾಲೆಗಳಿಂದ, ಕಾಲೇಜುಗಳಿಂದ ಹೊರಬರುವ ಮಕ್ಕಳಲ್ಲಿ ಅರ್ಧದಷ್ಟು unemployable, ಅಂದರೆ ಯಾವ ಉದ್ಯೋಗಕ್ಕೂ ಸೇರುವ ನಿಪುಣತೆ ಇಲ್ಲದವರು. ಇನ್ನು ಪ್ರತಿ ವರ್ಷ ನಮ್ಮ ದೇಶದ 490 ವಿಶ್ವವಿದ್ಯಾಲಯಗಳು, ಸುಮಾರು 20,769 ಕಾಲೇಜುಗಳಿಂದ ಹೊರಬರುವ ಲಕ್ಷಾಂತರ ವಿದ್ಯಾರ್ಥಿಗಳು ಎಲ್ಲಿ ಹೋಗುತ್ತಾರೆ? ತಾವು ಓದಿದ ವಿಷಯಕ್ಕೆ ಸಂಬಂಧವಿಲ್ಲದ, ತಮ್ಮ ಮನಸ್ಸಿಗೆ ಹತ್ತಿರವಿಲ್ಲದ ಯಾವುದೋ ಕೆಲಸ ಮಾಡುತ್ತಾರೆ. ಇದರಿಂದ ಮಾನವ ಸಂಪನ್ಮೂಲ ನಷ್ಟ ಆಗುವುದು ದೇಶಕ್ಕೇ. ಇದಕ್ಕೆ ಒಂದೇ ಪರಿಹಾರ. ಮಕ್ಕಳು ಸರಕಾರಿ ಅಥವಾ ಖಾಸಗಿ ಯಾವ ಶಾಲೆಯಲ್ಲೇ ಓದಲಿ, ಅಲ್ಲಿನ ಶಿಕ್ಷಣದಿಂದ ಮಕ್ಕಳ practical ಜ್ಞಾನ ವೃದ್ಧಿಯಾಗಬೇಕು, ಆ ಜ್ಞಾನದಿಂದ ಎಲ್ಲಾ ಸ್ಥರಗಳಲ್ಲೂ ಸಾಮಾಜಿಕ, ಆರ್ಥಿಕ ಸ್ಥಿರತೆ ಬರಬೇಕು. ಯಾಕೆಂದರೆ ಸರಕಾರ ಎಷ್ಟು ಕಾಯಿದೆಗಳನ್ನು, ಆಕರ್ಷಕ ಯೋಜನೆಗಳನ್ನು ಹೊರತಂದರೂ, ಕೊನೆಗೆ ಮಕ್ಕಳು ಮತ್ತು ಅವರ ಮನೆಯವರು ಮೊದಲು ಯೋಚಿಸುವುದು ಒಂದೇ-- ನಾಳೆ ಬೆಳಗ್ಗಿನ ಊಟದ ಚಿಂತೆ. ಅದು ಬಗೆಹರಿಯದೆ ನಾವೆಷ್ಟೇ incentives ಕೊಟ್ಟರೂ ಅದು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ತಂದು ಕೊಟ್ಟ ಹಾಗೆ. ಅಷ್ಟಕ್ಕೂ ಯಾರೋ ಹೇಳಿದ ಹಾಗೆ ಜ್ಞಾನವನ್ನು ಐಶ್ವರ್ಯವಾಗಿ ಮತ್ತು ಸಾಮಾಜಿಕ ಹಿತಕ್ಕಾಗಿ ಪರಿವರ್ತಿಸುವ ಒಂದು ದೇಶದ ಸಾಮರ್ಥ್ಯ ಅದರ ಭವಿಷ್ಯವನ್ನು ನಿರ್ಣಯಿಸುತ್ತದೆ.
Saturday, April 17, 2010
'I want to 'de-frame' theatre thru Malegalalli Madumagalu: Basavalingaiah
“The theatre is so endlessly fascinating because it's so accidental. It's so much like life,” said American playwright, Arthur Miller. Stage and artistes come alive only when they ‘ play’ to an audience, and the audience become a part of the play. Rangayana, India’s only State-run repertory, is conducting such a unique experiment by staging Kuvempu’s ‘Malegalalli Madumagalu’ for nine hours from April 23 to May 11 on alternative days from 9 pm to 5 am.
‘Malegalalli Madumagalu’ is a magnum opus of Rashtrakavi Kuvempu. The 750-page opus is much more than just that, it is a great story simple in its narration with down-to-earth characters with a beautiful portrayal of life in the heart of Karnataka — Malnad. In Malnad, typical villages are non-existent because every house is in the middle of nowhere, with their neighbour some miles away. But there is always the hierarchy of a mini society with a head for the village who is wealthy, the workers, the poor farmers, and a priest for a temple nearby. The play depicts a life unknown to the urbanites but very much in existence, though in a modern version, in the Malnad region.
The much-hyped play is to be staged for nine hours with intervals for every two hours. And in that interval, the spectators have to move to another stage, where a different scene will be enacted. ‘Malegalalli Madumagalu’ got wide media coverage because of its length rather than the story which was a classic and which should have been in the limelight.
When I went to speak to C. Basavalingaiah, former Director of Rangayana and one of the most versatile Directors in Kannada theatre, he willingly gave up his two-hour break in the midst of a rehearsal for ‘Malegalalli Madumagalu’ to contemplate on the birth of Rangayana, his tenure as a Director, theatre in India and Karnataka and his close-to-heart experiment with the play.
Shwetha: You were the Director of Rangayana for six years and during your tenure, many new dramas were staged.
Basavalingaiah: Yes. My entry into Rangayana is a long story. In the 1970s, I and a few other theatre enthusiasts went to join the National School of Drama (NSD) in New Delhi because we were very much influenced by B.V. Karanth who headed NSD for sometime. But Karanth left NSD after I joined there. Back then, theatre meant staging plays of Shakespeare, Bertolt Brecht and other foreign playwrights. Indian theatre meant Hindi, Bengali and other North Indian plays. Even in Karnataka, Kannada plays were not creating much wave.
Theatre was for the intellectuals and men. Common people, especially women, feared joining theatre. Hence we persuaded Karanth to come to Karnataka and stage Kannada plays, reaching out to rural audience. That was the start of theatre revolution in the State. We started staging Kannada stories by our own writers. Watching such plays, rural populace lost their reservations and started joining theatre.
I became Rangayana Director after B.V. Karanth and experimented with Kusumabale, Gandhi vs Gandhi, Shoodra Tapasvi etc. (They are considered the masterpieces in Kannada theatre).
Shwetha: You started Chinnara Mela which has become very popular now.
Basavalingaiah: Yes. I was born and brought up in Bangalore city. Reading ‘Malegalalli Madumagalu’ some 25 years ago opened up a whole new social side to me which I was not familiar with. That is one of the reasons I started Chinnara Mela. I want to introduce urban children to rural games, customs and way of life. I want to involve children in plays like Malegalalli Madumagalu where they will be able to explore a wholly different way of life they can not see here in city. The kids can not even frequent their grandparents’ house (Ajji mane) in villages during holidays because now they too live in cities. Children have lost all touch with village life.
Shwetha: Why did you particularly choose this major work?
Basavalingaiah: I chose the story because I was fascinated by it since many years. I was captured by the life of the people who, though living in a hierarchical society during 19th century, are simple and unpretentious. You know, there are no heroes, heroines or villains in the story.
A hero at one time may be not-so-heroic in the next sce-ne. And the story, despite de-picting the life of highly religious rural people, at times becomes secular due to the broad-mindedness of its characters.
Shwetha: There is no complexity in the story?
Basavalingaiah: There is complexity in the story, but not in the relationship between the characters. The beauty of the story lies in its realistic and straight-forward characters.
Shwetha:: Those are the characteristics we naturally found among the Malnad people in those times.
Basavalingaiah: Yes. That is why Kuvempu, Poornachandra Tejasvi and other such writers focussed on them and successfully brought out the simplicity in them. That is why their books are great to read.
Shwetha: Why this experiment now?
Basavalingaiah: As I already told you, the urbanites are forgetting the beauty of rural life, most are not even aware of it. And Kannada theatre is not conducting many experiments nowadays; especially Rangayana which should have been very active, is in a dormant stage. I want to revive Kannada theatre through this play. Our theatre is being suffocated with frames of set rules. I want to ‘de-frame’ the theatre through ‘Male-galalli Madumagalu.’ That’s what I am teaching to the youngsters who are part of this play. They are not restricted to a place, instead they walk, move as they want to and enact their roles in their own way.
There are about 70 artistes; 50 youth among them were unemployed and from rural areas. Three months ago, they did not know anything about acting. Now some of them are playing lead roles. While recruiting, I did not ask their qualifications or degrees.
One of them, who is working as a salesgirl, is a great poetess. She is also a good actor and playing a lead role. If I had asked for a degree, I would not have got so many talented youth. This is the beauty of this experiment. It became a stage for unearthing young talents who would have remained hidden otherwise. It is a training camp for them.
Shwetha: How is the public response to the play?
Basavalingaiah: Very good. The tickets for the first day, April 23rd, are all sold out. I have bookings from all over the State — Shimoga, Bangalore, North Karnataka — for five more days.
Shwetha: Considering it a grand success, will you take it to other districts?
Basavalingaiah: Yes, of course. The play is already a success. We will stage it anywhere where proper large space with trees like Rangayana is available.
Shwetha: What about seating arrangements? Will you be able to seat 300 people comfortably?
Basavalingaiah: Yes. We are making arrangements to seat 300 people comfortably for two hours in all the venues.
Shwetha: Why move the audience from one venue to another?
Basavalingaiah: The audience are always stationary during all plays. But now I want them to be part of the play.
Shwetha: I heard people speaking that as the play will be staged the whole night and the ticket is priced just at Rs.40, it may not be safe for women to come and watch.
Basavalingaiah:: No, it is not true. Rangayana has its own audience and reputation. And women, families regularly come to watch the plays here. We have staged many plays for free. But we have not had any trouble from miscreants. Let miscreants too come; they may change their attitude after watching the play. Such instances have happened in Kannada theatre. If it happens, the play will truly be a success. It means the play has the ability to transform the society.
As for the price, many people asked me to increase it to more than Rs. 200. But I do not want the play to become the sole right of the rich. It is for the common people and if they should come, the price should be low. They are the true critics of any play, not some intellectuals who come only for criticising.
Shwetha: I also heard that people would not watch a play for nine hours and it’s too long.
Basavalingaiah: It is silly. People watch all-night Yakshagana bayalata. In villages, families come and sit for night-long plays too. What’s the difficulty in watching a play for nine hours here? Women watch TV serials daily for more than 10 hours at home. Let them come, sit and watch our experiment once. They will like it. And I am sure they will come back to watch more plays in the future.
Tuesday, March 9, 2010
ಕಲೆಯ ಹೆಸರಿನಲ್ಲಿ ವಿಕೃತಿಗಳನ್ನು ಸಹಿಸಿಕೊಳ್ಳಲಾದೀತೇ?
ಕಲೆಯ ಉದ್ದೇಶ ಏನು? ಅದು ಒಂದು ಸಮಾಜದ ನಿರೀಕ್ಷೆಗಳನ್ನು, ವ್ಯಕ್ತಪಡಿಸಬೇಕೆ? ಅದರ ಸಾಧನೆಗಳನ್ನು ಪ್ರತಿಬಿಂಬಿಸಬೇಕೆ? ಆ ಮೂಲಕ ಕಲಾವಿದ ಸಮಾಜಕ್ಕೆ ತನ್ನ ಸೇವೆ ಸಲ್ಲಿಸಬೇಕೆ? ಇಷ್ಟೆಲ್ಲ ಮಾಡದಿದ್ದರೆ ಅದು ಪರಿಪೂರ್ಣ ಕಲೆ ಆಗಲು ಸಾಧ್ಯವಿಲ್ಲವೆ? If not, should it be banished from the realm of art? ಇದೆಲ್ಲ ಪ್ರಶ್ನೆಗಳು ನನ್ನ ಕಾಡಿದ್ದು ಸ್ವಲ್ಪ ದಿನಗಳ ಹಿಂದೆ ನನಗೆ ಬಂದ ಒಂದು ಈಮೇಲ್ ನೋಡಿ. ಅದರಲ್ಲಿ ಸದಾ ತನ್ನ ಚಿತ್ರಗಳಿಂದ ವಿವಾದಕ್ಕೆ ಒಳಗಾಗುತ್ತಿರುವ ಎಂ. ಎಫ್. ಹುಸೇನ್ ಬಿಡಿಸಿರುವ ದುರ್ಗೆ, ಸರಸ್ವತಿ, ಭಾರತ ಮಾತೆ ಇತರ ಹಿಂದೂ ದೇವತೆಗಳ ವಿವಾದಿತ ಚಿತ್ರಗಳಿದ್ದವು, ಜೊತೆಗೆ ಭಾರತೀಯನಾಗಿದ್ದೂ ಭಾರತೀಯರ ಭಾವನೆಗಳಿಗೆ ನೋವುಂಟು ಮಾಡಿದ ಆ ಕಲಾವಿದನನ್ನು ಕ್ಷಮಿಸಬೇಕೆ ಎನ್ನುವ ಪ್ರಶ್ನೆಗಳು.
ಆ ಚಿತ್ರಗಳಿಂದಾಗಿಯೇ ಹುಸೇನ್ ನಾಲ್ಕು ವರ್ಷಗಳ ಹಿಂದೆ ಭಾರತ ಬಿಟ್ಟು ದುಬೈಗೆ ಹೋಗಿ ನೆಲೆಸಬೇಕಾಯಿತು. ಅವರ ಮೇಲೆ 600ಕ್ಕೂ ಹೆಚ್ಚು ಮೊಕದ್ದಮೆಗಳು, ದೂರುಗಳು, FIRಗಳು ದಾಖಲಾದವು. ಈಗ ಹುಸೇನ್ ಗೆ ಕತಾರ್ ಪೌರತ್ವ ದೊರಕಿದೆ. ಇಷ್ಟು ದಿನ ಹುಸೇನ್ ಎಲ್ಲಿದ್ದಾರೆಂದು ತಲೆ ಕೆಡಿಸಿಕೊಳ್ಳದ ಕಲಾರಾಧಕರು ಈಗ ಬೊಬ್ಬೆ ಹಾಕುತ್ತಿದ್ದಾರೆ, ಹುಸೇನ್ ಭಾರತ ಬಿಟ್ಟು ಹೋದರೆ ಅದು ದೇಶಕ್ಕೆ ತುಂಬಲಾರದ ನಷ್ಟ, ಇನ್ನು ಮುಂದೆ ಹುಸೇನ್ ಭಾರತೀಯನಾಗಿ ಉಳಿಯುವುದಿಲ್ಲ. ಹುಸೇನ್ ಭಾರತಕ್ಕೆ ಬೇಕೇ ಬೇಕು, ಅವರಿಗೆ ಭಾರತ ರತ್ನ ಕೊಡಬೇಕು, ಅವರ ಮೇಲಿರುವ ನಿಷೇಧಗಳನ್ನು ತೆಗೆಯಬೇಕು, ಹಿಂದೂ ಸಂಘಟನೆಗಳು ಅವರಿಗೆ ಇಲ್ಲಿ ವಾಸಿಸಲು ಅನುವು ಮಾಡಿಕೊಡಬೇಕು ಎಂದೆಲ್ಲ.
ಅಷ್ಟಕ್ಕೂ ಭಾರತೀಯ ಅಂದರೆ ಯಾರು? ಯಾವುದೇ ದೇಶಕ್ಕೆ ಸೇರಬೇಕಾದರೆ ಒಬ್ಬ ವ್ಯಕ್ತಿಗೆ ಅಲ್ಲಿಯ citizenship ಸಿಕ್ಕಿದರೆ ಸಾಕೆ? ಆಗ ಅವನು ಅಲ್ಲಿಯ citizen, ನಾಗರಿಕ ಆಗುತ್ತಾನೆ ಹೊರತು ಆ ದೇಶೀಯ ಆಗುವುದಿಲ್ಲ ಅಲ್ಲವೇ? ಒಬ್ಬ ವ್ಯಕ್ತಿ ಭಾರತೀಯ ಆಗಬೇಕಾದರೆ ಇಲ್ಲಿ ಹುಟ್ಟಿದರೆ, ಇಲ್ಲಿನ ನೀರು, ಗಾಳಿ ಕುಡಿದರೆ ಸಾಲದು, ಇಲ್ಲಿನ ಸಂಸ್ಕೃತಿ ಅವನ ಅಂತಸ್ಸತ್ವದೊಳಗೆ ಬೆರೆತುಹೋಗಿರಬೇಕು. ಸಂಸ್ಕೃತಿ ಅಂದರೆ ಹಿಂದೂ ಸಂಸ್ಕೃತಿಯಲ್ಲ, ಎಲ್ಲರ ಭಾವನೆಗಳಿಗೂ ಬೆಲೆ ಕೊಡುವ ಭಾರತೀಯ ಸಂಸ್ಕೃತಿ. ನಿಜವಾದ ಭಾರತೀಯ ಅನ್ನಿಸಿಕೊಳ್ಳಬೇಕಾದರೆ ಇರುವುದು ಒಂದೇ criteria- ಅವನು ಜಾತಿ, ಮತಗಳನ್ನು ಬಿಡಬೇಕು, ಅದರರ್ಥ religion ಅನ್ನು ಬಿಡಬೇಕು, religiousnessನಲ್ಲ. Religiousness ಅಂದರೆ ತನ್ನ ಆತ್ಮಸಾಕ್ಶಿಗೆ ತಕ್ಕಂತೆ, ಬೇರೆಯವರಿಗೆ ನೋವಾಗದಂತೆ ನಡೆದುಕೊಳ್ಳುವುದು, ಅವರು ಹಿಂದೂ, ಸಿಖ್, ಕ್ರೈಸ್ತ, ಮುಸ್ಲಿಂ, ಪಾರ್ಸಿ ಯಾರೇ ಆಗಿರಬಹುದು.
ಕತಾರ್ ನಾಗರಿಕನಾದ ಕೂಡಲೆ ಹುಸೇನ್ ಭಾರತೀಯತೆ ಎಲ್ಲಿಗೆ ಹೋಗುತ್ತದೆ? ಅದನ್ನು ಮೊದಲೇ ಹುಸೇನ್ ಭಾರತ ಬಿಟ್ಟು ದುಬೈಗೆ ಹೋದಾಗ ಯಾಕೆ ಯೋಚಿಸಲಿಲ್ಲ ನಮ್ಮ intellectuals? ಎಂ.ಎಫ್. ಹುಸೇನ್ ಕಲಾವಿದ ಅನ್ನುವುದನ್ನು ಒಪ್ಪುವುದಾದರೆ ಕಲಾವಿದ ಯಾವ ದೇಶಕ್ಕೆ ಸೇರಿದವನು? ಕಲೆ ಯಾವ ದೇಶಕ್ಕೆ, ಸಂಸ್ಕೃತಿಗೆ ಸೇರಿದ್ದು? ಹುಸೇನ್ ಕತಾರ್ ದೇಶದಲ್ಲೇ ಇರಲಿ, ಬೇರೆಲ್ಲೇ ಇರಲಿ, ಅದರಲ್ಲಿ ನಮ್ಮ ದೇಶಕ್ಕೆ ಆಗೋ ನಷ್ಟ ಏನು? ಆ ಮಹಾನ್ ಕಲಾವಿದ ನಮ್ಮ ದೇಶದವನು ಎಂದು ನಮ್ಮ ಬೆನ್ನು ತಟ್ಟಿಕೊಳ್ಳಲು ಅವಕಾಶ ಸಿಗುವುದಿಲ್ಲ ಎಂದೇ? Anyways, ಹುಸೇನ್ ಭಾರತಕ್ಕೆ ಯಾಕೆ ಮರಳಿ ಬರಬೇಕು? ನಮ್ಮ ದೇಶದಲ್ಲಿ ಬಹಳಷ್ಟು ಜನ ಕಲಾವಿದರು nudityಯನ್ನು ತಮ್ಮ ಚಿತ್ರಗಳ ವಸ್ತುವನ್ನಾಗಿಸಿಕೊಂಡಿದ್ದಾರೆ. ಆದರೆ ದೇವತೆಗಳನ್ನಲ್ಲ. ದೇವರನ್ನು ಆ ರೀತಿ ಚಿತ್ರಿಸುವುದು ಪಾಪ ಅಂದಲ್ಲ, ನಾವು ಯಾರ ಮೇಲೆ ಪೂಜ್ಯ ಭಾವನೆ, ಗೌರವ ಇಟ್ಟುಕೊಂಡಿರುತ್ತೇವೋ ಅವರನ್ನು ನಗ್ನವಾಗಿ ಚಿತ್ರಿಸಿಕೊಳ್ಳಲು, ಕಲ್ಪಿಸಿಕೊಳ್ಳಲು, ಅವರು ಮನುಷ್ಯರಾಗಿರಲಿ, ದೇವರಾಗಿರಲಿ, ನಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂದು. ಅಂಥ ಕಲೆ ನಮಗೆ ಯಾಕೆ ಬೇಕು? ಕಲಾ ಸ್ವಾತಂತ್ರ್ಯ ನಮ್ಮ ದೇಶದಲ್ಲಿ ಮೊದಲಿನಿಂದಲೂ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಕೂಡ. ರಾಧಾ-ಕೃಷ್ಣರ ಪ್ರೀತಿಯಿಂದ ಹಿಡಿದು ದೇವಾಲಯಗಳ ಮೇಲೆ ಇರುವ ಗಂಡು-ಹೆಣ್ಣಿನ ಕಾಮದ ಕೆತ್ತನೆಗಳು ಎಲ್ಲವನ್ನೂ ಒಪ್ಪಿಕೊಂಡಿದ್ದೇವೆ. ಆದರೆ ದೇವತೆಗಳ ನಗ್ನತೆಯನ್ನಲ್ಲ. ಯಾಕೆಂದರೆ ಯಾವ ರೀತಿಯ ಭಾವನೆಗಳು ಎಲ್ಲಿ, ಯಾರ ಮೇಲೆ ಇರಬೇಕೆಂಬುದು ಭಾರತೀಯರಿಗೆ ಚೆನ್ನಾಗಿ ಗೊತ್ತು. ಅದಕ್ಕೇ ಇಲ್ಲಿ ಸಂಬಂಧಗಳ ಮಧ್ಯೆ ಯಾವುದೇ ಗೊಂದಲಗಳಿಲ್ಲ. ಅದಕ್ಕೇ ಇರಬೇಕು ನಮ್ಮ ದೇಶದಲ್ಲಿ ಹುಸೇನ್ ಬರೆದ ಚಿತ್ರಗಳ ’ಒಳನೋಟ’ ಅರ್ಥವಾಗದೆ ಇರುವ ಅಮಾಯಕರೇ ಜಾಸ್ತಿ. ಆ ಕಲೆಯನ್ನು ಆಸ್ವಾದಿಸದೆ ಇರುವ ಅರಸಿಕರೂ ಜಾಸ್ತಿ. ಇನ್ನು ಹುಸೇನ್ ಕಲಾಕೃತಿಗಳು ಅಪ್ರತಿಮವಾಗಿರಬಹುದು, ಅವರು ಭಾರತದ ಪಿಕಾಸೋ ಆಗಿರಬುಹುದು, ಅವರ ಚಿತ್ರಗಳು ಎರಡು ಮಿಲಿಯನ್ ವರೆಗೂ ಮಾರಾಟವಾಗಿರಬಹುದು, ಆದರೆ ಒಂದು ನಗ್ನ ದೇವತೆಯ ಚಿತ್ರದ ಮುಂದೆ ಒಂದು ಮಗುವನ್ನು ನಿಲ್ಲಿಸಿದರೆ ಅದಕ್ಕೆ ಆ ಚಿತ್ರದ ಬೆಲೆ ಗೊತ್ತಾಗದೇ ಇರಬಹುದು ಆದರೆ ಆ ಚಿತ್ರದಲ್ಲಿ ದೇವರು ಏನು ಮಾಡುತ್ತಿದ್ದಾರೆ ಎಂದು ಕೇಳಿದರೆ ಉತ್ತರ ಕೊಡಲು ನಮ್ಮಿಂದ ಆದೀತೇ?
ಸುಮಾರು 21 ವರ್ಷಗಳ ಹಿಂದೆ ಇರಾನಿ ಅಯತೊಲ್ಲ ಖೊಮೇನಿ ಸಲ್ಮಾನ್ ರಶ್ದಿಯ ಮೇಲೆ ಫತ್ವಾ ಹೊರಡಿಸಿದಾಗ ರಶ್ದಿ ಬರೆದ ವಿವಾದಿತ ಸಟಾನಿಕ್ ವರ್ಸಸ್ ಪುಸ್ತಕವನ್ನು ಮುಸ್ಲಿಮ್ ನಾಯಕರ ಒತ್ತಾಯಕ್ಕೆ ಒಳಗಾಗಿ ಮೊದಲು ನಿಷೇಧಿಸಿದ್ದು ಭಾರತ ಸರಕಾರ. ಈಗ ಹಿಂದು ಸಂಘಟನೆಗಳು ಹುಸೇನ್ ಮೇಲೆ, ಅವರು ಬರೆದ ಚಿತ್ರಗಳ ಮೇಲೆ unofficial ನಿಷೇಧ ಹೇರಿವೆ. ಹಿಮಾಚಲ ಪ್ರದೇಶದಲ್ಲಿ XI ತರಗತಿಯ ಪಠ್ಯಪುಸ್ತಕದಲ್ಲಿ ಹುಸೇನ್ ಬಗ್ಗೆ ಇದ್ದ ಪಾಠವನ್ನು ತೆಗೆದು ಕಲಾವಿದರಾದ ಶೋಭಾ ಸಿಂಗ್ ಮತ್ತು ನಿಕೊಲಸ್ ರೋರಿಕ್ ಬಗ್ಗೆ ಪಠ್ಯ ಅಳವಡಿಸಲಾಗಿದೆ. ಕಲೆಯನ್ನು ಬೇರೆ ಯಾವ ಮಾನದಂಡದಿಂದ ಅಳೆಯಬಾರದು ಎಂದು ಹೇಳಬಹುದು, ಆದರೆ ಕಲೆಗೂ ಒಂದು ಮಿತಿಯಿದೆ, ಅದರಾಚೆ ಅದು ಕೇವಲ ಕಲೆಯಾಗಿ ಉಳಿಯುವುದಿಲ್ಲ, ಅದನ್ನು ಮೆಚ್ಚುವವರೂ ಇರುವುದಿಲ್ಲ. ಅಸಾಮಾನ್ಯ ಕಲೆ ಮನಸ್ಸನ್ನು ತಣಿಸಬೇಕು, ಕೆಡಿಸಬಾರದು ಅಲ್ಲವೇ? ಹುಸೇನ್ ಭಾರತಕ್ಕೆ ಮರಳಿ ಬರಲಿ. ಯಾಕೆಂದರೆ ಪದೇ ಪದೇ ಕ್ಷಮೆ ಕೇಳಿ ಮತ್ತೆ ಅದೇ ನಗ್ನ ದೇವತೆಯರ ಚಿತ್ರಗಳನ್ನು ಬಿಡಿಸಿದ ಹುಸೇನ್ ಕೂಡ ನಮ್ಮ ದೇಶದವರೇ, ಅವರಿಗೆ ಇಲ್ಲಿರುವ ಹಕ್ಕಿದೆ. ನಮ್ಮ ಬುದ್ದಿಜೀವಿಗಳು ಹೇಳುತ್ತಾರೆಂದಲ್ಲ, ನಮ್ಮ ದೇಶದಲ್ಲಿ ಯಾರಿಗಾದರೂ ಇರಲು ಜಾಗ ಇದೆ ಎಂದು. ಕೊನೆಗೆ ನಮ್ಮ intellectual mud ಅನ್ನು ತೊಳೆದು ಹಾಕಿದರೆ ಅಲ್ಲಿ ಉಳಿಯುವುದೇನು? ಕೇವಲ intellectನ ಅಗತ್ಯವಿಲ್ಲದ ಕಲೆ ಹಾಗೂ intellectಗೆ ಜಾಗವಿಲ್ಲದ ಜಾತಿ, ಧರ್ಮಗಳು. ಆ ಕಲೆಗೂ ಈ ಜಾತಿ ಧರ್ಮಗಳಿಗೂ ಸಂಬಂಧವಿಲ್ಲ, ಕಲ್ಪಿಸಲೂ ಬಾರದು. ಹಾಗದಾಗ ಸಾಧನೆಗಳಿಗಿಂತ ಜಾಸ್ತಿ ವಿವಾದಗಳು ಸೃಷ್ಟಿಯಾಗುತ್ತವೆ. ಆ ಸಾಧನೆಗಳ ಮೇಲೆ ಇರುವ ಗೌರವವೂ ಕಣ್ಮರೆಯಾಗುತ್ತದೆ. ಎಂ. ಎಫ್. ಹುಸೇನ್, ಸಲ್ಮಾನ್ ರಶ್ದಿ, ತಸ್ಲೀಮಾ ನಸ್ರೀನ್ ಎಲ್ಲರಿಗೂ ನಮ್ಮಲ್ಲಿ ಜಾಗ ಇದೆ, ಬದುಕುವ ಸ್ವಾತಂತ್ರ್ಯ ಇದೆ, ಅದನ್ನು ದುರುಪಯೋಗಪಡಿಸಿಕೊಳ್ಳದಿದ್ದರೆ. - ಶ್ವೇತಾ ಪಾಂಗಣ್ಣಾಯ
ಆ ಚಿತ್ರಗಳಿಂದಾಗಿಯೇ ಹುಸೇನ್ ನಾಲ್ಕು ವರ್ಷಗಳ ಹಿಂದೆ ಭಾರತ ಬಿಟ್ಟು ದುಬೈಗೆ ಹೋಗಿ ನೆಲೆಸಬೇಕಾಯಿತು. ಅವರ ಮೇಲೆ 600ಕ್ಕೂ ಹೆಚ್ಚು ಮೊಕದ್ದಮೆಗಳು, ದೂರುಗಳು, FIRಗಳು ದಾಖಲಾದವು. ಈಗ ಹುಸೇನ್ ಗೆ ಕತಾರ್ ಪೌರತ್ವ ದೊರಕಿದೆ. ಇಷ್ಟು ದಿನ ಹುಸೇನ್ ಎಲ್ಲಿದ್ದಾರೆಂದು ತಲೆ ಕೆಡಿಸಿಕೊಳ್ಳದ ಕಲಾರಾಧಕರು ಈಗ ಬೊಬ್ಬೆ ಹಾಕುತ್ತಿದ್ದಾರೆ, ಹುಸೇನ್ ಭಾರತ ಬಿಟ್ಟು ಹೋದರೆ ಅದು ದೇಶಕ್ಕೆ ತುಂಬಲಾರದ ನಷ್ಟ, ಇನ್ನು ಮುಂದೆ ಹುಸೇನ್ ಭಾರತೀಯನಾಗಿ ಉಳಿಯುವುದಿಲ್ಲ. ಹುಸೇನ್ ಭಾರತಕ್ಕೆ ಬೇಕೇ ಬೇಕು, ಅವರಿಗೆ ಭಾರತ ರತ್ನ ಕೊಡಬೇಕು, ಅವರ ಮೇಲಿರುವ ನಿಷೇಧಗಳನ್ನು ತೆಗೆಯಬೇಕು, ಹಿಂದೂ ಸಂಘಟನೆಗಳು ಅವರಿಗೆ ಇಲ್ಲಿ ವಾಸಿಸಲು ಅನುವು ಮಾಡಿಕೊಡಬೇಕು ಎಂದೆಲ್ಲ.
ಅಷ್ಟಕ್ಕೂ ಭಾರತೀಯ ಅಂದರೆ ಯಾರು? ಯಾವುದೇ ದೇಶಕ್ಕೆ ಸೇರಬೇಕಾದರೆ ಒಬ್ಬ ವ್ಯಕ್ತಿಗೆ ಅಲ್ಲಿಯ citizenship ಸಿಕ್ಕಿದರೆ ಸಾಕೆ? ಆಗ ಅವನು ಅಲ್ಲಿಯ citizen, ನಾಗರಿಕ ಆಗುತ್ತಾನೆ ಹೊರತು ಆ ದೇಶೀಯ ಆಗುವುದಿಲ್ಲ ಅಲ್ಲವೇ? ಒಬ್ಬ ವ್ಯಕ್ತಿ ಭಾರತೀಯ ಆಗಬೇಕಾದರೆ ಇಲ್ಲಿ ಹುಟ್ಟಿದರೆ, ಇಲ್ಲಿನ ನೀರು, ಗಾಳಿ ಕುಡಿದರೆ ಸಾಲದು, ಇಲ್ಲಿನ ಸಂಸ್ಕೃತಿ ಅವನ ಅಂತಸ್ಸತ್ವದೊಳಗೆ ಬೆರೆತುಹೋಗಿರಬೇಕು. ಸಂಸ್ಕೃತಿ ಅಂದರೆ ಹಿಂದೂ ಸಂಸ್ಕೃತಿಯಲ್ಲ, ಎಲ್ಲರ ಭಾವನೆಗಳಿಗೂ ಬೆಲೆ ಕೊಡುವ ಭಾರತೀಯ ಸಂಸ್ಕೃತಿ. ನಿಜವಾದ ಭಾರತೀಯ ಅನ್ನಿಸಿಕೊಳ್ಳಬೇಕಾದರೆ ಇರುವುದು ಒಂದೇ criteria- ಅವನು ಜಾತಿ, ಮತಗಳನ್ನು ಬಿಡಬೇಕು, ಅದರರ್ಥ religion ಅನ್ನು ಬಿಡಬೇಕು, religiousnessನಲ್ಲ. Religiousness ಅಂದರೆ ತನ್ನ ಆತ್ಮಸಾಕ್ಶಿಗೆ ತಕ್ಕಂತೆ, ಬೇರೆಯವರಿಗೆ ನೋವಾಗದಂತೆ ನಡೆದುಕೊಳ್ಳುವುದು, ಅವರು ಹಿಂದೂ, ಸಿಖ್, ಕ್ರೈಸ್ತ, ಮುಸ್ಲಿಂ, ಪಾರ್ಸಿ ಯಾರೇ ಆಗಿರಬಹುದು.
ಕತಾರ್ ನಾಗರಿಕನಾದ ಕೂಡಲೆ ಹುಸೇನ್ ಭಾರತೀಯತೆ ಎಲ್ಲಿಗೆ ಹೋಗುತ್ತದೆ? ಅದನ್ನು ಮೊದಲೇ ಹುಸೇನ್ ಭಾರತ ಬಿಟ್ಟು ದುಬೈಗೆ ಹೋದಾಗ ಯಾಕೆ ಯೋಚಿಸಲಿಲ್ಲ ನಮ್ಮ intellectuals? ಎಂ.ಎಫ್. ಹುಸೇನ್ ಕಲಾವಿದ ಅನ್ನುವುದನ್ನು ಒಪ್ಪುವುದಾದರೆ ಕಲಾವಿದ ಯಾವ ದೇಶಕ್ಕೆ ಸೇರಿದವನು? ಕಲೆ ಯಾವ ದೇಶಕ್ಕೆ, ಸಂಸ್ಕೃತಿಗೆ ಸೇರಿದ್ದು? ಹುಸೇನ್ ಕತಾರ್ ದೇಶದಲ್ಲೇ ಇರಲಿ, ಬೇರೆಲ್ಲೇ ಇರಲಿ, ಅದರಲ್ಲಿ ನಮ್ಮ ದೇಶಕ್ಕೆ ಆಗೋ ನಷ್ಟ ಏನು? ಆ ಮಹಾನ್ ಕಲಾವಿದ ನಮ್ಮ ದೇಶದವನು ಎಂದು ನಮ್ಮ ಬೆನ್ನು ತಟ್ಟಿಕೊಳ್ಳಲು ಅವಕಾಶ ಸಿಗುವುದಿಲ್ಲ ಎಂದೇ? Anyways, ಹುಸೇನ್ ಭಾರತಕ್ಕೆ ಯಾಕೆ ಮರಳಿ ಬರಬೇಕು? ನಮ್ಮ ದೇಶದಲ್ಲಿ ಬಹಳಷ್ಟು ಜನ ಕಲಾವಿದರು nudityಯನ್ನು ತಮ್ಮ ಚಿತ್ರಗಳ ವಸ್ತುವನ್ನಾಗಿಸಿಕೊಂಡಿದ್ದಾರೆ. ಆದರೆ ದೇವತೆಗಳನ್ನಲ್ಲ. ದೇವರನ್ನು ಆ ರೀತಿ ಚಿತ್ರಿಸುವುದು ಪಾಪ ಅಂದಲ್ಲ, ನಾವು ಯಾರ ಮೇಲೆ ಪೂಜ್ಯ ಭಾವನೆ, ಗೌರವ ಇಟ್ಟುಕೊಂಡಿರುತ್ತೇವೋ ಅವರನ್ನು ನಗ್ನವಾಗಿ ಚಿತ್ರಿಸಿಕೊಳ್ಳಲು, ಕಲ್ಪಿಸಿಕೊಳ್ಳಲು, ಅವರು ಮನುಷ್ಯರಾಗಿರಲಿ, ದೇವರಾಗಿರಲಿ, ನಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂದು. ಅಂಥ ಕಲೆ ನಮಗೆ ಯಾಕೆ ಬೇಕು? ಕಲಾ ಸ್ವಾತಂತ್ರ್ಯ ನಮ್ಮ ದೇಶದಲ್ಲಿ ಮೊದಲಿನಿಂದಲೂ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಕೂಡ. ರಾಧಾ-ಕೃಷ್ಣರ ಪ್ರೀತಿಯಿಂದ ಹಿಡಿದು ದೇವಾಲಯಗಳ ಮೇಲೆ ಇರುವ ಗಂಡು-ಹೆಣ್ಣಿನ ಕಾಮದ ಕೆತ್ತನೆಗಳು ಎಲ್ಲವನ್ನೂ ಒಪ್ಪಿಕೊಂಡಿದ್ದೇವೆ. ಆದರೆ ದೇವತೆಗಳ ನಗ್ನತೆಯನ್ನಲ್ಲ. ಯಾಕೆಂದರೆ ಯಾವ ರೀತಿಯ ಭಾವನೆಗಳು ಎಲ್ಲಿ, ಯಾರ ಮೇಲೆ ಇರಬೇಕೆಂಬುದು ಭಾರತೀಯರಿಗೆ ಚೆನ್ನಾಗಿ ಗೊತ್ತು. ಅದಕ್ಕೇ ಇಲ್ಲಿ ಸಂಬಂಧಗಳ ಮಧ್ಯೆ ಯಾವುದೇ ಗೊಂದಲಗಳಿಲ್ಲ. ಅದಕ್ಕೇ ಇರಬೇಕು ನಮ್ಮ ದೇಶದಲ್ಲಿ ಹುಸೇನ್ ಬರೆದ ಚಿತ್ರಗಳ ’ಒಳನೋಟ’ ಅರ್ಥವಾಗದೆ ಇರುವ ಅಮಾಯಕರೇ ಜಾಸ್ತಿ. ಆ ಕಲೆಯನ್ನು ಆಸ್ವಾದಿಸದೆ ಇರುವ ಅರಸಿಕರೂ ಜಾಸ್ತಿ. ಇನ್ನು ಹುಸೇನ್ ಕಲಾಕೃತಿಗಳು ಅಪ್ರತಿಮವಾಗಿರಬಹುದು, ಅವರು ಭಾರತದ ಪಿಕಾಸೋ ಆಗಿರಬುಹುದು, ಅವರ ಚಿತ್ರಗಳು ಎರಡು ಮಿಲಿಯನ್ ವರೆಗೂ ಮಾರಾಟವಾಗಿರಬಹುದು, ಆದರೆ ಒಂದು ನಗ್ನ ದೇವತೆಯ ಚಿತ್ರದ ಮುಂದೆ ಒಂದು ಮಗುವನ್ನು ನಿಲ್ಲಿಸಿದರೆ ಅದಕ್ಕೆ ಆ ಚಿತ್ರದ ಬೆಲೆ ಗೊತ್ತಾಗದೇ ಇರಬಹುದು ಆದರೆ ಆ ಚಿತ್ರದಲ್ಲಿ ದೇವರು ಏನು ಮಾಡುತ್ತಿದ್ದಾರೆ ಎಂದು ಕೇಳಿದರೆ ಉತ್ತರ ಕೊಡಲು ನಮ್ಮಿಂದ ಆದೀತೇ?
ಸುಮಾರು 21 ವರ್ಷಗಳ ಹಿಂದೆ ಇರಾನಿ ಅಯತೊಲ್ಲ ಖೊಮೇನಿ ಸಲ್ಮಾನ್ ರಶ್ದಿಯ ಮೇಲೆ ಫತ್ವಾ ಹೊರಡಿಸಿದಾಗ ರಶ್ದಿ ಬರೆದ ವಿವಾದಿತ ಸಟಾನಿಕ್ ವರ್ಸಸ್ ಪುಸ್ತಕವನ್ನು ಮುಸ್ಲಿಮ್ ನಾಯಕರ ಒತ್ತಾಯಕ್ಕೆ ಒಳಗಾಗಿ ಮೊದಲು ನಿಷೇಧಿಸಿದ್ದು ಭಾರತ ಸರಕಾರ. ಈಗ ಹಿಂದು ಸಂಘಟನೆಗಳು ಹುಸೇನ್ ಮೇಲೆ, ಅವರು ಬರೆದ ಚಿತ್ರಗಳ ಮೇಲೆ unofficial ನಿಷೇಧ ಹೇರಿವೆ. ಹಿಮಾಚಲ ಪ್ರದೇಶದಲ್ಲಿ XI ತರಗತಿಯ ಪಠ್ಯಪುಸ್ತಕದಲ್ಲಿ ಹುಸೇನ್ ಬಗ್ಗೆ ಇದ್ದ ಪಾಠವನ್ನು ತೆಗೆದು ಕಲಾವಿದರಾದ ಶೋಭಾ ಸಿಂಗ್ ಮತ್ತು ನಿಕೊಲಸ್ ರೋರಿಕ್ ಬಗ್ಗೆ ಪಠ್ಯ ಅಳವಡಿಸಲಾಗಿದೆ. ಕಲೆಯನ್ನು ಬೇರೆ ಯಾವ ಮಾನದಂಡದಿಂದ ಅಳೆಯಬಾರದು ಎಂದು ಹೇಳಬಹುದು, ಆದರೆ ಕಲೆಗೂ ಒಂದು ಮಿತಿಯಿದೆ, ಅದರಾಚೆ ಅದು ಕೇವಲ ಕಲೆಯಾಗಿ ಉಳಿಯುವುದಿಲ್ಲ, ಅದನ್ನು ಮೆಚ್ಚುವವರೂ ಇರುವುದಿಲ್ಲ. ಅಸಾಮಾನ್ಯ ಕಲೆ ಮನಸ್ಸನ್ನು ತಣಿಸಬೇಕು, ಕೆಡಿಸಬಾರದು ಅಲ್ಲವೇ? ಹುಸೇನ್ ಭಾರತಕ್ಕೆ ಮರಳಿ ಬರಲಿ. ಯಾಕೆಂದರೆ ಪದೇ ಪದೇ ಕ್ಷಮೆ ಕೇಳಿ ಮತ್ತೆ ಅದೇ ನಗ್ನ ದೇವತೆಯರ ಚಿತ್ರಗಳನ್ನು ಬಿಡಿಸಿದ ಹುಸೇನ್ ಕೂಡ ನಮ್ಮ ದೇಶದವರೇ, ಅವರಿಗೆ ಇಲ್ಲಿರುವ ಹಕ್ಕಿದೆ. ನಮ್ಮ ಬುದ್ದಿಜೀವಿಗಳು ಹೇಳುತ್ತಾರೆಂದಲ್ಲ, ನಮ್ಮ ದೇಶದಲ್ಲಿ ಯಾರಿಗಾದರೂ ಇರಲು ಜಾಗ ಇದೆ ಎಂದು. ಕೊನೆಗೆ ನಮ್ಮ intellectual mud ಅನ್ನು ತೊಳೆದು ಹಾಕಿದರೆ ಅಲ್ಲಿ ಉಳಿಯುವುದೇನು? ಕೇವಲ intellectನ ಅಗತ್ಯವಿಲ್ಲದ ಕಲೆ ಹಾಗೂ intellectಗೆ ಜಾಗವಿಲ್ಲದ ಜಾತಿ, ಧರ್ಮಗಳು. ಆ ಕಲೆಗೂ ಈ ಜಾತಿ ಧರ್ಮಗಳಿಗೂ ಸಂಬಂಧವಿಲ್ಲ, ಕಲ್ಪಿಸಲೂ ಬಾರದು. ಹಾಗದಾಗ ಸಾಧನೆಗಳಿಗಿಂತ ಜಾಸ್ತಿ ವಿವಾದಗಳು ಸೃಷ್ಟಿಯಾಗುತ್ತವೆ. ಆ ಸಾಧನೆಗಳ ಮೇಲೆ ಇರುವ ಗೌರವವೂ ಕಣ್ಮರೆಯಾಗುತ್ತದೆ. ಎಂ. ಎಫ್. ಹುಸೇನ್, ಸಲ್ಮಾನ್ ರಶ್ದಿ, ತಸ್ಲೀಮಾ ನಸ್ರೀನ್ ಎಲ್ಲರಿಗೂ ನಮ್ಮಲ್ಲಿ ಜಾಗ ಇದೆ, ಬದುಕುವ ಸ್ವಾತಂತ್ರ್ಯ ಇದೆ, ಅದನ್ನು ದುರುಪಯೋಗಪಡಿಸಿಕೊಳ್ಳದಿದ್ದರೆ. - ಶ್ವೇತಾ ಪಾಂಗಣ್ಣಾಯ
Subscribe to:
Posts (Atom)




